ಧಾರ್ಮಿಕ

ಭಜನೆ ಇದ್ದಲ್ಲಿ ವಿಭಜನೆ ಇಲ್ಲ : ಸಂತೋಷ್ ಪಿ ಅಳಿಯೂರು | ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ 9ನೇ ವಾರ್ಷಿಕ ಮಹಾಸಭೆ

ಪುತ್ತೂರು: ಸಮರ್ಪಣಾಭಾವ, ಭಕ್ತಿ ಶ್ರದ್ಧೆಯಿಂದ ಮಾಡುವ ಭಗವಂತನ ಸ್ಮರಣೆ  ಭಗವಂತನಿಗೇ ತಲುಪುತ್ತದೆ. ಭಜನೆ, ನಾಮಾವಳಿಗಳಿಂದ ಮಾಡಿದ ಭಗವತ್ಸೇವೆ ನಾವು ಮಾಡಿದ ಕರ್ಮಗಳಿಂದ ಮುಕ್ತವಾಗಿಸುತ್ತದೆ ಎಂದು ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಂಚಾಲಕ ಸಂತೋಷ್ ಪಿ. ಅಳಿಯೂರು ಹೇಳಿದರು. ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ 9ನೇ ವಾರ್ಷಿಕ ಮಹಾಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಚಟುವಟಿಕೆಗಳಲ್ಲಿ ಪರಸ್ಪರ  ಕೈಜೋಡಿಸಿ ಮುಂದುವರಿದಾಗ ಸಂಘಟನೆ ಯಶಸ್ವಿಯಾಗಿ ಬೆಳೆಯುತ್ತದೆ.  ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳದ ಪರಮಪೂಜ್ಯ […]

ಭಜನೆ ಇದ್ದಲ್ಲಿ ವಿಭಜನೆ ಇಲ್ಲ : ಸಂತೋಷ್ ಪಿ ಅಳಿಯೂರು | ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ 9ನೇ ವಾರ್ಷಿಕ ಮಹಾಸಭೆ Read More »

ಅ.26-27 : ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ

ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಂಗಳೂರು ನೇತೃತ್ವದಲ್ಲಿ ಕುಳಾಯಿ ಚಿತ್ರಾಪುರ ಮನೆ ಸಹಯೋಗದೊಂದಿಗೆ ‘ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೋಟದ ಬೆಳಕಿ’ ಎಂಬ ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ ಅ.26 ಹಾಗೂ 27 ರಂದು ಮಂಗಳೂರು ಕುಳಾಯಿ ಚಿತ್ರಾಪುರ ಮಠದ ಆವರಣದಲ್ಲಿ ನಡೆಯಲಿದೆ ಎಂದು ಯಾಗ ಸಮಿತಿ ಉಪಾಧ್ಯಕ್ಷ, ನ್ಯಾಯವಾದಿ ಎನ್‍.ಕೆ.ಜಗನ್ಜಿವಾಸ ರಾವ್ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ.26 ರಂದು

ಅ.26-27 : ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ Read More »

ಕೇರ್ಪಡ ದಲ್ಲಿ ಹಿಂದೂ ಧಾರ್ಮಿಕ  ಶಿಕ್ಷಣ ಪ್ರಾರಂಭ

ಕಡಬ: ಕೇರ್ಪಡ ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರದ ವತಿಯಿಂದ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಧಾರ್ಮಿಕ ಶಿಕ್ಷಣ ತರಗತಿಯನ್ನು ಆರಂಭಿಸಲಾಯಿತು. ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ ಪ್ರಮುಖ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ  ಕೇಶವಪ್ರಸಾದ್ ಮುಳಿಯ ಹಾಗೂ ಮುರಳೀಕೃಷ್ಣ ಹಸಂತಡ್ಕ ಅವರ ಮಾರ್ಗದರ್ಶನದಲ್ಲಿ ಆರಂಭಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆಗೊಳಿಸಿ ಕಥೆ, ಭಜನೆ ಹಾಗೂ ವಿವಿಧ ಚಟುವಟಿಕೆಗಳ ಮೂಲಕ 100

ಕೇರ್ಪಡ ದಲ್ಲಿ ಹಿಂದೂ ಧಾರ್ಮಿಕ  ಶಿಕ್ಷಣ ಪ್ರಾರಂಭ Read More »

ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ –ಕುದ್ಮಾರಿನ ಆಡಳಿತ ಮಂಡಳಿ ಸಭೆ | ನೇಮೋತ್ಸವದ ಲೆಕ್ಕಪತ್ರದ ಮಂಡನೆ

ಸವಣೂರು: ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ –ಕುದ್ಮಾರಿನ ಆಡಳಿತ ಮಂಡಳಿ ಸಭೆಯು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾ.9, 2024 ರಂದು ನಡೆದ ನೇಮೋತ್ಸವದ ಖರ್ಚು ವೆಚ್ಚಗಳನ್ನು ಮಂಡನೆ ಮಾಡಲಾಯಿತು. ನೇಮೋತ್ಸವಕ್ಕೆ ಒಟ್ಟು 1,57,679 ರೂ. ಜಮೆಯಾಗಿದ್ದು, 1,38,609 ರೂ. ಖರ್ಚಾಗಿರುತ್ತದೆ. 19,070 ರೂ. ಉಳಿಕೆಯಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಸಭೆಯಲ್ಲಿ ಕಟ್ಟೆ ಹಾಗೂ ದೈವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ನೇಮೋತ್ಸವಕ್ಕೆ

ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ –ಕುದ್ಮಾರಿನ ಆಡಳಿತ ಮಂಡಳಿ ಸಭೆ | ನೇಮೋತ್ಸವದ ಲೆಕ್ಕಪತ್ರದ ಮಂಡನೆ Read More »

ಇತಿಹಾಸ ಪ್ರಸಿದ್ಧ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ | ಕರ್ನಾಟಕ-ಕೇರಳದ ಕಲಾತಂಡಗಳ ಆಕರ್ಷಣೀಯ ಪ್ರದರ್ಶನ.

ಪುತ್ತೂರು: ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ನಡೆಸಲಾಗುತ್ತಿರುವ 90 ನೇ ವರ್ಷದ ಶ್ರೀ ಶಾರದೋತ್ಸವದ ಅದ್ದೂರಿ ಶೋಭಾಯಾತ್ರೆಯು ಶನಿವಾರ ಸಂಜೆ ನಡೆಯಿತು.  ಶೋಭಾಯಾತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕೇರಳದ ಕೇರಳದ ಪಂದಳಾಟಮ್, ಸಿಂಗಾರಿ ಕಾವಡಿ, ಕಥಕ್ಕಳಿ, ಮಹಿಳಾ ಸಿಂಗಾರಿ ಮೇಳಮ್, ತಿರಾಯಾಟ್ಟಮ್, ಸಿಂಗಾರಿ ಮೇಳ ಕಲಾತಂಡಗಳು ಭಾಗವಹಿಸಿತ್ತು.  ಇದರೊಂದಿಗೆ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಕಡೆಗಳ ಕಲಾತಂಡ ಭಜನಾ ತಂಡಗಳು ಪಾಲ್ಗೊಂಡಿತ್ತು, , ಮಹಿಳೆಯರಿಂದ ವೇದಘೋಷ, ಚೆಂಡೆ ಮೇಳ, ವಾದ್ಯಘೋಷ,

ಇತಿಹಾಸ ಪ್ರಸಿದ್ಧ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ | ಕರ್ನಾಟಕ-ಕೇರಳದ ಕಲಾತಂಡಗಳ ಆಕರ್ಷಣೀಯ ಪ್ರದರ್ಶನ. Read More »

ಬೆಳ್ಳಾರೆ ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್‍, ಟ್ರಾನ್ಸ್ ಪೋರ್ಟ್ & ಬೋರ್ ವೆಲ್ಸ್ ಸಂಸ್ಥೆಯಿಂದ ಆಯುಧಪೂಜೆ

ಬೆಳ್ಳಾರೆ: ಜಲದುರ್ಗಾದೇವಿ ಪ್ರಸನ್ನ ಅರ್ಥ್‍ ಮೂವರ್ಸ್‍, ಟ್ವಾನ್ಸ್‍ ಪೋರ್ಟ್‍ & ಬೋರ್‍ ವೆಲ್ಸ್‍ ಸಂಸ್ಥೆಯ ವತಿಯಿಂದ ಆಯುಧಪೂಜೆ ಬೆಳ್ಳಾರೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ನಡೆಯಿತು. ಶ್ರೀ ದೇವಸ್ಥಾನದ ಅರ್ಚಕರು ಪೂಜಾ ವಿದಿವಿಧಾನಗಳನ್ನು ನೆರವೇರಿಸಿದರು. ಸಂಸ್ಥೆಯ ಜೆಸಿಬಿ, ಹಿಟಾಚಿ ಮುಂತಾದ ವಾಹನಗಳಿಗೆ ಪೂಜೆ ನಡೆಯಿತು.

ಬೆಳ್ಳಾರೆ ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್‍, ಟ್ರಾನ್ಸ್ ಪೋರ್ಟ್ & ಬೋರ್ ವೆಲ್ಸ್ ಸಂಸ್ಥೆಯಿಂದ ಆಯುಧಪೂಜೆ Read More »

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಆಯುಧಪೂಜೆ

ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಆಯುಧಪೂಜೆ ಶನಿವಾರ ಬೆಳಿಗ್ಗೆ ನಡೆಯಿತು. ದೇವಾಲಯದ ಅರ್ಚಕರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಸ್ಥಳೀಯ ಹಲವಾರು ಭಕ್ತಾದಿಗಳು ತಮ್ಮ ವಾಹನಗಳನ್ನು ಸಿಂಗರಿಸಿ ಪೂಜೆ ಮಾಡಿಸಿದರು.

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಆಯುಧಪೂಜೆ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ ನಲ್ಲಿ ಶ್ರೀ ಶಾರದಾ ಪೂಜೆ, ವಾಹನ ಪೂಜೆ

ಪುತ್ತೂರು: ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಇಂದು ಶ್ರೀ ಶಾರದಾ ಪೂಜೆ ಹಾಗೂ ಆಯುಧ ಪೂಜೆಗಳೊಂದಿಗೆ ವಾಹನ ಪೂಜೆ ಹಾಗೂ ವೈದಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು. ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿ ಶಾರದಾ ಪೂಜೆ ಹಾಗೂ ಆಯುಧ ಪೂಜೆಗಳ ಮಹತ್ವಗಳನ್ನೂ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಎ.ವಿ. ನಾರಾಯಣರವರು ಎವಿಜಿ ಅಸೋಸಿಯೇಟ್ಸ್’ನ ಹಿರಿಯ ಕಾರ್ಮಿಕರ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ ನಲ್ಲಿ ಶ್ರೀ ಶಾರದಾ ಪೂಜೆ, ವಾಹನ ಪೂಜೆ Read More »

ಅ.12 : ಸವಣೂರಿನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ 

ಸವಣೂರು : ಶ್ರೀ ಶಾರದಾಂಬಾ ಸೇವಾ ಸಂಘದ ವತಿಯಿಂದ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ.12 ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಅ.12ರಂದು ಬೆಳಿಗ್ಗೆ ಉದಯ ಕುಮಾರ್ ಸರ್ವೆ ಅವರು ಧ್ವಜಾರೋಹಣ ನೆರವೇರಿಸುವರು. ಬಳಿಕ ಶ್ರೀ ದೇವಿಯ ಪ್ರತಿಷ್ಟೆ, ಗಣ ಹೋಮ, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಎಸ್.

ಅ.12 : ಸವಣೂರಿನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ  Read More »

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಶ್ರೀ ಶಾರದಾ ಪೂಜೆ | ಅಕ್ಷರವನ್ನು ಆರಾಧಿಸುವ ಪರಂಪರೆ ನಮ್ಮದೆಂಬುದು ಹೆಮ್ಮೆ : ರಾಕೇಶ ಕಮ್ಮಜೆ

ಪುತ್ತೂರು: ಯಾರೂ ಅಕ್ಷರದ್ವೇಷಿಗಳಾಗಬಾರದು. ಅಕ್ಷರವನ್ನು ಪ್ರೀತಿಸುತ್ತಾ ಸಾಗಿದಂತೆ ನಮ್ಮ ಜ್ಞಾನ ವೃದ್ಧಿಯಾಗುತ್ತಾ ಹೋಗುತ್ತದೆ. ಅಕ್ಷರವನ್ನು ಗೌರವಿಸುವ, ಆರಾಧಿಸುವ ಪರಂಪರೆಗೆ ನಾವು ಸೇರಿದ್ದೇವೆ ಎಂಬ ಹೆಮ್ಮೆ ನಮ್ಮಲ್ಲಿರಬೇಕು. ಅಕ್ಷರ ಸರಸ್ವತಿಯ ವರಪುತ್ರ-ಪುತ್ರಿಯರಾಗಿ ನಾವು ಹೊರಹೊಮ್ಮಬೇಕು. ಆಗ ಸುಜ್ಞಾನ ನಮ್ಮದಾಗುತ್ತದೆ ಎಂದು ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಹೇಳಿದರು. ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಶ್ರೀ ಶಾರದಾ ಪೂಜೆಯ ಪ್ರಯುಕ್ತ ಆಯೋಜಿಸಲಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುಸ್ತಕಗಳನ್ನು ಓದುವುದು ಕೂಡ

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಶ್ರೀ ಶಾರದಾ ಪೂಜೆ | ಅಕ್ಷರವನ್ನು ಆರಾಧಿಸುವ ಪರಂಪರೆ ನಮ್ಮದೆಂಬುದು ಹೆಮ್ಮೆ : ರಾಕೇಶ ಕಮ್ಮಜೆ Read More »

error: Content is protected !!
Scroll to Top