ಅಪರಾಧ

ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಸುಳ್ಯ: ಯುವಕನೋರ್ವ ಬಂದೂಕಿನಿಂದ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ‌ ಉಬರಡ್ಕದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ರವಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಈತ ಉಬರಡ್ಕ ಗ್ರಾಮದ ಬೆಳ್ರಂಪಾಡಿ‌ ಗುಡ್ಡವೊಂದರಲ್ಲಿ ಕೋವಿಯಿಂದ ಗುಂಡು‌ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತ ಯುವಕ ಬೆಳ್ರಂಪಾಡಿಯ ಮನೆಯೊಂದರಲ್ಲಿ ಕೆಲಸಕ್ಕಿದ್ದ ಎನ್ನಲಾಗಿದ್ದು, ಸ್ಥಳಕ್ಕೆ‌ ರಾತ್ರಿಯೇ ಪೋಲೀಸರು ‌ಬಂದು‌ ಮಹಜರು ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲುನೋಟಕ್ಕೆ ಆತ್ಮಹತ್ಯೆ ಪ್ರಕರಣ ‌ಎಂದು ಶಂಕಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ Read More »

ಭದ್ರತಾ ಪಡೆ –ಉಗ್ರರ ಗುಂಡಿನ ಕಾಳಗ | ಓರ್ವ ಉಗ್ರನ ಹತ್ಯೆ |ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

ಕಾಶ್ಮೀರ: ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಗುಂಡಿಕ್ಕಿ ಸಾಯಿಸಲಾದ ಘಟನೆ ಜಮ್ಮು ಕಾಶ್ಮೀರದ ಕುಲ್ಗಾಂವ್ ನಲ್ಲಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಷ್ಟು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್ ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಒಳ ನುಸುಳುಕೋರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದರು.

ಭದ್ರತಾ ಪಡೆ –ಉಗ್ರರ ಗುಂಡಿನ ಕಾಳಗ | ಓರ್ವ ಉಗ್ರನ ಹತ್ಯೆ |ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ Read More »

ವಿಮಾನದ ಸೀಟಿನ ಮೇಲೆ ಮಲಮೂತ್ರ ಮಾಡಿದ ಪ್ರಯಾಣಿಕ | ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಹೊಸದಿಲ್ಲಿ: ಪ್ರಯಾಣಿಕನೋರ್ವ ವಿಮಾನದ ಸೀಟಿನ ಮೇಲೆ ಮಲಮೂತ್ರ ವಿಸರ್ಜಿಸಿದ ಅಸಹ್ಯಕರ ಘಟನೆ ಇಂಡಿಯಾ ಏರ್‍ ಲೈನ್ ವಿಮಾನದಲ್ಲಿ ನಡೆದಿದೆ. ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಲಮೂತ್ರ ವಿಸರ್ಜಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈಯಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನದ ಎಐಸಿ 866 ಫ್ಲೈಟ್ ನ ಸೀಟ್ ನಂ.17ಎಫ್ ನಲ್ಲಿ ಕುಳಿತಿದ್ದ ಪ್ರಯಾಣಿಕ ರಾಮ್ ಸಿಂಗ್ ಎಂಬಾತ ವಿಮಾನದೊಳಗೆ ಮಲಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ದುರ್ವರ್ತನೆಯನ್ನು ವಿಮಾನದ ಕ್ಯಾಬಿನ್ ಸಿಬ್ಬಂದಿ ಗಮಸನಿಸಿ ಆತನಿಗೆ ಮೌಖಿಕ ಎಚ್ಚರಿಕೆ ನೀಡಿದ

ವಿಮಾನದ ಸೀಟಿನ ಮೇಲೆ ಮಲಮೂತ್ರ ಮಾಡಿದ ಪ್ರಯಾಣಿಕ | ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು Read More »

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆ

ಪುತ್ತೂರು: ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಸೋಮವಾರ ಪತ್ತೆಯಾಗಿದೆ. ಸುಮಾರು 40 ರಿಂದ 50 ವರ್ಷ ಪ್ರಾಯದ ಶವ ಗುರುತಿಸಲು ಅಸಾಧ್ಯವಾದ ಸ್ಥಿತಿಯಲ್ಲಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಧರ್ಮಸ್ಥಳ ಠಾಣಾ ಸಬ್‍ ಇನ್‍ ಸ್ಪೆಕ್ಟರ್ ಅನಿಲ್ ಕುಮಾರ್ ಡಿ., ಸಿಬ್ಬಂದಿ್ಗಳು ಪರಿಶೀಲನೆ ನಡೆಸಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗಾಗಿ ಸಾಗಿಸಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆ Read More »

ದಂಪತಿ ಮಧ್ಯೆ ಜಗಳ : ಸಾವಿನಲ್ಲಿ ಅಂತ್ಯ | ಅನಾಥರಾದ ಬಾಲಕ, ಬಾಲಕಿ

ಕಾರ್ಕಳ: ಯಾವುದೋ ಕಾರಣಕ್ಕೆ ದಂಪತಿ ನಡುವೆ ಜಗಳವಾಗಿ ಕೊನೆಗೆ ಘಟನೆ ಸಾವಿನೊಂದಿಗೆ ಅಂತ್ಯ ಕಂಡ ಘಟನೆ ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ನಡೆದಿದೆ. ಯಲ್ಲಾಪುರದ ಇಮ್ಯಾನುಲ್ ಸಿದ್ದಿ (40), ಯಶೋಧಾ (32) ಸಾವಿಗೀಡಾದ ದಂಪತಿ. ಭಾನುವಾರ ಬೆಳಿಗ್ಗೆ ಯಾವುದೋ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ತಕ್ಷಣ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದ್ದಾರೆ. ಅವರನ್ನು ರಕ್ಷಿಸಲು ಪತಿ ಇಮ್ಯಾನುಲ್ ನೀರಿಗೆ ಹಾರಿದ್ದಾರೆ. ಇಬ್ಬರೂ ಮೃತಪಟ್ಟಿದ್ದು, ದಂಪತಿ ಸಾವಿನಿಂದ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ. ಡಿವೈಎಸ್ಪಿ

ದಂಪತಿ ಮಧ್ಯೆ ಜಗಳ : ಸಾವಿನಲ್ಲಿ ಅಂತ್ಯ | ಅನಾಥರಾದ ಬಾಲಕ, ಬಾಲಕಿ Read More »

ಸಾವಿರಕ್ಕೂ ಅಧಿಕ ಮಹಿಳೆಯರ ಗುಂಪಿನಿಂದ ಸೇನಾ ನೆಲೆಯ ಮೇಲೆ ದಾಳಿ | ಸೆರೆಯಲ್ಲಿದ್ದ 12 ಬಂಡುಕೋರರ ಬಿಡುಗಡೆ

ಇಂಫಾಲ : ಮಹಿಳೆಯರ ಗುಂಪೊಂದು ಸೇನಾ ನೆಲೆಗೆ ಮುತ್ತಿಗೆ ಹಾಕಿ ಸೈನಿಕರ ಸೆರೆ ಹಿಡಿದಿದ್ದ 12 ಬಂಡುಕೋರರನ್ನು ಬಿಡಿಸಿಕೊಂಡು ಹೋದ ಘಟನೆ ಮಣಿಪುರದಲ್ಲಿ ನಡೆದಿದೆ. ಪೂರ್ವ ಇಂಫಾಲದ ಇಥಾಮ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 1200 ಕ್ಕೂ ಮಿಕ್ಕಿ ಮಹಿಳೆಯರ ಗುಂಪು ಸೇನಾ ಪಡೆಯನ್ನು ಸುತ್ತುವರಿದಿದ್ದು, ಬಂಡುಕೋರರನ್ನು ಬಿಡುವಂತೆ ಒತ್ತಾಯಿಸಿದೆ. ಹೆಚ್ಚಿನ ಅನಾಹುತ ತಪ್ಪಿಸಲು ಸೇವೆ ಅವರನ್ನು ಬಿಟ್ಟು ಕಳುಹಿಸಿದೆ ಎಂದು ಸೇನೆ ಟ್ವಿಟರ್ ಮೂಲಕ ತಿಳಿಸಿದೆ. ಮೆಟಾಯಿ ಬಂಡುಕೋರರ ಗುಂಪಿಗೆ ಸೇರಿದ 12

ಸಾವಿರಕ್ಕೂ ಅಧಿಕ ಮಹಿಳೆಯರ ಗುಂಪಿನಿಂದ ಸೇನಾ ನೆಲೆಯ ಮೇಲೆ ದಾಳಿ | ಸೆರೆಯಲ್ಲಿದ್ದ 12 ಬಂಡುಕೋರರ ಬಿಡುಗಡೆ Read More »

ಮನೆಯಲ್ಲೇ ಗಾಂಜಾ ಬೆಳೆ ಬೆಳೆದ ವಿದ್ಯಾರ್ಥಿಗಳು | ಐದು ಮಂದಿಯ ಬಂಧನ

ಶಿವಮೊಗ್ಗ :   ವೈದ್ಯಕೀಯ ವಿಧ್ಯಾಭ್ಯಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ತಾವು ವಾಸವಿದ್ದ ಬಾಡಿಗೆ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಇದೀಗ ಶಿವಮೊಗ್ಗ ಪೊಲೀಸರು 5 ಮಂದಿ ಎಂಬಿಬಿಎಸ್ ವಿಧ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಖಯ್ಯಂ, ಅರ್ಪಿತಾ, ವಿಘ್ನರಾಜ್, ವಿನೋದ್ ಕುಮಾರ್, ಪಾಂಡಿದೊರೈ ಬಂಧಿತ ಆರೋಪಿಗಳು. ಅಬ್ದುಲ್ ಖಯ್ಯಂ, ವಿಘ್ನರಾಜ್ ಹಾಗೂ ಅರ್ಪಿತಾ ಶಿವಮೊಗ್ಗದ ಶಿವಗಂಗಾ ಲೇಔಟ್ ನಲ್ಲಿ ವಾಸಕ್ಕೆ ಬಾಡಿಗೆ ಮನೆ ಪಡೆದಿದ್ದರು. ಅದೇ ಮನೆಯಲ್ಲೇ ಹೂ

ಮನೆಯಲ್ಲೇ ಗಾಂಜಾ ಬೆಳೆ ಬೆಳೆದ ವಿದ್ಯಾರ್ಥಿಗಳು | ಐದು ಮಂದಿಯ ಬಂಧನ Read More »

ಯುವತಿ ನಾಪತ್ತೆ

ಕಡಬ : ಕಡಬ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಗ್ರಾಮದ ಕಳಾರ ಎಂಬಲ್ಲಿ ವಾಸವಾಗಿರುವ ರಕ್ಷಿತಾ (18) ನಾಪತ್ತೆಯಾದ ಯುವತಿ. ಈಕೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ಅಂಗಡಿಹಳ್ಳಿಯವಳು. ಕಳೆದ 6 ವರ್ಷಗಳಿಂದ ಕಡಬದಲ್ಲಿ ವಾಸವಿದ್ದು, 10 ನೇ ತರಗತಿ ಓದಿದ್ದು, ಬಳಿಕ ಮೂರು ವರ್ಷದಿಂದ ಮನೆಯಲ್ಲೇ ಇದ್ದಳು. ಜೂ.20 ರಂದು ಬೆಳಿಗ್ಗೆ ಮನೆಯಿಂದ ಹೋದವಳು ಇದುವರೆಗೆ ಮನೆ ಬಾರದೆ, ಬೇಲೂರಿಗೂ

ಯುವತಿ ನಾಪತ್ತೆ Read More »

ನದಿಗೆ ಹಾರಿ ಆತ್ಮಹತ್ಯೆ | ಮೃತದೇಹ ಪತ್ತೆ

ಕಡಬ : ಸಕಲೇಶಪುರ ಮೂಲದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಕೊಡಿoಬಾಳ ಗ್ರಾಮದ ದoಡ್ಡುಗುರಿ ಸಮೀಪ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ 24 ರಂದು ಬೆಳಕಿಗೆ ಬಂದಿದೆ. ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಮೃತ ವ್ಯಕ್ತಿ. ಕಡಬ ಪೊಲೀಸರು ಹಾಗೂ ಸ್ಥಳೀಯರು ಮತ್ತು ಶೌರ್ಯ ತಂಡದ ಸದಸ್ಯರು ನದಿಗಿಳಿದು ಕಾರ್ಯಚರಣೆ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಕುಮಾರಧಾರ ನದಿ ಬಳಿ ವ್ಯಕ್ತಿಯೊಬ್ಬರ ಶೂ ಪತ್ತೆಯಾದ ಹಿನ್ನಲೆಯಲ್ಲಿ ಅನುಮಾನಗೊಂಡು   ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಧರ್ಮಯ್ಯ ನವರು

ನದಿಗೆ ಹಾರಿ ಆತ್ಮಹತ್ಯೆ | ಮೃತದೇಹ ಪತ್ತೆ Read More »

ಅಂಗನವಾಡಿಗೆ ವಿತರಿಸಲಾದ ಮೊಟ್ಟೆಯಲ್ಲಿ ಕೋಳಿ ಮರಿ | ಚರ್ಚೆಗೆ ಕಾರಣವಾದ ಘಟನೆ | ಪಂಚಾಯಿತಿ ಸಭೆಯಲ್ಲಿ ಚರ್ಚಿಸಲು ಗ್ರಾಮಸ್ಥರ ನಿರ್ಧಾರ

ಮಂಗಳೂರು: ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಸಿಗಬೇಕೆಂದು ಸರ್ಕಾರ ಆರಂಭಿಸಿರುವ ಈ ಯೋಜನೆ ಆಘಾತಕಾರಿಯಾಗಿ ಪರಿಣಮಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅರಸಿನಮಕ್ಕಿ ಎಂಬಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ರೆಖ್ಯ ಗ್ರಾಮದ ಎಂಜಿರ ಕಟ್ಟೆ ಎಂಬಲ್ಲಿ ಅಂಗನವಾಡಿ ಕೇಂದ್ರದಿಂದ ವಿತರಣೆ ಮಾಡಲಾಗಿದ್ದ ಮೊಟ್ಟೆಯನ್ನು ಬೇಯಿಸಿದಾಗ ಅದರ ಒಳಗೆ ರಕ್ತ ಹಾಗೂ ಕೋಳಿ ಮರಿ ಪತ್ತೆಯಾಗಿತ್ತು. ಕೋಳಿ ಮರಿ ಕೂಡ ಬೆಂದು ಹೋಗಿದ್ದು ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಈ ವಿಚಾರ ಗ್ರಾಮಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಅಂಗನವಾಡಿ ಕೇಂದ್ರದಿಂದ

ಅಂಗನವಾಡಿಗೆ ವಿತರಿಸಲಾದ ಮೊಟ್ಟೆಯಲ್ಲಿ ಕೋಳಿ ಮರಿ | ಚರ್ಚೆಗೆ ಕಾರಣವಾದ ಘಟನೆ | ಪಂಚಾಯಿತಿ ಸಭೆಯಲ್ಲಿ ಚರ್ಚಿಸಲು ಗ್ರಾಮಸ್ಥರ ನಿರ್ಧಾರ Read More »

error: Content is protected !!
Scroll to Top