ದಕ್ಷಿಣ ಕನ್ನಡ

ಬಿಜೆಪಿ ಶಕ್ತಿಕೇಂದ್ರದಿಂದ ಭಾರತೀಯ ಸೇನೆಗೆ ಒಲಿತಾಗಲೆಂದು ಷಣ್ಮುಖ ದೇವ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಜಮ್ಮು ಕಾಶ್ಮೀರದ ಪಹಲ್ಗಾಮ್‍ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಅಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ, ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿದ್ದ 9 ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿ, 90ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಮಾಡಲಾಗಿದ್ದು, ಈ ಹಿನ್ನಲೆ ದೇಶದ ಮೇಲೆ ಆಗುತ್ತಿರುವ ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಉಗ್ರ ನೆಲೆಗಳನ್ನು ದ್ವಂಸ ಮಾಡಿದ ನಮ್ಮ ಸೇನೆಗೆ ಇನ್ನಷ್ಟು ಆತ್ಮಸ್ಥೈರ್ಯ ಹಾಗೂ ಶಕ್ತಿ ಬರಲಿ ಎಂದು ನಮ್ಮ ಶ್ರೀ ಷಣ್ಮುಖ ದೇವ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯನ್ನು […]

ಬಿಜೆಪಿ ಶಕ್ತಿಕೇಂದ್ರದಿಂದ ಭಾರತೀಯ ಸೇನೆಗೆ ಒಲಿತಾಗಲೆಂದು ಷಣ್ಮುಖ ದೇವ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ Read More »

ಪ್ರಚೋದನಕಾರಿ ಸಂದೇಶ ಪೋಸ್ಟ್‌ ಮಾಡಿದರೆ ಕಾದಿದೆ ಕ್ರಮ : ಕಮಿಷನರ್‌ ಎಚ್ಚರಿಕೆ

ದ್ವೇಷಪೂರಿತ ಪೋಸ್ಟ್‌ಗಳನ್ನು ಲೈಕ್‌, ಫಾರ್ವರ್ಡ್‌ ಮಾಡಿದರೂ ಕೇಸ್‌ ಮಂಗಳೂರು: ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಗುಂಪುಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ದ್ವೇಷ, ಸುಳ್ಳು ಮಾಹಿತಿ ಮತ್ತು ಬೆದರಿಕೆ ಸಂದೇಶಗಳನ್ನು ಹರಡುವುದನ್ನು ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ರೀತಿಯ ಪೋಸ್ಟ್‌ಗಳನ್ನು ಹಾಕುವವರು ಪರಿಣಾಂ ಎದುರಿಸಲು ಸಿದ್ಧರಾಗಿರಬೇಕೆಂದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಎಚ್ಚರಿಸಿದ್ದಾರೆ. ಕಳೆದ ವಾರವೊಂದರಲ್ಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂತಹ 30ಕ್ಕೂ ಹೆಚ್ಚು ಇಂಥ ಪ್ರಕರಣಗಳು ದಾಖಲಾಗಿವೆ. ಸಿಇಎನ್

ಪ್ರಚೋದನಕಾರಿ ಸಂದೇಶ ಪೋಸ್ಟ್‌ ಮಾಡಿದರೆ ಕಾದಿದೆ ಕ್ರಮ : ಕಮಿಷನರ್‌ ಎಚ್ಚರಿಕೆ Read More »

ಹಾಸನದಲ್ಲಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನವೀಕೃತ ಶಾಖೆ ಲೋಕಾರ್ಪಣೆ

ಹಾಸನ : ನಗರದಲ್ಲಿ ನೂತನವಾಗಿ ನವೀಕರಣಗೊಂಡ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ ಶಾಖೆಯನ್ನು ಖ್ಯಾತ ಚಲನಚಿತ್ರ ನಟಿ ಮಿಲನ ನಾಗರಾಜ್ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಕಾಂತ್ ಮಾತನಾಡಿ, ನೂತನವಾಗಿ ಆರಂಭಗೊಂಡ ಶಾಖೆಯಲ್ಲಿ ಅತೀ ವಿನೂತನ ರೀತಿಯ ಹೊಸ ಹೊಸ ಡಿಸೈನ್ ಗಳನ್ನು ಒಳಗೊಂಡಿದ್ದು, ಈ ಆಭರಣಗಳು ಜನರ ಮನಸ್ಸನ್ನು ಮೆಚ್ಚಿಸುವಂತಹದಾಗಿದೆ ಹಾಗೂ ಗ್ರಾಹಕ ಸ್ನೇಹಿಯಾಗಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ ಎಂದರು. 2007ರಲ್ಲಿ ಹಾಸನಕ್ಕೆ ಮೊಟ್ಟ ಮೊದಲ ಬಾರಿಗೆ 916 ಹಾಲ್ ಮಾರ್ಕ್

ಹಾಸನದಲ್ಲಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನವೀಕೃತ ಶಾಖೆ ಲೋಕಾರ್ಪಣೆ Read More »

ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ | ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ : ಪಟ್ರಮೆಯ ಪಟ್ಟೂರು ಸಮೀಪ ತಿರುವಿನಲ್ಲಿ ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ | ಪ್ರಾಣಾಪಾಯದಿಂದ ಪಾರು Read More »

ಯಕ್ಷಧ್ರುವ ಪಟ್ಲ ಹವ್ಯಾಸಿ ಘಟಕದ ಸಭೆ

ಮಂಗಳೂರಿನ ಬಳ್ಳಾಲ್ ಬಾಗ್ ಪತ್ತುಮಡಿ ಸೌಧದಲ್ಲಿ ನೂತನವಾಗಿ ರಚಿತವಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕದ ಸಭೆಯು ಅಧ್ಯಕ್ಷರಾದ ರಾಜಾರಾಮ ಹೊಳ್ಳ ಕೈರಂಗಳ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಹವ್ಯಾಸಿ ಘಟಕದಿಂದ ಪ್ರತಿ ತಿಂಗಳಲ್ಲಿ ಒಂದು ಕಾರ್ಯಕ್ರಮವನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವ ಬಗ್ಗೆ, ಯಕ್ಷಗಾನ ಸಂಘಗಳ ಅರ್ಹ ಸದಸ್ಯರನ್ನು ಘಟಕಕ್ಕೆ ಸೇರ್ಪಡೆಗೊಳಿಸುವುದರೊಂದಿಗೆ ಆಯಾಯ ಪರಿಸರದಲ್ಲಿ ಯಕ್ಷಗಾನೀಯ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಜೂನ್ 1ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವ

ಯಕ್ಷಧ್ರುವ ಪಟ್ಲ ಹವ್ಯಾಸಿ ಘಟಕದ ಸಭೆ Read More »

ದೇಶದ ಭದ್ರತೆ ಹಾಗೂ ಸಾರ್ವಭೌಮತೆಯ ಜತೆಗೆ ಗಟ್ಟಿಯಾಗಿ ನಿಲ್ಲೋಣ : ವಿ ಸುನಿಲ್ ಕುಮಾರ್

ಕಾರ್ಕಳ : ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆಗಳು ಕಳೆದ ತಡರಾತ್ರಿ ನಡೆಸಿದ ಏರ್ ಸ್ಟ್ರೈಕ್ ಪಾಕ್ ಪ್ರೇರಿತ ಉಗ್ರ ಚಟುವಟಿಕೆಗೆ ನೀಡಿದ ದಿಟ್ಟ ಪ್ರತಿಕಾರ. ಈ ದಾಳಿಯಲ್ಲಿ ನೂರಾರು ಉಗ್ರರು ಹತರಾಗಿದ್ದು ಭಾರತದ ಜತೆಗೆ ಪಾಕಿಸ್ತಾನ ಇನ್ನೆಂದು ಕುಚೋದ್ಯ ನೀಡದಂತ ಪೆಟ್ಟು ನೀಡಲಿ ಎಂದು ಆಶಿಸುತ್ತೇನೆ. ದೇಶ ಈಗ ಯುದ್ಧದಂಥ ಸ್ಥಿತಿಯನ್ನು ಎದುರಿಸುತ್ತಿದ್ದು ದೇಶದೊಳಗೂ ಕೆಲ ವಿಚ್ಛಿದ್ರಕಾರಿ ಮನಸುಗಳು ವಿಷಕಕ್ಕುವ ಕೆಲಸ ಮಾಡಬಹುದು. ಇವರ ಬಗ್ಗೆ ಜಾಗೃತರಾಗಿರುತ್ತಾ, ಕೇಂದ್ರ ಸರ್ಕಾರ ನೀಡುವ ಭದ್ರತಾ ಸೂಚನೆಗಳನ್ನು

ದೇಶದ ಭದ್ರತೆ ಹಾಗೂ ಸಾರ್ವಭೌಮತೆಯ ಜತೆಗೆ ಗಟ್ಟಿಯಾಗಿ ನಿಲ್ಲೋಣ : ವಿ ಸುನಿಲ್ ಕುಮಾರ್ Read More »

ಬಾಲಕಿಗೆ ಲೈಂಗಿಕ ಕಿರುಕುಳ | ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು

ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟಣೆ ಶಿರ್ಲಾಲುವಿನಲ್ಲಿ ನಡೆದಿದೆ.  ಪರಿಣಾಮ ಆಕೆ ಗರ್ಭಾವತಿಯಾಗಿದ್ದು, ಆರೋಪಿ ಯುವಕನ ವಿರುದ್ಧ ವೇಣೂರು ಪೊಲೀಸರಿಗೆ ನೊಂದ ಬಾಲಕಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಲೈಂಗಿಕ ಕಿರುಕುಳ ನೀಡಿದವ ಶಿರ್ಲಾಲು ಗ್ರಾಮದ ಸನತ್ (28ವ) ಎಂಬವನು ಎಂದು ಗುರುತಿಸಲಾಗಿದೆ. ಆರೋಪಿ ಸನತ್ ಬಾಲಕಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಆಗಾಗ ಮನೆಗೆ ಬಂದವನು ಬಾಲಕಿ ಜೊತೆ ಸಲುಗೆಯಿಂದ ಇದ್ದನೆನ್ನಲಾಗಿದೆ. 2024 ಮೇ. 22ರಂದು ಬಾಲಕಿಯ ಜನ್ಮ ದಿನದ

ಬಾಲಕಿಗೆ ಲೈಂಗಿಕ ಕಿರುಕುಳ | ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು Read More »

ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಕೆ.ವಿ.ಜಿ. ಅಮರ ಜ್ಯೋತಿ ಪ.ಪೂ. ಕಾಲೇಜು | ಎಸ್‍.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೆ.ವಿ.ಜಿ. ಕಾಲೇಜಿನಿಂದ ಸುವರ್ಣಕಾಶ | CET/NEET/JEE/CA Foundation ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ತರಬೇತಿ

ಸುಳ್ಯ: ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಸದಾ ಮಿಡಿಯುವ ಕೆ.ವಿ.ಜಿ. ಅಮರ ಜ್ಯೋತಿ ಪ.ಪೂ. ಕಾಲೇಜಿನಲ್ಲಿ ಇದೀಗ ಎಸ್‍.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೆ.ವಿ.ಜಿ. ಕಾಲೇಜಿನಿಂದ ಸುವರ್ಣಕಾಶವನ್ನಿತ್ತಿದೆ. CET/NEET/JEE/CA Foundation ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ತರಬೇತಿ ನಡೆಯಲಿದೆ.   ದಕ್ಷಿಣ ಕನ್ನಡ ಜಿಲ್ಲೆಯ ಮೀಸಲು ಕ್ಷೇತ್ರವೆನಿಸಿಕೊಂಡಿರುವ ಸುಳ್ಯ ತಾಲೂಕು ಇದೀಗ ಶಿಕ್ಷಣ ಬ್ರಹ್ಮ ದಿವಂಗತ ಡಾ. ಕುರುಂಜಿ ವೆಂಕಟರಮಣ ಗೌಡರ ದೂರಗಾಮಿ ಚಿಂತನೆಯ ಫಲವಾಗಿ ಭಾರತದ ಭೂಪಟದಲ್ಲಿ ವಿದ್ಯಾನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಚಾರ. ಬಹುಮುಖಿ ಶಿಕ್ಷಣದೊಂದಿಗೆ ಸುಳ್ಯ ತಾಲೂಕಿನ

ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಕೆ.ವಿ.ಜಿ. ಅಮರ ಜ್ಯೋತಿ ಪ.ಪೂ. ಕಾಲೇಜು | ಎಸ್‍.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೆ.ವಿ.ಜಿ. ಕಾಲೇಜಿನಿಂದ ಸುವರ್ಣಕಾಶ | CET/NEET/JEE/CA Foundation ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ತರಬೇತಿ Read More »

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ | ಮನೀಶ್‍ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ನಗರದ ಬಜೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್ ನಲ್ಲಿ ಮನೀಶ್‍ ಎಸ್‍.ಎಂಬ ಹೆಸರಿನವರು “ನಮ್ಮ ಕಾರ್ಯಕರ್ತನಾದ ಸುಹಾಸ್ ಬಜ್ಜೆಯ ಹತ್ಯೆಯನ್ನು ಖಂಡಿಸಿ ಇಂದು ಬೆಳಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ದ ಕ ಜಿಲ್ಲೆ ಸಂಪೂರ್ಣ ಬಂದ್. ಸುಹಾಸ್ ರವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ. ಹಿಂದೂ ಸಾಗರದ ಬಿಂದು ಬಿಂದುಗಳೇ

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ | ಮನೀಶ್‍ ವಿರುದ್ಧ ಪ್ರಕರಣ ದಾಖಲು Read More »

ಮೋತಿಬಾಯಿ ಕೆ. ಯಸ್ ಇವರಿಗೆ ಡಾಕ್ಟರೇಟ್ ಗೌರವ

ಆಂಧ್ರಪ್ರದೇಶದ ಕುಪ್ಪಮ್  ದ್ರಾವಿಡಿಯನ್ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗಕ್ಕೆ ಕುಂದಾಪುರದ ಭಂಡಾರಕಾರ್ಸ್ ಪದವಿ ಕಾಲೇಜಿನ ಆಂಗ್ಲ ಭಾಷಾ ಅಸೋಸಿಯೇಟ್ ಪ್ರೊಪೆಸರ್ ಮೋತಿಬಾಯಿ ಕೆ. ಎಸ್. ರವರಿಗೆ ಡಾಕ್ಟರೇಟ್ ಗೌರವ ಲಭಿಸಿದೆ. ಉಡುಪಿ ಎಂ. ಜಿ. ಎಂ ಕಾಲೇಜಿನ ಆಂಗ್ಲ ಭಾಷಾ ಪ್ರೊಪೆಸರ್ ಡಾ! ಶ್ರೀನಿವಾಸ್ ಅವರ ಮಾರ್ಗದರ್ಶನ ದಲ್ಲಿ  “” The treatment of women characters in the selected plays of Dr Girish kaarnad “( ಗಿರೀಶ ಕಾರ್ನಾಡ್ ರ ಆಯ್ದ ನಾಟಕಗಳಲ್ಲಿ

ಮೋತಿಬಾಯಿ ಕೆ. ಯಸ್ ಇವರಿಗೆ ಡಾಕ್ಟರೇಟ್ ಗೌರವ Read More »

error: Content is protected !!
Scroll to Top