ಅಪ್ರಾಪ್ತ ಪುತ್ರನ ವ್ಹೀಲಿಂಗಿಗೆ PSI ತಾಯಿಯ ಸಾಥ್: ಇಲಾಖೆ ಕೈಗೊಂಡಿತು ಕ್ರಮ!! | ವ್ಹೀಲಿಂಗಿಗೆ ಬಲಿಯಾದ ವೃದ್ಧನ ಶವವಿಟ್ಟು ಪ್ರತಿಭಟನೆ
ಮೈಸೂರು: ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ಶನಿವಾರ ಅಮಾಯಕ ವೃದ್ಧ ಬಲಿಯಾಗಿದ್ದರು. ಇದೀಗ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಪುತ್ರ ಸೈಯದ್ ಐವನ್ನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೆ ಮಗನಿಗೆ ಕುಮ್ಮಕ್ಕು ನೀಡಿದ ಪಿಎಸ್ಐ ಯಾಸ್ಮಿನ್ ತಾಜ್ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಮಗ ಮಾಡಿದ ತಪ್ಪಿಗೆ ನಂಜನಗೂಡು ಸಂಚಾರ ವಿಭಾಗದ ಪಿಎಸ್ಐ ಯಾಸ್ಮಿನ್ ತಾಜ್ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ವ್ಹೀಲಿಂಗ್ ಮಾಡಿ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಯದ್ನನ್ನು […]