ಶಬರಿಮಲೆಯಿಂದ ವಾಪಾಸಾಗುತ್ತಿದ್ದಾಗ ಅಪಘಾತ | ಓರ್ವ ಮೃತ್ಯು
ಶಬರಿಮಲೆಗೆ ಕೊಡಗಿನಿಂದ ತೆರಳಿದ ತಂಡವೊಂದು ಮರಳಿ ಬರುವಾಗ ವಾಹನ ಮರಕ್ಕೆ ಡಿಕ್ಕಿಯಾದ ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಕೇರಳದ ಅಂಗಮಾಲಿಯ ಪೇರಂಬೂರ್ ಬಳಿ ನಡೆದಿದೆ. ಕುಶಾಲನಗರ ಹಾರಂಗಿ ದೊಡ್ಡತ್ತೂರು ನಿವಾಸಿ ಕುಂಞರಾಮ ಎಂಬವರ ಪುತ್ರ ಆಟೋ ಚಂದ್ರ ಮೃತಪಟ್ಟವರು. ಕುಶಾಲನಗರದ ಲಿಂಗಂ ಹರೀಶ್, ಸಂತೋಷ್ ಗಾಯಗೊಂಡವರು. ಗಾಯಾಳುಗಳನ್ನು ಪೆರಂಬೂರಿನ ರಾಜಗಿರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಶಬರಿಮಲೆಯಿಂದ ವಾಪಾಸಾಗುತ್ತಿದ್ದಾಗ ಅಪಘಾತ | ಓರ್ವ ಮೃತ್ಯು Read More »









