ಪುತ್ತೂರು

ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ

ಪುತ್ತೂರು: ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಪುತ್ತೂರಿಗೆ ಸುಸಜ್ಜಿತ ಕ್ರೀಡಾಂಗಣ ಅಗತ್ಯ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕಾಗಿ ಜಾಗ ಕಾದಿರಿಸಿದ್ದು, ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಶಾಸಕ ಸಂಜೀವ ಮಠಂದೂರು ಅವರು ಮುತುವರ್ಜಿಯ ವಹಿಸಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒಂದೊಂದಾಗಿ ಹೊಂದಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದರಲ್ಲಿ ಕ್ರೀಡಾಂಗಣವೂ ಒಂದು. ಪುತ್ತೂರು ನಗರದ ಹೊರವಲಯದ ತೆಂಕಿಲದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಜಿಲ್ಲಾ ಕ್ರೀಡಾಂಗಣಕ್ಕಾಗಿ ಈಗಾಗಲೇ ಸ್ಥಳ ಕಾಯ್ದಿರಿಸುವಿಕೆ ಪ್ರಕ್ರಿಯೆ ನಡೆದಿದೆ. ಶಾಸಕ ಸಂಜೀವ ಮಠಂದೂರು ಅವರ ಸರ್ವ ಪ್ರಯತ್ನದಿಂದ ಕ್ರೀಡಾಂಗಣದ ಕನಸು ನನಸಾಗುವುದರಲ್ಲಿದೆ. […]

ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ Read More »

ರಾಗಿದಕುಮೇರು ಶಾಲೆಯಲ್ಲಿ, ತಾಪಂ ಸಭಾಂಗಣದಲ್ಲಿ ಅಣುಕು ಮತದಾನ

ಪುತ್ತೂರು: ಸಾರ್ವಜನಿಕರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಬಲ್ನಾಡು ರಸ್ತೆಯಲ್ಲಿರುವ ರಾಗಿದಕುಮೇರು ಶಾಲೆಯಲ್ಲಿ ಹಾಗೂ ತಾ.ಪಂ. ಸಭಾಂಗಣದಲ್ಲಿ ಮಾರ್ಚ್ 8ರಂದು ಅಣುಕು ಮತದಾನ ನಡೆಯಲಿದೆ. ಮತದಾನದ ಸೆಕ್ಟರ್ 12ರ ಅಧಿಕಾರಿಗಳು ಬೆಳಿಗ್ಗೆ 10.30ಕ್ಕೆ ರಾಗಿದಕುಮೇರು ಹಿ.ಪ್ರಾ. ಶಾಲೆಯಲ್ಲಿ ಹಾಗೂ ಮಧ್ಯಾಹ್ನ 11ಕ್ಕೆ ತಾಲೂಕು ಪಂಚಾಯತ್ ಹಿಂಭಾಗದಲ್ಲಿರುವ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಮತದಾನದ ಅಣುಕು ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರಿಗೆ ಮತದಾನದ ಡಿಜಿಟಲ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ

ರಾಗಿದಕುಮೇರು ಶಾಲೆಯಲ್ಲಿ, ತಾಪಂ ಸಭಾಂಗಣದಲ್ಲಿ ಅಣುಕು ಮತದಾನ Read More »

ಎನ್ಐಐಟಿ ಫೌಂಡೇಶನ್‍ನಿಂದ ಕೆಪಿಎಸ್ ಸಂಸ್ಥೆಗೆ ಟಿವಿ, ಪ್ರಿಂಟರ್, ಕ್ರೋಮ್ ಬುಕ್ ಕೊಡುಗೆ

ಪುತ್ತೂರು:  ಎಚ್‍ ಪಿ ಆಲ್ಫಾ ಆಕ್ಸಿಸಿಬಲ್ ಲರ್ನಿಂಗ್ ಫಾರ್ ಆಲ್ ಎಂಬ ಲಾಂಛನದಡಿ ಎನ್‍ಐಐಟಿ ಫೌಂಡೇಶನ್ ನವರಿಂದ ಕೆಪಿಎಸ್ ಸಂಸ್ಥೆಗೆ ಸುಮಾರು ಒಂದು ಲಕ್ಷ ಮೌಲ್ಯದ ಟಿವಿ , ಪ್ರಿಂಟರ್, ಕ್ರೋಮ್ ಬುಕ್ ಗಳನ್ನು ದಾನವಾಗಿ ನೀಡಿರುತ್ತಾರೆ. ಇದರ ಉದ್ಘಾಟನಾ ಸಮಾರಂಭವು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು .ಎನ್‍ಐಐಟಿ ಫೌಂಡೇಶನ್ ಸೌತ್ ಜೋನ್ ಕಾರ್ಡಿನೇಟರ್ ವಿಕಾಸ್ ಮತ್ತು ಕ್ಲಸ್ಟರ್ ಕಾರ್ಡಿನೇಟರ್ ಕಿಶೋರ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಪದವೀಧರ ಸಹ ಶಿಕ್ಷಕಿ ಮಮತ ಕೆ ಎಸ್ ಸ್ವಾಗತಿಸಿ

ಎನ್ಐಐಟಿ ಫೌಂಡೇಶನ್‍ನಿಂದ ಕೆಪಿಎಸ್ ಸಂಸ್ಥೆಗೆ ಟಿವಿ, ಪ್ರಿಂಟರ್, ಕ್ರೋಮ್ ಬುಕ್ ಕೊಡುಗೆ Read More »

ಮಾ.11ರಂದು ಸುಳ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ- ಅದ್ದೂರಿ ರೋಡ್ ಶೋ: ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಸಿದ್ಧತೆ : ಸಚಿವ ಎಸ್.ಅಂಗಾರ

ಸುಳ್ಯ: ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಮಾ.11ರಂದು ಸುಳ್ಯ ಕ್ಷೇತ್ರಕ್ಕೆ ಆಗಮಿಸಲಿದೆ. ಸುಳ್ಯದಲ್ಲಿ ಅದ್ದೂರಿ ರೋಡ್ ಶೋ ನಡೆಯಲಿದೆ. ಬಿಜೆಪಿಯ ರಾಜ್ಯಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯ ಯಶಸ್ವಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ತಿಳಿಸಿದ್ದಾರೆ‌.  ಮಾ.11ರಂದು ಬೆಳಗ್ಗೆ ಮಡಿಕೇರಿಯಿಂದ ಹೊರಡುವ ವಿಜಯ ಸಂಕಲ್ಪ ಯಾತ್ರೆ ಮಧ್ಯಾಹ್ನದ ವೇಳೆಗೆ ಸಂಪಾಜೆಗೆ ಆಗಮಿಸಲಿದೆ. ಜಿಲ್ಲಾ ಗಡಿಯಲ್ಲಿ ಯಾತ್ರೆಯನ್ನು ಸ್ವಾಗತಿಸಲಾಗುವುದು. ಬಳಿಕ ಸಂಪಾಜೆ, ಅರಂತೋಡುಗಳಲ್ಲಿ

ಮಾ.11ರಂದು ಸುಳ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ- ಅದ್ದೂರಿ ರೋಡ್ ಶೋ: ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಸಿದ್ಧತೆ : ಸಚಿವ ಎಸ್.ಅಂಗಾರ Read More »

ಆನಡ್ಕ ಪ್ರಾಥಮಿಕ ಶಾಲೆಯಲ್ಲಿ ಸ್ಟಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀತಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಂಗಳವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಶಾಲೆಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಸ್ಟಾರ್ಟ್ ಕ್ಲಾಸ್, ಕುಡಿಯುವ ನೀರಿನ ಘಟಕ ನೀಡುವ ಕೆಲಸ ಆಗಿದೆ. ಜತೆಗೆ ಮಕ್ಕಳು ಮೊಬೈಲ್‍ ಫೋನ್‍ಗೆ ಬೇಗ ಹೊಂದಿಕೊಳ್ಳುತ್ತಾರೆ ಎಂಬ ಕಾರಣಕ್ಕೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಮಕ್ಕಳ  ಬೆಳವಣಿಗೆಗೆ ಬೇಕಾದ ಮೊಟ್ಟೆ, ಚಿಕ್ಕಿ ಕೊಡುವ ಕೆಲಸ ಸರಕಾರ ಮಾಡುತ್ತಿದೆ

ಆನಡ್ಕ ಪ್ರಾಥಮಿಕ ಶಾಲೆಯಲ್ಲಿ ಸ್ಟಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು Read More »

ಇಂದು ಮತ್ತು ನಾಳೆ : ಕುದ್ಮಾರು ಕೆಲಂಬೀರಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ

ಕಾಣಿಯೂರು : ಕುದ್ಮಾರು ಗ್ರಾಮದ ಕೆಲಂಬಿರಿ ಗರಡಿಯಲ್ಲಿ 48ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ ಮಾ.7 ಹಾಗೂ 8 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ.7 ಮಂಗಳವಾರ ಬೆಳಿಗ್ಗೆ ಸ್ಥಳ ಶುದ್ಧಿ ಹೋಮ, ನಾಗ್ರಬ್ರಹ್ಮ ತಂಬಿಲ ಮಧ್ಯಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ, ರಾತ್ರಿ ಕಡಬ ಯುವ ವಾಹಿತಿ ಘಟಕದ ವತಿಯಿಂದ ಭಜನಾ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆದು ಬಳಿಕ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ತೆಗೆಯುವುದು, ಅನಂತರ ಅನ್ನಸಂತರ್ಪಣೆ ಜರಗಲಿದೆ. ಮಾ.8 ಬುಧವಾರ

ಇಂದು ಮತ್ತು ನಾಳೆ : ಕುದ್ಮಾರು ಕೆಲಂಬೀರಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ Read More »

ವಿವೇಕಾನಂದ ಕಾಲೇಜ್‍ ಆಫ್‍ ಇಂಜಿನಿಯರಿಂಗ್‍ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತಾ ಜಾಗೃತಿ ಕಾರ್ಯಕ್ರಮ

ಪುತ್ತೂರು: ಎಲ್ಲಾ ಬಗೆಯ ಬೆಂಕಿ ಅನಾಹುತಗಳಿಗೆ ನೀರು ಹಾಯಿಸುವುದೇ ಪರಿಹಾರವಲ್ಲ. ಬದಲಿಗೆ ವಿವಿಧ ರೀತಿಯ ನಿವಾರಕ ವಿಧಾನಗಳನ್ನು ಅನುಸರಿಸಬೇಕು ಎಂದು ಪುತ್ತೂರು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸುಂದರ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಏರ್ಪಡಿಸಲಾದ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾಡಿದರು. ಹುಲ್ಲು ಕಟ್ಟಿಗೆ, ಎಣ್ಣೆ, ಅನಿಲ, ವಿದ್ಯುತ್ತಿನಿಂದ ಹಾಗೂ ಇನ್ನಿತರ ವಿಧಗಳಿಂದ ಬೆಂಕಿ ಸಂಭವಿಸಬಹುದು. ಸಂದರ್ಭಕ್ಕೆ ತಕ್ಕಂತೆ ಅದರ ನಿವಾರಣೆಗೆ ನೀರು, ಫೋಮ್ ಮಿಶ್ರಿತ ನೀರು ಹಾಗೂ ಇನ್ನಿತರ

ವಿವೇಕಾನಂದ ಕಾಲೇಜ್‍ ಆಫ್‍ ಇಂಜಿನಿಯರಿಂಗ್‍ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತಾ ಜಾಗೃತಿ ಕಾರ್ಯಕ್ರಮ Read More »

300 ಮನೆಗಳಿಗೆ ಪ್ರಯೋಜನ ಮುಗೆರೋಡಿ – ಪೊನ್ನೆತ್ತಡ್ಕ ಸೇತುವೆ, ರಸ್ತೆ | ಕಿಂಡಿಅಣೆಕಟ್ಟು ಸಹಿತ ಸೇತುವೆ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಲೋಕೋಪಯೋಗಿ ಇಲಾಖೆಯ 10 ಲಕ್ಷ ರೂ.ಅನುದಾನದಡಿ ಬಲ್ನಾಡು ಗ್ರಾಮದ ಮುಗೆರೋಡಿ – ಪೊನ್ನೆತ್ತಡ್ಕ ರಸ್ತೆ ಹಾಗೂ 1.50 ಕೋಟಿ ರೂ. ವೆಚ್ಚದಲ್ಲಿ ಮುಗೆರೋಡಿ – ಪೊನ್ನೆತ್ತಡ್ಕ ಬಳಿ ಸೇತುವೆ ಸಮೇತ ಕಿಂಡಿ ಅಣೆಕಟ್ಟನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಕಳೆದ ಹಲವಾರು ವರ್ಷಗಳ ಬೇಡಿಕೆ ಇರುವ ಮುಗೆರೋಡಿ – ಪೊನ್ನೆತ್ತಡ್ಕ ರಸ್ತೆ ಹಾಗೂ ಸೇತುವೆ ಸುಮಾರು 200ರಿಂದ 300 ಮನೆಗಳಿಗೆ ಪ್ರಯೋಜನವಾಗುವ ರಸ್ತೆ. ಜತೆಗೆ

300 ಮನೆಗಳಿಗೆ ಪ್ರಯೋಜನ ಮುಗೆರೋಡಿ – ಪೊನ್ನೆತ್ತಡ್ಕ ಸೇತುವೆ, ರಸ್ತೆ | ಕಿಂಡಿಅಣೆಕಟ್ಟು ಸಹಿತ ಸೇತುವೆ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಅಭಿಯಾನ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಅಭಿಯಾನ ಕಾರ್ಯಕ್ರಮವು ನಡೆಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ  ಬನ್ನೂರು ಗ್ರಾಮ ಒನ್ ಕೇಂದ್ರದ ಅಶೋಕ್ ಮಾತನಾಡಿ,  ಆಯುಷ್ಮಾನ್ ಕಾರ್ಡ್ ಮಾಡುವ ವಿಧಾನ, ಅದರಿಂದಾಗುವ ಉಪಯೋಗಗಳೇನು ಎಂಬುದನ್ನು ವಿವರಿಸಿದ್ದಾರೆ. ಜೊತೆಗೆ ಬಡವರಿಗೆ ಆಧಾರ ಸ್ಥಂಭದಂತಿರುವ ಈ ಆಯುಷ್ಮಾನ್ ಭಾರತ್ ನ ಪ್ರಯೋಜನವನ್ನು ಪ್ರತಿಯೊಬ್ಬರೂ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಅಭಿಯಾನ Read More »

ಕುಕ್ಕರ್ ಬಾಂಬ್‍ ಸ್ಪೋಟ ಸಂತ್ರಸ್ತ | ಆಟೋ ರಿಕ್ಷಾ ಹಸ್ತಾಂತರ

ಪುತ್ತೂರು : ಮಂಗಳೂರಿನ ಕಂಕನಾಡಿ ಗರೋಡಿ ಬಳಿ ನ.19 ರಂದು ಆಟೋ ರಿಕ್ಷಾದಲ್ಲಿ ಬಾಂಬ್ ಸ್ಟೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರಿಗೆ ನೂತನ ಆಟೋ ರಿಕ್ಷಾ ಮತ್ತು ಬಿಜೆಪಿ ವತಿಯಿಂದ ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‍ ಕುಮಾರ್‍ ಕಟೀಲ್ ಆಟೋರಿಕ್ಷಾ ಹಸ್ತಾಂತರಿಸಿ ಮಾತನಾಡಿ, ಬಾಂಬ್‍ ಸ್ಟೋಟದ ಮೂಲಕ ಭಾರತ ದೇಶವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರ ಬಯಲಾಗಿದ್ದು, ಎನ್‍ ಐಎ ಅಧಿಕಾರಿಗಳೇ ಬಹಿರಂಗಪಡಿಸಿದ್ದರು. ಕೃತ್ಯದ ಕುರಿತು

ಕುಕ್ಕರ್ ಬಾಂಬ್‍ ಸ್ಪೋಟ ಸಂತ್ರಸ್ತ | ಆಟೋ ರಿಕ್ಷಾ ಹಸ್ತಾಂತರ Read More »

error: Content is protected !!
Scroll to Top