ರೈತಾಪಿ ವರ್ಗಕ್ಕೆ ಯಾಂತ್ರಿಕತೆ ಪರಿಚಯಿಸುವ ಬೃಹತ್ ಕೃಷಿಯಂತ್ರ ಮೇಳ | ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಅಡಕೆ ಬೆಳೆಗಾರರು, ಸಾರ್ವಜನಿಕರು ಪಾಲ್ಗೊಳ್ಳುವಂತೆ ಶಾಸಕ ಸಂಜೀವ ಮಠಂದೂರು ಅವರಿಂದ ವಿನಂತಿ
ಪುತ್ತೂರು : ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇಂದು ತನ್ನ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು, ರೈತಾಪಿ ವರ್ಗಕ್ಕೆ ಯಾತ್ರಿಕತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕ್ಯಾಂಪ್ಕೋ ಸಂಸ್ಥೆ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಬೃಹತ್ ಕೃಷಿ ಯಂತ್ರ ಮೇಳವನ್ನು ಆಯೋಜನೆ ಮಾಡಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಅವರು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕೇರಳ, ಕರ್ನಾಟಕ ರಾಜ್ಯದ ರೈತಾಪಿ ವರ್ಗ ಯಂತ್ರ ಬಳಕೆ ಮಾಡುವ ಮೂಲಕ ಕೃಷಿ ಕಾರ್ಯವನ್ನು ಹೇಗ ಮಾಡಬೇಕು, ಯಾಂತ್ರಿಕತೆಯ ಬಳಕೆ ಹೇಗೆ ಎಂಬುದು ಈ […]