ಧಾರ್ಮಿಕ

ಕಾವು ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಶ್ರೀ ಗಣೇಶೋತ್ಸವ | ಶೋಭಾಯಾತ್ರೆಗೆ ಮೆರುಗು ನೀಡಿದ ನೃತ್ಯ ಭಜನೆ, ಹುಲಿ ವೇಷ, ಗೊಂಬೆ ಕುಣಿತ

ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಅರ್ಚಕ ವೇ. ಮೂ. ಶಿವಪ್ರಸಾದ್ ಕಡಮಣ್ಣಾ ಅವರ ಪೌರೋಹಿತ್ಯದಲ್ಲಿ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮ, ವಿಗ್ರಹ ಜಲಸ್ತಂಭನ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ದೇಲಂಪಾಡಿ, ಗಣೇಶೋತ್ಸವವು ಧಾರ್ಮಿಕ ಪ್ರಜ್ಞೆ ಮೂಡಿಸುವ […]

ಕಾವು ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಶ್ರೀ ಗಣೇಶೋತ್ಸವ | ಶೋಭಾಯಾತ್ರೆಗೆ ಮೆರುಗು ನೀಡಿದ ನೃತ್ಯ ಭಜನೆ, ಹುಲಿ ವೇಷ, ಗೊಂಬೆ ಕುಣಿತ Read More »

ಕೊಳ್ತಿಗೆಯಲ್ಲಿ ಸೌಹಾರ್ದ ಗಣೇಶೋತ್ಸವ, ಆರ್.ಪಿ. ಕ್ರಿಯೇಷನ್ ನೈಟ್ಸ್ 2023

ಕೊಳ್ತಿಗೆ: ಮೊಗಪ್ಪೆ ಶ್ರೀ ಮುತ್ತು ಮಾರಿಯಮ್ಮ ದೇವಾಲಯದ ಸಮೀಪದಲ್ಲಿ 8ನೇ ವರ್ಷದ ಸೌಹಾರ್ದ ಗಣೇಶೋತ್ಸವ ನಡೆದು, ಶೋಭಾಯಾತ್ರೆಯೊಂದಿಗೆ ಗಣೇಶ ಮೂರ್ತಿ ಜಲಸ್ತಂಭನಗೊಂಡಿತು. ನಾಸಿಕ್ ಬ್ಯಾಂಡ್ ಸಿಡಿಮದ್ದುಗಳ ಪ್ರದರ್ಶನಗಳೊಂದಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು. ಶ್ರೀ ಪ್ರದೀಪ್ ಕುಮಾರ್ ಪಾಂಬಾರು ಅವರ ನೇತೃತ್ವದಲ್ಲಿ ಸರ್ವಧರ್ಮಗಳ ಸಹಭಾಗಿತ್ವದಲ್ಲಿ ಗಣೇಶೋತ್ಸವ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಗೀತ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ರವಿ ಪಾಂಬಾರು ಅವರ ಸಾರತ್ಯದಲ್ಲಿ ಆರ್.ಪಿ. ಕ್ರಿಯೇಷನ್ ನೈಟ್ಸ್ 2023 ಅದ್ದೂರಿಯಾಗಿ ನಡೆಯಿತು. ಆರ್.ಪಿ. ಕ್ರಿಯೇಷನ್ ತಂಡದಿಂದ ವಿವಿಧ ವೇಷಭೂಷಣ

ಕೊಳ್ತಿಗೆಯಲ್ಲಿ ಸೌಹಾರ್ದ ಗಣೇಶೋತ್ಸವ, ಆರ್.ಪಿ. ಕ್ರಿಯೇಷನ್ ನೈಟ್ಸ್ 2023 Read More »

ಬ್ರಾಹ್ಮಣರ ವೈವಾಹಿಕ ಸಂಬಂಧದ ಅಧ್ಯಯನಕ್ಕಾಗಿ ತಂಡವೊಂದು ಆಗಮಿಸಿದೆ ಎಂಬ ಸಂದೇಶ ವೈರಲ್! | ಶ್ರೀ ರಾಮಚಂದ್ರಾಪುರ ಮಠ ಏನು ಹೇಳುತ್ತದೆ?

ಬೆಂಗಳೂರು: ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ವೈವಾಹಿಕ ಸಂಬಂಧಕ್ಕೆ ಕುರಿತಾಗಿ ಆಗಮಿಸುವ ತಂಡಕ್ಕೂ ಶ್ರೀ ರಾಮಚಂದ್ರಾಪುರ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ. ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ಕನ್ಯೆಯರ ಜೊತೆಗೆ ವೈವಾಹಿಕ ಸಂಬಂಧ ಏರ್ಪಡಿಸುವ ಉದ್ದೇಶದಿಂದ ಅಧ್ಯಯನಕ್ಕಾಗಿ ತಂಡವೊಂದು ಕರಾವಳಿ ಕರ್ನಾಟಕಕ್ಕೆ ಆಗಮಿಸುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶಕ್ಕೂ ಮಠಕ್ಕೂ ಸಂಬಂಧವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ – “ಈ ತಂಡದ ಜತೆ ಸಂಪರ್ಕ ಮಾಡಿದವರ ಪೈಕಿ ರಾಮಚಂದ್ರಾಪುರ

ಬ್ರಾಹ್ಮಣರ ವೈವಾಹಿಕ ಸಂಬಂಧದ ಅಧ್ಯಯನಕ್ಕಾಗಿ ತಂಡವೊಂದು ಆಗಮಿಸಿದೆ ಎಂಬ ಸಂದೇಶ ವೈರಲ್! | ಶ್ರೀ ರಾಮಚಂದ್ರಾಪುರ ಮಠ ಏನು ಹೇಳುತ್ತದೆ? Read More »

ವಿವೇಕಾನಂದ ಕಾಲೇಜಿನ 42 ನೇ ವರ್ಷದ ಗಣೇಶೋತ್ಸವ | ಧಾರ್ಮಿಕ ಚಿಂತನೆ ಬೆಳೆಸುವತ್ತ ನಮ್ಮ ಯೋಚನೆಯಿರಲಿ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಗಣೇಶ ಎಲ್ಲಾ ದೇವತೆಗಳ ಅಧಿದೇವತೆ. ಹಿಂದೂ ಸಮಾಜದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕ್ ಸಾರ್ವಜನಿಕ ಗಣೇಶೋತ್ಸವ ಜಾರಿಗೆ ತಂದರು. ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸುವ ಬಹುದೊಡ್ಡ ಸವಾಲು ನಮ್ಮ ಮುಂದೆ ಇದೆ. ವಿದ್ಯಾರ್ಥಿಗಳ ಯೋಚನೆಯು ಧಾರ್ಮಿಕ ಚಿಂತನೆ ಬೆಳೆಸುವತ್ತ ಇರಬೇಕು. ನಮ್ಮ ದೇಶದ ಮೂಲ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ವಿವೇಕಾನಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್

ವಿವೇಕಾನಂದ ಕಾಲೇಜಿನ 42 ನೇ ವರ್ಷದ ಗಣೇಶೋತ್ಸವ | ಧಾರ್ಮಿಕ ಚಿಂತನೆ ಬೆಳೆಸುವತ್ತ ನಮ್ಮ ಯೋಚನೆಯಿರಲಿ: ಡಾ. ಕಲ್ಲಡ್ಕ ಪ್ರಭಾಕರ ಭಟ್ Read More »

ಬೆಂಗಳೂರು ಕಂಬಳಕ್ಕೆ ಸಿದ್ಧತೆ | ಕಂಬಳ ಕೋಣಗಳ ಮಾಲಕರಿಗೆ ನಡೆಯಲಿದೆ ಸೆ. 30ರಂದು ಸಭೆ | ಎಲ್ಲಿ? ಹೇಗೆ ಇಲ್ಲಿದೆ ಮಾಹಿತಿ

ಪುತ್ತೂರು: ಬೆಂಗಳೂರಿನ ಕಂಬಳದಲ್ಲಿ ಭಾಗವಹಿಸಲು ಕಂಬಳ ಕೋಣಗಳಿಗೆ ಅವಕಾಶ ಕಲ್ಪಿಸಿದ್ದು, ಈ ಹಿನ್ನೆಲೆಯಲ್ಲಿ ಕಂಬಳ ಕೋಣಗಳ ಯಜಮಾನರುಗಳ ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಸೆ. 30ರಂದು ಸಂಜೆ 3 ಗಂಟೆಗೆ ಮಂಗಳೂರು ಹೊಟೇಲ್ ವುಡ್’ಲ್ಯಾಂಡಿನಲ್ಲಿ ಕೋಣಗಳ ಯಜಮಾನರುಗಳ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವಂತೆ ತಿಳಿಸಲಾಗಿದೆ. ನವಂಬರಿನಲ್ಲಿ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕಂಬಳ ಕೋಣಗಳ ಯಜಮಾನರುಗಳ ಸಭೆ ಕರೆದಿದ್ದು, ಬೆಂಗಳೂರು ಕಂಬಳದಲ್ಲಿ

ಬೆಂಗಳೂರು ಕಂಬಳಕ್ಕೆ ಸಿದ್ಧತೆ | ಕಂಬಳ ಕೋಣಗಳ ಮಾಲಕರಿಗೆ ನಡೆಯಲಿದೆ ಸೆ. 30ರಂದು ಸಭೆ | ಎಲ್ಲಿ? ಹೇಗೆ ಇಲ್ಲಿದೆ ಮಾಹಿತಿ Read More »

ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವುದು ನಮ್ಮ ಸಂಸ್ಕೃತಿಯಲ್ಲ | ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಹೆತ್ತ ತಂದೆ ತಾಯಿಯನ್ನು ಆರೈಕೆ ಮಾಡದೆ, ಅವರನ್ನು ಆಶ್ರಮದಲ್ಲಿ ಹಾಕಿ ಅವರ ಸೇವೆ ಮಾಡುವ ಭಾಗ್ಯವಿಲ್ಲದ ಮಂದಿ ಎಷ್ಟೇ ದೊಡ್ಡ ಪುಣ್ಯದ ಕೆಲಸ ಮಾಡಿದರೂ ಆತನಿಗೆ ದೇವರು ಖಂಡಿತವಾಗಿಯೂ ಒಲಿಯವುದಿಲ್ಲ ಮತ್ತು ಆತನಿಗೆ ದೇವರ ಆಶೀರ್ವಾದ ಪಡೆಯಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಟ್ಟೆಗೆ ತುತ್ತು ಇಲ್ಲದೇ ಇದ್ದರೂ ನಮ್ಮನ್ನು ಹೆತ್ತು ಸಾಕಿದ, ವಿದ್ಯೆ

ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವುದು ನಮ್ಮ ಸಂಸ್ಕೃತಿಯಲ್ಲ | ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವದಲ್ಲಿ ಶಾಸಕ ಅಶೋಕ್ ರೈ Read More »

ಪೆರ್ನೆ ಯುವ ಸ್ಪಂದನದಿಂದ ವಿಜೃಂಭಣೆಯ ಗಣೇಶೋತ್ಸವ, ಶೋಭಾಯಾತ್ರೆ

ಮಾಣಿ: ಪೆರ್ನೆಯ ಕಾರ್ಲ ಯುವ ಸ್ಪಂದನ ನೇತೃತ್ವದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ವತಿಯಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ ವಿಜೃಂಭಣೆಯಿಂದ ಜರಗಿತು. ಶೋಭಾಯಾತ್ರೆಯಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ, ನಾಸಿಕ್ ಬ್ಯಾಂಡ್’ನ ಠೇಂಕಾರ ಮುಗಿಲು ಮುಟ್ಟಿತ್ತು. ಕುಣಿತ ಭಜನೆ, ಹುಲಿ ವೇಷಗಳು ಗಣೇಶೋತ್ಸವದ ಶೋಭಾಯಾತ್ರೆಗೆ ಸಾಂಪ್ರದಾಯಿಕ ಟಚ್ ನೀಡಿದವು. ಗೊಂಬೆ, ಟ್ಯಾಬ್ಲೋಗಳು ನೋಡುಗರ ಮನವನ್ನು ಸೂರೆಗೊಳ್ಳುವಂತೆ ಮಾಡಿದವು. ವಿವೇಕಾನಂದರ ಭಾವಚಿತ್ರ ಸಹಿತ ಭಾರತ ಮಾತೆಯ ಭವ್ಯ ಭಾವಚಿತ್ರವನ್ನು ಹೊತ್ತ ಪೆರ್ನೆ ಯುವ ಸ್ಪಂದನದ ವಾಹನ

ಪೆರ್ನೆ ಯುವ ಸ್ಪಂದನದಿಂದ ವಿಜೃಂಭಣೆಯ ಗಣೇಶೋತ್ಸವ, ಶೋಭಾಯಾತ್ರೆ Read More »

ನಾಣಿಲ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಗಣೇಶೋತ್ಸವ, ದೈಪಿಲದಲ್ಲಿ ಜಲಸ್ತಂಭನ

ಚಾರ್ವಾಕ : ನಾಣಿಲ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 27ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ನಡೆದು, ಸಂಜೆ ಶ್ರೀ ಗಣೇಶನ ಶೋಭಾಯಾತ್ರೆ ನಡೆದು, ಶ್ರೀ ಕ್ಷೇತ್ರ ದೈಪಿಲದಲ್ಲಿ ಜಲಸ್ತಂಭನ ಮಾಡಲಾಯಿತು. ಕುಮಾರಧಾರ ಫಾರ್ಮ್ಸ್ ನ ವಿಜಯ ಕುಮಾರ್ ಸೊರಕೆ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಆರ್. ಗೌಡ, ಗಂಗಾಧರ, ಅಂಬುಲ ಶ್ರೀ ಬಾಲಸುಬ್ರಹ್ಮಣ್ಯ

ನಾಣಿಲ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಗಣೇಶೋತ್ಸವ, ದೈಪಿಲದಲ್ಲಿ ಜಲಸ್ತಂಭನ Read More »

ಸಂಘಟಿತ ಸಮಾಜಕೋಸ್ಕರ ನಾವೆಲ್ಲರೂ ಒಂದಾಗಬೇಕು: ಶಾಸಕಿ ಭಾಗೀರಥಿ ಮುರುಳ್ಯ | ಹಬ್ಬದ ಸಾರ ಸಂದೇಶ ಅರಿತು ಬದುಕಿದರೆ ಸಮಾಜದಲ್ಲಿ ಗೌರವ: ಶಾಸಕ ಅಶೋಕ್ ರೈ | ಮುಕ್ಕೂರಿನಲ್ಲಿ 14ನೇ ವರ್ಷದ ಗಣೇಶೋತ್ಸವದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ

ಮುಕ್ಕೂರು: ಸಂಘಟಿತ ಸಮಾಜದ ನಿರ್ಮಾಣದ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಹಬ್ಬ ಹರಿದಿನಗಳು ಸಂದೇಶ ನೀಡುತ್ತಿದೆ. ಹಾಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ಸಮಾಜದ ಏಳಿಗೆಗೋಸ್ಕರ ನಾವೆಲ್ಲರೂ ಒಂದಾಗಿ ಕಾರ್ಯ ನಿರ್ವಹಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಮುಕ್ಕೂರು- ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಸೆ. 19ರಂದು ನಡೆದ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ, ಕ್ರೀಡಾಕೂಟ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಕ್ಕೂರು

ಸಂಘಟಿತ ಸಮಾಜಕೋಸ್ಕರ ನಾವೆಲ್ಲರೂ ಒಂದಾಗಬೇಕು: ಶಾಸಕಿ ಭಾಗೀರಥಿ ಮುರುಳ್ಯ | ಹಬ್ಬದ ಸಾರ ಸಂದೇಶ ಅರಿತು ಬದುಕಿದರೆ ಸಮಾಜದಲ್ಲಿ ಗೌರವ: ಶಾಸಕ ಅಶೋಕ್ ರೈ | ಮುಕ್ಕೂರಿನಲ್ಲಿ 14ನೇ ವರ್ಷದ ಗಣೇಶೋತ್ಸವದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ Read More »

ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ಫಿಕ್ಸ್!

ಮಡಿಕೇರಿ: ಶ್ರೀ ಕಾವೇರಿ ತುಲಾ ಸಂಕ್ರಮಣದ ಪವಿತ್ರ ಕಾವೇರಿ ತೀರ್ಥೋದ್ಭವ ಪ್ರಸಕ್ತ ಸಾಲಿನ ಅ. 18ರ ಬೆಳಗ್ಗಿನ ಜಾವ 1.27 ಗಂಟೆಗೆ (ಅ.17ರ ಮಧ್ಯರಾತ್ರಿ ಕಳೆದು) ಘಟಿಸಲಿದೆ. ಕಾವೇರಿಯ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಜಾತ್ರೆಗೆ ಪೂರ್ವಭಾವಿಯಾಗಿ ಸೆ. 27ರಂದು ಬೆಳಗ್ಗೆ 9.29 ಗಂಟೆಗೆ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕಲಾಗುವ ಕಾರ್ಯಕ್ರಮ ಸಂಪ್ರದಾಯದಂತೆ ನಡೆಯಲಿದೆ. ಅ. 5ರಂದು ಬೆಳಗ್ಗೆ 8.31 ನಿಮಿಷಕ್ಕೆ ಆಜ್ಞಾ ಮೂಹೂರ್ತ, ಅ. 15ರಂದು ಬೆಳಗ್ಗೆ 11.45ಕ್ಕೆ ಅಕ್ಷಯ ಪಾತ್ರೆ ಇರಿಸುವುದು, ಸಂಜೆ 4.05ಕ್ಕೆ ಕಾಣಿಕೆ

ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ಫಿಕ್ಸ್! Read More »

error: Content is protected !!
Scroll to Top