Uncategorized

ಯಕ್ಷಭಾರತಿಯಿಂದ ಕರ್ಣಾರ್ಜುನ ತಾಳಮದ್ದಳೆ

ಕರಾಡ ಬ್ರಾಹ್ಮಣ ಸಂಘ ರಿ. ಬೆಳ್ತಂಗಡಿ ಆಶ್ರಯದಲ್ಲಿ ಸೋಮಂತಡ್ಕದ ಕರಾಡ ಬ್ರಾಹ್ಮಣ ಸಭಾಭವನದಲ್ಲಿ ಯಕ್ಷಭಾರತಿ ಕನ್ಯಾಡಿ ತಂಡದಿಂದ ಕರ್ಣಾರ್ಜುನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮಹೇಶ ಕನ್ಯಾಡಿ, ಪ್ರಕಾಶ್ ಅಭ್ಯಂಕರ್ ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಅರ್ಜುನ್ ಅಭ್ಯಂಕರ್ ಸಹಕರಿಸಿದರು. ಅರ್ಥಧಾರಿಗಳಾಗಿ ಹರಿದಾಸ ಗಾಂಭೀರ ಧರ್ಮಸ್ಥಳ ಅರ್ಜುನ, ಕರ್ಣನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ಶ್ರೀ ಕೃಷ್ಣನಾಗಿ ಶಶಿಧರ ಕನ್ಯಾಡಿ, ಶಲ್ಯನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಅಶ್ವಸೇನನಾಗಿ ರವೀಂದ್ರ ಶೆಟ್ಟಿ ಬಳೆಂಜ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ಭಟ್, ನಾಗೇಶ್, […]

ಯಕ್ಷಭಾರತಿಯಿಂದ ಕರ್ಣಾರ್ಜುನ ತಾಳಮದ್ದಳೆ Read More »

ಬಾಲಕನಿಗೆ ಲೈಂಗಿಕ ಕಿರುಕುಳ : ಅಂಗಡಿ ಮಾಲಕನ ವಿರುದ್ಧ ಪೋಕ್ಸೊ ಕೇಸ್‌

ಚಾಕಲೇಟ್‌ ಖರೀದಿಸಲು ಬಂದಿದ್ದ ಬಾಲಕನ ಕೈಕಾಲು ಕಟ್ಟಿ ಹಾಕಿ ಕಿರುಕುಳ ಮಂಗಳೂರು : ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಂಗಡಿ ಮಾಲಕನೊಬ್ಬನನ್ನು ಪೋಕ್ಸೊ ಕಾಯ್ದೆಯಡಿ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಇಸ್ಮಾಯೀಲ್ ಬಂಧಿತ ಆರೋಪಿ. ಚೊಕ್ಕಬೆಟ್ಟು ಪೇಟೆಯಲ್ಲಿ ಹನಿ ಫ್ಯಾಶನ್ ಮತ್ತು ಜನರಲ್ ಸ್ಟೋರ್ ಎಂಬ ಅಂಗಡಿಯ ಮಾಲಕನಾಗಿರುವ ಆರೋಪಿ ಇಸ್ಮಾಯೀಲ್ ತನ್ನ ಅಂಗಡಿಗೆ ಚಾಕಲೇಟ್‌ ಖರೀದಿಸಲೆಂದು ಬಂದಿದ್ದ 11 ವರ್ಷದ ಬಾಲಕನ ಕೈ-ಕಾಲನ್ನು ಕಟ್ಟಿ ಅಂಗಡಿಯ ಒಂದು ಕೊಠಡಿಯಲ್ಲಿ ಕೂಡಿಹಾಕಿ ಲೈಂಗಿಕ

ಬಾಲಕನಿಗೆ ಲೈಂಗಿಕ ಕಿರುಕುಳ : ಅಂಗಡಿ ಮಾಲಕನ ವಿರುದ್ಧ ಪೋಕ್ಸೊ ಕೇಸ್‌ Read More »

ಡ್ರಗ್ಸ್‌ ಸಾಗಿಸಿದ ಅಪರಾಧಿಗಳಿಗೆ 12ರಿಂದ 14 ವರ್ಷ ಜೈಲು ಶಿಕ್ಷೆ

ವಿದೇಶಿ ಪ್ರಜೆ ಸೇರಿ ಐವರಿಗೆ ಕಠಿಣ ಕಾರಾಗೃಹ ವಾಸ ವಿಧಿಸಿದ ನ್ಯಾಯಾಲಯ ಮಂಗಳೂರು : ಡ್ರಗ್ಸ್‌ ಸಾಗಾಟ ಐವರು ಆರೋಪಿಗಳಿಗೆ 12ರಿಂದ 14 ವರ್ಚಗಳ ಕಠಿಣ ಜೈಲು ಶೀಕ್ಷೆ ವಿಧಿಸಿ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯ ಮಹತ್ವದ ತೀರ್ಪ ನೀಡಿದೆ. ಅಪರಾಧಿಗಳಲ್ಲಿ ವಿದೇಶಿ ಪ್ರಜೆಯೂ ಸೇರಿದ್ದಾನೆ. ಬೆಂಗಳೂರಿನಿಂದ ಮಂಗಳೂರಿಗೆ ಎಂಡಿಎಂಎ ಮಾದಕವಸ್ತು ಸಾಗಿಸುವಾಗ ಈ ಅಪರಾಧಿಗಳು ಸಿಕ್ಕಿಬಿದ್ದಿದ್ದರು. ಅಪರಾಧಿಗಳಾದ ಬೆಂಗಳೂರು ವರ್ತೂರಿನ ಗುಂಟೂರ್ ಪಾಳ್ಯದ ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, ಉಪ್ಪಳದ ಮುಹಮ್ಮದ್ ರಮೀಜ್

ಡ್ರಗ್ಸ್‌ ಸಾಗಿಸಿದ ಅಪರಾಧಿಗಳಿಗೆ 12ರಿಂದ 14 ವರ್ಷ ಜೈಲು ಶಿಕ್ಷೆ Read More »

ಗಾಂಜಾ ಸೇವಿಸಿ ತೂರಾಡುತ್ತಿದ್ದ ಹನೀಫ್ ಪೊಲೀಸರ ವಶಕ್ಕೆ

ಮಂಗಳೂರು: ಗಾಂಜಾ ಸೇವಿಸಿ ಕುದ್ರೋಳಿಯ ಗ್ರೀನ್ ಪಾರ್ಕ್ ಸಮೀಪ ತೂರಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂದರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಎಂಬಾತನೇ ಬಂಧಿತ ಆರೋಪಿ. ಗಾಂಜಾ ಸೇವಿಸಿ ತೂರಾಡಿಕೊಂಡು ಹೋಗುತ್ತಿದ್ದ ಅವನನ್ನು ಗಸ್ತು ಪೊಲೀಸರು ಗಮನಿಸಿ, ವಶಕ್ಕೆ ಪಡೆದಿರುವುದಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ‌ದೃಢಪಟ್ಟಿದೆ. ಆರೋಪಿಯ ವಿರುದ್ಧ NDPS ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವಿಸಿ ತೂರಾಡುತ್ತಿದ್ದ ಹನೀಫ್ ಪೊಲೀಸರ ವಶಕ್ಕೆ Read More »

ಕೊಹ್ಲಿ ದಾಖಲೆಯ ಶತಕದಿಂದ ಭಾರತಕ್ಕೆ ಕೊನೆಯ ಓವರ್‌ನಲ್ಲಿ ದಕ್ಕಿದ ಗೆಲುವು

ಕೊನೆಯ ಓವರ್‌ ತನಕ ತುದಿಗಾಲಲ್ಲಿ ನಿಲ್ಲಿಸಿದ ರಾಂಚಿ ಏಕದಿನ ರಾಂಚಿ: ವಿರಾಟ್‌ ಕೊಹ್ಲಿ ಶತಕ, ರೋಹಿತ್‌ ಮತ್ತು ನಾಯಕ ಕೆಎಲ್‌ ರಾಹುಲ್‌ ಅವರ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ 17 ರನ್‌ಗಳಿಂದ ಗೆದ್ದಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹಿರಿಯರಾದ ಕೊಹ್ಲಿ ಮತ್ತು ರೋಹಿತ್‌ ಶರ್ಮ ಅವರ ಬಿರುಸಿನ ಆಟ ಈ ಪಂದ್ಯದ ಹೈಲೈಟ್‌ ಆಗಿತ್ತು. ಇಬ್ಬರೂ ಈ ಮೂಲಕ ತಮ್ಮ ಟೀಕಾಕಾರರಿಗೆ

ಕೊಹ್ಲಿ ದಾಖಲೆಯ ಶತಕದಿಂದ ಭಾರತಕ್ಕೆ ಕೊನೆಯ ಓವರ್‌ನಲ್ಲಿ ದಕ್ಕಿದ ಗೆಲುವು Read More »

ಮನೆ ಮೇಲೆ ಕುಸಿದು ಬಿದ್ದ ಕಾಂಪೌಂಡ್‌; ತಪ್ಪಿದ ಭಾರಿ ದುರಂತ

ನಿರ್ಮಾಣ ಹಂತದಲ್ಲಿದ್ದ ಪಕ್ಕದ ಮನೆಯ ಕಾಂಪೌಂಡ್‌ ಕುಸಿತ ಪುತ್ತೂರು : ಮನೆ ಮೇಲೆ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಧರೆ ಸಮೇತ ಕುಸಿದು ಬಿದ್ದ ಘಟನೆ ಉಪ್ಪಿನಂಗಡಿಯ 34 ನೆಕ್ಕಿಲಾಡಿ ಸಮೀಪ ಸುಭಾಶ್‌ ನಗರದಲ್ಲಿ ಸಂಭವಿಸಿದೆ. ನವೆಂಬರ್ 24ರಂದಷ್ಟೇ ಕುಟುಂಬವೊಂದು ಸುಭಾಷ್ ನಗರದ ಜನತಾ ಕಾಲೋನಿಯಲ್ಲಿರುವ ಈ ಮನೆಗೆ ಬಾಡಿಗೆಗೆ ಬಂದಿತ್ತು. ಸ್ಥಳದಲ್ಲಿದ್ದ ಮೇಸ್ತ್ರಿಯೊಬ್ಬರ ಸಕಾಲಿಕ ಎಚ್ಚರಿಕೆಯಿಂದಾಗಿ ನಿವಾಸಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಜಬ್ಬಾರ್ ಎಂಬವರು ನಂದಾವರದ ಇಲ್ಯಾಸ್ ಎಂಬವರಿಗೆ ಬಾಡಿಗೆಗೆ ನೀಡಿದ್ದು, ಮನೆಗೆ ಇಲ್ಯಾಸ್‌ ಕುಟುಂಬ

ಮನೆ ಮೇಲೆ ಕುಸಿದು ಬಿದ್ದ ಕಾಂಪೌಂಡ್‌; ತಪ್ಪಿದ ಭಾರಿ ದುರಂತ Read More »

ಹಮಾಸ್‌ ಉಗ್ರರ ಬೃಹತ್‌ ಸುರಂಗ ಅಡಗುತಾಣ ಪತ್ತೆಹಚ್ಚಿದ ಇಸ್ರೇಲ್‌

7 ಕಿ.ಮೀ. ಉದ್ದ, 80 ಕೊಠಡಿಯ ಸುರಂಗದೊಳಗಿನ ವ್ಯವಸ್ಥೆಯನ್ನು ನೋಡಿ ನಿಬ್ಬೆರಗಾದ ಜಗತ್ತು ಟೆಲ್‌ ಅವೀವ್: ಇಸ್ರೇಲ್ ರಕ್ಷಣಾ ಪಡೆ ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರ ಒಂದು ಬೃಹತ್‌ ಸುರಂಗ ಅಡಗುತಾಣವನ್ನು ಪತ್ತೆಹಚ್ಚಿದೆ. ಈ ಸುರಂಗದ ಗಾತ್ರ ಮತ್ತು ವ್ಯವಸ್ಥೆಯನ್ನು ನೋಡಿ ಜಗತ್ತು ನಿಬ್ಬೆರಗಾಗಿದೆ. ಈ ಸುರಂಗದಲ್ಲಿ ಇತ್ತೀಚೆಗೆ ಭಯೋತ್ಪಾದಕ ಗುಂಪು ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರ ದೇಹವನ್ನು ಇಟ್ಟುಕೊಂಡಿತ್ತು. 2014ರ ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಹೊಂಚುದಾಳಿಯ ಸಮಯದಲ್ಲಿ ಲೆಫ್ಟಿನೆಂಟ್ ಗೋಲ್ಡಿನ್ ಹತ್ಯೆಗೀಡಾಗಿದ್ದರು. ಈ ತಿಂಗಳ ಆರಂಭದಲ್ಲಿ

ಹಮಾಸ್‌ ಉಗ್ರರ ಬೃಹತ್‌ ಸುರಂಗ ಅಡಗುತಾಣ ಪತ್ತೆಹಚ್ಚಿದ ಇಸ್ರೇಲ್‌ Read More »

7.11 ಕೋಟಿ ರೂ. ದರೋಡೆ ಪ್ರಕರಣ : ಕಾನ್‌ಸ್ಟೆಬಲ್‌ ಬಂಧನ

ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಹಾಡಹಗಲೇ ನಡೆದ ದರೋಡೆ ಕೃತ್ಯ ಬೆಂಗಳೂರು : ಬೆಂಗಳೂರಿನಲ್ಲಿ ಹಾಡುಹಗಲೇ ಸಂಭವಿಸಿದ 7.11 ಕೋಟಿ ರೂ. ದರೋಡೆ ಪ್ರಕರಣ ಮಾಸ್ಟರ್‌ಮೈಂಡ್ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಎಂಬ ಶಂಕೆ ವ್ಯಕ್ತವಾಗಿದೆ. ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ಎಂಬಾತನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ದರೋಡೆ ಸಂಚು ರೂಪಿಸಿದಾತ ಎನ್ನಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಈತನ ಪಾತ್ರ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಅಣ್ಣಪ್ಪ ನಾಯ್ಕ್

7.11 ಕೋಟಿ ರೂ. ದರೋಡೆ ಪ್ರಕರಣ : ಕಾನ್‌ಸ್ಟೆಬಲ್‌ ಬಂಧನ Read More »

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ರದ್ದು

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಪುತ್ತೂರು ಉಪವಿಭಾಗಾಧಿಕಾರಿ 2025ರ ಸೆ. 18ರಂದು ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿರುವುದಾಗಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿರುವುದಾಗಿದೆ. ಹಾಗೆಯೇ ಹೊಸದಾಗಿ ವಿಚಾರಣೆ ನಡೆಸಿ ಸೂಕ್ತ ಕಾರಣ, ಸೆಕ್ಷನ್ ಗಳೊಂದಿಗೆ 15 ದಿನಗಳಲ್ಲಿ ಮತ್ತೆ ಹೊಸ ಆದೇಶ ಹೊರಡಿಸುವಂತೆ ಪುತ್ತೂರು ಉಪವಿಭಾಗಾಧಿಕಾರಿಗೆ ಪೀಠ ಆದೇಶಿಸಿದೆ. ಮಹೇಶ್ ತಿಮರೋಡಿ ವಿರುದ್ಧ ಸುಮಾರು 32 ವಿವಿಧ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ರದ್ದು Read More »

ಆಪರೇಷನ್‌ ಪಿಂಪಲ್‌ಗೆ ಇಬ್ಬರು ಉಗ್ರರು ಬಲಿ

ಕಾಶ್ಮೀರದ ಕುಪ್ವಾರದಲ್ಲಿ ಬೆಳ್ಳಂಬೆಳಗ್ಗೆ ಉಗ್ರರ ಬೇಟೆಯಾಡಿದ ಸೇನೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರಾನ್‌ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಇಂದು ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವಿಗೀಡಾಗಿದ್ದಾರೆ. ಎನ್‌ಕೌಂಟರ್‌ ಕುರಿತು ಭಾರತೀಯ ಸೇನೆಯ ಚಿನಾರ್‌ ಕಾರ್ಪ್ಸ್‌ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಕೆರಾನ್‌ನಲ್ಲಿ ಒಳನುಸುಳುವಿಕೆ ಬಗ್ಗೆ ಗುಪ್ತಚರ ಮೂಲಗಳಿಂದ ಖಚಿತ ಮಾಹಿತಿ ಪಡೆದ ಸೇನೆ ʻಆಪರೇಷನ್ ಪಿಂಪಲ್ʼ ಹೆಸರಿನಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ಶುರು ಮಾಡಿದೆ ಎಂದು ತಿಳಿಸಿದೆ. ಕುಪ್ವಾರದ ಕೆರಾನ್‌ ಸೆಕ್ಟರ್‌ನಲ್ಲಿ ಭದ್ರತಾ

ಆಪರೇಷನ್‌ ಪಿಂಪಲ್‌ಗೆ ಇಬ್ಬರು ಉಗ್ರರು ಬಲಿ Read More »

error: Content is protected !!
Scroll to Top