ಪುತ್ತೂರು

ಪಂಚೋಡಿ-ಗಾಳಿಮುಖ ರಸ್ತೆಗೆ ಶಿಲಾನ್ಯಾಸ : ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು

ಪುತ್ತೂರು : ಪಂಚೋಡಿ ಗಾಳಿಮುಖ ರಸ್ತೆಗೆ  ಶೀಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ವಿಧಾನ ಸಭಾ ಕ್ಷೆತ್ರದಲ್ಲಿ ರಸ್ತೆಗೆ ಆದ್ಯತೆ ನೀಡುವ ಮೂಲಕ ಮೇಲ್ದರ್ಜೆಗೆ ಏರಿಸುವ ಕೆಲಸ ಆಗಿದೆ. ಮುಂದಿನ 25 ವರ್ಷ ಬಾಳ್ವಿಕೆ  ಬರುವ ಹಾಗೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನಬಾರ್ಡ್ ಯೋಜನೆಯಡಿ 3.88 ಕೋಟಿ ಅನುದಾನ ಪೂರ್ತಿ ಒಂದೇ ರಸ್ತೆ ಗೆ ಇಡುವ ಕೆಲಸ ಆಗಿದೆ ಎಂದರು. ಹಿರಿಯ ಕಾರ್ಯಕರ್ತರಾದ ಬಾಲಕೃಷ್ಣ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಚಾಯತ್ […]

ಪಂಚೋಡಿ-ಗಾಳಿಮುಖ ರಸ್ತೆಗೆ ಶಿಲಾನ್ಯಾಸ : ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು Read More »

ಮಾ.25 ರಿಂದ 31 : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೋತ್ಸವ, ಪುಷ್ಪರಥ ಸಮರ್ಪಣೆ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವ ಮಾ.25 ರಿಂದ 31 ರ ತನಕ ವಿವಿಧ ವೈದಿಕ, ಧಾರ್ಮಿಕ ಸಭಾ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆ,ಮ್ಮಿಂಜೆ ನಾಗೇಶ್ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಗೌರವ ಸಲಹೆಗಾರ ಜಯರಾಮ ಕೆದಿಲಾಯ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಜಲುಮಾರು ಕ್ಷೇತ್ರ

ಮಾ.25 ರಿಂದ 31 : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೋತ್ಸವ, ಪುಷ್ಪರಥ ಸಮರ್ಪಣೆ Read More »

ಜಿಲ್ಲೆಯ 4 ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೇಂದ್ರ ಪುತ್ತೂರಿಗೆ | ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಜಿಲ್ಲೆಗೆ ಮಂಜೂರಾದ 4 ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೇಂದ್ರಗಳು ಪುತ್ತೂರಿಗೇ ಮಂಜೂರಾಗಿವೆ. ಈ ಮೂರು ಕೇಂದ್ರಗಳಿಗೂ ಜಾಗದ ಸಮಸ್ಯೆ ಇತ್ತು. ಜಾಗದ ಸಮಸ್ಯೆಯನ್ನು ನಿವಾರಿಸಿ, ಅನುದಾನ ತರಿಸಿ, ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಕೆಲಸ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡವನ್ನು ಸೋಮವಾರ ದರ್ಬೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು, ಉಪ್ಪಿನಂಗಡಿ, ವಿಟ್ಲದಲ್ಲಿ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಗೊಂಡಿದ್ದು, ರೈತರ

ಜಿಲ್ಲೆಯ 4 ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೇಂದ್ರ ಪುತ್ತೂರಿಗೆ | ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ಸಂಟ್ಯಾರ್ ನಲ್ಲಿ ಗಿರೀಶ್ ಗೌಡ ಮರಿಕೆ  ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಪುತ್ತೂರು: ಸಂಟ್ಯಾರ್ ವಿನಾಯಕ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಗಿರೀಶ್ ಗೌಡ ಮರಿಕೆ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಶನಿವಾರ ಸಂಟ್ಯಾರ್ ನಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಕ್ರೀಡಾಕೂಟ ಪಂದ್ಯಾಟ ಉದ್ಘಾಟಿಸಿ, ಪುತ್ತೂರು: ಇಡೀ ಯುವ ಸಮುದಾಯ ಮತ್ತೊಮ್ಮೆ ಕ್ರೀಡೆಗೆ ಒತ್ತು ಕೊಟ್ಟು ಇಂದು ಈ ಭಾಗದಲ್ಲಿ ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿರುವುದು  ಶ್ಲಾಘನೀಯ. ಇಂದು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ  ಸಾಧನೆ ಮಾಡುವ ಮೂಲಕ ನಮ್ಮ

ಸಂಟ್ಯಾರ್ ನಲ್ಲಿ ಗಿರೀಶ್ ಗೌಡ ಮರಿಕೆ  ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ Read More »

ಸರಕಾರ ಕೃಷಿ ಸಾಲದ ವಸೂಲಾತಿಗಾಗಿ ಯಾವುದೇ ರೀತಿಯ ಕಾನೂನು ಹೋರಾಟ ಮಾಡಬಾರದು : ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ದ.ಕ.ಜಿಲ್ಲಾ ಒಕ್ಕೂಟ ಆಗ್ರಹ

ಪುತ್ತೂರು : ಬಂಟ್ವಾಳ ತಾಲೂಕಿನ ಇಡ್ಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದದಿಂದ ಪಡೆದುಕೊಂಡ ಕೃಷಿ ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಬ್ಯಾಂಕ್‌ನಿಂದ ಕಿರುಕುಳ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡ ವೀರಪ್ಪ ಗೌಡ ಅವರ ಕುಟುಂಬಕ್ಕೆ ಅವರ ಸಂಪೂರ್ಣ ಸಾಲಮನ್ನಾದ ಜತೆ ಸರಕಾರ ಕನಿಷ್ಠ 50 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ದ.ಕ.ಜಿಲ್ಲಾ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಂಘದ ಜಿಲ್ಲಾ ಸಂಚಾಲಕ, ಒಕ್ಕೂಟದ ಮುಖ್ಯಸ್ಥ ರೂಪೇಶ್

ಸರಕಾರ ಕೃಷಿ ಸಾಲದ ವಸೂಲಾತಿಗಾಗಿ ಯಾವುದೇ ರೀತಿಯ ಕಾನೂನು ಹೋರಾಟ ಮಾಡಬಾರದು : ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ದ.ಕ.ಜಿಲ್ಲಾ ಒಕ್ಕೂಟ ಆಗ್ರಹ
Read More »

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ | ಪ್ರಸ್ತುತ ವರ್ಷದಿಂದ ಆರಂಭ

ಪುತ್ತೂರು: ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ್ನು ಅಳವಡಿಸುವ ಮೂಲಕ ಜೀವನ ಕೌಶಲ್ಯ ತರಬೇತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು ಎಂದು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರ ಕೇಂದ್ರವೆನಿಸಿರುವ ಅಂಬಿಕಾ ಸಂಸ್ಥೆ ಅನೇಕ ಮೊದಲುಗಳನ್ನು ಹುಟ್ಟು ಹಾಕಿದೆ. ಇದೀಗ ಮತ್ತೊಂದು ಮೈಲಿಗಲ್ಲು ಎಂಬಂತೆ ಸಿಬಿಎಸ್‌ಇ ಸಂಸ್ಥೆಯಲ್ಲಿ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ | ಪ್ರಸ್ತುತ ವರ್ಷದಿಂದ ಆರಂಭ Read More »

ಯೋಜನೆಗೆ ನಿಷ್ಠೆ ಜತೆಯಾದಾಗ ಭವಿಷ್ಯ ಉಜ್ವಲ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಶ್ರೀಕಾಂತ್ ಬಿರಾವು

ಪುತ್ತೂರು: ಗುರಿಯನ್ನು ನಿರ್ಧರಿಸಿ ಕಾರ್ಯಯೋಜನೆಯನ್ನು ತಯಾರಿಸಿದ ಮೇಲೆ ಪ್ರತಿದಿನ ನಿಷ್ಠೆಯಿಂದ ಶ್ರಮವಹಿಸಿ ಅಭ್ಯಾಸ ಮಾಡಿದರೆ ನಮ್ಮ ನಾಳೆಗಳು ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಪುತ್ತೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು ಹೇಳಿದರು. ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಯುಗದಲ್ಲಿ ಎಲ್ಲರೂ ತ್ವರಿತಗತಿಯ ಫಲಿತಾಂಶವನ್ನೇ ಬಯಸುತ್ತಾರೆ. ಆದರೆ ಅಭ್ಯಾಸವಿಲ್ಲದ ಸಾಧನೆಗಳು ಕ್ಷಣಿಕ ಫಲಿತಾಂಶವನ್ನು ನೀಡಬಲ್ಲದೇ ಹೊರತು ಭವಿಷ್ಯಕ್ಕೆ ಸಹಕಾರಿಯಾಗಲಾರದು ಎಂದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ

ಯೋಜನೆಗೆ ನಿಷ್ಠೆ ಜತೆಯಾದಾಗ ಭವಿಷ್ಯ ಉಜ್ವಲ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಶ್ರೀಕಾಂತ್ ಬಿರಾವು Read More »

1.80 ಕೋಟಿ ವೆಚ್ಚದಲ್ಲಿ ಅಂದ್ರಟ್ಟದಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ | ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಮಠಂದೂರು

ಪುತ್ತೂರು: ಬನ್ನೂರು ಗ್ರಾಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು-ರಾಗಿದಕುಮೇರು-ಅಂದ್ರಟ್ಟ-ಪುರುಷರಕಟ್ಟೆ ಸಂಪರ್ಕ ರಸ್ತೆಗೆ ಸುಮಾರು 1.80 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ನಾವು ಸರ್ವ ಸ್ವತಂತ್ರರಾದರೂ ನಮ್ಮ ಬೇಡಿಕೆಗಳು ಮುಗಿಯುವುದಿಲ್ಲ. ಇದಕ್ಕೆ ಇತಿಶ್ರೀ ಹಾಕಲು ಪ್ರಧಾನಿ ಮೋದಿಯವರು ಎಲ್ಲರಿಗೂ ಎಲ್ಲವನ್ನೂ ನೀಡುತ್ತಿದ್ದಾರೆ. ಅದನ್ನು ಸಾಕಾರಗೊಳಿಸಲು ನಮ್ಮಂತ ಜನಪ್ರತಿನಿಧಿಗಳಿಗೆ ಅವಕಾಶ ಸಿಕ್ಕಿದೆ ಎಂದ ಅವರು, ರೈತಾಪಿ ವರ್ಗಕ್ಕೆ ಕಿಸಾನ್ ಸಮ್ಮಾನ್

1.80 ಕೋಟಿ ವೆಚ್ಚದಲ್ಲಿ ಅಂದ್ರಟ್ಟದಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ | ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಮಠಂದೂರು Read More »

ಕಡಿದ ಹಾವು: ಮಗಳ ಧೈರ್ಯಕ್ಕೆ ಗುಡ್ ಬೈ ಹೇಳಿತು ಸಾವು | ತಾಯಿಯ ಉಳಿಸಿದ ದಿಟ್ಟೆಗೆ ಶಾಸಕರಿಂದ ಶಹಬ್ಬಾಶ್ ಗಿರಿ

ಪುತ್ತೂರು: ಹಾವು ಕಚ್ಚಿತು ಎಂದಾಕ್ಷಣ ಎಲ್ಲರೂ ಭಯಗೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬಾಕೆ ದಿಟ್ಟೆ, ತನ್ನ ಬಾಯಿಯಿಂದಲೇ ವಿಷವನ್ನು‌ ಕಚ್ಚಿ ತೆಗೆದು ತಾಯಿಯ ಪ್ರಾಣ ಉಳಿಸಿದ್ದಾಳೆ. ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮಮತಾ ರೈ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾವು ಕಚ್ಚಿತ್ತು. ತಕ್ಷಣ ಓಡಿ ಬಂದ ಮಗಳು ಶ್ರಮ್ಯ ರೈ, ತಾಯಿಗೆ ಧೈರ್ಯ ತುಂಬಿ, ತನ್ನ ಬಾಯಿಯಿಂದಲೇ ವಿಷವನ್ನು ಕಚ್ಚಿ ತೆಗೆದು ಪ್ರಥಮ ಚಿಕಿತ್ಸೆ ನೀಡಿದ್ದಾಳೆ. ನಂತರ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಮಮತಾ ರೈ

ಕಡಿದ ಹಾವು: ಮಗಳ ಧೈರ್ಯಕ್ಕೆ ಗುಡ್ ಬೈ ಹೇಳಿತು ಸಾವು | ತಾಯಿಯ ಉಳಿಸಿದ ದಿಟ್ಟೆಗೆ ಶಾಸಕರಿಂದ ಶಹಬ್ಬಾಶ್ ಗಿರಿ Read More »

ಕಬಕ ಒಕ್ಕೂಟದ ವಿದ್ಯಾಪುರ ಶ್ರೀ ನಾಗ ಮತ್ತು ಪಂಚದೈವಗಳ ಸನ್ನಿಧಿಯಲ್ಲಿ  ನಮ್ಮ ಶೌರ್ಯ ತಂಡದ ಯೋಧರಿಂದ ಶ್ರಮದಾನ

ಪುತ್ತೂರು: ಕಬಕ  ವಿದ್ಯಾಪುರ  ಶ್ರೀ ನಾಗ ಮತ್ತು ಪಂಚ ದೈವಗಳ  ಸಾನಿದ್ಯದ ಜೀರ್ಣೋದ್ದಾರ ಪ್ರಯುಕ್ತ ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕ ಒಂದು ದಿನದ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ  ಘಟಕದ  ಪ್ರತಿನಿಧಿ ವಿನಯ ನಾಯ್ಕ, ಜಗದೀಶ, ಲೋಕೇಶ್, ವಿನೋದ್ ಬಂಗಾರಡ್ಕ, ಹರಿಪ್ರಸಾದ್, ಚಂದ್ರಶೇಕರ, ಸುನೀಲ್ ಡಿಸೋಜ, ರೋಷನ್ ಡಿಸೋಜ, ಅಜಯ್, ಶಂಭು ಪೂಜಾರಿ, ಬಾಲಕೃಷ್ಣ, ಕಾರ್ತಿಕ್ ಸ್ವಾತಿ ಭಾಗವಹಿಸಿದ್ದರು, ದೈವಸ್ಥಾನದ  ಸಮಿತಿಯವರು  ಸೇವೆ ಸಲ್ಲಿಸಿದ  ಎಲ್ಲರಿಗೂ  ಅಭಿನಂದನೆ  ಸಲ್ಲಿಸಿದರು, ಬಳಿಕ  ಮಾಸಿಕ  ಸಭೆ  ನಡೆಸಲಾಯಿತು, ಸಂಯೋಜಕಿ  ಆಶಾಲತಾ 

ಕಬಕ ಒಕ್ಕೂಟದ ವಿದ್ಯಾಪುರ ಶ್ರೀ ನಾಗ ಮತ್ತು ಪಂಚದೈವಗಳ ಸನ್ನಿಧಿಯಲ್ಲಿ  ನಮ್ಮ ಶೌರ್ಯ ತಂಡದ ಯೋಧರಿಂದ ಶ್ರಮದಾನ Read More »

error: Content is protected !!
Scroll to Top