ಕುಂಬ್ರದಲ್ಲಿ 100 ಕ್ಕೂ ಅಧಿಕ ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವಿತರಣೆ | ಕಾರ್ಡ್ ವಿತರಿಸಿದ ಶಾಸಕ ಮಠಂದೂರು

ಪುತ್ತೂರು : ಕಟ್ಟಡ ಕಾರ್ಮಿಕರಿಗೆ ವಿವಿಧ ಸವಲತ್ತುಗಳನ್ನು ಸರಕಾರ ನೀಡುತ್ತಿದ್ದು, ಈ ಪೈಕಿ ಕಾರ್ಮಿಕರಿಗೆ ಬಸ್ ಪಾಸ್ ಕೊಡುವ ಕೆಲಸವನ್ನೂ ಮಾಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಕುಂಬ್ರದಲ್ಲಿ ಸೋಮವಾರ ನಡೆದ ಒಳಮೊಗ್ರು ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಕಾರ್ಡ್ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವಿತರಿಸಿದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, […]

ಕುಂಬ್ರದಲ್ಲಿ 100 ಕ್ಕೂ ಅಧಿಕ ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವಿತರಣೆ | ಕಾರ್ಡ್ ವಿತರಿಸಿದ ಶಾಸಕ ಮಠಂದೂರು Read More »

ಶಾಸಕರ ಮಾತಿಗೆ ಪ್ರತಿಭಟನೆ ವಾಪಾಸ್ ಪಡೆದ ದಲಿತ್ ಸೇವಾ ಸಮಿತಿ | ವಿಟ್ಲ ಅಂಬೇಡ್ಕರ್ ಭವನದ ಶಿಲಾನ್ಯಾಸಕ್ಕೆ ಶೀಘ್ರ ದಿನ ನಿಗದಿ

ಪುತ್ತೂರು: ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಆತ್ಮೀಕ ಕುಟುಂಬಸ್ಥರಿಗೆ ನೆರವು ನೀಡಬೇಕೆಂಬ ಬೇಡಿಕೆ ಮುಂದಿರಿಸಿ ಪ್ರತಿಭಟನೆನಿರತ ದಲಿತ್ ಸೇವಾ ಸಮಿತಿ ಸದಸ್ಯರು, ಶಾಸಕ ಸಂಜೀವ ಮಠಂದೂರು ಭರವಸೆಯ ಮಾತಿನ ಬಳಿಕ ಪ್ರತಿಭಟನೆ ವಾಪಾಸ್ ಪಡೆದರು. ಸೋಮವಾರ ತಾಲೂಕು ಆಡಳಿತ ಸೌಧ ಮುಂಭಾಗ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬನ್ನೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಹಾಗೂ

ಶಾಸಕರ ಮಾತಿಗೆ ಪ್ರತಿಭಟನೆ ವಾಪಾಸ್ ಪಡೆದ ದಲಿತ್ ಸೇವಾ ಸಮಿತಿ | ವಿಟ್ಲ ಅಂಬೇಡ್ಕರ್ ಭವನದ ಶಿಲಾನ್ಯಾಸಕ್ಕೆ ಶೀಘ್ರ ದಿನ ನಿಗದಿ Read More »

ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ 20  ರ್ಯಾಂಕ್ ಗಳು

ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ 7 ಹಾಗೂ ಸ್ನಾತಕೋತ್ತರ ಪದವಿ  ಪರೀಕ್ಷೆಯಲ್ಲಿ 13 ರ್ಯಾಂಕ್ ಗಳು ಲಭಿಸಿದೆ. ಬಿಸಿಎ ಪದವಿ ವಿಭಾಗದಲ್ಲಿ ಫಾತಿಮತ್  ಸಾನಿದ  97.4% ಅಂಕ ಗಳೊಂದಿಗೆಪ್ರಥಮ ರ್ಯಾಂಕ್,  ಬಿಎಸ್ಸಿ ವಿಭಾಗದಲ್ಲಿ ಧೀರಜ್ ಎಂ. 97.94% ಅಂಕಗಳೊಂದಿಗೆ 3ನೇ ರ್ಯಾಂಕ್,  ಶ್ರೀಶ ಎಂ. ಬಿಎಸ್ಸಿವಿಭಾಗದಲ್ಲಿ  97.82% ಅಂಕಗಳನ್ನು ಪಡೆದು 5ನೇ ರ್ಯಾಂಕ್, ಬಿಬಿಎ ವಿಭಾಗದ ಹರ್ಷಿತ ಕೆ. 91.14% ಅಂಕಗಳೊಂದಿಗೆ  5ನೇ ರ್ಯಾಂಕ್, ಬಿಕಾಂ ವಿಭಾಗದಲ್ಲಿ ಶ್ರೀದೇವಿ ಕೆ.

ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ 20  ರ್ಯಾಂಕ್ ಗಳು Read More »

ಜನರ ಸೇವೆಯಿಂದ ರಾಮರಾಜ್ಯ ನಿರ್ಮಾಣ | ಒಳಮೊಗ್ರು ರಾಜೀವ ಗಾಂಧಿ ಸೇವಾ ಕೇಂದ್ರ, ನೂತನ ಗ್ರಾಪಂ ಕಚೇರಿ ಉದ್ಘಾಟಿಸಿ ಶಾಸಕ ಮಠಂದೂರು

ಪುತ್ತೂರು: ಜನರ ಸೇವೆಯೇ ಜನಾರ್ದನನ ಸೇವೆ ಎಂಬ ವೇದವ್ಯಾಕ್ಯದೊಂದಿಗೆ ಗಾಂಧಿ ಕಂಡ ರಾಮ ರಾಜ್ಯ ನಿರ್ಮಾಣ ಮಾಡಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪುತ್ತೂರು ತಾಲೂಕು ಪಂಚಾಯಿತಿ, ಒಳಮೊಗ್ರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಗ್ರಾಮ ಪಂಚಾಯಿತಿ ಕಚೇರಿಯನ್ನು ಮಾ. 13ರಂದು ಉದ್ಘಾಟಿಸಿ ಮಾತನಾಡಿದರು. ತಾನು ದೇವರ ಕೆಲಸ ಮಾಡಲು ಬಂದಿದ್ದೇನೆ ಎಂಬ ಭಾವನೆಯನ್ನಿಟ್ಟು ಕೆಲಸ ನಿರ್ವಹಿಸಿದ್ದೇನೆ. ಪ್ರತಿಯೊಬ್ಬ ಮತದಾರನ ಭರವಸೆಗಳನ್ನು

ಜನರ ಸೇವೆಯಿಂದ ರಾಮರಾಜ್ಯ ನಿರ್ಮಾಣ | ಒಳಮೊಗ್ರು ರಾಜೀವ ಗಾಂಧಿ ಸೇವಾ ಕೇಂದ್ರ, ನೂತನ ಗ್ರಾಪಂ ಕಚೇರಿ ಉದ್ಘಾಟಿಸಿ ಶಾಸಕ ಮಠಂದೂರು Read More »

ಶಾಸಕರಿಗೆ ಹೀಗೊಂದು ಅಭಿನಂದನೆಯ ಬರಹ | ಪರ್ಲಡ್ಕ – ದೇವಸ್ಯ ರಸ್ತೆ ಅಭಿವೃದ್ಧಿಗೆ ಶ್ಲಾಘನೆ

ಪುತ್ತೂರು: ಸದ್ದಿಲ್ಲದೇ ಅಭಿವೃದ್ಧಿ ಕಾರ್ಯ ನಡೆಸಿರುವ ಶಾಸಕ ಸಂಜೀವ ಮಠಂದೂರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅಭಿನಂದನೆಯ ಬರಹವೊಂದು ವೈರಲ್ ಆಗುತ್ತಿದೆ. ಪರ್ಲಡ್ಕ – ದೇವಸ್ಯ ಮಾರ್ಗವಾಗಿ ಅಜ್ಜಿಕಲ್ಲು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಂಡಿದ್ದು, ಸುಲಲಿತ ಸಂಚಾರಕ್ಕೆ ಅನುಕೂಲವಾಗಿದೆ. ಈ ಹಿಂದೆ ತೀರಾ ಹದಗೆಟ್ಟು ಹೋಗಿದ್ದ ರಸ್ತೆಯನ್ನು ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿ ವಹಿಸಿ ಸಂಚಾರ ಯೋಗ್ಯವಾಗಿಸಿದ್ದಾರೆ. ಬಹು ವಾಹನ ದಟ್ಟಣೆ ಹೊಂದಿರುವ ಪುತ್ತೂರು – ಸಂಪ್ಯ – ಸಂಟ್ಯಾರ್ ರಸ್ತೆಗೆ ಪರ್ಯಾಯ ಪರ್ಲಡ್ಕ – ದೇವಸ್ಯ

ಶಾಸಕರಿಗೆ ಹೀಗೊಂದು ಅಭಿನಂದನೆಯ ಬರಹ | ಪರ್ಲಡ್ಕ – ದೇವಸ್ಯ ರಸ್ತೆ ಅಭಿವೃದ್ಧಿಗೆ ಶ್ಲಾಘನೆ Read More »

ನಾಳೆ (ಮಾ.14) :  ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈಬರ್ಡ್‍ ಏವಿಯೇಷನ್ ವತಿಯಿಂದ ಪದವಿ, ಡಿಪ್ಲೋಮಾ ಕೋರ್ಸ್ ಗಳ ಉಚಿತ ಮಾಹಿತಿ ಕಾರ್ಯಾಗಾರ

ಪುತ್ತೂರು : ನಗರದ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಪದವಿ ಕಾಲೇಜು ಸ್ಕೈಬರ್ಡ್ ಏವಿಯೇಶನ್ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಉತ್ತೀರ್ಣಗೊಂಡ ಬಳಿಕ ವಿಮಾನಯಾನದಲ್ಲಿ ಮೂರು ವರ್ಷಗಳ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿ ಬಗ್ಗೆ ಮಾ.14 ಮಂಗಳವಾರ ಉಚಿತವಾಗಿ ಕಾರ್ಯಾಗಾರ ನಡೆಯಲಿದೆ.   ಬಿಬಿಎ ಇನ್ ಏವಿಯೇಶನ್ ಮ್ಯಾನೇಜ್‌ಮೆಂಟ್ ವಿದ್ ಹಾನರ್‍ಸ್ ಮಲ್ಟಿ ಡಿಸಿಪ್ಲಿನರಿ ಎಜ್ಯುಕೇಶನ್ ವಿದ್ ಮಲ್ಟಿ ಎಂಟ್ರಿ ಮಲ್ಟಿ- ಎಕ್ಸಿಟ್ ಏಸ್ ಪರ್ ಎನ್‌ಇಪಿ, ಇಂಟರ್

ನಾಳೆ (ಮಾ.14) :  ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈಬರ್ಡ್‍ ಏವಿಯೇಷನ್ ವತಿಯಿಂದ ಪದವಿ, ಡಿಪ್ಲೋಮಾ ಕೋರ್ಸ್ ಗಳ ಉಚಿತ ಮಾಹಿತಿ ಕಾರ್ಯಾಗಾರ Read More »

ನಾಟು ನಾಟು…ಗೂ ಸಿಕ್ಕಿತು ಆಸ್ಕರ್‌

ಬೆಸ್ಟ್​ ಒರಿಜಿನಲ್​ ಸಾಂಗ್ ಆಸ್ಕರ್‌ ಪ್ರಶಸ್ತಿ ಲಾಸ್‌ ಏಂಜಲೀಸ್‌ : ಆರ್​ಆರ್​ಆರ್ ಚಿತ್ರದ ‘ನಾಟು ನಾಟು…’ ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡು ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ. ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ‘ನಾಟು ನಾಟು…’ ಪ್ರಶಸ್ತಿ ಬಾಚಿಕೊಂಡಿದೆ.‘ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್

ನಾಟು ನಾಟು…ಗೂ ಸಿಕ್ಕಿತು ಆಸ್ಕರ್‌ Read More »

ನಿಮ್ಮ ತಟ್ಟೆಯಲ್ಲಿದ್ದ ಹೆಗ್ಗಣ ಕಾಣಿಸಲಿಲ್ಲವೆ? : ಹಿಂಡೆನ್‌ಬರ್ಗ್‌ಗೆ ವ್ಯಾಪಕ ಟೀಕೆ

ಎಸ್‌ವಿಬಿ ದಿವಾಳಿಯಾದ ಬಳಿಕ ಹಿಂಡೆನ್‌ಬರ್ಗ್‌ ಕಾರ್ಯಶೈಲಿ ಬಗ್ಗೆ ಅನುಮಾನ ದೆಹಲಿ: ಸಾವಿರಾರು ಮೈಲು ದೂರದಲ್ಲಿ ಕುಳಿತು ಅದಾನಿ ಕಂಪನಿಗಳ ಕಡತಗಳನ್ನು ಪರಿಶೀಲಿಸಿ ಷೇಧರು ಮಾರುಕಟ್ಟೆಯಲ್ಲಿ ಗೋಲ್‌ಮಾಲ್‌ ಆಗಿದೆ ಎಂದು ವರದಿ ಬರೆದ ಅಮೆರಿಕದ ಹಿಂಡೆನ್‌ಬರ್ಗ್‌ನವರಿಗೆ ತಮ್ಮ ಕಾಲಬುಡದಲ್ಲೇ ಇರುವ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (ಎಸ್‌ವಿಬಿ) ಮುಳುಗುತ್ತಿರುವ ಕಾಣಲಿಲ್ಲವೇ?ಅದಾನಿ ಕಂಪನಿಗಳ ಕುರಿತು ಶಂಕಾಸ್ಪದ ವರದಿ ನೀಡಿ ಭಾರತದ ಆರ್ಥಿಕತೆನ್ನು ಅಲ್ಲೋಲಕಲ್ಲೋಲ ಮಾಡಲು ಪ್ರಯತ್ನಿಸಿದ್ದ ಹಿಂಡೆನ್‌ಬರ್ಗ್‌ ಕುರಿತು ಹೀಗೊಂದು ಪ್ರಶ್ನೆ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಎಸ್‌ವಿಬಿ ಬ್ಯಾಂಕ್‌ನ ಕುರಿತು ಯಾವುದೇ

ನಿಮ್ಮ ತಟ್ಟೆಯಲ್ಲಿದ್ದ ಹೆಗ್ಗಣ ಕಾಣಿಸಲಿಲ್ಲವೆ? : ಹಿಂಡೆನ್‌ಬರ್ಗ್‌ಗೆ ವ್ಯಾಪಕ ಟೀಕೆ Read More »

ಭಾಷಣ ಮಾಡುವಾಗ ಆಝಾನ್‍ : ಈಶ್ವರಪ್ಪ ಸಿಡಿಮಿಡಿ

ಮೈಕ್‌ನಲ್ಲಿ ಕೂಗಿದರೆ ಮಾತ್ರ ದೇವರಿಗೆ ಕಿವಿ ಕೇಳುವುದಾ ಎಂದು ಆಕ್ರೋಶ ಮಂಗಳೂರು : ಕಾವೂರಿನಲ್ಲಿ ಭಾನುವಾರ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉರಿ ನಾಲಗೆಯ ಭಾಷಣಕಾರ ಕೆ. ಎಸ್‌. ಈಶ್ವರಪ್ಪ ಕಿರಿಕಿರಿಯಾಗುವ ಪ್ರಸಂಗವಂದನ್ನು ಎದುರಿಸಬೇಕಾಯಿತು. ಈಶ್ವರಪ್ಪ ಭಾಷಣ ಮಾಡುತ್ತಿರುವಾಗಲೇ ಪಕ್ಕದಲ್ಲಿದ್ದ ಮಸೀದಿಯಿಂದ ಆಝಾನ್‍ ಶುರುವಾಯಿತು. ಇದರಿಂದ ಈಶ್ವರಪ್ಪ ಬಹಳ ಸಿಡಿಮಿಡಿಗೊಂಡು, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್‌ನಲ್ಲಿ ಕೂಗಿದರೆ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ

ಭಾಷಣ ಮಾಡುವಾಗ ಆಝಾನ್‍ : ಈಶ್ವರಪ್ಪ ಸಿಡಿಮಿಡಿ Read More »

‘ದಿ ಎಲಿಫೆಂಟ್ ವಿಸ್ಪರರ್ಸ್‌ʼ: ಮಹಿಳೆ ತಯಾರಿಸಿದ ಕಿರು ಸಾಕ್ಷ್ಯಚಿತ್ರಕ್ಕೆ ಆಸ್ಕರ್‌

ಲಾಸ್ ಏಂಜಲೀಸ್: ಭಾರತದ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ 95ನೇ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದಿದೆ.ಪ್ರಶಸ್ತಿಯನ್ನು ಪೆಡ್ರೊ ಪಾಸ್ಕಲ್ ಪ್ರದಾನ ಮಾಡಿದರು. ‘ಹೌಲೌಟ್’, ‘ಹೌ ಡು ಯು ಮೆಷರ್ ಎ ಇಯರ್?’, ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಮತ್ತು ‘ಸ್ಟ್ರೇಂಜರ್ ಅಟ್ ದಿ ಗೇಟ್’ ಜತೆಗೆ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿತ್ತು. ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ಗುನೀತ್ ಮೊಂಗಾ ಪ್ರಶಸ್ತಿ ಸ್ವೀಕರಿಸಿದರು. ಕಾರ್ತಿಕಿ ಚಿತ್ರದ ಬಗ್ಗೆ ಮಾತನಾಡಿ,

‘ದಿ ಎಲಿಫೆಂಟ್ ವಿಸ್ಪರರ್ಸ್‌ʼ: ಮಹಿಳೆ ತಯಾರಿಸಿದ ಕಿರು ಸಾಕ್ಷ್ಯಚಿತ್ರಕ್ಕೆ ಆಸ್ಕರ್‌ Read More »

error: Content is protected !!
Scroll to Top