shakthi

ಬೈಕ್ ಅಪಘಾತಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ | ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ಹಸ್ತಾಂತರ

ಸವಣೂರು: ಬೈಕ್‍ ಅಪಘಾತದಿಂದ ಗಂಭೀರ ಗಾಯಗೊಂಡು ಎರಡು ಬಾಡಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ ಅವರಿಗೆ ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ನೀಡಲಾಯಿತು. ಜಗದೀಶ್‍ ಅವರು ಬೈಕ್ ನಲ್ಲಿ ಚಲಾಯಿಸುತ್ತಿದ್ದ ವೇಳೆ ನಾಯಿಯೊಂದು ಅಡ್ಡ ಬಂದು ಬೈಕ್ ಮಗುಚಿದ ಪರಿಣಾಮ ಕಾಲಿಗೆ ಗಂಭೀರ ಗಾಯವಾಗಿತ್ತು. ಈ ಸಂಧರ್ಭದಲ್ಲಿ ಸವಣೂರು ಶಕ್ತಿಕೇಂದ್ರದ ಅಧ್ಯಕ್ಷ ಚೇತನ್ ಕೊಡಿಬೈಲ್, ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸುಳ್ಯ […]

ಬೈಕ್ ಅಪಘಾತಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ | ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ಹಸ್ತಾಂತರ Read More »

ಬಿಜೆಪಿ ಸವಣೂರು ಶಕ್ತಿಕೇಂದ್ರ-ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದಿಂದ ಸ್ವಚ್ಛತಾ ಕಾರ್ಯಕ್ರಮ

ಸವಣೂರು: ಬಿಜೆಪಿ ಸವಣೂರು ಶಕ್ತಿ ಕೇಂದ್ರ, ಸುಳ್ಯ ಮಂಡಲ ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ವತಿಯಿಂದ ಸೇವಾಪಾಕ್ಷಿಕ ಹಾಗೂ ಮೋದಿ ಜನ್ಮದಿನ  ಮತ್ತು ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಸವಣೂರಿನ ಕನಡಕುಮೇರುನಲ್ಲಿ ನಡೆಯಿತು. ಶಕ್ತಿ ಕೇಂದ್ರದ ಕಾರ್ಯಕರ್ತರು ಸ್ಥಳೀಯ ಗಿಡ ಗಂಟಿಗಳನ್ನು ತೆರುವುಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಂದರ್ಭಲ್ಲಿ ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಸುಳ್ಯ ಮಂಡಲ ಸದಸ್ಯ ತಾರಾನಾಥ ಕಾಯರ್ಗ, ಸುಳ್ಯ ಮಂಡಲ ಎಸ್. ಟಿ. ಮೋರ್ಚಾ ಅಧ್ಯಕ್ಷ

ಬಿಜೆಪಿ ಸವಣೂರು ಶಕ್ತಿಕೇಂದ್ರ-ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದಿಂದ ಸ್ವಚ್ಛತಾ ಕಾರ್ಯಕ್ರಮ Read More »

ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾಗಿ ಎಸ್‍.ಮಾಧವ ರೈ ಆಯ್ಕೆ

ಪುತ್ತೂರು: ಬಿಜೆಪಿ ಒಳಮೊಗ್ರು ಶಕ್ತಿ ಕೇಂದ್ರದ ಸಂಚಾಲಕರಾಗಿ ಹಿರಿಯ ಕಾರ್ಯಕರ್ತ ಎಸ್. ಮಾಧವ ರೈ ಕುಂಬ್ರ ಆಯ್ಕೆಯಾಗಿದ್ದಾರೆ. ಮಾಧವ ರೈ ಅವರು ಬೂತ್ ಸಮಿತಿ ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷರಾಗಿ, ಕುಂಬ್ರ ವರ್ತಕ ಸಂಘದ ಅಧ್ಯಕ್ಷರಾಗಿ, ಹಾಗೂ ಕುಂಬ್ರ KPS ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿ, ಕುಂಬ್ರ ಅಂಗನವಾಡಿ ಬಾಲವಿಕಾಸ ಸಮಿತಿ ಸದಸ್ಯರಾಗಿದ್ದರು. ಕುಂಬ್ರ ಶ್ರೀರಾಮ ಭಜನಾ ಮಂದಿರದ ಕಾರ್ಯಕಾರಿ ಸಹಿತಿ ವಿವಿಧ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.

ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾಗಿ ಎಸ್‍.ಮಾಧವ ರೈ ಆಯ್ಕೆ Read More »

ಸವಣೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‍ ಆಗಿ ಚೇತನ್ ಕುಮಾರ್ ಕೋಡಿಬೈಲು, ಬೂತ್ 65 ಅಧ್ಯಕ್ಷರಾಗಿ ತೀರ್ಥರಾಮ ಕೆಡೆಂಜಿ, ಕಾರ್ಯದರ್ಶಿಯಾಗಿ ಸತೀಶ್ ಬಲ್ಯಾಯ ಆಯ್ಕೆ

ಸವಣೂರು : ಬಿಜೆಪಿ ಸವಣೂರು ಶಕ್ತಿ ಕೇಂದ್ರ ಪ್ರಮುಖ್ ಆಗಿ ಚೇತನ್ ಕುಮಾರ್ ಕೋಡಿಬೈಲು, ಬೂತ್ 65ರ ಅಧ್ಯಕ್ಷರಾಗಿ ಸವಣೂರು ಗ್ರಾ.ಪಂ.ಸದಸ್ಯ ತೀರ್ಥರಾಮ ಕಡೆಂಜಿ, ಕಾರ್ಯದರ್ಶಿಯಾಗಿ ಗ್ರಾ.ಪಂ.ಮಾಜಿ ಸದಸ್ಯ ಸತೀಶ್ ಬಲ್ಯಾಯ ಅವರನ್ನು ಆಯ್ಕೆ ಮಾಡಲಾಗಿದೆ. ಸವಣೂರು ಯುವಸಭಾಭವನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈ ಆಯ್ಕೆ ಮಾಡಲಾಯಿತು. ಬಿಎಲ್.ಎ 2 ಆಗಿ ಕೀರ್ತನ್ ಕೋಡಿಬೈಲು, ಮತಗಟ್ಟೆ ಏಜೆಂಟ್ ಆಗಿ ಪ್ರಕಾಶ್ ಕುದ್ದನಮಜಲು, ಮಹಿಳಾ ಸದಸ್ಯರಾಗಿ ಅನಿತಾ ಲಕ್ಷ್ಮಣ ಗೌಡ,ಎಸ್.ಪಿ., ಸದಸ್ಯರಾಗಿ ಗಿರೀಶ್ ಬೇರಿಕೆ, ಎಸ್.ಟಿ.ಸದಸ್ಯರಾಗಿ ಗಿರೀಶ್ ಬೇರಿಕೆ,

ಸವಣೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‍ ಆಗಿ ಚೇತನ್ ಕುಮಾರ್ ಕೋಡಿಬೈಲು, ಬೂತ್ 65 ಅಧ್ಯಕ್ಷರಾಗಿ ತೀರ್ಥರಾಮ ಕೆಡೆಂಜಿ, ಕಾರ್ಯದರ್ಶಿಯಾಗಿ ಸತೀಶ್ ಬಲ್ಯಾಯ ಆಯ್ಕೆ Read More »

ಬಿಜೆಪಿ ವತಿಯಿಂದ ಬೊಳುವಾರು ಶಕ್ತಿ ಕೇಂದ್ರದ ಬೂತ್ ಸಭೆ

ಪುತ್ತೂರು: ಬಿಜೆಪಿ ಪುತ್ತೂರು ನಗರ ಮಂಡಲ ಬೊಳುವಾರು ಶಕ್ತಿಕೇಂದ್ರದ ಬೂತ್ ಸಂ.123,124,129 ರ ಸಭೆ ಕೊಂಬೆಟ್ಟು ಗಣೇಶ್ ಬಾಳಿಗರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಕ್ಯಾ.ಬ್ರಿಜೇಶ್‍ ಚೌಟರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ರಂಗನಾಥ ರಾವ್, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನಗರ ಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ಶಕ್ತಿ ಕೇಂದ್ರ ಪ್ರಮುಖ್ ನೀಲಂತ್

ಬಿಜೆಪಿ ವತಿಯಿಂದ ಬೊಳುವಾರು ಶಕ್ತಿ ಕೇಂದ್ರದ ಬೂತ್ ಸಭೆ Read More »

ಶಕ್ತೀ ವಂದನಾ ಕಾರ್ಯಕ್ರಮ

ವಿಟ್ಲ: ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತೀ ವಂದನಾ ಕಾರ್ಯಕ್ರಮ ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಜೀವಿನಿ ತಾಲೂಕು ನಿರ್ವಹಣಾ ಘಟಕ ಮೇಲ್ವಿಚಾರಕಿ ದೀಕ್ಷಿತಾ, ಎಂ.ಬಿ.ಕೆ ಸೌಮ್ಯ ಹಾಗೂ ಧರ್ಮಸ್ಥಳ ಗ್ರಾಮ ಅಭಿವೃದ್ದಿ ಸೇವಾ ಪ್ರತಿನಿಧಿ ಯಶೋಧ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪುನೀತ್ ಮಾಡತ್ತಾರ್ ಅಧ್ಯಕ್ಷತೆ ವಹಿಸಿದ್ದರು, ಪುತ್ತೂರು ಮಂಡಲ ಶಕ್ತೀವಂದನಾ ಪ್ರಮುಖ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹರಿಪ್ರಸಾದ್ ಯಾದವ್, ಗ್ರಾಪಂ.ಉಪಾಧ್ಯಕ್ಷೆ ರೋಹಿಣಿ, ಸೊಸೈಟಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ಗ್ರಾಪಂ.ಸದಸ್ಯರಾದ

ಶಕ್ತೀ ವಂದನಾ ಕಾರ್ಯಕ್ರಮ Read More »

error: Content is protected !!
Scroll to Top