ದೇಶದ ಬೆನ್ನೆಲುಬಾದ ರೈತರಿಗೆ ಬೆನ್ನೆಲುಬು ವಿಶ್ವಕರ್ಮರು | ಬೊಳುವಾರಿನಲ್ಲಿ ನಡೆದ ವಿಶ್ವಕರ್ಮ ಮಹೋತ್ಸವದಲ್ಲಿ ಶಿವಾನಂದ ಆಚಾರ್ಯ | ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ
ಪುತ್ತೂರು: ಜಾತಿ ವಿಂಗಡಣೆಯಲ್ಲಿ 1216 ಜಾತಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ದೇವರ ಹೆಸರಿನಿಂದ ಗುರುತಿಸುವ ಏಕೈಕ ಜಾತಿ ವಿಶ್ವಕರ್ಮ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ, ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ಹೇಳಿದರು. ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಭಾನುವಾರ ವಿಶ್ವಕರ್ಮ ಯುವ ಸಮಾಜ ಹಾಗೂ ವಿಶ್ವಬ್ರಾಹ್ಮಣ ಸೇವಾ ಸಂಘದ ಆಶ್ರಯದಲ್ಲಿ ವಿಶ್ವಕರ್ಮ ಪೂಜೆ ಹಿನ್ನೆಲೆಯಲ್ಲಿ ನಡೆದ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ದೇವಾನುದೇವತೆಗಳಿಗೆ ಆಯುಧಗಳನ್ನು ಸೃಷ್ಟಿಸಿಕೊಟ್ಟವ ವಿಶ್ವಕರ್ಮ. ದೇವರ […]










