ಸಾಲಮನ್ನಾದಿಂದ ದ.ಕ.ಜಿಲ್ಲೆಯ ಸಾವಿರಾರು ಕೃಷಿಕರು ವಂಚಿತ : ಕಿಶೋರ್ ಶಿರಾಡಿ | ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹಾಗೂ ಕಿಸಾನ್ ಸಂಘದಿಂದ ಪ್ರತಿಭಟನೆ
ಪುತ್ತೂರು : 2015ನೇ ವರ್ಷದಲ್ಲಿ ಸರಕಾರ ಮಾಡಿದ ಸಾಲ ಮನ್ನಾ ಯೋಜನೆಯು ಪೂರ್ಣ ಕಾರ್ಯಗತಗೊಳ್ಳದಿರುವುದನ್ನು ಖಂಡಿಸಿ ಮತ್ತು ಸಾಲಮನ್ನಾ ವಂಚಿತ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಪ್ರದೇಶಗಳನ್ನು ರೈತರು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹಾಗೂ ಕಿಸಾನ್ ಸಂಘದ ಸಹಯೋಗದೊಂದಿಗೆ ಗುರುವಾರ ಪುತ್ತೂರು ಸಹಾಯಕ ಸಹಕಾರಿ ನಿಬಂಧಕರ ಕಚೇರಿ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಆ ಬಳಿಕ ಸಹಕಾರ ಸಂಘಗಳ ಉಪನಿರ್ಬಂಧಕ ರಘು ಅವರಿಗೆ ಕ್ರಮಕ್ಕಾಗಿ ಮನವಿ ನೀಡಲಾಯಿತು. 2015 ರಲ್ಲಿ ರಾಜ್ಯ ಸರಕಾರ ಕೃಷಿಕರ ಸಾಲಮನ್ನಾ […]










