ಬಜರಂಗದಳದ ಐವರು ಕಾರ್ಯಕರ್ತರ ಗಡಿಪಾರು ಆದೇಶ: ಅಧಿಕಾರಿಗಳಿಗೆ ಫೋನಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಸಂಸದ ನಳಿನ್
ಪುತ್ತೂರು: ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲು ಮಾನದಂಡವೇನು, ಕೇವಲ ಒಂದು ಕೇಸು ಇದ್ದವರಿಗೂ ಗಡಿಪಾರು ನೋಟೀಸ್ ನೀಡಲಾಗಿದೆ. ನನ್ನನ್ನು ಗಡಿಪಾರು ಮಾಡಿ, ಕಾರ್ಯಕರ್ತರನ್ನು ಯಾಕೆ ಗಡಿಪಾರು ಮಾಡ್ತೀರಾ. ಹೀಗೆಂದು ಹೇಳಿದ್ದಾರೆ ಸಂಸದ ನಳಿನ್ ಕುಮಾರ್ ಕಟೀಲ್. ಬಜರಂಗದಳ ಐದು ಮಂದಿ ಕಾರ್ಯಕರ್ತರ ಗಡಿಪಾರಿಗೆ ಆದೇಶ ಬಂದ ಹಿನ್ನಲೆಯಲ್ಲಿ ಬಜರಂಗಳದ ಕಾರ್ಯಕರ್ತರು ಸಂಸದರನ್ನು ಭೇಟಿ ಮಾಡಿದ್ದು, ಕಾರ್ಯಕರ್ತರ ಸಮ್ಮುಖದಲ್ಲೇ ಅಧಿಕಾರಿಗಳ ಜತೆ ಫೋನ್ ಮುಖಾಂತರ ಈ ಕುರಿತು ಮಾತನಾಡಿದರು. ಆದೇಶ ಮಾಡುವ ಮೊದಲು ಸರಿಯಾಗಿ ಪರಿಶೀಲನೆ ನಡೆಸಬೇಕು. ಅದನ್ನು […]










