ಮನರಂಜನೆ

‘ಕಾಂತಾರ ಚಾಪ್ಟರ್ 1’ ಈಗಷ್ಟೇ ಶುರು: ರಿಷಬ್ ಮಾತಿನ ಮರ್ಮವೇನು?

“ಕಾಂತಾರ ಚಾಪ್ಟರ್‌ -1” ಶುರು ಮಾಡಿದ್ದೇವೆ. ಅಧ್ಯಾಯ ಎರಡನ್ನು ನೋಡಿ ನೀವು ದೊಡ್ಡ ಹಿಟ್‌ ಮಾಡಿದ್ದೀರಿ. ಇದರ ಸಂಪೂರ್ಣ ಸಕ್ಸಸ್‌ ನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡ್ತೇನೆ. ಇದು ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ  ನೆರವೇರಿದ ʼಕಾಂತಾರʼ ಪ್ರೀಕ್ವೆಲ್‌ ಮುಹೂರ್ತ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಮಾತು ಕಾಂತಾರದ ಮುಂದುವರೆದ ಪಯಣದಲ್ಲಿ ಮುನ್ನುಡಿ ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನು ಹೇಳಲು ಹೊರಟಿದ್ದೇನೆ. ಹಿಂದಿನಂತೆ ಈ ಸಿನಿಮಾಕ್ಕೂ ನಿಮ್ಮೆಲ್ಲರ ಹಾರೈಕೆ ಇರಲಿ. ಯಶಸ್ಸನ್ನು ಜವಾಬ್ದಾರಿಯಾಗಿ ತೆಗೆದುಕೊಂಡು ಅದ್ಭುತವಾಗಿ […]

‘ಕಾಂತಾರ ಚಾಪ್ಟರ್ 1’ ಈಗಷ್ಟೇ ಶುರು: ರಿಷಬ್ ಮಾತಿನ ಮರ್ಮವೇನು? Read More »

ಕರಾವಳಿ ಭಾಗದಿಂದ ಬೆಂಗಳೂರು ಕಂಬಳಕ್ಕೆ ತೆರಳಿದ ಕೋಣಗಳ ದಂಡು | ಕೊಂಬು- ಕಹಳೆ, ಬ್ಯಾಂಡ್-ವಾದ್ಯಗಳ ಸಾಥ್

ಉಪ್ಪಿನಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದಲ್ಲಿ ಭಾಗವಹಿಸಲು ಕೋಣಗಳ ದಂಡೇ ಇಂದು ಬೆಂಗಳೂರಿಗೆ ತೆರಳಿತು. ಕರಾವಳಿಯ ವಿವಿಧ ಕಡೆಗಳಿಂದ ಬಂದ ಕೋಣಗಳ ದಂಡು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬಂದು ಸೇರಿದವು. ಕೋಣಗಳಿಗೆ ಉಪ್ಪಿನಂಗಡಿಯಲ್ಲಿ ನೂರಾರು ಕಂಬಳಾಭಿಮಾನಿಗಳ ಸಮ್ಮುಖದಲ್ಲಿ ಪ್ರೀತಿ- ಗೌರವಾದಾರಗಳ ಸ್ವಾಗತ ನೀಡಲಾಯಿತು. ಬಳಿಕ ಕಂಬಳ ಸಮಿತಿಯ ವತಿಯಿಂದ ಕೋಣಗಳ ಯಜಮಾನರನ್ನು ಶಾಲು ಹೊದೆಸಿ ಸ್ವಾಗತಿಸಲಾಯಿತು. ಕೊಂಬು- ಕಹಳೆಗಳ ಸಹಿತ ಮೆರವಣಿಗೆಯೊಂದಿಗೆ ಕೋಣಗಳನ್ನು ಬೆಂಗಳೂರಿಗೆ ಬೀಳ್ಕೊಡಲಾಯಿತು. ಪಶು

ಕರಾವಳಿ ಭಾಗದಿಂದ ಬೆಂಗಳೂರು ಕಂಬಳಕ್ಕೆ ತೆರಳಿದ ಕೋಣಗಳ ದಂಡು | ಕೊಂಬು- ಕಹಳೆ, ಬ್ಯಾಂಡ್-ವಾದ್ಯಗಳ ಸಾಥ್ Read More »

‘ಕಾಂತಾರ 2’ ಮುಹೂರ್ತ ಫಿಕ್ಸ್!

ಪಂಜುರ್ಲಿ – ಗುಳಿಗ ದೈವಗಳ ಕಥಾ ಹಂದರವಿದ್ದ ಕಾಂತಾರ ಸಿನಿಮಾ ಭಾರತ ಸಿನಿ ರಂಗದಲ್ಲಿ ಹೊಸ ಭಾಷ್ಯ ಬರೆದಿತ್ತು. ಇದೀಗ ಕಾಂತಾರ 2 ಸಿನಿಮಾಕ್ಕೆ ವೇದಿಕೆ ಸಿದ್ಧಗೊಂಡಿದೆ. ಹೌದು, ನವಂಬರ್ 27ಕ್ಕೆ ಕುಂದಾಪುರದ ಕುಂಭಾಶಿ ದೇವಸ್ಥಾನದಲ್ಲಿ ಕಾಂತಾರ 2 ಸಿನಿಮಾಕ್ಕೆ ಮುಹೂರ್ತ ನೆರವೇರಲಿದೆ. ಕಾಂತಾರ ಸಿನಿಮಾಕ್ಕೂ ಇದೇ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಈ ಚಿತ್ರದ ಕಥೆ 14ನೇ ಶತಮಾನದಿಂದ ಆರಂಭವಾಗಲಿದೆಯಂತೆ. ಮೊದಲ ಚಿತ್ರದಂತೆ ಈ ಚಿತ್ರದ ಮುಹೂರ್ತವನ್ನೂ ಸರಳವಾಗಿ ಮಾಡಲು ನಿರ್ಮಾಣ ಸಂಸ್ಥೆ ಯೋಚಿಸಿದೆ. ಈ

‘ಕಾಂತಾರ 2’ ಮುಹೂರ್ತ ಫಿಕ್ಸ್! Read More »

ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಮೆಗಾ ಆಡಿಷನ್‍ ಗೆ ರಾಮಕುಂಜದ ಆತ್ಮಿ ಗೌಡ ಎಸ್. ಆಯ್ಕೆ

ಪುತ್ತೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಮೆಗಾ ಆಡಿಷನ್‍ ಗೆ ರಾಮಕುಂಜ ಗ್ರಾಮದ ನಾಲ್ಕು ವರ್ಷದ ಆತ್ಮಿ ಗೌಡ  ಎಸ್‍. ಆಯ್ಕೆಯಾಗಿದ್ದಾರೆ. ಮೆಗಾ ಆಡಿಷನ್ ನ.18 ಹಾಗೂ 19 ರಂದು ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ. ರಾಜ್ಯಾದ್ಯಂತ ನಡೆಸಿದ ಮೊದಲ ಹಂತದ ಆಡಿಷನ್‍ ನಲ್ಲಿ ಸುಮಾರು 30 ಸಾವಿರ ಪ್ರತಿಭೆಗಳು ಭಾಗವಹಿಸಿದ್ದು, ಆತ್ಮಿ ಗೌಡ ಎಸ್‍ ಮುಂದಿನ ಹಂತದ ಮೆಗಾ ಆಡಿಷನ್‍ ಗೆ ಆಯ್ಕೆಯಾಗಿದ್ದಾರೆ. ಆತ್ಮಿ ಗೌಡ ಈ ಹಿಂದೆ

ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಮೆಗಾ ಆಡಿಷನ್‍ ಗೆ ರಾಮಕುಂಜದ ಆತ್ಮಿ ಗೌಡ ಎಸ್. ಆಯ್ಕೆ Read More »

ಅಡ್ಯನಡ್ಕದಲ್ಲಿ ಮನಸೂರೆಗೊಂಡ ಸ್ವರ ಸಿಂಚನ ಸಂಗೀತದ ಝೇಂಕಾರ

ಅಡ್ಯನಡ್ಕ : ಶ್ರೀ ದುರ್ಗಾಪರಮೇಶ್ವರಿ ಮತ್ತು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಶಾರದೋತ್ಸವದ 34ನೇ ವರ್ಷದ ಉತ್ಸವದಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ವತಿಯಿಂದ ಭಕ್ತಿಗಾನ ರಸಮಂಜರಿ ನಡೆಯಿತು. ಸಂಸ್ಥೆಯ ಸವಿತಾ ಕೋಡಂದೂರ್ ಮತ್ತು ವಿದ್ಯಾರ್ಥಿಗಳಿಂದ ನಡೆದ ಭಕ್ತಿ ಗಾನ ರಸಮಂಜರಿ ಕಾರ್ಯಕ್ರಮವನ್ನು ವೇ.ಮು ರಾಮಕೃಷ್ಣ ಭಟ್ ನೀರಮೂಲೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ದಾಸರ ಪದಗಳನ್ನು ಹಾಡಿ ಮನಸೂರೆಗೊಂಡ ಕಾರ್ಯಕ್ರಮವಾಗಿ ಸಂಗೀತದ ಝೇಂಕಾರ ಮೂಡಿಬಂತು. ತಾನು ಬೆಳೆಯುವುದಲ್ಲದೆ

ಅಡ್ಯನಡ್ಕದಲ್ಲಿ ಮನಸೂರೆಗೊಂಡ ಸ್ವರ ಸಿಂಚನ ಸಂಗೀತದ ಝೇಂಕಾರ Read More »

ನಾಳೆ: “ಪುಳಿಮುಂಚಿ” ತುಳು ಚಿತ್ರ ಕರಾವಳಿಯಾದ್ಯಂತ ತೆರೆಗೆ

ಪುತ್ತೂರು: ಬಹು ನಿರೀಕ್ಷಿತ ‘ಪುಳಿಮುಂಚಿ’ ತುಳು ಚಿತ್ರ ಅ.27ರಂದು ಪುತ್ತೂರು ಸೇರಿದಂತೆ ಕರಾವಳಿಯಾದ್ಯಂತ ತೆರೆ ಕಾಣಲಿದೆ. ಹೆಚ್.ಪಿ.ಆರ್. ಫೌಂಡೇಶನ್ ಮುಖ್ಯಸ್ಥ ಹರಿಪ್ರಸಾದ್ ರೈ ಮಠಂತಬೆಟ್ಟು ನಿರ್ಮಾಣದ ತ್ರಿಶೂಲ್ ಶೆಟ್ಟಿ ನಿರ್ದೇಶನದ ಪುಳಿಮುಂಚಿ ಚಿತ್ರಕ್ಕೆ ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನೀಡಿದ್ದು, ಮಯೂರ್ ಆರ್. ಶೆಟ್ಟಿ ಸಾಹಿತ್ಯ ಮತ್ತು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಹಾಸ್ಯದಿಗ್ಗಜರ ದಂಡೇ ಇದ್ದು ತುಳು ಚಿತ್ರಪ್ರೇಮಿಗಳಲ್ಲಿ ಪುಳಿಮುಂಚಿ ಹೊಸ ನಿರೀಕ್ಷೆ ಮೂಡಿಸಿದೆ. ವಿನೀತ್ ಕುಮಾರ್ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿರುವ ಈ ಚಿತ್ರದಲ್ಲಿ

ನಾಳೆ: “ಪುಳಿಮುಂಚಿ” ತುಳು ಚಿತ್ರ ಕರಾವಳಿಯಾದ್ಯಂತ ತೆರೆಗೆ Read More »

ಪುತ್ತೂರಿನಲ್ಲಿ ಮೇಳೈಸಿದ ಪಿಲಿಗೊಬ್ಬು-2023 | ಜಿಲ್ಲೆಯ ಖ್ಯಾತ 10 ತಂಡಗಳ ಭಾಗವಹಿಸುವಿಕೆ

ಪುತ್ತೂರು: ತುಳುನಾಡ ಹುಲಿಕುಣಿತ ಜನಪದೀಯ ನಂಬಿಕೆಯೊಂದಿಗೆ ಹರಕೆ ರೂಪದಲ್ಲಿರುವ ಒಂದು ಗೊಬ್ಬು. ತುಳುನಾಡಿನ ದೈವಕಲೆ, ಸಂಸ್ಕೃತಿಯ ಭಾಗವಾದ ಹುಲಿ ಕುಣಿತಕ್ಕೆ ರೂಪು, ನಡವಳಿಕೆ, ಚೌಕಟ್ಟು ನೀಡಿ ಪ್ರತಿಭೆಗಳನ್ನು ಗುರುತಿಸುವ ಕೆಲಸ ವಿಜಯ್ ಸಾಮ್ರಾಟ್ ನಿಂದ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಭಾನುವಾರ ಪುತ್ತೂರು ವಿಜಯ್ ಸಾಮ್ರಾಟ್ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ ಪಿಲಿಗೊಬ್ಬು-2023 ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ

ಪುತ್ತೂರಿನಲ್ಲಿ ಮೇಳೈಸಿದ ಪಿಲಿಗೊಬ್ಬು-2023 | ಜಿಲ್ಲೆಯ ಖ್ಯಾತ 10 ತಂಡಗಳ ಭಾಗವಹಿಸುವಿಕೆ Read More »

ಪ್ರೇತದೊಂದಿಗೆ ಬೆರೆತ ದಿವಾಕರ ದೇವಾಡಿಗ!

ಪುತ್ತೂರು: ವೃತ್ತಿಯಲ್ಲಿ ಆಟೋ ಚಾಲಕ. ಪ್ರವೃತ್ತಿಯಲ್ಲಿ ಪ್ರೇತ ವೇಷಧಾರಿ. ಇದು ದಿವಾಕರ ದೇವಾಡಿಗ ಅವರ ಪ್ರತಿಭೆ. ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ದಿವಾಕರ ದೇವಾಡಿಗ ಅವರು ಪ್ರತೀ ವರ್ಷ ನವರಾತ್ರಿ ಸಂದರ್ಭದಲ್ಲಿ ಪ್ರೇತದೊಂದಿಗೆ ಬೆರೆತು ಮಾತನಾಡುತ್ತಾರೆ.ಕಳೆದ 12 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ನಿಷ್ಠೆಯಿಂದ ವೇಷ ಧರಿಸುತ್ತಾರೆ. ಶುರುವಿನ ವರ್ಷದಲ್ಲಿ ಕೃಷ್ಣ, ರಾಮ ಹೀಗೆ ನಾನಾ ವಿಧದ ವೇಷ ಧರಿಸುತ್ತಿದ್ದರು. ಇತ್ತೀಚಿನ ಆರು ವರ್ಷಗಳಿಂದ ಪ್ರೇತ ವೇಷ ಧರಿಸಿ ಜನಮಾನಸದಲ್ಲಿ ಅಚ್ಚಾಗಿದ್ದಾರೆ. ನವರಾತ್ರಿ ಬಂತೆಂದರೆ ಸಾಕು. 9 ದಿನ ಉಪವಾಸ

ಪ್ರೇತದೊಂದಿಗೆ ಬೆರೆತ ದಿವಾಕರ ದೇವಾಡಿಗ! Read More »

ಇಂದು ಕರೆ ಮುಹೂರ್ತ: ಡಿಕೆಶಿಗೆ ಆಹ್ವಾನ

ಪುತ್ತೂರು: ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ  ನಡೆಯಲಿರುವ ಬೆಂಗಳೂರು ‌ಕಂಬಳದ ಕರೆ‌ಮುಹೂರ್ತ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಆಹ್ವಾನ‌ ನೀಡಲಾಯಿತು. ನ.25 ಹಾಗೂ 26 ರಂದು ಬೆಂಗಳೂರು‌ಕಂಬಳ ನಡೆಯಲಿದ್ದು ಕರೆ ಮುಹೂರ್ತ ಕಾರ್ಯಕ್ರಮ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬೆಂಗಳೂರು‌ ಕಂಬಳ ಸಮಿತಿ‌ ಅಧ್ಯಕ್ಷ ಶಾಸಕ ಅಶೋಕ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ , ಮುರಳೀಧರ್ ರೈ ಮಠಂತಬೆಟ್ಟು ಸಹಿತಿ ಕಂಬಳ

ಇಂದು ಕರೆ ಮುಹೂರ್ತ: ಡಿಕೆಶಿಗೆ ಆಹ್ವಾನ Read More »

ಪಿಲಿಗೊಬ್ಬು’, `ಫುಡ್ ಫೆಸ್ಟ್’ಗೆ ಚಪ್ಪರ ಮುಹೂರ್ತ

ಪುತ್ತೂರು: ವಿಜಯ ಸಾಮ್ರಾಟ್ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪಿಲಿಗೊಬ್ಬು ಸ್ಪರ್ಧೆ ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮದ ಚಪ್ಪರ ಮುಹೂರ್ತ ಶನಿವಾರ ನಡೆಯಿತು. ಪುತ್ತೂರು ವಿಜಯ ಸಾಮ್ರಾಟ್ ನ ಸ್ಥಾಪಕಾಧ್ಯಕ್ಷ ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಕಾರ್ಯಕ್ರಮದ ಚಪ್ಪರ ಮುಹೂರ್ತವನ್ನು ದೇವಸ್ಥಾನದ ಅರ್ಚಕ ಉದಯಕೃಷ್ಣ ಭಟ್ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಹಜ್ ರೈ ಬಳಜ್ಜ, ನಾಗರಾಜ್ ನಡುವಡ್ಕ, ಶರತ್ ಕುಮಾರ್ ಮಾಡಾವು, ಶಂಕರ್ ಭಟ್

ಪಿಲಿಗೊಬ್ಬು’, `ಫುಡ್ ಫೆಸ್ಟ್’ಗೆ ಚಪ್ಪರ ಮುಹೂರ್ತ Read More »

error: Content is protected !!
Scroll to Top