ಲೇಖನ

ಭಾರತ ರಜತ ಪರದೆಯ ಮೊದಲ ನಾಯಕಿ ದೇವಿಕಾ ರಾಣಿ ರೋರಿಚ್

ಸಿನೆಮಾದಲ್ಲಿ ಹುಡುಗಿಯರು ನಟಿಸುವುದು ಅಪರಾಧ ಎಂಬ ಕಾಲದಲ್ಲಿ ಆಕೆ ಸೂಪರ್ ಸ್ಟಾರ್ ಆಗಿ ಮೆರೆದಿದ್ದರು! ಇದನ್ನು ಹೇಳಿದರೆ ನೀವು ಖಂಡಿತವಾಗಿ ನಗಬಹುದು, ಆದರೆ ಆ ಕಾಲ ಹಾಗಿತ್ತು.ಶತಮಾನದ ಹಿಂದೆ ಭಾರತದಲ್ಲಿ ದಾದಾಸಾಹೇಬ್ ಫಾಲ್ಕೆ ಅವರು ‘ರಾಜಾ ಹರಿಶ್ಚಂದ್ರ ‘ ಸಿನೆಮಾ ಮಾಡಲು ಹೊರಟಾಗ ಚಂದ್ರಮತಿಯ ಪಾತ್ರದಲ್ಲಿ ಅಭಿನಯ ಮಾಡಲು ಯಾವ ಹುಡುಗಿಯೂ ಮುಂದೆ ಬರಲಿಲ್ಲ. ಹಲವು ಬಾರಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರೂ ಯಾರೂ ರೆಸ್ಪಾನ್ಸ್ ಮಾಡಲಿಲ್ಲ. ಕೊನೆಗೆ ಅಡುಗೆ ಮಾಡಲು ಬಂದಿದ್ದ ಒಬ್ಬ ಚಂದದ ಹುಡುಗನಿಗೆ ಸೀರೆ […]

ಭಾರತ ರಜತ ಪರದೆಯ ಮೊದಲ ನಾಯಕಿ ದೇವಿಕಾ ರಾಣಿ ರೋರಿಚ್ Read More »

ಕಗ್ಗದ ಸಂದೇಶ-ಆಟ ಅವನದ್ದು; ಪಾತ್ರ ನಮ್ಮದು…

ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ|ಎದೆಯುಬ್ಬೆಗವನೊಂದಿ ಕುದಿಯುತಿಹುದೇಕೋ?|ಅಧಿಕಾರ ಪಟ್ಡವನು ನಿನಗಾರು ಕಟ್ಟಿಹರು|ವಿಧಿಯ ಮೇಸ್ತ್ರಿಯೆ ನೀನು–ಮಂಕುತಿಮ್ಮ||ಜೀವನದಲ್ಲಿ ನಾವು ಎಣಿಸಿದ ಹಾಗೆ ನಡೆಯದಿದ್ದಾಗ ಅದೇಕೆ ನಡೆಯಲಿಲ್ಲ? ಅದೇಕೆ ನಿಂತು ಹೋಯಿತು ಎಂದು ಮನದಲ್ಲಿಯೇ ಕೋಪದಿಂದ ಕುದಿಯುತ್ತಿರುವುದೇಕೆ? ಯಾವುದು ನಡೆಯಬೇಕು ಮತ್ತು ಯಾವುದು ನಡೆಯಬಾರದು ಎನ್ನುವುದನ್ನು ನಿರ್ಧರಿಸುವ ಅಧಿಕಾರವನ್ನು ನಿನಗೆ ಯಾರು ಕೊಟ್ಟಿದ್ದಾರೆ? ವಿಧಿಯನ್ನು ನಿರ್ವಹಿಸುವ ನಿರ್ವಾಹಕನೋ ನೀನು? ಎಂದು ಮಾನ್ಯ ಡಿವಿಜಿಯವರು ಈ ಮುಕ್ತದಲ್ಲಿ ಪ್ರಶ್ನಿಸಿದ್ದಾರೆ. ಜಗತ್ತಿನಲ್ಲಿ ಯಾವುದು ನಾವು ಎಣಿಸಿದ ಹಾಗೆ ನಡೆಯುವುದಿಲ್ಲ. ವಿಧಿಯ ನಿಯಮದಂತೆ ಎಲ್ಲವೂ ಸಾಗುವುದು. ಹೀಗೇಕೆ ಎಂದು

ಕಗ್ಗದ ಸಂದೇಶ-ಆಟ ಅವನದ್ದು; ಪಾತ್ರ ನಮ್ಮದು… Read More »

ಸಿಂಪಥಿ ಮೀರಿದ ಎಂಪಥಿ…!

ನಮ್ಮನ್ನು ಎಲ್ಲ ಕಡೆಯೂ ಗೆಲ್ಲಿಸುವ ಮಹಾಮಂತ್ರ! ಒಂದು ಕಥೆಯಿಂದ ಆರಂಭ ಮಾಡುತ್ತೇನೆ.ಒಂದೂರಲ್ಲಿ ಒಂದು ನಾಯಿಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಕಾರ್ಯಕ್ರಮ ಏರ್ಪಾಡಾಗಿತ್ತು. ಬೇರೆ ಬೇರೆ ಜಾತಿಯ, ಬೇರೆ ಬೇರೆ ಬಣ್ಣದ ಚಂದವಾದ ನಾಯಿಗಳು. ಬೆಳಿಗ್ಗೆಯಿಂದ ಜನಸಾಗರ ಹರಿದು ಬಂದು ನಾಯಿಗಳನ್ನು ನೋಡುತ್ತ ತಮಗೆ ಇಷ್ಟವಾದ ನಾಯಿಗಳನ್ನು ಖರೀದಿ ಮಾಡುತ್ತಿತ್ತು.ಆದರೆ ಒಂದು ನಾಯಿ ಮೇಜಿನ ಕೆಳಗೆ ಧೂಳಲ್ಲಿ ಬಿದ್ದು ಒದ್ದಾಡುತ್ತಿತ್ತು. ಅದಕ್ಕೆ ಬೊಗಳಲು ಕೂಡ ತ್ರಾಣ ಇರಲಿಲ್ಲ. ಅದು ಯಾರಿಗೂ ಬೇಡವಾದ ನಾಯಿ ಆಗಿತ್ತು. ಯಾರೂ ಅದರ

ಸಿಂಪಥಿ ಮೀರಿದ ಎಂಪಥಿ…! Read More »

ಮೆಸ್ಸಿ… ಮೆಸ್ಸಿ… ಮೆಸ್ಸಿ… ಜಗದಗಲ ಮೆಸ್ಸಿ!

ಇನ್ನು ಫುಟ್ಬಾಲ್ ದೇವರು ಆಡುವುದಿಲ್ಲ ನಮಗೆಲ್ಲ ತಿಳಿದಿರುವ ಹಾಗೆ ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ. ಶ್ರೀಮಂತ ಕ್ರೀಡೆ ಕೂಡ. ಅದಕ್ಕೆ ಕಾರಣದೇವ ಮಾನವರ ಹಾಗೆ ಇರುವ ಫುಟ್ಬಾಲ್ ಆಟಗಾರರು! ಪೀಲೆ, ಮರಡೋನಾ, ಜಿದಾನೆ ಮೊದಲಾದವರೆಲ್ಲ ಫುಟ್ಬಾಲ್ ಪ್ರೇಮಿಗಳ ಆರಾಧ್ಯ ದೇವರೇ ಆಗಿದ್ದವರು. ಕೋಟಿ ಕೋಟಿ ಬೆಲೆಬಾಳುವವರು.ವರ್ತಮಾನದ ಫುಟ್ಬಾಲ್ ಜಗತ್ತಿನ ದೇವರು ಲಿಯೋನೆಲ್ ಮೆಸ್ಸಿ ತನ್ನ ಜೀವಮಾನದ ಕೊನೆಯ ಪಂದ್ಯವನ್ನು ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡುತ್ತಾರೆ ಎಂದರೆ ಅವರ ಲಕ್ಷಾಂತರ ಅಭಿಮಾನಿಗಳಿಗೆ ಕರುಳು ಹಿಂಡುವ ಅನುಭವ.

ಮೆಸ್ಸಿ… ಮೆಸ್ಸಿ… ಮೆಸ್ಸಿ… ಜಗದಗಲ ಮೆಸ್ಸಿ! Read More »

ಆರೋಗ್ಯ ಧಾರಾ – ರಸಾಯನ ಬಳಸಿ ದೀರ್ಘಾಯುಗಳಾಗಿ

ಇನ್ನು ಕೆಲವೇ ದಿನಗಳಲ್ಲಿ ನಾವು 2023ನ್ನು ಸ್ವಾಗತಿಸಲಿದ್ದೇವೆ. ಮೊನ್ನೆ ತಾನೇ 2022 ವರ್ಷ ಶುರುವಾದದ್ದು ಎಂದು ಅನ್ನಿಸುತ್ತಿಸರಬೇಕು. ಹೌದು ಒಂದು ವರ್ಷ ಬಹುಬೇಗನೆ ಕಳೆದು ಹೋಗುತ್ತದೆ. ಆದ್ದರಿಂದ ನಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡದೆ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಾ ನಮ್ಮ ತಪ್ಪುಗಳನ್ನು ತಿದ್ದುತ್ತ ಒಳ್ಳೆಯ ರೀತಿಯಲ್ಲಿ ಕಾಲವನ್ನು ಉಪಯೋಗಿಸೋಣ. ವರ್ಷ ಕಳೆದಂತೆ ನಮ್ಮ ಆಯಸ್ಸು ಹೆಚ್ಚುತ್ತದೆ. ವಯಸ್ಸಾದಂತೆ ನಮ್ಮ ಆರೋಗ್ಯವು ಕ್ಷೀಣಿಸುತ್ತದೆ. ನಮ್ಮ ಆಯುಸ್ಸನ್ನು ವೃದ್ಧಿಸುವ ಉಪಾಯವನ್ನು ಆಯುರ್ವೇದದಲ್ಲಿ ರಸಾಯನವೆಂದು ಕರೆಯುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳೋಣ.ರಸಾಯನ ಶಾಸ್ತ್ರ

ಆರೋಗ್ಯ ಧಾರಾ – ರಸಾಯನ ಬಳಸಿ ದೀರ್ಘಾಯುಗಳಾಗಿ Read More »

error: Content is protected !!
Scroll to Top