ಅಪರಾಧ

2.75 ಕೋಟಿ ರೂ. ಬೆಲೆಯ ವಜ್ರದುಂಗುರ, ಸುಸಜ್ಜಿತ ಗ್ರಂಥಾಲಯ…

ಬಲು ರೋಚಕ ಬಹುಕೋಟಿ ಉದ್ಯಮಿ ರೋಷನ್‌ ಸಲ್ಡಾನನ ನಿಗೂಢ ಐಷಾರಾಮಿ ಬದುಕು ಮಂಗಳೂರು : ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಸೆರೆಯಾಗಿರುವ ಮಂಗಳೂರು ಜಪ್ಪಿನಮೊಗರಿನ ರೋಷನ್ ಸಲ್ಡಾನನ ಐಷಾರಾಮಿ ಜೀವನದ ಒಂದೊಂದೇ ರೋಚಕ ಮಾಹಿತಿ ಪೊಲೀಸ್‌ ವಿಚಾರಣೆ ಮುಂದುವರಿದಂತೆಲ್ಲ ಬಯಲಾಗಿ ಜನರನ್ನು ಬೆಚ್ಚಿಬೀಳಿಸುತ್ತಿದೆ. ಮಂಗಳೂರು ನಗರದಲ್ಲೂ ಈ ರೀತಿಯ ಒಬ್ಬ ವಂಚಕ ಇರಲು ಸಾಧ್ಯವೇ ಎಂದು ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ರೋಷನ್ ಸಲ್ಡಾನ ಹೆಣೆದಿರುವ ವಂಚನೆಯ ಮಾಯಾಜಾಲ ಕಂಡು ಸ್ವತಹ ಮಂಗಳೂರು ಪೊಲೀಸರೇ ದಂಗಾಗಿದ್ದಾರೆ. ರೋಷನ್ […]

2.75 ಕೋಟಿ ರೂ. ಬೆಲೆಯ ವಜ್ರದುಂಗುರ, ಸುಸಜ್ಜಿತ ಗ್ರಂಥಾಲಯ… Read More »

ಬೀರಮಲೆ ಬೆಟ್ಟದಲ್ಲಿ ಸಾರ್ವಜನಿಕ ಅನುಚಿತ ವರ್ತನೆ :  ಪ್ರಕರಣದ ಆರೋಪಿಗಳಿಗೆ ಜಾಮೀನು

ಪುತ್ತೂರು: ಇತ್ತೀಚೆಗೆ ಬೀರಮಲೆ ಬೆಟ್ಟದ ಗಾಂಧಿ ಮಂಟಪದಲ್ಲಿ ಯುವಕ-ಯುವತಿ ಜೋಡಿಯೊಂದು ಬೈಕ್ ಒಂದರಲ್ಲಿ ಬಂದು ಮಾತುಕತೆ ನಡೆಸುತ್ತಿದ್ದ ಸಂದರ್ಭ ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದರು ಎಂಬ ಕಾರಣಕ್ಕಾಗಿ ಅವರನ್ನು ಅಸಮರ್ಪಕವಾಗಿ ವಿಚಾರಿಸಿ, ನಿಂದಿಸಿ ಅವರಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ  ಹರಿಯಬಿಡುವುದಾಗಿ ಬೆದರಿಸಿದ ಪ್ರಕರಣ ನಡೆದಿತ್ತು. ಈ ಸಂಬಂಧ ಆರೋಪಿಗಳಾದ ರಾಮಚಂದ್ರ ಹಾಗೂ ಪುರುಷೋತ್ತಮ ಎಂಬವರನ್ನು ಬಂಧಿಸಿದ್ದರ ವಿರುದ್ಧ ದಾವೆ ಹೂಡಲಾಗಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೀರಮಲೆ ಬೆಟ್ಟದಲ್ಲಿ ಸಾರ್ವಜನಿಕ ಅನುಚಿತ ವರ್ತನೆ :  ಪ್ರಕರಣದ ಆರೋಪಿಗಳಿಗೆ ಜಾಮೀನು Read More »

ಮತಾಂತರದ ಬೃಹತ್‌ ಜಾಲ ಭೇದಿಸಿದ ಪೊಲೀಸರು : 6 ರಾಜ್ಯಗಳಲ್ಲಿ ಹತ್ತು ಮಂದಿ ಬಂಧನ

ಮತಾಂತರಕ್ಕೆ ಬರುತ್ತಿತ್ತು ಅಮೆರಿಕ, ಕೆನಡದಿಂದ ಫಂಡಿಂಗ್‌ ಲಖನೌ: ಉತ್ತರ ಪ್ರದೇಶದ ಸ್ವಯಂಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತಾಂತರದ ಸೀಕ್ರೆಟ್‌ ಬಯಲಾದ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸರು ಮತ್ತೊಂದು ಮತಾಂತರದ ಬೃಹತ್‌ ಜಾಲವನ್ನ ಭೇದಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನೆರವು ಪಡೆದು ಐಸಿಸ್‌ ಮಾದರಿಯಲ್ಲಿ ಮತಾಂತರ ದಂಧೆ ನಡೆಸುತ್ತಿದ್ದ ಬೃಹತ್‌ ಜಾಲ ಭೇದಿಸಿರುವ ಪೊಲೀಸರು 6 ರಾಜ್ಯಗಳಲ್ಲಿ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಗೋವಾದ ಆಯೇಷಾ (ಅಲಿಯಾಸ್ ಎಸ್.ಬಿ. ಕೃಷ್ಣ), ಕೋಲ್ಕತ್ತಾದ ಅಲಿ ಹಸನ್ (ಅಲಿಯಾಸ್ ಶೇಖರ್

ಮತಾಂತರದ ಬೃಹತ್‌ ಜಾಲ ಭೇದಿಸಿದ ಪೊಲೀಸರು : 6 ರಾಜ್ಯಗಳಲ್ಲಿ ಹತ್ತು ಮಂದಿ ಬಂಧನ Read More »

ಎನ್‌ಕೌಂಟರ್‌ನಲ್ಲಿ ಆರು ನಕ್ಸಲರ ಹತ್ಯೆ

ಅಪಾರ ಎಕೆ 47 ರೈಫಲ್‌, ಸ್ಫೋಟಕ ಪತ್ತೆ ರಾಯ್‌ಪುರ: ಛತ್ತೀಸ್‌ಗಢದ ದಟ್ಟಾರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 6 ಮಾವೋವಾದಿ ನಕ್ಸಲರು ಹತ್ಯೆಗೀಡಾಗಿದ್ದಾರೆ. ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ಹಲವು ಎಕೆ 47 ಮತ್ತು ಎಸ್‌ಎಕ್‌ಆರ್‌ ರೈಫಲ್‌ಗಳು, ಸ್ಫೋಟಕಗಳು ಪತ್ತೆಯಾಗಿವೆ. ನಾರಾಯಣಪುರ ಜಿಲ್ಲೆಯ ಅಬುಜ್‌ಮದ್ ಪ್ರದೇಶದ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ನಕ್ಸಲ್‌ ಭದ್ರಕೋಟೆಯಾದ ಅಬುಜ್‌ಮದ್ ಕೋರ್ ವಲಯದಲ್ಲಿ ನಕ್ಸಲರ ವಿರುದ್ಧ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಈ ಎನ್‌ಕೌಂಟರ್ ಸಹ

ಎನ್‌ಕೌಂಟರ್‌ನಲ್ಲಿ ಆರು ನಕ್ಸಲರ ಹತ್ಯೆ Read More »

ಮಾಜಿ ಸಂಸದ ಅನಂತ ಕುಮಾರ್‌ ಹೆಗಡೆಗೆ ಜೀವ ಬೆದರಿಕೆ ಕರೆ

ಇ-ಮೇಲ್‌ ಮೂಲಕ ಜೀವ ಬೆದರಿಕೆ ಒಡ್ಡಿರುವ ಕುರಿತು ದೂರು ದಾಖಲು ಬೆಂಗಳೂರು: ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ. ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದ್ದು, ಈ ಬಗ್ಗೆ ಅನಂತ ಕುಮಾರ್ ಹೆಗಡೆ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿಯವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂನ್ 24ರಂದು ಅನಂತ ಕುಮಾರ್ ಹೆಗಡೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಬಂದಿತ್ತು. ನ್ಯಾಯಾಲಯದ

ಮಾಜಿ ಸಂಸದ ಅನಂತ ಕುಮಾರ್‌ ಹೆಗಡೆಗೆ ಜೀವ ಬೆದರಿಕೆ ಕರೆ Read More »

ಕೋಲ್ಕತ್ತಾ, ಲಖನೌ ತನಕವೂ ಹರಡಿತ್ತು ರೋಶನ್‌ ಸಲ್ಡಾನನ ವಂಚನಾ ಜಾಲ

ಈತನ ಭವ್ಯ ಬಂಗಲೆ, ವಿದೇಶಿ ಹುಡುಗಿಯರು, ಶರಾಬು ಬಾಟಲಿಗಳನ್ನು ನೋಡಿಯೇ ಬಲೆಗೆ ಬೀಳುತ್ತಿದ್ದರು ಉದ್ಯಮಿಗಳು ಮಂಗಳೂರು: ಸಾಲ, ಜಾಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಗಳಿಗೆ ಕೋಟಿಗಟ್ಟಲೆ ವಂಚಿಸಿರುವ ಮಂಗಳೂರಿನ ರೋಷನ್ ಸಲ್ಡಾನನ (43) ವಂಚನಾ ಜಾಲ ಮುಂಬಯಿ, ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೋಲ್ಕತ್ತಾ, ಸಾಂಗ್ಲಿ, ಲಖನೌ, ಬಾಗಲಕೋಟೆ ಮತ್ತಿತರೆಡೆ ಹರಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಚಿತ್ರದುರ್ಗ ಮತ್ತು ಮುಂಬೈಯಲ್ಲಿ ಅವನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆರೋಪಿ ರೋಷನ್ ಸಲ್ಡಾನ ತಾನು ಉದ್ಯಮಿಯೆಂದು ಬಿಂಬಿಸಿ ಹೊರರಾಜ್ಯ, ಹೊರಜಿಲ್ಲೆಯಲ್ಲಿರುವ

ಕೋಲ್ಕತ್ತಾ, ಲಖನೌ ತನಕವೂ ಹರಡಿತ್ತು ರೋಶನ್‌ ಸಲ್ಡಾನನ ವಂಚನಾ ಜಾಲ Read More »

ಹೆಬ್ಬಾವು ಮಾರಾಟ ಜಾಲ ಪತ್ತೆ : ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರು ಸೆರೆ

ಮಂಗಳೂರು ನಗರದೊಳಗೆ ನಡೆಯುತ್ತಿತ್ತು ಪ್ರಾಣಿಗಳ ಅಕ್ರಮ ದಂಧೆ ಮಂಗಳೂರು: ಹೆಬ್ಬಾವು ಮಾರಾಟ ಜಾಲವೊಂದನ್ನು ಭೇದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅಪ್ರಾಪ್ತ ವಯಸ್ಸಿನ ಓರ್ವ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಉಳ್ಳಾಲ ಮುನ್ನೂರಿನ ಸಾಕುಪ್ರಾಣಿ ಅಂಗಡಿ ಮಾಲೀಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಉಳ್ಳಾಲ ಹರೇಕಳ ಅಂಗಡಿಯ ಉದ್ಯೋಗಿ ಮೊಹಮ್ಮದ್ ಮುಸ್ತಫಾ (22) ಮತ್ತು ಮಂಗಳೂರಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿ 16 ವರ್ಷದ ಬಾಲಕ

ಹೆಬ್ಬಾವು ಮಾರಾಟ ಜಾಲ ಪತ್ತೆ : ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರು ಸೆರೆ Read More »

ಪತಿ – ಪತ್ನಿ ಕಲಹ: ಡಿಸೇಲ್ ಹಚ್ಚಿಕೊಂಡ ಪತ್ನಿ ಚಿಕಿತ್ಸೆ ಫಲಿಸದೆ ಸಾವು

ಪತಿ ಪೊಲೀಸ್ ವಶಕ್ಕೆ ಶಿವಮೊಗ್ಗ: ಪತಿ ಮತ್ತು ಪತ್ನಿ ನಡುವೆ ನಡೆದ ಕಲಹದಿಂದ ಪತ್ನಿ ಡಿಸೇಲ್ ಸುರಿದು ಬೆಂಕಿ ಹಂಚಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಪತಿಯನ್ನು ಬಂಧಿಸಲಾಗಿದೆ. ಮೃತ ಮಹಿಳೆಯನ್ನು ಲಕ್ಕವಳ್ಳಿ ಗ್ರಾಮದ ಗಿರಿಜಾ(38) ಎಂದು ಗುರುತಿಸಲಾಗಿದೆ. ಪತಿ ಶ್ರೀಕಾಂತ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ 20 ದಿನಗಳ ಹಿಂದೆ ದಂಪತಿ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಪತ್ನಿ ಗಿರಿಜಾ ಮೈಮೇಲೆ ಡಿಸೇಲ್ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ.

ಪತಿ – ಪತ್ನಿ ಕಲಹ: ಡಿಸೇಲ್ ಹಚ್ಚಿಕೊಂಡ ಪತ್ನಿ ಚಿಕಿತ್ಸೆ ಫಲಿಸದೆ ಸಾವು Read More »

ಪಹಲ್ಗಾಮ್‌ ದಾಳಿ ನಡೆಸಿದ ಉಗ್ರ ಸಂಘಟನೆ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ

ದಿ ರೆಸಿಸ್ಟೆನ್ಸ್ ಫ್ರಂಟ್ ಜಾಗತಿಕ ಉಗ್ರ ಸಂಘಟನೆ ಅಮೆರಿಕದಿಂದ ಪಟ್ಟಿಗೆ ಸೇರ್ಪಡೆ ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ ಉಗ್ರ ದಾಳಿ ಎಸಗಿದ ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ ಉಗ್ರ ಸಂಘಟನೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ

ಪಹಲ್ಗಾಮ್‌ ದಾಳಿ ನಡೆಸಿದ ಉಗ್ರ ಸಂಘಟನೆ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ Read More »

ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ

ಬಂಗಲೆಯಲ್ಲಿದ್ದ ವಿದೇಶಿ ಯುವತಿಯೂ ಪೊಲೀಸರ ವಶ ಯಾವುದೇ ಬಾಲಿವುಡ್‌ ಸಿನೆಮಾ ಸೆಟ್‌ಗಿಂತಲೂ ಅದ್ದೂರಿಯಾಗಿದೆ ಮಂಗಳೂರಿನ ಈ ವಂಚಕನ ಬಂಗಲೆ ಮಂಗಳೂರು : ಮನೆಯೆಂದರೆ ಅದು ಮನೆಯಲ್ಲ ಭವ್ಯವಾದ ಬಂಗಲೆ. ಒಳಗಿದೆ ಯಾವುದೇ ಫೈವ್‌ಸ್ಟಾರ್‌ ಹೋಟೆಲನ್ನು ನಾಚಿಸುವಂಥ ಐಷಾರಾಮಿ ವ್ಯವಸ್ಥೆ. ಎರಡು ಮೂರು ಅಡಗುತಾಣಗಳು, ಅಲ್ಲಲ್ಲಿ ಸಿಸಿ ಕ್ಯಾಮೆರಗಳು. ರೂಮ್‌ಗಳಲ್ಲಿ ಗೋಡೆಗಳಿದ್ದರೂ ಅವುಗಳು ಕೆಲವೊಮ್ಮೆ ರಹಸ್ಯ ಕೋಣೆಗಳ ಬಾಗಿಲುಗಳೂ ಆಗುತ್ತವೆ.ಕಬೋರ್ಡ್‌ಗಳ ರೀತಿ ಕಾಣುವುದನ್ನು ತಟ್ಟಿದರೆ ಅದು ಇನ್ನೊಂದು ನಿಗೂಢ ಕೋಣೆಯತ್ತ ಸಾಗುವ ಮೆಟ್ಟಿಲುಗಳನ್ನು ತೋರಿಸುತ್ತವೆ. ಮನೆಯ ಗೇಟ್‌ ತೆರೆದುಕೊಳ್ಳುವ

ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ Read More »

error: Content is protected !!
Scroll to Top