ಬಡಗನ್ನೂರಿನಲ್ಲಿ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೆ ಕಳ್ಳತನ
ಪುತ್ತೂರು: ಅಂತಾರಾಜ್ಯ ದರೋಡೆ ಪ್ರಕರಣದಿಂದ ಸುದ್ದಿಯಾಗಿದ್ದ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಕಳ್ಳತನ ಪ್ರಕರಣ ನಡೆದಿದೆ. ಬಡಗನ್ನೂರು ಗ್ರಾ. ಪಂ. ವ್ಯಾಪ್ತಿಯ ಪಟ್ಟೆ ಶಾಲೆಯ ಬಳಿಯ ದಿನಸಿ ಅಂಗಡಿಗೆ ಶನಿವಾರ ರಾತ್ರಿ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿ ತುಂಬಾ ಜಾಲಾಡಿದ್ದಾರೆ. ಅಂಗಡಿ ಮಾಲಕ ಶೇಖರ್ ನಾಯಕ್ ಯಾವುದೇ ನಗದು ಅಂಗಡಿಯಲ್ಲಿ ಇರಿಸದ ಕಾರಣ ಬಚಾವಾಗಿದ್ದಾರೆ. ಅಂಗಡಿಯ ಡ್ರಾಯರ್ ನಿಂದ ಚಿಲ್ಲರೆ ಹಣ ಕಳವಾಗಿದೆ. ಬೆಳಿಗ್ಗೆ ಅಂಗಡಿ ಮಾಲಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ. […]
ಬಡಗನ್ನೂರಿನಲ್ಲಿ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೆ ಕಳ್ಳತನ Read More »










