ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಸಣ್ಣ ರಥೋತ್ಸವ | ತೆಪ್ಪೋತ್ಸವ | ಕೆರೆ ಆಯನ | ಇಂದು ಶ್ರೀ ಮಹಾಲಿಂಗೇಶ್ವರನ ವೈಭವದ ಬ್ರಹ್ಮರಥೋತ್ಸವ
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ವಿಜೃಂಭಣೆಯಿಂದ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ವೈಭವವನ್ನು ಪಡೆಯುತ್ತಿದೆ. ಭಾನುವಾರ ರಾತ್ರಿ ದೂರದ ಬಲ್ನಾಡಿನಿಂದ ವರ್ಷಂಪ್ರತಿ ಬರುವ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನವಾಯಿತು. ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ದೇವಸ್ಥಾನದ ಹೊರಾಂಗಣದಲ್ಲಿ ಬಲಿ ಉತ್ಸವ ಆಗುತ್ತಿದ್ದಂತೆ ರಾತ್ರಿ 11 ಗಂಟೆ ಸುಮಾರಿಗೆ ಬಲ್ನಾಡಿನಿಂದ ಶ್ರೀ ದೈವಗಳ ಕಿರುವಾಳು ಆಗಮಿಸಿ ಶ್ರೀ ಮಹಾಲಿಂಗೇಶ್ವರನ್ನು ಎದುರುಗೊಂಡು ಮಾತುಕತೆ ನಡೆಸಿ ಬಳಿಕ ಶ್ರೀ ದೇವರ ಬಲಿಯೊಂದಿಗೆ […]









