ಅಪರಾಧ

ಗೃಹ ಸಚಿವರ ಎಸ್ಕಾರ್ಟ್ ವಾಹನ ಬೈಕ್‌ಗೆ ಡಿಕ್ಕಿ : ಸವಾರ ಸಾವು

ಹಾಸನ: ಬಂಕ್ ನಿಂದ ಪೆಟ್ರೋಲ್ ಹಾಕಿಸಿಕೊಂಡು ಹೊರಬರುತ್ತಿದ್ದ ಬೈಕ್‌ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಎಸ್ಕಾರ್ಟ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರನ್ನೊಬ್ಬ ಸಾವನ್ನಪ್ಪಿದ್ದಾನೆ. ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿ ಅಪಘಾತ ಸಂಭವಿಸಿದ್ದು ಚಿಕ್ಕಗಂಡಸಿ ಗ್ರಾಮದ ರಮೇಶ್(45) ಎಂಬುವರು ಮೃತಪಟ್ಟಿದ್ದಾರೆ. ಆರಗ ಜ್ಞಾನೇಂದ್ರ ಅವರು ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಪೊಲೀಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತ ಸ್ಥಳಕ್ಕೆ ಗಂಡಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತನ ದೇಹವನ್ನು […]

ಗೃಹ ಸಚಿವರ ಎಸ್ಕಾರ್ಟ್ ವಾಹನ ಬೈಕ್‌ಗೆ ಡಿಕ್ಕಿ : ಸವಾರ ಸಾವು Read More »

ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ : ಬೆಂಕಿ ನಂದಿಸುವಲ್ಲಿ ನಿರತರಾದ ಅಗ್ನಿಶಾಮಕ ದಳ

ಪುತ್ತೂರು : ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ ತಗುಲಿದ ಘಟನೆ ಬುಧವಾರ ಸಂಜೆ ನಡೆದಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮರಗಳು ಸುಟ್ಟು ಹೋಗಿದ್ದು, ಹೆಚ್ಚಿನ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ಪುತ್ತೂರು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ : ಬೆಂಕಿ ನಂದಿಸುವಲ್ಲಿ ನಿರತರಾದ ಅಗ್ನಿಶಾಮಕ ದಳ Read More »

ಸಜೀಪ: ಕೃಷಿಕ, ಸಾಮಾಜಿಕ, ಧಾರ್ಮಿಕ ಮುಂದಾಳು ಗಂಗಾಧರ್ ಭಟ್ ನಿಧನ.!!

ವಿಟ್ಲ: ಸಜೀಪಮೂಡ ಗ್ರಾಮದ ಕೊಳಕೆ ನಿವಾಸಿ, ಕೃಷಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಮುಂದಾಖು ಎಸ್.ಗಂಗಾಧರ ಭಟ್ ಕೊಳಕೆ (77) ಅವರು ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಫೆ.27ರಂದು ನಿಧನರಾದರು. ಗಂಗಾಧರ ಭಟ್ ರವರು ನಂದಾವರ ಶ್ರೀ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿ, ಬಂಟ್ವಾಳ ತಾಲೂಕು ಕಸಾಪ ಕನ್ನಡ ಭವನ ನಿರ್ಮಾಣ ಕಟ್ಟಡ ಸಮಿತಿ ಅಧ್ಯಕ್ಷರಾಗಿ, ನೀರ್ಪಾಜೆ ಭೀಮ‌ಭಟ್ ಅಭಿಮಾನಿ ಬಳಗದ‌ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರ ದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ದಾನ ಮಾಡಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು

ಸಜೀಪ: ಕೃಷಿಕ, ಸಾಮಾಜಿಕ, ಧಾರ್ಮಿಕ ಮುಂದಾಳು ಗಂಗಾಧರ್ ಭಟ್ ನಿಧನ.!! Read More »

ಶತಾಯುಷಿ ಗುಡ್ಡಪ್ಪ ಗೌಡ ಬನ್ನೂರು ನಿಧನ

ಪುತ್ತೂರು: ಪ್ರಗತಿಪರ ಕೃಷಿಕ, ಬನ್ನೂರು ಗುತ್ತಿನ ದೈವದ ಪರಿಚಾರಕರಾಗಿದ್ದ ಶತಾಯುಷಿ, ಬನ್ನೂರು ನಿವಾಸಿ ಗುಡ್ಡಪ್ಪ ಗೌಡ (101) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ. 27ರಂದು ಬೆಳಿಗ್ಗೆ ನಿಧನರಾದರು. ಊರ ಗೌಡತ್ತಿಗೆ ಮಾಡುತ್ತಿದ್ದ ಗುಡ್ಡಪ್ಪ ಗೌಡ ಅವರು ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು. ಹಿಂದೆ ಗುತ್ತಿಗೆದಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. 72 ವರ್ಷ ಕಾಲ ಸುಖೀ ದಾಂಪತ್ಯ ಜೀವನ ನಡೆಸಿದ ಹಿನ್ನೆಲೆಯಲ್ಲಿ ಅಲುಂಬುಡ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಗಿತ್ತು. ಹಿಂದಿನ ವರ್ಷ ಗುಡ್ಡಪ್ಪ ಗೌಡ ಅವರ ಪತ್ನಿ ಲಕ್ಷ್ಮೀ ಅವರು ನಿಧನರಾಗಿದ್ದರು.

ಶತಾಯುಷಿ ಗುಡ್ಡಪ್ಪ ಗೌಡ ಬನ್ನೂರು ನಿಧನ Read More »

ವಿದ್ಯುತ್‍ ಶಾರ್ಟ್‍ ಸರ್ಕ್ಯೂಟ್: ಗೇರು ಮರಗಳು ಸುಟ್ಟು ನಷ್ಟ

ಕಾವು : ಮಾಡ್ನೂರು ಗ್ರಾಮದ ಸಸ್ಪೆಟ್ಟಿ ಎಂಬಲ್ಲಿ ವಿದ್ಯುತ್ ಶಾರ್ಟ್‍ ಸರ್ಕ್ಯೂಟಿನಿಂದ ಬೆಂಕಿ ಹತ್ತಿಕೊಂಡು ಅರ್ಧ ಎಕ್ರೆ ಜಾಗದಲ್ಲಿರುವ ಗೇರು ಮರಗಳು ಸುಟ್ಟು ಹೋಗಿ ನಷ್ಟ ಉಂಟಾದ ಘಟನೆ ನಡೆದಿದೆ. ರಾಮಕೃಷ್ಣ ಭಟ್ ಎಂಬವರ ಜಾಗದಲ್ಲಿ ಸುತ್ತಲು ಹುಲ್ಲು ಪೊದೆಗಳು ಬೆಳೆದಿದ್ದು, ಹಠಾತ್ತನೇ ವಿದ್ಯುತ್‍ ಪರಿವರ್ತಕದಲ್ಲಿ ಶಾರ್ಟ್‍ ಸರ್ಕ್ಯೂಟಿನಿಂದ ಉಂಟಾದ ಪರಿಣಾಮ ಪೊದೆಗಳಿಗೆ ಬೆಂಕಿ ಹಿಡಿದು ಗೇರು ಮರಗಳನ್ನು ಆವರಿಸಿದೆ. ಅಗ್ನಿಶಾಮಕ ದಳದವರಿಗೆ ಕರೆ ಮಾಹಿತಿ ತಿಳಿಸಲಾಯಿತು. ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿ

ವಿದ್ಯುತ್‍ ಶಾರ್ಟ್‍ ಸರ್ಕ್ಯೂಟ್: ಗೇರು ಮರಗಳು ಸುಟ್ಟು ನಷ್ಟ Read More »

ಗುಂಡ್ಯದಲ್ಲಿ ಅರಣ್ಯ ಇಲಾಖೆ ನರ್ಸರಿಯನ್ನು ಪುಡಿಮಾಡಿದ ಕಾಡಾನೆಗಳು

ಪುತ್ತೂರು: ಹಂತಕ ಕಾಡಾನೆಯನ್ನು ಸೆರೆ ಹಿಡಿದ ಬಳಿಕ, ಉಪಟಳ ನೀಡುವ ಉಳಿದ ಆನೆಗಳ ಪತ್ತೆ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಿದೆ. ಗುಂಡ್ಯ ಭಾಗದಲ್ಲಿ ಅರಣ್ಯ ಇಲಾಖೆ ನರ್ಸರಿಗಳನ್ನು ಕಾಡಾನೆಗಳು ಹಾಳು ಗೆಡವಿದೆ ಎನ್ನುವ ಮಾಹಿತಿ ಲಭಿಸಿದ್ದು, ಕಾರ್ಯಾಚರಣೆಯನ್ನು ಆ ಭಾಗಕ್ಕೆ ಕೇಂದ್ರಿಕರಿಸಲಾಗಿದೆ. ಮೊದಲಿಗೆ ಆನೆಗಳ ಪತ್ತೆ ಕಾರ್ಯ ನಡೆದ ಬಳಿಕವಷ್ಟೇ ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಒಟ್ಟು 5 ಆನೆಗಳ ಪೈಕಿ ಅಭಿಮನ್ಯು ಹಾಗೂ ಇನ್ನೊಂದು ಆನೆಯನ್ನು ಸೆರೆ ಹಿಡಿದ ಕಾಡಾನೆಯ ಜೊತೆ

ಗುಂಡ್ಯದಲ್ಲಿ ಅರಣ್ಯ ಇಲಾಖೆ ನರ್ಸರಿಯನ್ನು ಪುಡಿಮಾಡಿದ ಕಾಡಾನೆಗಳು Read More »

ಸೆರೆಯಾದದ್ದು ಹಂತಕ ಆನೆ ಎನ್ನುವುದು ಖಚಿತ!

ಪುತ್ತೂರು: ಗುರುವಾರ ಸಂಜೆ ಸೆರೆ ಸಿಕ್ಕ ಕಾಡಾನೆಯ ದಂತದಲ್ಲಿದ್ದ ರಕ್ತದ ಕಲೆಗಳು, ಕೊಲೆಗಡುಕ ಎನ್ನುವುದನ್ನು ಖಾತ್ರಿ ಪಡಿಸಿವೆ. ರೆಂಜಿಲಾಡಿಯ ನೈಲದಲ್ಲಿ ರಂಜಿತಾ ಹಾಗೂ ರಮೇಶ್ ರೈ ಎನ್ನುವವರನ್ನು ಕಾಡಾನೆ ಕೊಂದು ಹಾಕಿತ್ತು. ರಂಜಿತಾ ಅವರ ಬೊಬ್ಬೆ ಕೇಳಿ ಓಡಿ ಬಂದ ರಮೇಶ್ ರೈ ಅವರು ಆನೆಯ ತಿವಿತಕ್ಕೆ ಕೊನೆಯುಸಿರೆಳೆದಿದ್ದರು. ಬಳಿಕ ಆನೆಗಳು ಪರಾರಿಯಾಗಿದ್ದು, ಕಾರ್ಯಾಚರಣೆ ವೇಳೆಯಲ್ಲೂ ಬಲೆಗೆ ಬಿದ್ದಿರಲಿಲ್ಲ. ಗುರುವಾರ ಸಂಜೆ ಹೊತ್ತಿಗೆ ಆನೆಯನ್ನು ಪತ್ತೆ ಹಚ್ಚಿ, ಅರಿವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 40 ವರ್ಷ

ಸೆರೆಯಾದದ್ದು ಹಂತಕ ಆನೆ ಎನ್ನುವುದು ಖಚಿತ! Read More »

ಕಾಡಾನೆ ಕಾರ್ಯಾಚರಣೆ ಕೊನೆಗೂ ಯಶಸ್ವಿ | ಇಬ್ಬರ ಹತ್ಯೆಗೈದ ಕಾಡಾನೆ ಸೆರೆ

ಪುತ್ತೂರು: ಅಭಿಮನ್ಯು ಸಹಿತ ದುಬಾರೆಯ 5 ಆನೆಗಳ ಸಹಾಯದಿಂದ ಕಳೆದ 3 ದಿನಗಳಿಂದ ಕಡಬ ರಕ್ಷಿತಾರಣ್ಯದಲ್ಲಿ ನಡೆಯುತ್ತಿರುವ ಕಾಡಾನೆ ಕಾರ್ಯಾಚರಣೆ ಕೊನೆಗೂ ಯಶಸ್ವಿ ಕಂಡಿದೆ. ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಗುರುವಾರ ಸಂಜೆ ಸೆರೆ ಹಿಡಿದಿದೆ. ಕಡಬ ತಾಲೂಕಿನ ರೆಂಜಿಲಾಡಿಯ ನೈಲ ಎಂಬಲ್ಲಿ ಫೆ. 20ರಂದು ರಂಜಿತಾ (21) ಹಾಗೂ ರಮೇಶ್ ರೈ (52) ಎಂಬವರನ್ನು ಕಾಡಾನೆ ಕೊಂದು ಹಾಕಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ಅಷ್ಟರಲ್ಲಿ ಅಲ್ಲಿಗಾಗಮಿಸಿದ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ 3 ದಿನ

ಕಾಡಾನೆ ಕಾರ್ಯಾಚರಣೆ ಕೊನೆಗೂ ಯಶಸ್ವಿ | ಇಬ್ಬರ ಹತ್ಯೆಗೈದ ಕಾಡಾನೆ ಸೆರೆ Read More »

ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲಿನಲ್ಲಿ ಉಗ್ರ ಚಟುವಟಿಕೆ | ಎನ್‍.ಐ.ಎ. ವಶಕ್ಕೆ ಫ್ರೀಡಂ ಕಮ್ಯೂನಿಟಿ ಹಾಲ್

ಪುತ್ತೂರು : ಬಿಜೆಪಿ ಯುವ ಮುಖಂಡ, ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ನಡೆದ ತನಿಖೆ ವೇಳೆ ಕಬಕ ಸಮೀಪದ ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿಯ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಪಿಎಫ್ ಐ ಸದಸ್ಯರಿಗೆ ಅನಧಿಕೃತವಾಗಿ ಭಯೋತ್ಪಾದನಾ ಚಟುವಟಿಕೆಗೆ ಸಹಕಾರಿಯಾಗುವ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ ಎಂಬ ವಿಚಾರ ಬಹಿರಂಗಗೊಂಡ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ಫ್ರೀಡಂ ಕಮ್ಯೂನಿಟಿ ಹಾಲ್ ನ್ನು ಸ್ವಾಧೀನಪಡಿಸಿಕೊಂಡು ಬೀಗ ಜಡಿದಿದೆ. ಮಿತ್ತೂರಿನಲ್ಲಿ ಸುಮಾರು 0.20 ಎಕ್ರೆ ಜಾಗದಲ್ಲಿ ಈ

ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲಿನಲ್ಲಿ ಉಗ್ರ ಚಟುವಟಿಕೆ | ಎನ್‍.ಐ.ಎ. ವಶಕ್ಕೆ ಫ್ರೀಡಂ ಕಮ್ಯೂನಿಟಿ ಹಾಲ್ Read More »

ಬೆಳ್ತಂಗಡಿಯಲ್ಲಿ ವ್ಯಾಪಿಸಿದ ಭಾರಿ ಕಾಡ್ಗಿಚ್ಚು

ಬೆಟ್ಟದ ತುದಿ ತನಕ ವ್ಯಾಪಿಸಿದ ಬೆಂಕಿ; ನಂದಿಸುವ ಕಾರ್ಯಾಚರಣೆ ಪ್ರಗತಿಯಲ್ಲಿ ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದ ಸುಮಾರು 10 ಎಕರೆ ಪ್ರದೇಶದಲ್ಲಿ ಬುಧವಾರ ಭಾರಿ ಕಾಡ್ಗಿಚ್ಚು ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದ್ದು, ಶೇ. 80ಕ್ಕೂ ಹೆಚ್ಚಿನ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಕಾಡ್ಗಿಚ್ಚಿಗೆ ಕಾರಣವೇನೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಳದಂಗಡಿ ವಲಯದ ಹೂವಿನಕೊಪ್ಪಲು ಹಾಗೂ ಊರ್ಜಾಲುಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿತ್ತು ಎಂದು

ಬೆಳ್ತಂಗಡಿಯಲ್ಲಿ ವ್ಯಾಪಿಸಿದ ಭಾರಿ ಕಾಡ್ಗಿಚ್ಚು Read More »

error: Content is protected !!
Scroll to Top