ಮನರಂಜನೆ

ಜೂ.17-18 : ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ – 2023

ಪುತ್ತೂರು: ನವತೇಜ ಪುತ್ತೂರು ಹಾಗೂ ಜೆಸಿಐ ಪ್ರಸ್ತುತಪಡಿಸುವ “ಹಲಸು ಹಣ್ಣು ಮೇಳ-2023 ಜೂ.17 ಹಾಗೂ 18 ರಂದು ಇಲ್ಲಿಯ ಜೈನ ಭವನದಲ್ಲಿ ನಡೆಯಲಿದೆ. ಮೇಳದ ಅಂಗವಾಗಿ ರೈತರಿಂದ ತಾಜಾ ಹಣ್ಣುಗಳ ಪ್ರದರ್ಶನ, ಮಾರಾಟ ನಡೆಯಲಿದ್ದು, ಮೇಳದಲ್ಲಿ ಆಹಾರ ಮಳಿಗೆಗಳು, ಹಣ್ಣಿನ ಗಿಡಗಳು ಮತ್ತು ಬೀಜಗಳು, ಸಂಸ್ಕರಣೆ, ಮೌಲ್ಯವರ್ಧನೆ ಉತ್ಪನ್ನಗಳು, ಕೃಷಿ ಉದ್ಯಮ ಮಳಿಗೆಗಳು ಸಹಿತ ರೈತರ ಸಂಪರ್ಕ, ಸಮಾಲೋಚನೆ, ವಿವಿಧ ಮನೋರಂಜನಾ ಕಾರ್ಯಕ್ರಮ, ಹವಿಶೇಷ ಸ್ಪರ್ಧೆಗಳು ನಡೆಯಲಿವೆ. ಹಲಸಿನ ಹಣ್ಣಿನ ಹೋಳಿಗೆ, ಹಪ್ಪಳ, ದೋಸೆ, ಸಂಡಿಗೆ, ಪಾನಿಪೂರಿ, […]

ಜೂ.17-18 : ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ – 2023 Read More »

ಮೇ 26 : ಪಿರ್ಕಿಲು ತುಳು ಸಿನಿಮಾ ತೆರೆಗೆ

ಪುತ್ತೂರು: ಕರಾವಳಿ ಸಿನಿಮಾಸ್ ಲಾಂಛನದಲ್ಲಿ -ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಜಾವು, ನಿರ್ಮಾಣದಲ್ಲಿ, ಹೆಚ್.ಡಿ.ಆರ್ಯ ನಿರ್ದೇಶನದಲ್ಲಿ  ತಯಾರಾದ “ಪಿರ್ಕಿಲು” ತುಳು ಸಿನಿಮಾ ಮೇ 26 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಹೆಚ್.ಡಿ.ಆರ್ಯ ತಿಳಿಸಿದ್ದಾರೆ. ಬುಧವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್,  ಉಡುಪಿಯಲಿ, ಕಲ್ಪನ, ಮಣಿಪಾಲದಲ್ಲಿ ಭಾರತ್ ಸಿನಿಮಾ, ಐಸಾಕ್ಸ್ ಪಡುಬಿದ್ರೆಯಲ್ಲಿ ಭಾರತ್ ಸಿನಿಮಾ, ಸುರತ್ಕಲ್‌ ನಲ್ಲಿ ನಟರಾಜ್ ಸಿನಿ ಗ್ಯಾಲಕ್ಷ್ಮಿ ಪುತ್ತೂರಿನಲ್ಲಿ ಭಾರತ್ ಸಿನಿಮಾ ಮೂಡಲಿದೆ

ಮೇ 26 : ಪಿರ್ಕಿಲು ತುಳು ಸಿನಿಮಾ ತೆರೆಗೆ Read More »

3ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ, ನೋಟಾ ಪರವಾಗಿ 111 ಮತಗಳು | ಫುಲ್ ಡೀಟೈಲ್ ಇಲ್ಲಿದೆ

ಪುತ್ತೂರು: ಮತ ಎಣಿಕೆಯ 3ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 12541 ಮತಗಳನ್ನು ಪಡೆದುಕೊಂಡು ಮುನ್ನಡೆ ಸಾಧಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳು 3ನೇ ಸುತ್ತಿನಲ್ಲಿ ಖಾತೆ ತೆರೆದಿದ್ದು, ನೋಟಾಕ್ಕೆ 111 ಮತ ಚಲಾವಣೆಯಾಗಿದೆ. ಒಟ್ಟು 30332 ಮತಗಳ ಎಣಿಕೆ ನಡೆದಿದ್ದು, ಇದರಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 10223 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು 6452 ಮತ ಪಡೆದಿದ್ದು, ಜೆಡಿಎಸ್ ನ ದಿವ್ಯಪ್ರಭಾ ಚಿಲ್ತಡ್ಕ

3ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ, ನೋಟಾ ಪರವಾಗಿ 111 ಮತಗಳು | ಫುಲ್ ಡೀಟೈಲ್ ಇಲ್ಲಿದೆ Read More »

ಇಂದು : ಶ್ರೀ ಮೂಕಾಂಬಿಕಾ ಕಲ್ಚರಲ್ ಅರ್ಪಿಸುವ ನೃತ್ಯಾಂತರಂಗ-97

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ ನೃತ್ಯಾಂತರಂಗ-97 ಏ.21 ಶುಕ್ರವಾರ ಸಂಜೆ 5.45 ಕ್ಕೆ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಪಾಲ್ಗೊಳ್ಳಲಿದ್ದಾರೆ. ವಿದ್ವಾನ್ ದೀನಪ್ ಕುಮಾರ್, ವಿದುಷಿ ಪ್ರೀತಿಕಲಾ, ಅಪೂರ್ವಗೌರಿ ದೇವಸ್ಯ, ಶುಭಾ ಅಚಳ್ಳಿ, ವಿಂಧ್ಯಾ ಕಾರಂತ, ವಿಭಾಶ್ರೀ ಗೌಡ, ಪ್ರಣಮ್ಯ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಂದು : ಶ್ರೀ ಮೂಕಾಂಬಿಕಾ ಕಲ್ಚರಲ್ ಅರ್ಪಿಸುವ ನೃತ್ಯಾಂತರಂಗ-97 Read More »

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ.

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ  ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಪೂಜನ ಜೆ. ಎಸ್  ರವರು ಶೇ 90% ಅಂಕ ಪಡೆದು ಡಿಸ್ಟ್ರಿಕ್ಸಣ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. .ಪುತ್ತೂರಿನ ಭಾರತೀಯ ನೃತ್ಯ ಶಾಲೆಯಲ್ಲಿ ಶ್ರುತಿರೋಶನ್ ಬೆಳ್ಳೂರು ಶಿಷ್ಯೆಯಾಗಿರುವ ಅವರು ಪ್ರಸ್ತುತ ನರಿಮೊಗರು ಪುರುಷರಕಟ್ಟೆಯ ಸರಸ್ವತಿ ವಿದ್ಯಾಮಂದಿರದ 6 ನೇ ತರಗತಿಯ ವಿದ್ಯಾರ್ಥಿನಿ. ಒತ್ತೆಮುಂಡೂರು ಜಯರಾಮ ಪೂಜಾರಿ ಮತ್ತು ಶಾಲಿನಿ ದಂಪತಿ ಪುತ್ರಿ.

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ. Read More »

ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬ್ರಾಹ್ಮೀ ಬಿ.ಜೆ. ಪ್ರಥಮ ಶ್ರೇಣಿ

ಪುತ್ತೂರು : 2022-23ನೇ ಸಾಲಿನಲ್ಲಿ ನಡೆದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬ್ರಾಹ್ಮೀ ಬಿ.ಜೆ. ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅವರು ಕಡಬ ನೀನಾದ ನೃತ್ಯ ಕಲಾ ಶಾಲಾ ವಿದ್ಯಾರ್ಥಿನಿಯಾಗಿದ್ದು, ವಿದುಷಿ ಪ್ರಮೀಳಾ ಲೋಕೇಶ್ ಅವರ ಶಿಷ್ಯೆ. ಪುತ್ತೂರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಬಂಧಕ ಜನಾರ್ದನ ಮತ್ತು ರೇಷ್ಮಾ ದಂಪತಿ ಸುಪುತ್ರಿಯಾಗಿದ್ದಾರೆ

ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬ್ರಾಹ್ಮೀ ಬಿ.ಜೆ. ಪ್ರಥಮ ಶ್ರೇಣಿ Read More »

ಸಂಟ್ಯಾರ್ ನಲ್ಲಿ ಗಿರೀಶ್ ಗೌಡ ಮರಿಕೆ  ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಪುತ್ತೂರು: ಸಂಟ್ಯಾರ್ ವಿನಾಯಕ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಗಿರೀಶ್ ಗೌಡ ಮರಿಕೆ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಶನಿವಾರ ಸಂಟ್ಯಾರ್ ನಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಕ್ರೀಡಾಕೂಟ ಪಂದ್ಯಾಟ ಉದ್ಘಾಟಿಸಿ, ಪುತ್ತೂರು: ಇಡೀ ಯುವ ಸಮುದಾಯ ಮತ್ತೊಮ್ಮೆ ಕ್ರೀಡೆಗೆ ಒತ್ತು ಕೊಟ್ಟು ಇಂದು ಈ ಭಾಗದಲ್ಲಿ ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿರುವುದು  ಶ್ಲಾಘನೀಯ. ಇಂದು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ  ಸಾಧನೆ ಮಾಡುವ ಮೂಲಕ ನಮ್ಮ

ಸಂಟ್ಯಾರ್ ನಲ್ಲಿ ಗಿರೀಶ್ ಗೌಡ ಮರಿಕೆ  ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ Read More »

ಕ್ರೀಡೆಗೆ ಪ್ರೋತ್ಸಾಹ ಕೊಡುವ ಮೂಲಕ ಯುವಕರು ಸಾಧಕರಾಗಬೇಕು: ಶಾಸಕ ಮಠಂದೂರು | ಆದಿ ದ್ರಾವಿಡ ಸಮಾಜ ಬಾಂಧವರ ಕ್ರೀಡಾಕೂಟ

ಪುತ್ತೂರು : ಆದಿ ದ್ರಾವಿಡ ಸಮಾಜ ಒಂದು ಕಾರ್ಯಕ್ರಮದ ಮೂಲಕ ಅಂಬೇಡ್ಕರ್ ನೆನಪುಗಳನ್ನು ಮೆಲುಕು ಹಾಕುತ್ತಾ ಈ ದೇಶದ ಇತಿಹಾಸ, ಪರಂಪರೆ, ಹಿಂದೂ ಸಂಸ್ಕೃತಿಗೆ  ಕೊಟ್ಟ ಕೊಡುಗೆಗಳ ಆಧಾರದಲ್ಲಿ ಸಮಾಜಕ್ಕೆ ಸರಕಾರ ಹಲವು ಸವಲತ್ತು ಕೊಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹಾ ಕ್ರೀಡೆಗಳನ್ನು ಆಯೋಜಿಸಿ ಮನೋರಂಜನೆ ಕೊಡುವ ಕೆಲಸ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಯುವಕರು ಸಾಧಕರಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಕೊಟ್ಟಿಗೆ ಪೆರ್ಲ ವಡೆದರ ಆಶ್ರಯದಲ್ಲಿ  ಆದಿ

ಕ್ರೀಡೆಗೆ ಪ್ರೋತ್ಸಾಹ ಕೊಡುವ ಮೂಲಕ ಯುವಕರು ಸಾಧಕರಾಗಬೇಕು: ಶಾಸಕ ಮಠಂದೂರು | ಆದಿ ದ್ರಾವಿಡ ಸಮಾಜ ಬಾಂಧವರ ಕ್ರೀಡಾಕೂಟ Read More »

ಬಂಟರ ಸಂಘದ ವತಿಯಿಂದ ಮಹಿಳಾ ಬಂಟ ಸಂಭ್ರಮ, ಸಾಧಕರಿಗೆ ಸನ್ಮಾನ

ಪುತ್ತೂರು : ತಾಲೂಕು ಬಂಟರ ಸಂಘದ ಹಾಗೂ ಮಹಿಳಾ ಬಂಟರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಬಂಟ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ನಗರದ ಬಂಟರ ಭವನದಲ್ಲಿ ನಡೆಯಿತು. ಪುತ್ತೂರು ಪದ್ಮಾ ಸೋಲಾರ್ ನ ಲತಾ ಪಿ. ಶೆಟ್ಟಿ ಮಹಿಳಾ ಬಂಟರ ಸಂಭ್ರಮವನ್ನು ಉದ್ಘಾಟಿಸಿ, ಬೆಳಕು ಹಾಗೂ ಹೆಣ್ಣಿಗೆ ಅವಿನಾಭಾವ ಸಂಬಂಧವಿದೆ. ಪ್ರಸ್ತುತ ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೆ, ತನ್ನಲ್ಲಿ ಫೋಷಕ ಶಕ್ತಿಯನ್ನು ಬೆಳೆಸಿಕೊಳ್ಳುವ ಜತೆಗೆ ಕ್ರಿಯಾಶೀಲರಾಗಿ ಪರಿಸರ, ಸಂಸಾರ,

ಬಂಟರ ಸಂಘದ ವತಿಯಿಂದ ಮಹಿಳಾ ಬಂಟ ಸಂಭ್ರಮ, ಸಾಧಕರಿಗೆ ಸನ್ಮಾನ Read More »

ಗೆಳೆಯರು-94 ವತಿಯಿಂದ ಸಂಗೀತ ಗಾನ ಸಂಭ್ರಮ, ಹಳೆ ಬಸ್ ನಿಲ್ದಾಣದ ಇಂಟರ್ ಲಾಕ್ ಉದ್ಘಾಟನೆ

ಪುತ್ತೂರು : ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳೀ ದೇವಸ್ಥಾನದ ಆರಾಟ ಮಹೋತ್ಸವದ ಪ್ರಯುಕ್ತ ಉಪ್ಪಿನಂಗಡಿ ಗೆಳೆಯರು-94 ವತಿಯಿಂದ ಕೇರಳ ಹಾಗೂ ಕರ್ನಾಟಕದ ಖ್ಯಾತ ಕಲಾವಿದರಿಂದ ಸಂಗೀತ ಗಾನ ಸಂಭ್ರಮ ಹಾಗೂ ಗೆಳೆಯರು-94 ಬೇಡಿಕೆಯಂತೆ ಹಳೆ ಬಸ್ ನಿಲ್ದಾಣಕ್ಕೆ ಅಳವಡಿಸಿದ ಇಂಟರ್ ಲಾಕ್ ಉದ್ಘಾಟನೆ ಶುಕ್ರವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಇಂಟರ್ ಲಾಕ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣ ದುಸ್ಥಿತಿಗೆ ಬರಬಾರದು ಎಂಬ ನಿಟ್ಟಿನಲ್ಲಿ ಶಾಸಕರ  ಅನುದಾನದಿಂದ ಇಂಟರ್ ಲಾಕ್ ಅಳವಡಿಸುವ ಮೂಲಕ

ಗೆಳೆಯರು-94 ವತಿಯಿಂದ ಸಂಗೀತ ಗಾನ ಸಂಭ್ರಮ, ಹಳೆ ಬಸ್ ನಿಲ್ದಾಣದ ಇಂಟರ್ ಲಾಕ್ ಉದ್ಘಾಟನೆ Read More »

error: Content is protected !!
Scroll to Top