ಪುತ್ತೂರು

ಸಾಲ ಮನ್ನಾ ಮೊತ್ತ ಒಂದು ತಿಂಗಳೊಳಗೆ ನೀಡಬೇಕು | ಸಾಲಮನ್ನಾ ವಂಚಿತ ರೈತರ ಪ್ರತಿಭಟನೆಯಲ್ಲಿ ಕಿಶೋರ್ ಶಿರಾಡಿ ಎಚ್ಚರಿಕೆ

ಪುತ್ತೂರು: ರೈತರ ಸಾಲ ಮನ್ನಾ ಮೊತ್ತ ಪಾವತಿಯಾಗದಿದ್ದರೆ ಡಿಸಿಸಿ ಬ್ಯಾಂಕ್ ಚಲೋ ನಡೆಸಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದ್ದಾರೆ. ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಇಲ್ಲಿಯ ಅಮರ್ ಜವಾನ್ ಸ್ಮಾರಕದ ಬಳಿ ಮಂಗಳವಾರ ನಡೆದ ಸಾಲ ಮನ್ನಾ ವಂಚಿತ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾಲ ಮನ್ನಾ ಮೊತ್ತ ರೈತರಿಗೆ ಪಾವತಿಯಾಗದಿರಲು ಸಹಕಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊಣೆ. ಇದರ ಕುರಿತು ಸಾಲಗಾರರ ಸಾಲದ ನಂಬರ್ […]

ಸಾಲ ಮನ್ನಾ ಮೊತ್ತ ಒಂದು ತಿಂಗಳೊಳಗೆ ನೀಡಬೇಕು | ಸಾಲಮನ್ನಾ ವಂಚಿತ ರೈತರ ಪ್ರತಿಭಟನೆಯಲ್ಲಿ ಕಿಶೋರ್ ಶಿರಾಡಿ ಎಚ್ಚರಿಕೆ Read More »

ತಾಲೂಕು ಆಡಳಿತದಿಂದ ಛತ್ರಪತಿ ಶಿವಾಜಿ, ಸಂತ ಕವಿ ಸರ್ವಜ್ಞ ಜಯಂತಿ

ಪುತ್ತೂರು: ಕಷ್ಟ ಜೀವನ ಅನುಭವಿಸಿ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ಸರ್ವಜ್ಞರ ತತ್ವ ಆದರ್ಶಗಳು ನಮಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ, ಮೋಸದ ಜಾಲವನ್ನು ಬೇಧಿಸುವ ಚಾಕಚಕ್ಯತೆಯನ್ನು ಶಿವಾಜಿ ತೋರಿಸಿಕೊಟ್ಟಿದ್ದಾರೆ. ಶ್ರೀಮಂತಿಕೆಯಿಂದ ಎಲ್ಲವನ್ನೂ ಪಡೆಯಲು ಆಗದಿದ್ದರೂ, ಶ್ರಮದ ಸಾಧನೆಯಿಂದ ಸಕಲವನ್ನು ಪಡೆಯಬಹುದು ಎಂದು ಪುತ್ತೂರು ತಹಸೀಲ್ದಾರ ಪುರಂದರ ಹೆಗ್ಡೆ ಹೇಳಿದರು. ಅವರು ಮಂಗಳವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮತ್ತು ಸಂತಕವಿ

ತಾಲೂಕು ಆಡಳಿತದಿಂದ ಛತ್ರಪತಿ ಶಿವಾಜಿ, ಸಂತ ಕವಿ ಸರ್ವಜ್ಞ ಜಯಂತಿ Read More »

ಫೆ.24 : ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮ “ನವತಿ ಸಂಭ್ರಮ’

ಪುತ್ತೂರು: ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮಾಚರಣಾ ಸಮಿತಿ ವತಿಯಿಂದ ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮ ’90 ರ ನವತಿ’ ಸಂಭ್ರಮ ಫೆ.24 ಶನಿವಾರ ಕೊಂಬೆಟ್ಟು ಎಂ.ಸುದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅರಿಯಡ್ಕ ಚಿಕ್ಕಪ್ಪ ನಾಯ್ಕರು ಅತ್ಯುತ್ತಮ ಕೃಷಿಕರಾಗಿ, ಧಾರ್ಮಿಕ, ಸಾಮಾಜಿಕ, ಕಲಾಕ್ಷೇತ್ರದಲ್ಲಿ ಕಾಣಿಸಿಕೊಂಡಿರುವುದಲ್ಲದೆ, ಅವರದು ಮೃದು, ಮಧುರ

ಫೆ.24 : ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮ “ನವತಿ ಸಂಭ್ರಮ’ Read More »

ನಾಪತ್ತೆಯಾದ ಬಾಲಕ ಪತ್ತೆ!

ಸವಣೂರು: ನಾಪತ್ತೆಯಾಗಿದ್ದ ಯುವಕನೋರ್ವ ಸ್ಥಳೀಯ ಮನೆಯೊಂದರಲ್ಲಿ ಪತ್ತೆಯಾಗಿದ್ದಾನೆ. ಅರೆಲ್ತಡಿ ನಿವಾಸಿ ಅಶೋಕ ಹಾಗೂ ವನಿತಾ ದಂಪತಿ ಪುತ್ರ ಅಶ್ವಥ್ (13) ನಾಪತ್ತೆಯಾಗಿದ್ದು, ಇದೀಗ ಪತ್ತೆಯಾಗಿದ್ದಾನೆ. ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿಯಾಗಿರುವ ಅಶ್ವಥ್ ಸ್ಥಳೀಯ ಹೊಸ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಪರೀಕ್ಷೆ ಇದ್ದ ಕಾರಣ ಶಾಲೆಗೆ ತೆರಳದೆ ಹೊಸಮನೆ ಸಮೀಪ ಕುಳಿತಿದ್ದ ಎನ್ನಲಾಗಿದೆ. ಸ್ಥಳೀಯರು ಹಾಗೂ ಪೊಲೀಸರ ಮೂಲಕ ಈತನನ್ನು ಪತ್ತೆಹಚ್ಚಲಾಗಿತ್ತು. ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

ನಾಪತ್ತೆಯಾದ ಬಾಲಕ ಪತ್ತೆ! Read More »

ವಿದ್ಯುತ್ ನಿಲುಗಡೆ | ಯಾವಾಗ, ಎಲ್ಲೆಲ್ಲಿ? | ಇಲ್ಲಿದೆ ಡಿಟೈಲ್ಸ್

ಪುತ್ತೂರು: 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಇರುವುದರಿಂದ ಫೆ.22 ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. 33 ಕೆವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ, 33 ಕೆವಿ ಪುತ್ತೂರು-ಕುಂಬ್ರ, 33 ಕೆವಿ ಪುತ್ತೂರು-ಸುಳ್ಯ ಹಾಗೂ 33 ಕೆವಿ ಪುತ್ತೂರು-ಸವಣೂರು-ನೆಲ್ಯಾಡಿ ವಿದ್ಯುತ್‍ ಮಾರ್ಗಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಆದ್ದರಿಂದ 110/33/11 ಕೆವಿ ಪುತ್ತೂರು ಹಾಗೂ 33/11 ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ಹಾಗೂ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ

ವಿದ್ಯುತ್ ನಿಲುಗಡೆ | ಯಾವಾಗ, ಎಲ್ಲೆಲ್ಲಿ? | ಇಲ್ಲಿದೆ ಡಿಟೈಲ್ಸ್ Read More »

ಸಂಪ್ಯ ಅಕ್ಷಯ ಕಾಲೇಜಿನಿಂದ ಸಂವಿಧಾನ ಜಾಗೃತಿ ಜಾಥಾ-2024

ಪುತ್ತೂರು: ಸಂಪ್ಯ ಅಕ್ಷಯ ಕಾಲೇಜು ವತಿಯಿಂದ ಸಂವಿಧಾನ ಜಾಗೃತಿ ಜಾಥಾ -2024 ಆರ್ಯಾಪು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಅಕ್ಷಯ ಕಾಲೇಜಿನ ಸುಮಾರು 50ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದು, ಜಾಥಾವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಿಸಿ ಸಂವಿಧಾನದ ಕುರಿತು ಮಾಹಿತಿ ನೀಡಲಾಯಿತು.ಬಳಿಕ ಸಂವಿಧಾನ ಮಾಹಿತಿ ಜಾಥಾ ಗ್ರಾಮ ಪಂಚಾಯಿತಿಯಿಂದ ಹೊರಟು ಗ್ರಾಮಾಂತರ ಆರಕ್ಷಕ ಠಾಣೆವರೆಗೆ ನಡೆಸಲಾಯಿತು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ರಾಷ್ಟ್ರೀಯ ಸೇವಾ ಯೋಜನೆ ಸಹಕಾರ್ಯಕ್ರಮಾಧಿಕಾರಿ ಮೇಘಶ್ರೀ ಹಾಗೂ ಕಾಲೇಜಿನ

ಸಂಪ್ಯ ಅಕ್ಷಯ ಕಾಲೇಜಿನಿಂದ ಸಂವಿಧಾನ ಜಾಗೃತಿ ಜಾಥಾ-2024 Read More »

ವೆಬ್ಸೈಟ್, ಸಾಮಾಜಿಕ ಜಾಲತಾಣ ಜೀವನದ ಅವಿಭಾಜ್ಯ ಅಂಗ : ಡಾ.ಕೆ.ಎಂ.ಕೃಷ್ಣ ಭಟ್ | ಮರು ವಿನ್ಯಾಸಗೊಂಡ ವೆಬ್ಸೈಟ್, ಸಾಮಾಜಿಕ ಜಾಲತಾಣಗಳ ಅನಾವರಣ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮರು ವಿನ್ಯಾಸಗೊಂಡ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಅನಾವರಣ ಕಾರ್ಯಕ್ರಮ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾಸಂಸ್ಥೆ ಅಭಿವೃದ್ಧಿ ಹೊಂದಲು ಮತ್ತು ಕಾಲೇಜಿನ ಎಲ್ಲಾ ಮಾಹಿತಿಗಳು ಹೊರ ಜಗತ್ತಿಗೆ ತಿಳಿಯಪಡಿಸಲು ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳು ಅತ್ಯಂತ ಸಹಾಯಕಾರಿ. ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾಗಳ ಬಳಕೆ ವ್ಯಾಪಕವಾಗಿ ಹಬ್ಬಿದೆ. ಸೋಶಿಯಲ್ ಮೀಡಿಯಾ ಎಂಬುದು ಒಬ್ಬರಿಗೊಬ್ಬರು ಸಂಪರ್ಕದಿಂದಿರಲು, ಮಾಹಿತಿಯನ್ನು

ವೆಬ್ಸೈಟ್, ಸಾಮಾಜಿಕ ಜಾಲತಾಣ ಜೀವನದ ಅವಿಭಾಜ್ಯ ಅಂಗ : ಡಾ.ಕೆ.ಎಂ.ಕೃಷ್ಣ ಭಟ್ | ಮರು ವಿನ್ಯಾಸಗೊಂಡ ವೆಬ್ಸೈಟ್, ಸಾಮಾಜಿಕ ಜಾಲತಾಣಗಳ ಅನಾವರಣ Read More »

ಅನಾರೋಗ್ಯ ಹಿನ್ನಲೆಯಲ್ಲಿ ಕಟ್ಟಲಾಗದ ಬಾಡಿಗೆ | ಅಂಗಡಿಯನ್ನು ಏಲಂ ಮಾಡಿ ದೌರ್ಜನ್ಯ : ರಾಜ್ ಬಪ್ಪಳಿಗೆ ಆರೋಪ

ಪುತ್ತೂರು; ಪುತ್ತೂರು ತಾಲೂಕು ವಾಣಿಜ್ಯ ಸಂಕೀರ್ಣದಲ್ಲಿ ಒಂದು ಅಂಗಡಿಕೋಣೆ ಯನ್ನು ಏಲಂ ಪ್ರಕ್ರಿಯೆ ಮೂಲಕ ನನ್ನ ಪತ್ನಿ ಹೇಮಲತಾ ಹೆಸರಲ್ಲಿ ಪಡೆದುಕೊಂಡಿದ್ದು, ಕಳೆದ 13 ತಿಂಗಳಿನಿಂದ ಬಾಡಿಗೆ ಪಾವತಿಸಲು ತೊಂದರೆ ಉಂಟಾಗಿದೆ. ನನಗೆ 6 ತಿಂಗಳು ಸಮಯವಕಾಶ ಕೇಳಿ ಜಿಲ್ಲಾ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದೇನೆ. ಆದರೂ ಪುತ್ತೂರು ತಾಲೂಕು ಪಂಚಾಯತ್ ನನ್ನ ಕುಟುಂಬಕ್ಕೆ ಸೇರಿದ ಅಂಗಡಿಕೋಣೆಯನ್ನು ಬಹಿರಂಗ ಏಲಂ ಮಾಡಲಾಗಿದೆ. ಈ ಅಂಗಡಿ ಕೋಣೆಯಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ನನ್ನ ವಸ್ತುಗಳನ್ನೂ ಏಲಂ

ಅನಾರೋಗ್ಯ ಹಿನ್ನಲೆಯಲ್ಲಿ ಕಟ್ಟಲಾಗದ ಬಾಡಿಗೆ | ಅಂಗಡಿಯನ್ನು ಏಲಂ ಮಾಡಿ ದೌರ್ಜನ್ಯ : ರಾಜ್ ಬಪ್ಪಳಿಗೆ ಆರೋಪ Read More »

ನಳೀಲು ಕ್ಷೇತ್ರ ಅದ್ಭುತವಾಗಿ ಬೆಳೆದಿದೆ-ಸುಬ್ರಹ್ಮಣ್ಯ ಶ್ರೀ | ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ

ಪುತ್ತೂರು :  ನಮ್ಮ ಹಿರಿಯರು ಹಾಕಿಕೊಟ್ಟ ಜೀವನ ಪದ್ದತಿಯನ್ನು ನಾವು ಪಾಲಿಸಬೇಕು. ಕಣ್ಣಿಗೆ ಕಾಣದ ಶಕ್ತಿಗಳು ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಿಕೊಂಡು ಪರೋಪಕರಿಯಾಗಿ ನಿಸ್ವಾರ್ಥತೆಯಿಂದ ಬದುಕುವುದರ ಮೂಲಕ ಧರ್ಮವನ್ನು ಗಟ್ಟಿಗೊಳಿಸಬೇಕು ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ  ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ನಳೀಲು ಕ್ಷೇತ್ರದಲ್ಲಿ 20 ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷನಾಗುವ ಅವಕಾಶವನ್ನು

ನಳೀಲು ಕ್ಷೇತ್ರ ಅದ್ಭುತವಾಗಿ ಬೆಳೆದಿದೆ-ಸುಬ್ರಹ್ಮಣ್ಯ ಶ್ರೀ | ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ Read More »

ಫೆ.22-28 : ‘ಇರ್ದೆ-ಪಳ್ಳಿತ್ತಡ್ಕ’ ದರ್ಗಾ ಶರೀಫ್‍ನಲ್ಲಿ 48ನೇ ಉರೂಸ್ ಮುಬಾರಕ್

ಪುತ್ತೂರು: ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ, ಶಾಂತಿ ಸೌಹಾರ್ದತೆಯ ಶ್ರದ್ಧಾ ಕೇಂದ್ರ ‘ಇರ್ದೆ-ಪಳ್ಳಿತ್ತಡ್ಕ’ ದರ್ಗಾ ಶರೀಫ್‍ನಲ್ಲಿ 48ನೇ ಉರೂಸ್ ಮುಬಾರಕ್ ಫೆ. 22 ರಿಂದ 28 ರ ತನಕ ನಡೆಯಲಿದೆ ಎಂದು ದರ್ಗಾ ಶಾರೀಫ್‍ನ ಆಲಿ ಕುಂಞಿ ಕೊರಿಂಗಿಲ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಲಿಯುಲ್ಲಾಗಿ ಅವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಆಚರಣೆಯಲ್ಲಿ ದೇಶದ ನಾನಾ ಭಾಗದ ಜನರು ಮೇಳೈಸುತ್ತಾರೆ. ದಕ್ಷಿಣ ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹಿಂದೂ ಮತ್ತು ಮುಸಲ್ಮಾನ ಸೌಹಾರ್ದತೆಯ

ಫೆ.22-28 : ‘ಇರ್ದೆ-ಪಳ್ಳಿತ್ತಡ್ಕ’ ದರ್ಗಾ ಶರೀಫ್‍ನಲ್ಲಿ 48ನೇ ಉರೂಸ್ ಮುಬಾರಕ್ Read More »

error: Content is protected !!
Scroll to Top