ದೇಶ

ಭೀಕರ ದುರಂತ: ಶಾಲಾ ಮಕ್ಕಳಿದ್ದ ದೋಣಿ ಮುಳುಗಡೆ! | 34 ಮಕ್ಕಳ ಪೈಕಿ ನೀರುಪಾಲಾದವರೆಷ್ಟು?

ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರದಲ್ಲಿ ಗುರುವಾರ ಬೆಳಗ್ಗೆ ಶಾಲಾ ಮಕ್ಕಳಿದ್ದ ದೋಣಿ ಬಾಗಮತಿ ನದಿಯಲ್ಲಿ ಮುಳುಗಿದೆ. 18 ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ. ದೋಣಿಯಲ್ಲಿ ಸುಮಾರು 34 ಮಕ್ಕಳು ಇದ್ದರು ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಸುಮಾರು 20 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ನಿಖರ ಅಂಕಿಅಂಶಗಳು ದೊರೆತಿಲ್ಲ. ಹೀಗಾಗಿ ಸುಮಾರು 18 ಮಂದಿ ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಮಕ್ಕಳು ಸ್ಥಳೀಯ ಗ್ರಾಮದಿಂದ ನದಿಯಾಚೆಗಿನ ಶಾಲೆಗೆ ತೆರಳುತ್ತಿದ್ದರು. ಬೆನಿಯಾಬಾದ್ ಒಪಿ ಪ್ರದೇಶದ ಭಟ್ಗಾಮಾ ಗ್ರಾಮದ ಮಧುರಪಟ್ಟಿ […]

ಭೀಕರ ದುರಂತ: ಶಾಲಾ ಮಕ್ಕಳಿದ್ದ ದೋಣಿ ಮುಳುಗಡೆ! | 34 ಮಕ್ಕಳ ಪೈಕಿ ನೀರುಪಾಲಾದವರೆಷ್ಟು? Read More »

KGF ಸ್ಟಾರ್ ಯಶ್ ಹೊಸ ಸಿನಿಮಾ! | ನಿಗದಿಯಾಗಿದೆ ಸಿನಿಮಾ ಹೆಸರು ಘೋಷಣೆಯ ದಿನಾಂಕ | ಐತಿಹಾಸಿಕ ಚಿತ್ರವೊಂದಕ್ಕೂ ಕಮಿಟ್ ಆಗಿದ್ದಾರೆಯೇ ಯಶ್?

ಬೆಂಗಳೂರು: ಕೆಜಿಎಫ್ ಸಿನಿಮಾದ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಸ್ಯಾಂಡಲ್’ವುಡ್ ಸ್ಟಾರ್ ನಟ ಯಶ್ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಗಣೇಶೋತ್ಸವದಂದು ಯಶ್ ಅವರ ಹೊಸ ಸಿನಿಮಾದ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಮಲಯಾಳಂ ಫಿಲ್ಮ್ ಮೇಕರ್ ಗೀತು ಮೋಹನ್’ದಾಸ್ ಹಾಗೂ ನಟ ಯಶ್ ಅವರ ಸಂಯೋಜನೆ ಸಿನಿಮಾದ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಮುಂದಿನ ವರ್ಷ ಅಥವಾ ಡಿಸೆಂಬರ್ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಓಡಾಡುತ್ತಿವೆ.

KGF ಸ್ಟಾರ್ ಯಶ್ ಹೊಸ ಸಿನಿಮಾ! | ನಿಗದಿಯಾಗಿದೆ ಸಿನಿಮಾ ಹೆಸರು ಘೋಷಣೆಯ ದಿನಾಂಕ | ಐತಿಹಾಸಿಕ ಚಿತ್ರವೊಂದಕ್ಕೂ ಕಮಿಟ್ ಆಗಿದ್ದಾರೆಯೇ ಯಶ್? Read More »

ಒಡೆಯನಿಗಾಗಿ ಪ್ರಾಣ ತೆತ್ತ ಸೇನೆಯ ಶ್ವಾನ! | ‘ಆಪರೇಷನ್ ಸುಜಲಿಗಂಗಾ’ದಲ್ಲಿ ಮುಂಚೂಣಿಯಲ್ಲಿದ್ದ 6 ವರ್ಷದ ಲ್ಯಾಬ್ರಡರ್ ಕೆಂಟ್! | ಕಾರ್ಯಾಚರಣೆಯಲ್ಲಿ ಓರ್ವ ಸೈನಿಕನೂ ಹುತಾತ್ಮ, ಉಗ್ರನೊಬ್ಬನ ಹತ್ಯೆ

ರಾಜೌರಿ: ತ್ಯಾಗ- ಬಲಿದಾನದ ಸುಧೀರ್ಘ ಪರಂಪರೆಯನ್ನು ಮುಂದುವರಿಸಿದ ಸೇನೆಯ ಶ್ವಾನಪಡೆಯ ಆರು ವರ್ಷದ ಲ್ಯಾಬ್ರಡಾರ್, ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದ ಎನ್ಕೌಂಟರ್ ವೇಳೆ ತನ್ನ ಒಡೆಯನ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಘಟನೆ ವರದಿಯಾಗಿದೆ. 21 ಸೇನಾ ಶ್ವಾನದಳದ ಆರು ವರ್ಷದ ಹೆಣ್ಣು ನಾಯಿ ಕೆಂಟ್, ಭಯೋತ್ಪಾದಕರನ್ನು ಓಡಿಸುವ ಪ್ರಾಯೋಗಿಕ ಕಾರ್ಯಾಚರಣೆಯಲ್ಲಿ ಸೈನಿಕರ ತಂಡದ ನೇತೃತ್ವ ವಹಿಸಿತ್ತು. ಈ ಕಾರ್ಯಾಚರಣೆ ವೇಳೆ ತಂಡದ ಮೇಲೆ ಭಾರಿ ಗುಂಡಿನ ದಾಳಿ ನಡೆಯಿತು. ತನ್ನನ್ನು ನಿರ್ವಹಿಸುತ್ತಿದ್ದ ಒಡೆಯನ ರಕ್ಷಣೆಗೆ

ಒಡೆಯನಿಗಾಗಿ ಪ್ರಾಣ ತೆತ್ತ ಸೇನೆಯ ಶ್ವಾನ! | ‘ಆಪರೇಷನ್ ಸುಜಲಿಗಂಗಾ’ದಲ್ಲಿ ಮುಂಚೂಣಿಯಲ್ಲಿದ್ದ 6 ವರ್ಷದ ಲ್ಯಾಬ್ರಡರ್ ಕೆಂಟ್! | ಕಾರ್ಯಾಚರಣೆಯಲ್ಲಿ ಓರ್ವ ಸೈನಿಕನೂ ಹುತಾತ್ಮ, ಉಗ್ರನೊಬ್ಬನ ಹತ್ಯೆ Read More »

ಪಂಚತಾರಾ ಹೊಟೇಲ್ನಲ್ಲಿ ಚೀನಾ ಬ್ಯಾಗ್! | ನಿಗೂಢವಾಗಿಯೇ ಉಳಿದ ಬ್ಯಾಗ್ ರಹಸ್ಯ!

ಹೊಸದಿಲ್ಲಿ: ಜಿ20 ಶೃಂಗಸಭೆಯ ಸಂದರ್ಭದಲ್ಲಿ ಕಳೆದ ಗುರುವಾರ ಪ್ರಮುಖ ವಿಷಯಗಳ ಬಗ್ಗೆ ಒಮ್ಮತ ಸಾಧಿಸಲು ಭಾರತ ಶಕ್ತವಾಗುತ್ತದೆಯೇ ಎಂಬ ಕುತೂಹಲ ಎಲ್ಲೆಡೆ ಮೂಡಿದ್ದರೆ, ಪಂಚತಾರಾ ಹೋಟೆಲ್ ಒಂದರಲ್ಲಿ ಕಂಡುಬಂದ ನಿಗೂಢ ಬ್ಯಾಗ್ ಭದ್ರತಾ ಪಡೆಗಳ ನಿದ್ದೆಗೆಡಿಸಿ ಹನ್ನೆರಡು ಗಂಟೆಗಳ ಕಾಲ ಭೀತಿಯ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು. ಚೀನಾ ನಿಯೋಗ ಉಳಿದುಕೊಂಡಿದ್ದ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ಅಸಹಜ ರೂಪದ ಬ್ಯಾಗ್ ಭದ್ರತಾ ಸಿಬ್ಬಂದಿಯ ಗಮನ ಸೆಳೆಯಿತು. ಆಗ ಒಂದು ರೀತಿಯ ಆತಂಕದ ವಾತಾವರಣ ಸೃಷ್ಟಿಯಾಯಿತು. ರಾಜತಾಂತ್ರಿಕ ಸಿಬ್ಬಂದಿ

ಪಂಚತಾರಾ ಹೊಟೇಲ್ನಲ್ಲಿ ಚೀನಾ ಬ್ಯಾಗ್! | ನಿಗೂಢವಾಗಿಯೇ ಉಳಿದ ಬ್ಯಾಗ್ ರಹಸ್ಯ! Read More »

ಮತ್ತೆ ಕಾಣಿಸಿಕೊಂಡ ಬಾವಲಿಗಳಿಂದ ಹರಡುವ ನಿಫಾ ವೈರಸ್!! | ಇಬ್ಬರ ಸಾವಿನ ಬಳಿಕ ಎಚ್ಚರಿಕೆ ಸಂದೇಶ ರವಾನಿಸಿದ ಕೇರಳ ಸರಕಾರ!

ತಿರುವನಂತಪುರಂ: ಹಲವು ಸಾವು ನೋವಿಗೆ ಕಾರಣವಾಗಿದ್ದ ನಿಫಾ ವೈರಸ್ ಕೇರಳದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೇರಳದಲ್ಲಿ ಇಬ್ಬರ ಅಸಹಜ ಸಾವು ಸಂಭವಿಸಿದ್ದು, ಮೃತರ ಸಂಬಂಧಿಕರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜ್ವರದಿಂದ ಬಳಲುತ್ತಿದ್ದ ಕಾರಣ ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ಸಾವಿಗೆ ನಿಫಾ ವೈರಸ್‌ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಯ ವೈದ್ಯಕೀಯ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಇಬ್ಬರ ಅಸಹಜ ಸಾವು

ಮತ್ತೆ ಕಾಣಿಸಿಕೊಂಡ ಬಾವಲಿಗಳಿಂದ ಹರಡುವ ನಿಫಾ ವೈರಸ್!! | ಇಬ್ಬರ ಸಾವಿನ ಬಳಿಕ ಎಚ್ಚರಿಕೆ ಸಂದೇಶ ರವಾನಿಸಿದ ಕೇರಳ ಸರಕಾರ! Read More »

ಸುಪ್ರೀಂಕೋರ್ಟ್ ವಕೀಲೆಯ ಕೊಲೆ ಪ್ರಕರಣ: ಪತಿ ಬಂಧನ

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ವಕೀಲೆಯೋರ್ವರ ಕೊಲೆ ಆರೋಪದ ಮೇಲೆ ಆಕೆಯ ಪತಿಯನ್ನು ಬಂಧಿಸಲಾಗಿದೆ. ನೋಯ್ಡಾ ಬಂಗಲೆಯ ಸ್ನಾನ ಗೃಹದಲ್ಲಿ 61 ವರ್ಷದ ಸುಪ್ರೀಂ ಕೋರ್ಟ್ ವಕೀಲೆ ರೇಣು ಸಿನ್ಹಾ ಅವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮಗ ವಿದೇಶದಲ್ಲಿ ವಾಸಿಸುತ್ತಿದ್ದು ರೇಣು ಸಿನ್ಹಾ ತನ್ನ ಪತಿಯೊಂದಿಗೆ ಬಂಗಲೆಯಲ್ಲಿ ವಾಸವಾಗಿದ್ದರು. ವಕೀಲೆಯ ಪತಿ ನಿತಿನ್ ನಾಥ್ ಸಿನ್ಹಾ ಅವರು ಬಂಗಲೆಯ ಸ್ಟೋರ್ ನಲ್ಲಿ 36 ಗಂಟೆಗಳಿಗೂ ಹೆಚ್ಚು ಕಾಲ ಅಡಗಿಕೊಂಡಿದ್ದ. ಪೊಲೀಸರು ಆತನ ಮೊಬೈಲ್ ಫೋನ್ ಅನ್ನು ಟ್ರ್ಯಾಕ್

ಸುಪ್ರೀಂಕೋರ್ಟ್ ವಕೀಲೆಯ ಕೊಲೆ ಪ್ರಕರಣ: ಪತಿ ಬಂಧನ Read More »

ಮಣಿಪುರ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ  | ಭದ್ರತಾ ಪಡೆಗಳಿಂದ ರಬ್ಬರ್ ಬುಲ್ಲೆಟ್ ಸಿಡಿತ | ಹಲವರಿಗೆ ಗಾಯ

ಮಣಿಪುರ : ಮಣಿಪುರದ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಹಾಕಿದ್ದ ಬ್ಯಾರಿಕೇಡ್‌ಗಳತ್ತ  ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿದ್ದು, ಭದ್ರತಾ ಪಡೆಗಳು ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಸಿಡಿಸಿದ್ದಾರೆ. ಈ ವೇಳೆ  ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪುರ ಮೈತೈ ಸಮುದಾಯದ ಜನರು ಇರುವ ಪ್ರದೇಶದಲ್ಲಿ ಜನರು ಕರ್ಪ್ಯೂ ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದಿದ್ದಾರೆ. ಮೈತೈ ನಾಗರಿಕ ಸಮಾಜ ಸಂಸ್ಥೆಯ ಭಾಗವಾಗಿರುವ ಸಮನ್ವಯ ಸಮಿತಿಯು ಪ್ರತಿಭಟನೆಗೆ ಕರೆ ನೀಡಿತ್ತು. ಮಣಿಪುರದ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸದಂತೆ ಸರ್ಕಾರ

ಮಣಿಪುರ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ  | ಭದ್ರತಾ ಪಡೆಗಳಿಂದ ರಬ್ಬರ್ ಬುಲ್ಲೆಟ್ ಸಿಡಿತ | ಹಲವರಿಗೆ ಗಾಯ Read More »

ಸೆ.18 ರಿಂದ 22 ರ ತನಕ ಸಂಸತ್ ಅಧಿವೇಶನ : ಸೆ.19 ರ ಗಣೇಶ ಚತುರ್ಥಿಯಂದು ಸಂಸತ್ತಿನ ಹೊಸ ಕಟ್ಟಡದಲ್ಲಿ ನಡೆಯಲಿರುವ ಅಧಿವೇಶನ

ದೆಹಲಿ : ಸೆ.18 ರಂದು ಸಂಸತ್ತಿನ ವಿಶೇಷ ಅಧಿವೇಶನ ಆರಂಭಗೊಳ್ಳಲಿದ್ದು, ಮೊದಲ ದಿನದ ಅಧಿವೇಶನ ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆಯಲಿದೆ. ಸೆ.19ರಂದು ಗಣೇಶ ಚತುರ್ಥಿ ದಿನ ಅಧಿವೇಶನ ಸಂಸತ್ತಿನ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ ಎಂದು ಎಎನ್‌ಐ ತಿಳಿಸಿದೆ. ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಸೆ.18ರಿಂದ 22ರವರೆಗೆ ನಡೆಯಲಿದೆ. ಅಧಿವೇಶನದಲ್ಲಿ ‘ಇಂಡಿಯಾ’ವನ್ನು ‘ಭಾರತ’ ಎಂದು ಬದಲಾಯಿಸಲು ಸಂಸತ್ತಿನಲ್ಲಿ ನಿರ್ಣಯ ತರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸಂಸತ್ತಿನ ವಿಶೇಷ ಅಧಿವೇಶನವನ್ನು ಸರಕಾರ ಕರೆದ ಬಗ್ಗೆ ಪ್ರತಿಕ್ರಿಯಿಸಿದ

ಸೆ.18 ರಿಂದ 22 ರ ತನಕ ಸಂಸತ್ ಅಧಿವೇಶನ : ಸೆ.19 ರ ಗಣೇಶ ಚತುರ್ಥಿಯಂದು ಸಂಸತ್ತಿನ ಹೊಸ ಕಟ್ಟಡದಲ್ಲಿ ನಡೆಯಲಿರುವ ಅಧಿವೇಶನ Read More »

ಕತ್ತು ಕೊಯ್ದು ಶಿಕ್ಷಕನ ಕೊಲೆ ಮಾಡಿದ 14 ರ ಬಾಲಕ

  ದೆಹಲಿ : ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಿಕ್ಷಕನನ್ನು 14 ವರ್ಷದ ಬಾಲಕ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. 28ರ ಹರೆಯದ ಶಿಕ್ಷಕ ಬಾಲಕನಿಗೆ ನಿತ್ಯ ನಿಂದನೆ ಮಾಡುತ್ತಿದ್ದು, ಹಲ್ಲೆ ಮಾಡಿ ವಿಡಿಯೋ ಕೂಡ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ನಡೆದ ಮೂರು ದಿನಗಳ ಬಳಿಕ  ಕೊಲೆ ಆರೋಪಿ ವಿದ್ಯಾರ್ಥಿಗೆ ಬಂಧಿಸಲಾಗಿದೆ. ಆಗಸ್ಟ್ 30 ರಂದು ಮಧ್ಯಾಹ್ನ 2.15 ರ ಸುಮಾರಿಗೆ ಜಾಮಿಯಾ ನಗರದ ಬಟ್ಲಾ ಹೌಸ್‌ನ  ಎರಡನೇ ಮಹಡಿಯ

ಕತ್ತು ಕೊಯ್ದು ಶಿಕ್ಷಕನ ಕೊಲೆ ಮಾಡಿದ 14 ರ ಬಾಲಕ Read More »

ಕಂಗೆಡಿಸುವ ಬರಗಾಲ, ನೈಸರ್ಗಿಕ ವಿಕೋಪ, ಪ್ರಳಯ ಸ್ವರೂಪಿ ಮಳೆ ಇವೆಲ್ಲದಕ್ಕೆ ಸೂರ್ಯನಿಗೂ ಸಂಬಂಧವಿದೆಯೇ | ಪರಿಹಾರವೇ ಸಾಧ್ಯವೇ | ಪರಿಹಾರ ಕಂಡುಕೊಳ್ಳಲು ಇಂದು ಪಿಎಸ್‍ಎಲ್‍ವಿ-ಸಿ57 ರಾಕೆಟ್ ಉಡಾವಣೆ

ಬೆಂಗಳೂರು : ಸುಡು ಬೇಸಿಗೆಯಲ್ಲಿ ಸೂರ್ಯನ ಅಹನೀಯ. ಕಂಗೆಡಿಸುವ ಬರಗಾಲ, ಬದುಕನ್ನೇ ಕಸಿಯುವ ನೈಸರ್ಗಿಕ ವಿಕೋಪ, ಪ್ರಳಯ ಸ್ವರೂಪಿ ಮಳೆ ಇವೆಲ್ಲದಕ್ಕೂ ಸೂರ್ಯನಿಗೂ ಸಂಬಂಧವಿದೆಯೇ, ಅದರಿಂದ ಪಾರಾಗುವುದು ಹೇಗೆ ? ಇದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‍-1 ಅಂತರಿಕ್ಷ ವೀಕ್ಷಣಾಲಯವನ್ನು ಸೆ.2 ಶನಿವಾರ ಶ್ರೀಹರಿಕೋಟಾದಿಂದ ಪಿಎಸ್ಎಲ್‍ವಿ-ಸಿ 57 ರಾಕೆಟ್ ಮೂಲಕ ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಕ್ಷಣಗಣನೆ ಆರಂಭಗೊಂಡಿದೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿ,

ಕಂಗೆಡಿಸುವ ಬರಗಾಲ, ನೈಸರ್ಗಿಕ ವಿಕೋಪ, ಪ್ರಳಯ ಸ್ವರೂಪಿ ಮಳೆ ಇವೆಲ್ಲದಕ್ಕೆ ಸೂರ್ಯನಿಗೂ ಸಂಬಂಧವಿದೆಯೇ | ಪರಿಹಾರವೇ ಸಾಧ್ಯವೇ | ಪರಿಹಾರ ಕಂಡುಕೊಳ್ಳಲು ಇಂದು ಪಿಎಸ್‍ಎಲ್‍ವಿ-ಸಿ57 ರಾಕೆಟ್ ಉಡಾವಣೆ Read More »

error: Content is protected !!
Scroll to Top