ಲೇಖನ

ಎರಡು ಕಾಲಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಏರಿದವನ ಕಥೆ

ಮಾರ್ಕ್ ಇಂಗ್ಲಿಸ್ ಬದುಕು ಯಾರಿಗಾದರೂ ಸ್ಫೂರ್ತಿ ನೀಡಬಲ್ಲದು ಈ ವ್ಯಕ್ತಿಯ ಬದುಕು ಮತ್ತು ಸಾಧನೆಗಳು ನಮಗೆ ಖಂಡಿತ ಸ್ಫೂರ್ತಿ ತುಂಬುವ ಶಕ್ತಿ ಹೊಂದಿದೆ.ಆತನನ್ನು ನಿಮಗೆ ಹೇಗೆ ಪರಿಚಯ ಮಾಡಲಿ? ಅವನೊಬ್ಬ ಪರ್ವತಾರೋಹಿ, ಸಾಹಸಿ, ಉದ್ಯಮಿ, ಲೇಖಕ, ಸೈಕ್ಲಿಸ್ಟ್, ಸಂಶೋಧಕ ಮತ್ತು ಖಂಡಿತವಾಗಿಯು ಅದ್ಭುತ ಸಾಧಕ. ಆತನ ಕಥೆ ಆರಂಭ ಆಗೋದು ಹೀಗೆ… ಆತ ನ್ಯೂಜಿಲ್ಯಾಂಡ್ ದೇಶದವನು. ಹುಟ್ಟಿದ್ದು 1959 ಸೆಪ್ಟೆಂಬರ್ 27ರಂದು. ಆತನಿಗೆ ಬಾಲ್ಯದಿಂದ ಸಾಹಸಿ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ. ಪರ್ವತಾರೋಹಣ, ಟ್ರೆಕ್ಕಿಂಗ್ ಇವೆಲ್ಲವೂ ಅವನ ಬದುಕಿನ […]

ಎರಡು ಕಾಲಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಏರಿದವನ ಕಥೆ Read More »

ವಿಷಾದಭಾವವಿಲ್ಲದೆ ಗುಡ್‌ಬೈ ಹೇಳಿ

ಈ ಜಗತ್ತಿನಿಂದ ನಿರ್ಗಮಿಸುವ ಹೊತ್ತಿನಲ್ಲಿ ನಮಗೆ ಈ 25 ವಿಷಾದಗಳು ಇಲ್ಲದಿರಲಿ 1) ನಮ್ಮ ಬಾಲ್ಯದ ಗೆಳೆಯರನ್ನು ಮತ್ತೆ ಕನೆಕ್ಟ್ ಮಾಡಲು ಆಗಲಿಲ್ಲವಲ್ಲ ಎಂಬ ನೋವು. 2) ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲವಲ್ಲ ಎಂಬ ವಿಷಾದ. 3) ನಮ್ಮ ಪ್ರೀತಿಪಾತ್ರರಿಗೆ ಕೊಟ್ಟ ಯಾವುದೋ ಭರವಸೆಯನ್ನು ಈಡೇರಿಸಲು ಆಗದೇ ಹೋದ ಹತಾಶೆ. 4) ನಮ್ಮ ಕುಟುಂಬಕ್ಕೆ ಸಮಯ ಮತ್ತು ಪ್ರೀತಿ ಹಂಚಲು ಆಗದಷ್ಟು ಒತ್ತಡ ಮಾಡಿಕೊಂಡು ಬದುಕಿದ ಖಾಲಿತನ. 5) ನಮ್ಮ ಶಿಕ್ಷಣ ಪೂರ್ತಿ

ವಿಷಾದಭಾವವಿಲ್ಲದೆ ಗುಡ್‌ಬೈ ಹೇಳಿ Read More »

17 ಬುಲೆಟ್‌ಗಳು ಹೊಕ್ಕಿದ್ದರೂ ಟೈಗರ್ ಹಿಲ್ ಗೆದ್ದು ಬಂದ ಸೈನಿಕ

19 ವರ್ಷ ಪ್ರಾಯದಲ್ಲೇ ಪರಮವೀರ ಚಕ್ರ ಪಡೆದ ವೀರ ಯೋಧ ಆತನ ತಂದೆ ಕರಣ್ ಸಿಂಗ್‌ ಯಾದವ್ 1965-71ರ ಅವಧಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಹಾಗೆಯೇ ಎರಡು ಇಂಡೋ-ಪಾಕ್ ಯುದ್ಧಗಳಲ್ಲಿ ಧೀರೋದಾತ್ತವಾಗಿ ಹೋರಾಡಿ ಭಾರತವನ್ನು ಗೆಲ್ಲಿಸಿದ್ದರು. ಅದರಿಂದ ಮಗನಿಗೆ ರಾಷ್ಟ್ರಪ್ರೇಮವು ರಕ್ತದಲ್ಲಿಯೇ ಬಂದಿತ್ತು ಅನ್ನಿಸುತ್ತದೆ. ಅದರಿಂದ ಆತ ಭಾರತೀಯ ಸೇನೆಗೆ ಆಯ್ಕೆಯಾಗುವಾಗ ಆತನ ವಯಸ್ಸು ಕೇವಲ 16 ವರ್ಷ 5 ತಿಂಗಳು ಆಗಿತ್ತು. ಅಪ್ಪನ ಭುಜದ ಮೇಲೆ ಮಿಂಚುತ್ತಿದ್ದ ಮೆಡಲ್‌ಗಳೇ ಆತನಿಗೆ ಪ್ರೇರಣೆ ಆತನ ಹೆಸರು

17 ಬುಲೆಟ್‌ಗಳು ಹೊಕ್ಕಿದ್ದರೂ ಟೈಗರ್ ಹಿಲ್ ಗೆದ್ದು ಬಂದ ಸೈನಿಕ Read More »

ದೇವರ ಮೇಲಿನ ನಂಬಿಕೆ ದೊಡ್ಡದಾ, ವಿಜ್ಞಾನದ ಸಿದ್ಧಾಂತ ದೊಡ್ಡದಾ?

ನಂಬಿಕೆ ಮೀರಿದ ವಿಜ್ಞಾನ, ವಿಜ್ಞಾನ ಮೀರಿದ ನಂಬಿಕೆ ಎರಡೂ ಸಮ್ಮತ ಜಗತ್ತಿನ ಮಹಾವಿಜ್ಞಾನಿಗಳು ಕೂಡ ದೇವರ ಅಸ್ತಿತ್ವವನ್ನು ನಂಬುತ್ತಾರೆ ಎಂದರೆ ಆಶ್ಚರ್ಯ ಆಗ್ತಾ ಇದೆಯಾ?There is a SUPER NATURAL POWER which controls the whole world ಎಂದಿದ್ದರು ಮಹಾವಿಜ್ಞಾನಿಯಾದ ಐನಸ್ಟೀನ್. ಅಂದರೆ ಇಂದು ಕೂಡ ಇಡೀ ಜಗತ್ತನ್ನು ನಿಯಂತ್ರಣ ಮಾಡುತ್ತಿರುವ ಒಂದು ಅತೀಂದ್ರಿಯವಾದ ಶಕ್ತಿ ಇದೆ ಎಂದರ್ಥ. ಆ ಶಕ್ತಿಯು ನಮ್ಮ ಇಂದ್ರಿಯಗಳ ಗ್ರಹಿಕೆಗೆ ಮೀರಿದ್ದು. ಆ ಅತೀಂದ್ರಿಯ ಶಕ್ತಿಯನ್ನು ದೇವರು ಎಂದು ನೀವು

ದೇವರ ಮೇಲಿನ ನಂಬಿಕೆ ದೊಡ್ಡದಾ, ವಿಜ್ಞಾನದ ಸಿದ್ಧಾಂತ ದೊಡ್ಡದಾ? Read More »

ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ

ನಾವು ಒಳಗಿನಿಂದ ಹೊರಗೆ ಬೆಳೆಯುತ್ತಾ ಹೋಗಬೇಕು ಕಾಡಿನಲ್ಲಿ ಸಿಂಹಕ್ಕೆ ಯಾರೂ ಪಟ್ಟಾಭಿಷೇಕವನ್ನು ಮಾಡುವುದಿಲ್ಲ. ಯಾರೂ ಕಿರೀಟ ಧಾರಣೆ ಮಾಡುವುದಿಲ್ಲ. ಸಿಂಹ ತನ್ನ ಸ್ವಯಂ ಸಾಮರ್ಥ್ಯಗಳನ್ನು ಉದ್ದೀಪನ ಮಾಡಿಕೊಂಡು ‘ಮೃಗಗಳ ರಾಜ’ ಎಂದು ಎಲ್ಲರಿಂದಲೂ ಕರೆಸಿಕೊಳ್ಳುತ್ತದೆ. ಹೀಗೆಂದು ಹೇಳುತ್ತದೆ ಒಂದು ಸಂಸ್ಕೃತದ ಸುಭಾಷಿತ. ಕಾಡಿನಲ್ಲಿ ಸಿಂಹಕ್ಕಿಂತ ಬಲಿಷ್ಠವಾದ ಅದೆಷ್ಟೋ ಪ್ರಾಣಿಗಳು ಇವೆ. ಆದರೂ ಸಿಂಹವು ತನ್ನ ಗತ್ತು, ಗೈರತ್ತು, ಗಾಂಭೀರ್ಯ, ನಡಿಗೆ ಮತ್ತು ನೋಟಗಳಿಂದ ‘ಕಾಡಿನ ರಾಜ’ ಎಂದು ಕರೆಸಿಕೊಳ್ಳುತ್ತದೆ. ನಾವೂ ನಮ್ಮ ಸಾಮರ್ಥ್ಯಗಳ ಅರಿವನ್ನು ಮೂಡಿಸಿಕೊಂಡರೆ ಖಂಡಿತವಾಗಿ

ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ Read More »

ಕ್ರಿಕೆಟಿನ ಡಾನ್ – ಬ್ರಾಡ್ಮನ್

ಯಾರೂ ಬ್ರೇಕ್ ಮಾಡಲು ಆಗದ ಅಪೂರ್ವ ದಾಖಲೆಗಳ ಸರದಾರ ಆಗಸ್ಟ್ 14, 1948. ಇಂಗ್ಲೆಂಡಿನ ಮಹೋನ್ನತ ಓವಲ್ ಕ್ರಿಕೆಟ್ ಗ್ರೌಂಡ್, ಅದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಗಳ ಮುಖಾಮುಖಿ.ಆಶಸ್ ಸರಣಿಯ ಕೊನೆಯ ಪಂದ್ಯ ಅನ್ನುವುದಕ್ಕಿಂತ ಆ ಲೆಜೆಂಡ್ ಕ್ರಿಕೆಟರ್‌ನ ಕೊನೆಯ ಟೆಸ್ಟ್ ಪಂದ್ಯ ಅನ್ನೋದು ಹೆಚ್ಚು ಸರಿ. ಆತ ಬ್ಯಾಟಿಂಗ್ ಮಾಡಲು ಬ್ಯಾಟ್ ಹಿಡಿದು ಬರುವಾಗ ಇನ್ನೊಂದು ಕುತೂಹಲ ಇತ್ತು.ಆತ ಅಂದು ಕೇವಲ ನಾಲ್ಕು ರನ್ ಮಾಡಿದ್ದರೆ ಆತನ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿ 100 ಆಗುತ್ತಿತ್ತು. ಅದು

ಕ್ರಿಕೆಟಿನ ಡಾನ್ – ಬ್ರಾಡ್ಮನ್ Read More »

ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಹೋಯ್ತು?

ವಿಮರ್ಶೆ ಮಾಡುವ ಅಧಿಕಾರ ಕಿತ್ತುಕೊಳ್ಳುವ ಮಂದಿಗೆ ಧಿಕ್ಕಾರವಿರಲಿ ಮಾರ್ಟಿನ್ ಸಿನಿಮಾ ತುಂಬಾ ಕೆಟ್ಟದಾಗಿದೆ ಎಂದು ಪೋಸ್ಟ್ ಮಾಡಿದ ಯು ಟ್ಯೂಬರ್ ಒಬ್ಬರ ಬಂಧನವಾಗಿದೆ. ಮಾರ್ಟಿನ್ ಸಿನಿಮಾದ ಹೀರೋನ ಅಭಿಮಾನಿಗಳು ಕೊಟ್ಟ ದೂರನ್ನು ಪರಿಗಣಿಸಿ ಪೊಲೀಸರು ಆತನನ್ನು ಬಂಧಿಸಿ ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ. ಈ ಮಟ್ಟಿಗೆ ಮಾರ್ಟಿನ್ ಸಿನಿಮಾ ಒಂದು ಕೆಟ್ಟ ದಾಖಲೆಯನ್ನು ಮಾಡಿದೆ. ವಿಮರ್ಶೆ ಮಾಡುವ ಅಧಿಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲವೇ? ಸಿನಿಮಾ ಇಂದು ಇಂಡಸ್ಟ್ರಿ ಎಂದು ಕರೆಸಿಕೊಂಡು ತುಂಬಾ ದಶಕಗಳೇ ಆಯಿತು. ಹಾಗಿರುವಾಗ ಒಂದು ಸಿನಿಮಾ

ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಹೋಯ್ತು? Read More »

ಯುರೇಕಾ ಯುರೇಕಾ ಎಂದು ಬಟ್ಟೆ ಹಾಕದೆ ಓಡಿದವನ ಕಥೆ

ತಲೆ ಕತ್ತರಿಸಿ ಕೊಂದ ಸೈನಿಕನಿಗೆ ಆತ ಯಾರೆಂದೇ ಗೊತ್ತಿರಲಿಲ್ಲ ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಬದುಕಿದ್ದ ಆತ ಜಗತ್ತಿನ ಅತ್ಯಂತ ಶ್ರೇಷ್ಠ ಗಣಿತ ತಜ್ಞರಲ್ಲಿ ಒಬ್ಬ ಎಂದು ಎಲ್ಲರಿಂದ ಕರೆಸಿಕೊಂಡಿದ್ದಾನೆ. ಆತನ ಇಡೀ ಬದುಕು ರೇಖಾಗಣಿತ, ಬಾಹ್ಯಾಕಾಶ ವಿಜ್ಞಾನ, ಭೌತಶಾಸ್ತ್ರಗಳಲ್ಲಿ ಕಳೆದುಹೋಗಿತ್ತು. ಇವತ್ತು ಮೂರು ಕಾರಣಕ್ಕೆ ಆತನ ಸ್ಮರಣೆ ಮಾಡೋಣ ಒಂದು-ಸನ್ನೆಗೋಲು, ತಿರುಪು ಕೊಳವೆ ಯಾವುದೇ ಭಾರವಾದ ವಸ್ತುಗಳನ್ನು ಎತ್ತಲು ಬಳಸುವ ಸನ್ನೆಗೋಲನ್ನು ಮೊತ್ತಮೊದಲು ಕಂಡು ಹಿಡಿದವನು ಇದೇ ಆರ್ಕಿಮಿಡೀಸ್. ಅಂದಿನ ದೊರೆಗೆ ಆತ ಹೇಳಿದ ಮಾತು ʼನನಗೆ

ಯುರೇಕಾ ಯುರೇಕಾ ಎಂದು ಬಟ್ಟೆ ಹಾಕದೆ ಓಡಿದವನ ಕಥೆ Read More »

ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ಪಾ

ಅಮಿತಾಬ್ ಬಚ್ಚನ್ ಎಂಬ ಮಹಾನಟನ ಬದ್ಧತೆ-ಪ್ರಯೋಗಶೀಲತೆಗೆ ಸಾಕ್ಷಿಯಾದ ಸಿನೆಮಾ ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ಹಿಂದಿ ಸಿನೆಮಾ ಪಾ. ಅಮಿತಾಬ್ ಬಚ್ಚನ್ ಎಂಬ ಮಹಾನಟನ ಪ್ರಯೋಗಶೀಲತೆ, ಬದ್ಧತೆ ಮತ್ತು ಸೃಜನಶೀಲ ಅಭಿನಯಕ್ಕೆ ಸಾಕ್ಷಿ ಈ ಪಾ ಸಿನಿಮಾ. ಅದು ರೂಪುಗೊಂಡ ಕತೆಯೇ ಆ ಸಿನಿಮಾದ ಕತೆಗಿಂತ ಹೆಚ್ಚು ರೋಚಕವಾಗಿದೆ. ಪಾ ಸಿನಿಮಾ ರೂಪುಗೊಂಡ ಕತೆಯನ್ನು ಆ ಸಿನಿಮಾದ ನಿರ್ದೇಶಕ ಬಾಲ್ಕಿ ಆರ್ (Bhalki R) ಅವರ ಮಾತುಗಳಲ್ಲಿ ಕೇಳುತ್ತಾ ಮುಂದೆ ಹೋಗೋಣ… ನಿರ್ದೇಶಕ ಆರ್.

ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ಪಾ Read More »

ಆ ಲೆಗೆಸಿ ಹೀಗೆ ಮುಂದುವರಿದುಕೊಂಡು ಬಂದಿದೆ….

ಪ್ರತಿಭೆಯ ಪರ್ವತಗಳು ಬ್ಯಾಟನ್ ವರ್ಗಾವಣೆ ಮಾಡದೆ ನಿರ್ಗಮಿಸುವುದಿಲ್ಲ 2022ರ ಫಿಫಾ ವಿಶ್ವಕಪ್ ಟೂರ್ನಿ ಮುಗಿದಾಗ ಫುಟ್ಬಾಲ್ ದೈತ್ಯ ಆಟಗಾರ ಲಿಯೋನೆಲ್ ಮೆಸ್ಸಿ ನಿವೃತ್ತಿ ಆಗೋದು ಖಚಿತವಾಗಿತ್ತು. ಫುಟ್ಬಾಲ್‌ನ ಅದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗಿದ್ದವನು ಅರ್ಜೆಂಟೀನಾ ಕ್ಯಾಪ್ಟನ್ ಮೆಸ್ಸಿ. ಆತ ನಿರ್ಗಮಿಸುವಾಗ ಒಂದು ಶೂನ್ಯ ಕ್ರಿಯೇಟ್ ಆಗಬಹುದು ಎಂದು ಫುಟ್ಬಾಲ್ ಜಗತ್ತು ಗಾಢವಾಗಿ ನಂಬಿಕೊಂಡಿತ್ತು. ಆದರೆ ಫೈನಲ್ ಪಂದ್ಯ ಮುಗಿದು ಟ್ರೋಫಿ ವಿತರಣೆ ಆದ ನಂತರ ಮೆಸ್ಸಿ ಏನು ಮಾಡಿದನು ಎಂದರೆ ಮುಖ ಬಾಡಿಸಿ ಮೂಲೆಯಲ್ಲಿ ನಿಂತಿದ್ದ

ಆ ಲೆಗೆಸಿ ಹೀಗೆ ಮುಂದುವರಿದುಕೊಂಡು ಬಂದಿದೆ…. Read More »

error: Content is protected !!
Scroll to Top