ಪುತ್ತೂರು

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರಾಶಾಹಿಯಾದ ಅಶ್ವತ್ಥ ಮರ ತೆರವು

ಧಾರ್ಮಿಕ ವಿಧಿವಿಧಾನ ನೆರವೇರಿಸಿ ಅಶ್ವತ್ಥ ಮರ ಪೂರ್ಣ ತೆರವು ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಪುಷ್ಕರಿಣಿ ಬಳಿಯಿರುವ ಅಶ್ವತ್ಥ ಮರದ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಸುಮಾರು 100 ವರ್ಷ ಮೇಲ್ಪಟ್ಟ ಅಶ್ವತ್ಥ ಮರ ಇದಾಗಿದ್ದು, ಧಾರ್ಮಿಕ ಮಹತ್ವ ಹೊಂದಿತ್ತು. ಪ್ರತಿದಿನ ನೂರಾರು ಮಂದಿ ಭಕ್ತರು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುವ ದೃಶ್ಯ ಕಂಡುಬರುತ್ತಿತ್ತು. ಮಹಾಲಿಂಗೇಶ್ವರ ದೇವರ ಜಾತ್ರೆಯ ನಂತರ ಈ ಅಶ್ವತ್ಥ ಮರದ ಇನ್ನೊಂದು ಭಾಗದಲ್ಲಿ ಕ್ಷೇತ್ರದ ಕಾರಣಿಕ ದೈವ ಅಂಙಣತ್ತಾಯ ಸ್ವಾಮಿಯ ನೇಮ […]

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರಾಶಾಹಿಯಾದ ಅಶ್ವತ್ಥ ಮರ ತೆರವು Read More »

ಅಂಬಿಕಾ ಮಹಾವಿದ್ಯಾಲಯದ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷರಾಗಿ ಆನಂದ ಭಟ್ ಬಂಟ್ವಾಳ, ಕಾರ್ಯದರ್ಶಿಯಾಗಿ ಚಂದ್ರಕಾ0ತ ಗೋರೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಪುತ್ತೂರಿನ ದರ್ಭೆ ಸಮೀಪದ ಹನುಮಾನ್‌ವಾಡಿಯ ‘ಪುಷ್ಪಾಂಜಲಿ’ ನಿವಾಸಿ, ಕಾಮಾಕ್ಷಿ ಎಂಟರ್‌ಪ್ರೆಝಸ್ ಸಂಸ್ಥೆಯ ಮಾಲಕ ಆನಂದ ಭಟ್ ಬಂಟ್ವಾಳ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ ವಿಭಾಗದ ಮುಖ್ಯಸ್ಥ ಚಂದ್ರಕಾ0ತ ಗೋರೆ ಜವಾಬ್ದಾರಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್

ಅಂಬಿಕಾ ಮಹಾವಿದ್ಯಾಲಯದ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷರಾಗಿ ಆನಂದ ಭಟ್ ಬಂಟ್ವಾಳ, ಕಾರ್ಯದರ್ಶಿಯಾಗಿ ಚಂದ್ರಕಾ0ತ ಗೋರೆ Read More »

ಶಾಂತಿಗೋಡು: ರಂಗಮಂದಿರ ಮತ್ತು ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು:ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಯಲು ರಂಗಮಂದಿರ ಮತ್ತು ನೂತನ ಕೊಠಡಿ, ಹಾಗೂ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ  ನಡೆಯಿತು. ಈ ಸಂರ್ಭದಲ್ಲಿ ಪ್ರಭಾರ ಮುಖ್ಯ ಗುರುಗಳು ಸವಿತಾ ಕುಮಾರಿ,ಎಸ್. ಡಿ. ಎಮ್. ಸಿ ಅಧ್ಯಕ್ಷೆ ಸುಮಾವತಿ, ಉಪಾಧ್ಯಕ್ಷ ದಾಮೋದರ  ಕರ್ಪುತಮೂಳೆ,  ವಾರ್ಷಿಕೋತ್ಸವದ ಸಮಿತಿ ಅಧ್ಯಕ್ಷ ದೇವಪ್ಪ ಓಲಾಡಿ,  ಪುಷ್ಪ ಯೋಗೀಶ್ ಪುಂಡಿಕಾಯಿ,ಗ್ರಾಮ ವಿಕಾಸ ಕಾರ್ಯದರ್ಶಿ ವಿನೋದ್ ಕರ್ಪುತಮೂಳೆ,ಪ್ರಸಾದ್ ಕಕ್ವೆ, ಸುದರ್ಶನ್ ಓಲಾಡಿ ,ಕೊರಗಪ್ಪ ಕುಕ್ಯನ,

ಶಾಂತಿಗೋಡು: ರಂಗಮಂದಿರ ಮತ್ತು ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ರಾಜರು ಮಾಡುತ್ತಿದ್ದ ಧರ್ಮದ ಕಾರ್ಯ ಇಂದು ಪ್ರಜೆಗಳಿಂದ ನೆರವೇರುತ್ತಿದೆ | ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶದ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದಿದ್ದೇವೆ. ಆದ್ದರಿಂದ ಅಂದು ರಾಜರು ಮಾಡುತ್ತಿದ್ದ ದೇವಸ್ಥಾನದ ಕೆಲಸವನ್ನು, ಇಂದು ಪ್ರಜೆಗಳೇ ಮಾಡುತ್ತಿದ್ದಾರೆ. ಈ ಮೂಲಕ ದೇವರ ಭಕ್ತಿ, ಧರ್ಮದ ಶ್ರದ್ಧೆ, ಜನರ ಸಮರ್ಪಣೆಯನ್ನು ಕಾಣಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಬೆಳಂದೂರು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜರ ಕಾಲದ ಶಿಲ್ಪಕಲೆ, ಅವರ ಶ್ರದ್ಧೆಯನ್ನು ಇಂದು ನಾವು ಮತ್ತೊಮ್ಮೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲೂ ಸರ್ವಧರ್ಮೀಯರು

ರಾಜರು ಮಾಡುತ್ತಿದ್ದ ಧರ್ಮದ ಕಾರ್ಯ ಇಂದು ಪ್ರಜೆಗಳಿಂದ ನೆರವೇರುತ್ತಿದೆ | ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶದ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು Read More »

ಸಂತಫಿಲೋಮಿನಾ ಕಾಲೇಜಿನ ವಾರ್ಷಿಕ ಸಂಚಿಕೆ “ಫಿಲೋಪ್ರಭಾ” ಬಿಡುಗಡೆ

ಪುತ್ತೂರು:ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕ ಸಂಚಿಕೆಯಾದ ʼಫಿಲೋಪ್ರಭಾʼ ವನ್ನು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿಪ್ರಕಾಶ್‌ ಮೊಂತೆರೋರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು“ವಿದ್ಯಾರ್ಥಿಗಳಲ್ಲಿ ಬರೆಯುವ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ಮತ್ತು ಸೃಜನ ಶೀಲತೆಯನ್ನು ಹೆಚ್ಚಿಸಲು ಕಾಲೇಜಿನ ವಾರ್ಷಿಕ ಸಂಚಿಕೆ ಬಹಳ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಮಗಿಷ್ಟವಿರುವ ಭಾಷೆಯಲ್ಲಿ ಈ ಸಂಚಿಕೆಯಲ್ಲಿ ವ್ಯಕ್ತಪಡಿಸಿರುತ್ತಾರೆ. ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡಿ ಅವರು ಉತ್ತಮ ಕಥೆ, ಕವನ, ಅನಿಸಿಕೆ ಮುಂತಾದವುಗಳನ್ನು ಬರೆಯುವಲ್ಲಿ ಮಾರ್ಗದರ್ಶನ ನೀಡಿದ ಫಿಲೋಪ್ರಭಾ ಸಂಚಿಕೆಯ ಸಂಪಾದಕ ಮಂಡಳಿಯ ಶ್ರಮ

ಸಂತಫಿಲೋಮಿನಾ ಕಾಲೇಜಿನ ವಾರ್ಷಿಕ ಸಂಚಿಕೆ “ಫಿಲೋಪ್ರಭಾ” ಬಿಡುಗಡೆ Read More »

ಯುವ ವಕೀಲ ತ್ವಾಹ ಖಲೀಲ್ ಕೆ.ಎ. ನ್ಯಾಯಾದೀಶರಾಗಿ ಆಯ್ಕೆ

ಪುತ್ತೂರು: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ವಕೀಲ ತ್ವಾಹ ಖಲೀಲ್ ಕೆ.ಎ. ಅವರು ಉತ್ತೀರ್ಣರಾಗಿದ್ದು ನ್ಯಾಯಾದೀಶರಾಗಿ ಆಯ್ಕೆಯಾಗಿದ್ದಾರೆ. ತ್ವಾಹ ಖಲೀಲ್ ಪುತ್ತೂರಿನವರಾಗಿದ್ದು ಬೆಂಗಳೂರಿನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. 40 ಮಂದಿ ಆಯ್ಕೆಯಾದ ನ್ಯಾಯಾದೀಶರ ಪಟ್ಟಿಯನ್ನು ಹೈಕೋರ್ಟ್ ಬಿಡುಗಡೆ ಮಾಡಿದ್ದು, ಮಂಗಳೂರು ಮೂಲದ ನ್ಯಾಯವಾದಿ ರಾಹುಲ್ ಶೆಟ್ಟಿಗಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಯುವ ವಕೀಲ ತ್ವಾಹ ಖಲೀಲ್ ಕೆ.ಎ. ನ್ಯಾಯಾದೀಶರಾಗಿ ಆಯ್ಕೆ Read More »

ಸಮುದಾಯ ಹಿಂದೂ ಸಮಾಜದ ರೆಂಬೆ | ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಗೆ ಚಪ್ಪರ ಮುಹೂರ್ತ ನೆರವೇರಿಸಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಪುತ್ತೂರು: ಸಮುದಾಯದ ಸಂಸ್ಕೃತಿ, ಸಂಸ್ಕಾರಗಳು ತನ್ನ ಚೌಕಟ್ಟಿನಲ್ಲಿ ಮುಂದುವರಿದಾಗ, ಹಿಂದೂ ಸಮಾಜ ಬಲಿಷ್ಠವಾಗಿ ಮುಂದುವರಿಯಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದೂ ಸಮಾಜ ಎನ್ನುವುದು ಒಂದು ವೃಕ್ಷ. ಸಮುದಾಯಗಳು ಅದರ ರೆಂಬೆಗಳಿದ್ದAತೆ.

ಸಮುದಾಯ ಹಿಂದೂ ಸಮಾಜದ ರೆಂಬೆ | ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಗೆ ಚಪ್ಪರ ಮುಹೂರ್ತ ನೆರವೇರಿಸಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ: ಕಾರ್ಯಾಲಯ ಉದ್ಘಾಟನೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ಸಭಾಭವನ ಕಟ್ಟಡದಲ್ಲಿ ಜ. ೧೫ರಂದು ಕಾರ್ಯಾಲಯ ಉದ್ಘಾಟನೆಗೊಂಡಿತು. ಆದಿಚುಂಚನಗಿರಿ ಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಕಾರ್ಯಾಲಯ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜಯಂತ್ಯೋತ್ಸವ ಸಂಸ್ಮರಣಾ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ: ಕಾರ್ಯಾಲಯ ಉದ್ಘಾಟನೆ Read More »

ಅಗಳಿ ಬ್ರಹ್ಮಕಲಶೋತ್ಸವ : ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ

ಪುತ್ತೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜ. 14ರಂದು ಬೆಳಿಗ್ಗೆ 5ಕ್ಕೆ ಧನು ಪೂಜೆ, ಬಳಿಕ ಶ್ರೀ ಗಣಪತಿ ಹೋಮ, ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ, ತತ್ವ ಕಲಶಾಭಿಷೇಕ ಜರಗಿತು.ಬೆಳಂದೂರು ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ,ಬಿ.ಸಿ ಟ್ರಸ್ಟ್, ಅಬೀರ ಕೊಡಿಮಾರು ಗೆಳೆಯರ ಬಳಗದಿಂದ ಭಜನೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಮಧಾಹ್ನ ಸವಣೂರು ಶ್ರವಣ ರಂಗ ಪ್ರತಿಷ್ಠಾನದಿಂದ ಯಕ್ಷಗಾನ ತಾಳಮದ್ದಳೆ, ಭಕ್ತಕೋಡಿ

ಅಗಳಿ ಬ್ರಹ್ಮಕಲಶೋತ್ಸವ : ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ Read More »

ವಿವೇಕಾನಂದ ಜಯಂತಿ, ಯುವ ಸಪ್ತಾಹ, ತಾಲೂಕು ಯುವ ಮಂಡಲ ಪ್ರಶಸ್ತಿ ಪ್ರದಾನ

ಪುತ್ತೂರು: ತಾಲೂಕು ಪಂಚಾಯತ್ ಪುತ್ತೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ, ಯುವ ಸಪ್ತಾಹ, ವಿವೇಕ ರಥ-ಯುವ ಪಥ ಹಾಗೂ ತಾಲೂಕು ಯುವ ಮಂಡಲ ಪ್ರಶಸ್ತಿ ಪ್ರದಾನ ಸಮಾರಂಭವು ಜ. 14ರಂದು ನೆಹರು ನಗರದ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು ವಿಷ್ಣು ಯುವಕ ಮಂಡಲ ಮಜ್ಜಾರಡ್ಕ, ವಿಕ್ರಂ ಯುವಕ ಮಂಡಲ ಶಾಂತಿಗೋಡು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ನವೋದಯ ಮಹಿಳಾ ಮಂಡಲ ಬನ್ನೂರು, ಸ್ಪೂರ್ತಿ

ವಿವೇಕಾನಂದ ಜಯಂತಿ, ಯುವ ಸಪ್ತಾಹ, ತಾಲೂಕು ಯುವ ಮಂಡಲ ಪ್ರಶಸ್ತಿ ಪ್ರದಾನ Read More »

error: Content is protected !!
Scroll to Top