ಕೊಂಡಾಟದ ಕೋಣಗಳಿಂದ ದೇವರಿಗೆ ನಮನ; ಕರೆಗಿಳಿದ ಕೋಣಗಳಿಗೆ ಕಂಬಳಾಭಿಮಾನಿಗಳ ಸ್ವಾಗತ | ಹೀಗೆ ನೀಡಲಾಯ್ತು ಪುತ್ತೂರು ಕಂಬಳಕ್ಕೆ ಚಾಲನೆ
ಪುತ್ತೂರು: ಐತಿಹಾಸಿಕ ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ದೇವರಮಾರು ಗದ್ದೆಯಲ್ಲಿ ನಿರ್ಮಿಸಲಾದ ಅಚ್ಚುಕಟ್ಟಿನ ಕೋಟಿ – ಚೆನ್ನಯ ಕರೆಯಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಎರಡು ದಿನದ ಹೊನಲು ಬೆಳಕಿನ ಕಂಬಳ ಉದ್ಘಾಟನೆಗೊಂಡಿತು. ಇನ್ನೊಂದೆಡೆ ಕಂಬಳಕ್ಕೆ ಆಗಮಿಸುತ್ತಿದ್ದ ಕೋಣಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ಮುಂಭಾಗಕ್ಕೆ ಕೊಂಡೊಯ್ದು, ದೇವರಿಗೆ ನಮಿಸಿ ಪ್ರಾರ್ಥನೆ ಸಲ್ಲಿಸುವ ದೃಶ್ಯ ಕಂಡುಬರುತ್ತಿದೆ. ಕೋಣಗಳು ಎರಡು ಮೊಣಕಾಲುಗಳನ್ನು ಊರಿ ದೇವರಿಗೆ ನಮಿಸುವುದನ್ನು ನೋಡುವುದೇ ಚಂದ. ಉದ್ಘಾಟನೆ ಬಳಿಕ ಕಂಬಳ […]










