ಸಮಾಜದಲ್ಲಿ ಸಕಲ ಜೀವರಾಶಿಗಳಿಗೂ ಬದುಕಲು ಅವಕಾಶ ನೀಡುವುದೇ ಧರ್ಮ | ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆಯಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಪುತ್ತೂರು: ಸಮಾಜದಲ್ಲಿ ನಿಯತ್ತಿನಿಂದ ಬದುಕಲು ಧರ್ಮ ಹುಟ್ಟಿಕೊಂಡಿದೆ. ಜಗತ್ತಿನ ಸಕಲ ಜೀವ ರಾಶಿಗಳಿಗೂ ಬದುಕುವ ಆಸೆಯಿದೆ. ಎಲ್ಲರೊಂದಿಗೆ ಸೇರಿಕೊಂಡು ಉತ್ತಮ ಬದುಕು ಸಾಗಿಸುವುದೇ, ಇನ್ನೊಬ್ಬರ ಹಿತವಾಗಿ ಬದುಕುವುದು, ಸ್ವಾರ್ಥ ರಹಿತವಾಗಿ ಬದುಕುವುದೇ ಧರ್ಮ. ಸಮಾಜದಲ್ಲಿ ಸಕಲ ಜೀವರಾಶಿಗಳಿಗೂ ಬದುಕಲು ಅವಕಾಶ ನೀಡುವುದೇ ಧರ್ಮ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು. ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಏ.22 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ದೇವರಲ್ಲಿ […]










