ಪುತ್ತೂರು

ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸುರೇಶ್‍ ಸಾಲಿಯಾನ್‍ ನಿಧನ

ಪುತ್ತೂರು: ಕಾಂಗ್ರೆಸ್ ಹಿರಿಯ ಕಾರ್ಯಕರ್ತ, ಸಾಮೆತ್ತಡ್ಕ ನಿವಾಸಿ ಸುರೇಶ್ ಸಾಲಿಯಾನ್ (65) ರವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದರು. ಮೃತ ಸುರೇಶ್ ಸಾಲಿಯಾನ್ ರವರು ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತ ಸುರೇಶ್ ರವರು ದರ್ಬೆಯಲ್ಲಿ ಬಜಾಜ್ ಗ್ಯಾರೇಜ್ ನಲ್ಲಿ ಸೇವೆ ನೀಡುತ್ತಿದ್ದು ಬಳಿಕ ಸಾಮೆತ್ತಡ್ಕ ದ್ವಿತೀಯ ಕ್ರಾಸ್ ನಲ್ಲಿ ಪಡಿತರ ಅಂಗಡಿಯನ್ನು ನಡೆಸುತ್ತಿದ್ದರು. ಸಾಮೆತ್ತಡ್ಕ ಕಾಂಗ್ರೆಸ್ ಬೂತ್ ಸಮಿತಿಯ ಸಕ್ರಿಯ ಸದಸ್ಯರಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ […]

ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸುರೇಶ್‍ ಸಾಲಿಯಾನ್‍ ನಿಧನ Read More »

ಮರಳು ಮತ್ತು ಕೆಂಪುಕಲ್ಲು ಅಭಾವದಿಂದಾಗಿ ವಿಕೋಪಗಳಿಂದ ಹಾನಿಯಾದ ಮನೆಗಳ ದುರಸ್ಥಿಯೂ ಮಾಡಲಾಗುತ್ತಿಲ್ಲ |  ಬಡ ಕಾರ್ಮಿಕರಿಗೆ ಕೂಲಿ ಕೆಲಸವೂ ಇಲ್ಲದಂತಾಗಿದೆ :  ಅರುಣ್ ಪುತ್ತಿಲ

ಪುತ್ತೂರು: ಕರ್ನಾಟಕ ಕಾಂಗ್ರೇಸ್ ಸರ್ಕಾರ ಕೆಲವೊಂದು ನಿಯಮಗಳನ್ನು ತಂದು ದಕ್ಷಿಣಕನ್ನಡ ಉಡುಪಿಯಲ್ಲಿ ಕೆಂಪು ಕಲ್ಲು ಸಾಗಾಟ ನಿಂತುಹೋಗಿದೆ. ಈಗಾಗಲೇ ಭಾರಿ ಮಳೆಯಿಂದ ಹಲವು ಕಡೆಗಳಲ್ಲಿ ಭೂಕುಸಿತವಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಹಲವಾರು ಕುಟುಂಬಗಳು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದು, ತಮ್ಮ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಕೆಂಪುಕಲ್ಲು, ಮರಳು ಮುಂತಾದವುಗಳು ಮೇಲೆ ಸರ್ಕಾರದ ಕೆಂಗಣ್ಣಿನಿಂದಾಗಿ ಬಡ  ಕಾರ್ಮಿಕರ ಮೇಲೆ ಬರೆ ಎಳೆದಂತಾಗಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆರೋಪಿಸಿದ್ದಾರೆ. ಪತ್ರಿಕಾ ಹೇಳಿಕೆ

ಮರಳು ಮತ್ತು ಕೆಂಪುಕಲ್ಲು ಅಭಾವದಿಂದಾಗಿ ವಿಕೋಪಗಳಿಂದ ಹಾನಿಯಾದ ಮನೆಗಳ ದುರಸ್ಥಿಯೂ ಮಾಡಲಾಗುತ್ತಿಲ್ಲ |  ಬಡ ಕಾರ್ಮಿಕರಿಗೆ ಕೂಲಿ ಕೆಲಸವೂ ಇಲ್ಲದಂತಾಗಿದೆ :  ಅರುಣ್ ಪುತ್ತಿಲ Read More »

ಬಾಡಿಗೆಗೆಂದು ತೆಗೆದುಕೊಂಡ ಲಾರಿಯನ್ನು ಚಾಲಕನೇ ಅಡವಿಟ್ಟ | ವಿಚಾರಿಸಲು ಹೋದ ಮಾಲೀಕನಿಗೆ ಜೀವ ಬೆದರಿಕೆ | ಪ್ರಕರಣ ದಾಖಲು

ಪುತ್ತೂರು: ಬಾಡಿಗೆಗೆಂದು ತೆಗೆದುಕೊಂಡು ಹೋದ ಲಾರಿಯನ್ನು ಚಾಲಕನೇ ಅಡವಿಟ್ಟು ಈ ಬಗ್ಗೆ ವಿಚಾರಿಸಲು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಫರ್ವೀಝ್‍ ಎಂ. ಎಂಬವರು ನಗರ ಠಾಣೆಗೆ ದೂರು ನೀಡಿದ್ದು, ಲಾರಿ ಚಾಲಕ ಅಸಾಸುದ್ದೀನ್ ಫೈರೋಝ್ ಮತ್ತು ಮಂಗಳೂರಿನ ಕಿರಣ್ ಪ್ರಕರಣದ ಆರೋಪಿಗಳು ಎಂದು ತಿಳಿದು ಬಂದಿದೆ. ತಮ್ಮ ಮಾಲಕತ್ವದ ಲಾರಿಗೆ  ಅಸಾಸುದ್ದೀನ್ ಫೈರೋಝ್ ನನ್ನು ಚಾಲಕನಾಗಿ ನೇಮಿಸಿದ್ದು, ಮಾ.29ರಂದು ಸರಕು ಸಾಗಾಟದ ಉದ್ದೇಶಕ್ಕಾಗಿ ಲಾರಿಯನ್ನು ಪಡೆದ ಆತ

ಬಾಡಿಗೆಗೆಂದು ತೆಗೆದುಕೊಂಡ ಲಾರಿಯನ್ನು ಚಾಲಕನೇ ಅಡವಿಟ್ಟ | ವಿಚಾರಿಸಲು ಹೋದ ಮಾಲೀಕನಿಗೆ ಜೀವ ಬೆದರಿಕೆ | ಪ್ರಕರಣ ದಾಖಲು Read More »

ದರ್ಬೆಯ ಅಂಗಡಿಯೊಂದರಲ್ಲಿ ಬೆಂಕಿ ಅವಘಡ

ಪುತ್ತೂರು: ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಇದೀಗ ದರ್ಬೆ ವೃತ್ತದ ಬಳಿ ನಡೆದಿದೆ. ದರ್ಬೆ ವೃತ್ತದ ಬಳಿ ಡಾಲ್ಫಿ ಬಿಲ್ಡಿಂಗ್‍ ನಲ್ಲಿರುವ ನಂದಿಕೇಶ್ವರ ಇಲೆಕ್ಟ್ರಿಕಲ್‍ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಬೆಂಕಿ ಅವಘಡಕ್ಕೆ ಕಾರಣಗಳು ಇನ್ನಷ್ಟೇ ತಿಳಿಯಬೇಕಿದೆ.

ದರ್ಬೆಯ ಅಂಗಡಿಯೊಂದರಲ್ಲಿ ಬೆಂಕಿ ಅವಘಡ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಬುನಾದಿ ಶಿಕ್ಷಣ’ ಪಠ್ಯ ವಿಷಯದ ತರಬೇತು ಕಾರ್ಯಾಗಾರ

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಎರಡು ದಿನಗಳ ಚಟುವಟಿಕಾಧಾರಿತ ಶಿಶು ಶಿಕ್ಷಣ ಹಾಗೂ ಬುನಾದಿ ಶಿಕ್ಷಣದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಸಂಪನ್ನಗೊಂಡಿತು. ವಿದ್ಯಾಭಾರತಿ ಕರ್ನಾಟಕದೊಂದಿಗೆ ಸಂಲಗ್ನಗೊಂಡ 44 ವಿದ್ಯಾಮಂದಿರಗಳ ಸಹ ಶಿಕ್ಷಕರಿಗೆ ಕಾರ್ಯಾಗರದ ಪ್ರಥಮ ದಿನದ ಉದ್ಘಾಟನೆ ನೆರವೇರಿಸಿದ ವಿವೇಕಾನಂದ ವಿದ್ಯಾವರ್ಧಕ  ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್‌ ಮಾತನಾಡಿ, ವ್ಯಕ್ತಿ ಜೀವನದ ಪ್ರಮುಖ ಘಟ್ಟದ ಅನುಭವ ಜನ್ಯ ಕಲಿಕೆ ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಈ ದಿಶೆಯಿಂದ ನಿರಂತರ ತರಬೇತು

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಬುನಾದಿ ಶಿಕ್ಷಣ’ ಪಠ್ಯ ವಿಷಯದ ತರಬೇತು ಕಾರ್ಯಾಗಾರ Read More »

ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ವಿಕಸಿತ ಭಾರತ ಸಂಕಲ್ಪ ಸಭೆ | ಕಾಂಗ್ರೆಸ್‍ ಸರಕಾರ ರಾಜ್ಯದಲ್ಲಿ ತೆರಿಗೆ ನೆಪದಲ್ಲಿ ಜನತೆಯನ್ನು ಲೂಟಿ ಮಾಡುತ್ತಿದೆ : ಸತೀಶ್‍ ಕುಂಪಲ | ಜೂ.23 : ಕಾಂಗ್ರೆಸ್‍ ಸರಕಾರದ ದುರಾಡಳಿತದ ವಿರುದ್ಧ ಬೃಹತ್‍ ಪ್ರತಿಭಟನೆ

ಪುತ್ತೂರು: ಕಾಂಗ್ರೆಸ್‍ ಸರಕಾರ ದುರಾಡಳಿತದ ವಿರುದ್ಧ ಕೆಲವು ಅಂಶಗಳನ್ನು ಮುಂದಿಟ್ಟುಕೊಂಡು ಜೂ.23 ರಂದು ಜಿಲ್ಲೆಯ ಎಲ್ಲಾ ಗ್ರಾಪಂ, ನಗರ, ಪಟ್ಟಣ ಪಂಚಾಯಿತಿ ಎದುರು ಬಿಜೆಪಿ ವತಿಯಿಂದ ಬೃಹತ್‍ ಪ್ರತಿಭಟನೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‍ ಕುಂಪಲ ತಿಳಿಸಿದ್ದಾರೆ. ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರಕಾರಕ್ಕೆ 11 ವರ್ಷ ತುಂಬಿದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ

ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ವಿಕಸಿತ ಭಾರತ ಸಂಕಲ್ಪ ಸಭೆ | ಕಾಂಗ್ರೆಸ್‍ ಸರಕಾರ ರಾಜ್ಯದಲ್ಲಿ ತೆರಿಗೆ ನೆಪದಲ್ಲಿ ಜನತೆಯನ್ನು ಲೂಟಿ ಮಾಡುತ್ತಿದೆ : ಸತೀಶ್‍ ಕುಂಪಲ | ಜೂ.23 : ಕಾಂಗ್ರೆಸ್‍ ಸರಕಾರದ ದುರಾಡಳಿತದ ವಿರುದ್ಧ ಬೃಹತ್‍ ಪ್ರತಿಭಟನೆ Read More »

ಮನೆ ಮೇಲೆ ಬಿದ್ದ ಬೃಹತ್‍ ಗಾತ್ರದ ಮರ | ಮನೆ ಮಂದಿ ಪ್ರಾಣಾಪಾಯದಿಂದ ಪಾರು

ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ನೇರೋಳ್ತಡ್ಕ ದಲ್ಲಿ ಮನೆಯೊಂದರ ಮೇಲೆ ಬೃಹದಾಕಾರದ ಮರವೊಂದು ಉರುಳಿಬಿದ್ದ ಪರಿಣಾಮ ಮನೆಗೆ ತೀವ್ರ ಹಾನಿಯಾಗಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ನೇರೋಳ್ತಡ್ಕ ಜಯಂತಿ ಎಂಬುವವರ ಮನೆಯ ಮೇಲೆ ಬೃಹತ್‍ ಗಾತ್ರದ ಮರ ಬಿದ್ದಿದ್ದು, ಘಟನೆ ನಡೆದಾಗ ಜಯಂತಿ ಹಾಗೂ ಅವರ ಮಕ್ಕಳಾದ ಧನರಾಜ್ ಮತ್ತು ಚೇತನ್‌ ರಾಜ್ ಮನೆಯೊಳಗೇ ಇದ್ದರು. ಮರ ಬಿದ್ದ ರಭಸಕ್ಕೆ ಮನೆಯ ಸಿಮೆಂಟ್ ಶೀಟ್‌ಗಳು ಸಂಪೂರ್ಣವಾಗಿ ಪುಡಿಪುಡಿಯಾಗಿದ್ದು ಸುಮಾರು 2 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು

ಮನೆ ಮೇಲೆ ಬಿದ್ದ ಬೃಹತ್‍ ಗಾತ್ರದ ಮರ | ಮನೆ ಮಂದಿ ಪ್ರಾಣಾಪಾಯದಿಂದ ಪಾರು Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೋರ್ಸ್ ನ ಸದುಪಯೋಗ ಪಡೆದುಕೊಳ್ಳಬಹುದು. ನುರಿತ ಉತ್ತಮ ಅಧ್ಯಾಪಕರಿಂದ ತರಗತಿ ನಡೆಸಲಾಗುವುದು. ಸಂಸ್ಥೆಯಲ್ಲಿ CA, PLACEMENT TRAINING, EDUCATION GUIDELINES, PUC TUITIONS, LEARNING ORATORY, SKILLS (SPEECH), SPOKEN ENGLISH & ANCHORING ಕೋಚಿಂಗ್‍ ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ,

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭ Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್ ತರಗತಿಗೆ ದಾಖಲಾತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್‍ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಎಲ್‍ಕೆಜಿ ಯಿಂದ 10ನೇ ತರಗತಿ ತನಕ ಟ್ಯೂಷನ್‍ ತರಗತಿಯ ಎಲ್ಲಾ ಪಠ್ಯಗಳಿಗೆ ಟ್ಯೂಷನ್‍ ಲಭ್ಯವಿದ್ದು, ಪ್ರತಿಯೊಂದು ಮಕ್ಕಳ ಕುರಿತು ವೈಯಕ್ತಿಕ ಗಮನ, ಕೌಶಲ್ಯ ಹೆಚ್ಚಿಸುವುದು ಹಾಗೂ ಪರೀಕ್ಷೆಗೆ ತಯಾರಿ ನಡೆಸುವುದು ಸಂಸ್ಥೆಯ ಧ್ಯೇಯವಾಗಿದೆ. ವಿಶಾಲವಾದ ತರಗತಿ ಕೊಠಡಿ, ನುರಿತ ಶಿಕ್ಷಕರಿಂದ ಉತ್ತಮ ಬೋಧನೆ ವ್ಯವಸ್ಥೆಯನ್ನೊಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ, ಪ್ರಭು ಬಿಲ್ಡಿಂಗ್‍, ಕೆನರಾ ಬ್ಯಾಂಕ್‍ ಬಳಿ,

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್ ತರಗತಿಗೆ ದಾಖಲಾತಿ ಆರಂಭ Read More »

ಕನ್ಯಾನ ಗ್ರಾಮದ ಮುಂಡೂರಿನಲ್ಲಿ ಕಂಪಿಸಿದ ಭೂಮಿ | ಆತಂಕಗೊಂಡ ಸಾರ್ವಜನಿಕರು

‍ ವಿಟ್ಲ: ಕನ್ಯಾನ ಗ್ರಾಮದ ಮಂಡ್ಕೂರು ಎಂಬಲ್ಲಿ ಜನರಿಗೆ ಒಂದು ಕ್ಷಣಕ್ಕೆ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಇದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಂಪಿಸಿದ ಅನುಭವ ಕೇವಲ ಒಂದೆರಡು ಸೆಕೆಂಡ್‍  ಮಾತ್ರ ಉಂಟಾಗಿದೆ. ಘಟನೆ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಯಬಿಟ್ಟಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಕನ್ಯಾನ ಗ್ರಾಮದ ಮುಂಡೂರಿನಲ್ಲಿ ಕಂಪಿಸಿದ ಭೂಮಿ | ಆತಂಕಗೊಂಡ ಸಾರ್ವಜನಿಕರು Read More »

error: Content is protected !!
Scroll to Top