ದಕ್ಷಿಣ ಕನ್ನಡ

ಮಾದಕವಸ್ತು ಸೇವನೆ ಮಾಡಿದ ಮೂವರು ಆರೋಪಿಗಳು ಅರೆಸ್ಟ್

ಮಣಿಪಾಲ : ಲಾಡ್ಜ್ ಒಂದರಲ್ಲಿ ಮಾದಕ ವಸ್ತು ಸಹಿತ ಮೂವರನ್ನು ಪೊಲೀಸರು ಎ. 22 ಮಂಗಳವಾರದಂದು ಬಂಧಿಸಿರುವ ಘಟನೆ ಮಣಿಪಾಲದ 80 ಬಡಗಬೆಟ್ಟು ಗ್ರಾಮದ ದಶರಥ ನಗರದಲ್ಲಿ ನಡೆದಿದೆ. ಕಾಪುವಿನ ಮಂಚಕಲ್ ಅಜರುದ್ದೀನ್, ಮಹಾರಾಷ್ಟ್ರದ ಪುಣೆಯ ರಾಜೇಶ್ ಪ್ರಕಾಶ್ ಜಾದವ್, ಮತ್ತು ಮಲ್ಪೆಯ ನಾಜೀಲ್ (ಅಶಿಪ್) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್‌ಗಳನ್ನು ಹೊಂದಿದ ಬಗ್ಗೆ ಬಂದ ಮಾಹಿತಿ ಆಧರಿಸಿ ಮಣಿಪಾಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 40 ಸಾವಿರ ರೂ ಮೌಲ್ಯದ […]

ಮಾದಕವಸ್ತು ಸೇವನೆ ಮಾಡಿದ ಮೂವರು ಆರೋಪಿಗಳು ಅರೆಸ್ಟ್ Read More »

ಅರಮನೆ ರಸ್ತೆಯಲ್ಲಿರುವ ಎರಡು ಅಂಗಡಿಗಳಿಗೆ ತಗುಲಿದ ಬೆಂಕಿ

ವಿಟ್ಲ : ಅರಮನೆ ರಸ್ತೆಯ ರಸ್ಕಿನ್ ಕಾಂಪ್ಲೆಕ್ಸ್ ನಲ್ಲಿ ಎರಡು ಅಂಗಡಿಗಳಿಗೆ ಬೆಂಕಿ ತಗುಲಿದ ಘಟನೆ ವಿಟ್ಲದಲ್ಲಿ ನಡೆದಿದೆ. ಮುರುಳಿಧರ್ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ತಕ್ಷಣ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಬಳಿಕ ಸ್ಥಳಕ್ಕೆ ಪುತ್ತೂರು ವಿಭಾಗದ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು.    ಸದ್ಯ ಅಂಗಡಿಗಳಲ್ಲಿ ಇದ್ದ ಅಡಿಕೆ, ಕರಿಮೆಣಸು ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ.  

ಅರಮನೆ ರಸ್ತೆಯಲ್ಲಿರುವ ಎರಡು ಅಂಗಡಿಗಳಿಗೆ ತಗುಲಿದ ಬೆಂಕಿ Read More »

ಜನಿವಾರ ತೆಗೆಸಿದ ಘಟನೆ ಕೋಮುವಾದದ ಅತಿರೇಕ : ಸಂಸದ ಕ್ಯಾ.ಬ್ರಿಜೇಶ್‌ ಚೌಟ

ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಾದ ಆಕ್ರಮಣ ಎಂದು ಆಕ್ರೋಶ ಮಂಗಳೂರು : ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ತೀವ್ರವಾಗಿ ಖಂಡಿಸಿದ್ದು, ಕರ್ನಾಟಕದ ಸರ್ವ ಜನಾಂಗದ ಶಾಂತಿ ತೋಟವನ್ನು ಸರ್ವನಾಶ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ದ್ವೇಷಿಸುತ್ತಿದ್ದು, ವಿದ್ಯಾರ್ಥಿಯ ಭವಿಷ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ಹಾಗೂ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅಪಚಾರವೆಸಗಿದೆ ಎಂದು ಹೇಳಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ

ಜನಿವಾರ ತೆಗೆಸಿದ ಘಟನೆ ಕೋಮುವಾದದ ಅತಿರೇಕ : ಸಂಸದ ಕ್ಯಾ.ಬ್ರಿಜೇಶ್‌ ಚೌಟ Read More »

ಖಾಸಗಿ ಬಸ್ಸಿಗೆ ಹಿಂಬದಿಯಿಂದ ಗುದ್ದಿದ ಪಿಕಪ್‍

ವಿಟ್ಲ: ಖಾಸಗಿ ಬಸ್ಸಿನ ಹಿಂಬದಿಗೆ ಪಿಕಪ್‍ ಗುದ್ದಿದ ಘಟನೆ ಕಡಂಬುವಿನಲ್ಲಿ ನಡೆದಿದೆ. ಸಾಲೆತ್ತೂರು ರಸ್ತೆಯ ಕಡಂಬು ರಾದುಕಟ್ಟೆಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಮಹೇಶ್ ಹೆಸರಿನ ಖಾಸಗಿ ಬಸ್ ನ ಹಿಂಭಾಗಕ್ಕೆ ಪಿಕಪ್ ವಾಹನ ಬಲವಾಗಿ ಡಿಕ್ಕಿ ಹೊಡೆದಿದೆ. ನಿಯಂತ್ರಣವಿಲ್ಲದ ಪಿಕಪ್ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತಕ್ಕೀಡಾದ ಬಸ್ಸಿನ ಪ್ರಯಾಣಿಕರು ಮತ್ತು ಪಿಕಪ್ ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಹಿಂಬದಿ ಜಖಂಗೊಂಡಿದ್ದು ಎರಡು

ಖಾಸಗಿ ಬಸ್ಸಿಗೆ ಹಿಂಬದಿಯಿಂದ ಗುದ್ದಿದ ಪಿಕಪ್‍ Read More »

ಕಾರುಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ

ಬೆಳ್ತಂಗಡಿ : ಗುರುವಾಯನಕೆರೆ-ಕಾರ್ಕಳ ರಸ್ತೆಯ ಅಳದಂಗಡಿ ಸಮೀಪ ಕೆದ್ದು ಎಂಬಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಏ.21ರಂದು ಸಂಜೆ ನಡೆದಿದೆ. ಅಳದಂಗಡಿಯಿಂದ ಗುರುವಾಯನಕೆರೆ ಕಡೆಗೆ ತೆರಳುತ್ತಿದ್ದ ಕಾರು ಗುರುವಾಯನಕೆರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಮುಖಾಮುಖಿ ಡಿಕ್ಕಿಹೊಡೆದಿದೆ. ಗಾಯಗೊಂಡವರನ್ನು ಗೇರುಕಟ್ಟೆಯ ನಿವಾಸಿಗಳಾದ ಕುಸುಮಾವತಿ (75), ಭಾಗ್ಯವತಿ (50) ಮತ್ತು ವೈಭವ್ (23) ಎಂದು ಗುರುತಿಸಲಾಗಿದೆ. ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರುಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ Read More »

ಮಾಚಾರಿನಲ್ಲಿ ನಡೆದ ಕೊಲೆಯತ್ನ ಪ್ರಕರಣ : ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮೀನು

ಬೆಳ್ತಂಗಡಿ: ಹಣದ ವಿಚಾರಕ್ಕೆ ಸಂಬಂಧಿಸಿ ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಯುವಕರ ನಡುವೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ, ಕಲಂ  109,351(2) ಜತೆ 3(5) ಕೊಲೆಯತ್ನ ಪ್ರಕರಣ ದಾಖಲಿಸಿದ್ದರು. ಇದೀಗ ಮೊದಲ ಆರೋಪಿ ನ್ಯಾಯಾಂಗ ಬಂಧನದಲ್ಲಿರುವ ಹಮೀದ್ ಗೆ ನಿಯಮಿತ ಜಾಮೀನು ಮತ್ತು ಎರಡನೇ ಆರೋಪಿ ರಿಯಾಝ್ ಮತ್ತು ಮೂರನೇ ಆರೋಪಿ ಅರ್ಷಾದ್ ಗೆ ನಿರೀಕ್ಷಣಾ

ಮಾಚಾರಿನಲ್ಲಿ ನಡೆದ ಕೊಲೆಯತ್ನ ಪ್ರಕರಣ : ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮೀನು Read More »

ಉಪ್ಪಿನಂಗಡಿ : ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಪೋಕ್ಸೊದಡಿ ಬಂಧನ

ಉಪ್ಪಿನಂಗಡಿ: ಕಾಲೇಜು ಬಿಟ್ಟು ಮನೆಯಲ್ಲಿದ್ದ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ಉಪ್ಪಿನಂಗಡಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸಂಭವಿಸಿದ್ದು, ಸಂಬಂಧಿಕ ಯುವಕನ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪೋಕ್ಸೊ ಕೇಸ್‌ ದಾಖಲಿಸಿ ಬಂಧಿಸಿದ್ದಾರೆ. 16ರ ಹರೆಯದ ಯುವತಿ ದೂರದ ಸಂಬಂಧಿಕ ರಮೇಶ ಎಂಬವನ ಮನೆಗೆ ಫೆ.10ರಂದು ಹೋಗಿದ್ದಳು. ಅಂದು ರಾತ್ರಿ ರಮೇಶ ಆಕೆಯನ್ನು ಪುಸಲಾಯಿಸಿ, ಬೆದರಿಸಿ ದೈಹಿಕ ಸಂಪರ್ಕ ಮಾಡಿದ್ದ. ನಂತರ ಮಾ.9, ಮಾ.27 ಮತ್ತು ಮಾ.28ರಂದು ಇದೇ ರೀತಿ ಬಲವಂತವಾಗಿ

ಉಪ್ಪಿನಂಗಡಿ : ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಪೋಕ್ಸೊದಡಿ ಬಂಧನ Read More »

ವಿದ್ಯಾರ್ಥಿಗೆ ಧಾರ್ಮಿಕ ಅವಮಾನ ಮಾಡಿರುವ ಸಿಬ್ಬಂದಿಯ ನಡವಳಿಕೆ ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಕರ್ನಾಟಕ ಸಿಇಟಿ ಪರೀಕ್ಷೆಯ ಸಂದರ್ಭ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧರಿಸಿದ್ದಕ್ಕೆ ಕೆಲ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅವಮಾನಕರವಾಗಿ ವರ್ತಿಸಿರುವುದು ಅತ್ಯಂತ ಖೇದಕರ ಮತ್ತು ಶ್ರಮಪಟ್ಟು ಪರೀಕ್ಷೆಗೆ ಸಿದ್ಧವಾಗಿದ್ದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ತೀವ್ರ ಆಘಾತವನ್ನುಂಟುಮಾಡುವ ಘಟನೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಶೇಷವಾಗಿ, ನೀನು ಜನಿವಾರದಿಂದ ನೇಣು ಹಾಕಿಕೊಂಡರೆ ನಾವು ಏನು ಮಾಡಬೇಕು? ಎಂಬ ರೀತಿಯ ಉದ್ಧಟ, ಅಮಾನವೀಯ ಪ್ರಶ್ನೆಯನ್ನು ಕೇಳಿರುವ ಸಿಬ್ಬಂದಿಯ ನಡವಳಿಕೆಯನ್ನು

ವಿದ್ಯಾರ್ಥಿಗೆ ಧಾರ್ಮಿಕ ಅವಮಾನ ಮಾಡಿರುವ ಸಿಬ್ಬಂದಿಯ ನಡವಳಿಕೆ ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು Read More »

ಸ್ಕಂದ ನಿವಾಸದಲ್ಲಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ

ಪುತ್ತೂರು ಕೃಷ್ಣ ನಗರ ಸ್ಕಂದ ನಿವಾಸದಲ್ಲಿ ಧಾರ್ಮಿಕ ಸಮಾರಂಭದ  ಸಭಾ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಒಂಬತ್ತನೇ ರಾಂಕ್ ಪಡೆದ ಪುತ್ತೂರು ಸೈಂಟ್ ಫಿಲೋಮಿನಾ ಪದವಿಪೂರ್ವ  ಕಾಲೇಜಿನ ನೀತಿ ಮತ್ತು ಸಮಾಜ ಕಲ್ಯಾಣ ಸಂಸ್ಥೆ.ರಿ  ಬೆಂಗಳೂರು ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಯಕ್ಷಗಾನ ಕಲಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರುತಿ ವಿಸ್ಮಿತ್ ಬಲ್ನಾಡು ಇವರನ್ನು ಕಾರ್ಯಕ್ರಮದ ಆಯೋಜಕರಾದ ಗುಡ್ಡಪ್ಪ ಬಲ್ಯ, ಕುಸುಮ ಮತ್ತು ಕುಟುಂಬಸ್ಥರು ಸನ್ಮಾನಿಸಿದರು. ಕು. ನೇಹಾ ಅಭಿನಂದಿಸಿದರು.

ಸ್ಕಂದ ನಿವಾಸದಲ್ಲಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ Read More »

ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ

ಬೆಳ್ತಂಗಡಿ :-  ವಾಗೀಶ್_ ವಿ_ 68* ಅಫೀಷಿಯಲ್  ಪ್ರೊಡಕ್ಷನ್ ನಲ್ಲಿ , ನಿರಂಜನ್ ಗೌಡ ಗುರುವಾಯನಕೆರೆ  ಕಥೆ-ಚಿತ್ರಕಥೆ- ಸಂಭಾಷಣೆ- ನಿರ್ದೇಶನ- ಸಾಹಿತ್ಯದಲ್ಲಿ, ಹಾಗೂ ಭರತ್ ಕುಲಾಲ್ ಅರಸಿನಮಕ್ಕಿ  ಛಾಯಾಗ್ರಹಣ,  ಸುಮಂತ್ ಬೆಳ್ತಂಗಡಿ ನೃತ್ಯ ಸಂಯೋಜನೆ, ವಾಗೀಶ್ ವಿ ತುಂಬೆತ್ತಡ್ಕ ನಿರ್ಮಾಣದಲ್ಲಿ, ತಯಾರಾಗುತ್ತಿರುವ  ಸಸ್ಪೆನ್ಸ್‍ ಲವ್ ಸ್ಟೋರಿಯ ಮುಹೂರ್ತ ಸಮಾರಂಭವು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ಎಪ್ರಿಲ್.20 ಅದಿತ್ಯವಾರ ನಡೆಯಿತು. ಈ ಚಿತ್ರದಲ್ಲಿ ರಂಗಿನ ಮನಸ್ಸು ,  ವಿಷ್ಣು ಕಲಾವಿದರು ಮದ್ದಡ್ಕ ಹಾಗೂ ಗಯಾಪದ ಕಲಾವಿದರು ಉಬರ್ ಮತ್ತು

ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ Read More »

error: Content is protected !!
Scroll to Top