ವಿಶ್ವ ಹಿಂದೂ ಪರಿಷತ್, ಬಜರಂಗದಳ ತಿಂಗಳಾಡಿ ಘಟಕದಿಂದ ರಕ್ತದಾನ ಶಿಬಿರ
ತಿಂಗಳಾಡಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ವೀರಾಂಜನೇಯ ಘಟಕ ತಿಂಗಳಾಡಿ ವತಿಯಿಂದ ರಕ್ತದಾನ ಶಿಬಿರ ಭಾನುವಾರ ಪುತ್ತೂರು ಬ್ಲಡ್ ಬ್ಯಾಂಕ್ ನಲ್ಲಿ ನಡೆಯಿತು. ತಿಂಗಳಾಡಿ ಘಟಕದ ಕಾರ್ಯಕರ್ತ ದಿ. ಕೀರ್ತನ್ ಗೌಡ ಎರಕ್ಕಳ ಅವರ ಸ್ಮರಣಾರ್ಥವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 20 ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರಮುಖರು, ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ತಿಂಗಳಾಡಿ ಘಟಕದಿಂದ ರಕ್ತದಾನ ಶಿಬಿರ Read More »










