ವಿದೇಶ

ಲೆಬನಾನ್‌ : 5 ತಿಂಗಳ ಹಿಂದೆ ತರಿಸಿದ ಪೇಜರ್‌ ಸ್ಫೋಟಿಸಿ 9 ಮಂದಿ ಸಾವು, 2,750 ಮಂದಿಗೆ ಗಾಯ

ಪುಟಾಣಿ ಪೇಜರ್‌ ಒಳಗೆ ಇಸ್ರೇಲ್‌ ತೆಳುವಾದ ಸ್ಫೋಟಕ ಅಳವಡಿಸಿದ ಅನುಮಾನ ಬೈರುತ್: ಲೆಬನಾನ್‌ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಸಂಘಟನೆ ಸದಸ್ಯರ ಮೇಲೆ ರಹಸ್ಯ ದಾಳಿ ನಡೆದಿದೆ. ಉಗ್ರರು ಸಂವಹನಕ್ಕಾಗಿ ಬಳಸುತ್ತಿದ್ದ ಅಂಗೈಯೊಳಗಿರುವ ಪೇಜರ್‌ ಸಾಧನವೇ ಸ್ಫೋಟಗೊಂಡು ಕನಿಷ್ಠ 9 ಮಂದಿ ಸಾವನ್ನಪ್ಪಿ 2,750ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದು ಇಸ್ರೇಲ್‌ನ ಬೇಹುಪಡೆ ಮೊಸಾದ್‌ ನಡೆಸಿದ ಕೃತ್ಯ ಎಂಬ ಬಲವಾದ ಸಂಶಯವಿದೆ. ಹಿಜ್ಬುಲ್ಲಾ ಉಗ್ರರು ಸಂವಹನಕ್ಕಾಗಿ ಬಳಸುವ ಪುಟಾಣಿ ಪೇಜರ್‌ ಉಪಕರಣಗಳಲ್ಲಿ ಮೊಸಾದ್‌ ಐದು ತಿಂಗಳ ಹಿಂದೆಯೇ ಸ್ಫೋಟಕವನ್ನು […]

ಲೆಬನಾನ್‌ : 5 ತಿಂಗಳ ಹಿಂದೆ ತರಿಸಿದ ಪೇಜರ್‌ ಸ್ಫೋಟಿಸಿ 9 ಮಂದಿ ಸಾವು, 2,750 ಮಂದಿಗೆ ಗಾಯ Read More »

ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಇನ್ನೊಂದು ಪ್ರಯತ್ನ

ಗಾಲ್ಫ್‌ ಆಡುತ್ತಿರುವಾಗ ಗುಂಡು ಹಾರಿಸಿದ ಬಂದೂಕುದಾರಿ ವಾಷಿಂಗ್ಟನ್‌ : ಅಮೆರಿಕದ ಮಾಜಿ ಅಧ್ಯಕ್ಷ, ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಾಯಿಸಲು ಇನ್ನೊಂದು ಪ್ರಯತ್ನ ನಡೆದಿದೆ. ಫ್ಲೋರಿಡಾದ ಗಾಲ್ಫ್‌ ಕ್ಲಬ್‌ನಲ್ಲಿ ಟ್ರಂಪ್‌ ಇರುವ ಸ್ಥಳದಲ್ಲಿ ಗುಂಡು ಹಾರಾಟ ನಡೆಸಲಾಗಿದೆ. ಆದರೆ ಈ ಹತ್ಯಾ ಯತ್ನದಿಂದ ಟ್ರಂಪ್‌ ಸ್ವಲ್ಪದರಲ್ಲೇ ಪಾರಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಮೆರಿಕದ ಗೂಢಚಾರಿಕೆ ಸಂಸ್ಥೆ ಎಫ್‌ಬಿಐ ಹೇಳಿಕೆ ಬಿಡುಗಡೆ ಮಾಡಿದೆ.ಗಾಲ್ಫ್‌ ಕ್ಲಬ್‌ ಬಳಿ ವ್ಯಕ್ತಿಯೊಬ್ಬ ಬಂದೂಕು ಜೊತೆ ಬಂದು

ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಇನ್ನೊಂದು ಪ್ರಯತ್ನ Read More »

ಹಿಜಾಬ್‌ ಧರಿಸದ ಮಹಿಳೆಯರನ್ನು ನಡುರಸ್ತೆಯಲ್ಲಿ ಥಳಿಸಿದ ಗುಂಪು

ಢಾಕಾ: ಬಾಂಗ್ಲಾದೇಶದಲ್ಲಿ ಹಿಜಾಬ್​ ಧರಿಸಿಲ್ಲ ಎಂದು ನಡುರಸ್ತೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಸಿದ್ಧ ಕಾಕ್ಸ್​ ಬಜಾರ್​ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದ್ದು, ಬಾಂಗ್ಲಾದೇಶ ಇನ್ನೊಂದು ಅಫಘಾನಿಸ್ಥಾನವಾಗುತ್ತಿದೆ ಎಂದು ಆತಂಕ ವ್ಯಕ್ತವಾಗಿದೆ.ಹಿಜಾಬ್‌ ಧರಿಸದ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪುರುಷರ ಗುಂಪೊಂದು ದಾಳಿ ನಡೆಸುತ್ತಿರುವುದು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡ ವಿಡಿಯೋಗಳಲ್ಲಿ ಕಾಣಿಸುತ್ತಿದೆ. ಓರ್ವ ಮಹಿಳೆಯನ್ನು ದೊಣ್ಣೆಯಿಂದ ಥಳಿಸಲಾಗಿದ್ದು, ಮತ್ತೋವ್ರ ಮಹಿಳೆಗೆ ಸಿಟ್​-ಅಪ್ ಶಿಕ್ಷೆ

ಹಿಜಾಬ್‌ ಧರಿಸದ ಮಹಿಳೆಯರನ್ನು ನಡುರಸ್ತೆಯಲ್ಲಿ ಥಳಿಸಿದ ಗುಂಪು Read More »

ಪೊಲೀಸ್‌ ಠಾಣೆಯೊಳಗೆ ನುಗ್ಗಿ ಹಿಂದೂ ಬಾಲಕನ ಮೇಲೆ ಬರ್ಬರ ಹಲ್ಲೆ

ಢಾಕ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಪೊಲೀಸ್​ ಠಾಣೆಯೊಳಗೆ ನುಗ್ಗಿ ಮುಸ್ಲಿಂ ಗುಂಪು ಹಿಂದೂ ಹುಡುಗನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಬಾಂಗ್ಲಾದೇಶದ 15 ವರ್ಷದ ಹಿಂದೂ ಬಾಲಕ ಉತ್ಸವ್ ಮಂಡಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಿ ಗುಂಪು ಪೊಲೀಸ್​ ಠಾಣೆಯೊಳಗೆ ನುಗ್ಗಿ ಅಮಾನುಷವಾಗಿ ಥಳಿಸಿದೆ. ಖುಲ್ನಾದ ಸೋನದಂಗ ವಸತಿ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಉತ್ಸವ್‌ಗೆ

ಪೊಲೀಸ್‌ ಠಾಣೆಯೊಳಗೆ ನುಗ್ಗಿ ಹಿಂದೂ ಬಾಲಕನ ಮೇಲೆ ಬರ್ಬರ ಹಲ್ಲೆ Read More »

ಪ್ರವಾಹ ತಡೆಯಲು ವಿಫಲರಾದ 30 ಅಧಿಕಾರಿಗಳನ್ನು ಗಲ್ಲಿಗೇರಿಸಲು ಆದೇಶ

ಕಿಮ್ ಜೊಂಗ್ ಉನ್ ಆಡಳಿತದಲ್ಲಿ ಕರ್ತವ್ಯಲೋಪ ಮಾಡಿದರೆ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಕೊರಿಯಾ: ಕಳೆದ ಜುಲೈನಲ್ಲಿ ಉತ್ತರ ಕೊರಿಯಾದಲ್ಲಿ ಉಂಟಾಗಿದ್ದ ಭೀಕರ ಪ್ರವಾಹವನ್ನು ತಡೆಯಲು ವಿಫಲರಾದ ಆರೋಪ ಹೊರಿಸಿ 30 ಸರಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲು ಅಲ್ಲಿನ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಆದೇಶಿಸಿದ್ದಾರೆ.ಜುಲೈನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 4000ಕ್ಕೂ ಅಧಿಕ ಜನ ಸಾವಿಗೀಡಾಗಿದ್ದರು. ಇದಕ್ಕೆ ಅಧಿಕಾರಿಗಳ ಕರ್ತವ್ಯಲೋಪ ಕಾರಣ ಎಂದು ಹೇಳಿರುವ ಕಿಮ್ ಜೊಂಗ್ ಉನ್ 30 ಅಧಿಕಾರಿಗಳನ್ನು ಹೊಣೆ ಮಾಡಿ ಅವರನ್ನು ಸಾಯಿಸಲು ಆದೇಶಿಸಿದ್ದಾರೆ ಎಂದು ಉತ್ತರ

ಪ್ರವಾಹ ತಡೆಯಲು ವಿಫಲರಾದ 30 ಅಧಿಕಾರಿಗಳನ್ನು ಗಲ್ಲಿಗೇರಿಸಲು ಆದೇಶ Read More »

14ರ ಬಾಲಕ ಹಾರಿಸಿದ ಗುಂಡಿಗೆ ಇಬ್ಬರು ಶಿಕ್ಷಕರ ಸಹಿತ 4 ಮಂದಿ ಬಲಿ

ವಾಷಿಂಗ್ಟನ್‌: ಅಮೆರಿಕದ ಜಾರ್ಜಿಯಾ ರಾಜ್ಯದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ.ಬಂದೂಕುಧಾರಿ ಬಾಲಕ ಬಂಧನದಲ್ಲಿದ್ದಾನೆ. ಜಾರ್ಜಿಯಾದ ವಿಂಡರ್‌ನಲ್ಲಿರುವ ಅಪಾಲಾಚಿ ಹೈಸ್ಕೂಲ್‌ನ ಕೋಲ್ಟ್ ಕ್ರೇ (14) ಎಂಬ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿದಾತ ಎಂದು ಗುರುತಿಸಲಾಗಿದೆ.ಪೊಲೀಸರು ಗುಂಡಿನ ದಾಳಿ ಮತ್ತು ಅದರ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ವರ್ಷ ಅಮೆರಿಕದಲ್ಲಿ ಕನಿಷ್ಠ 385 ಗುಂಡಿನ ದಾಳಿ ಪ್ರಕರಣಗಳು ಸಂಭವಿಸಿವೆ.

14ರ ಬಾಲಕ ಹಾರಿಸಿದ ಗುಂಡಿಗೆ ಇಬ್ಬರು ಶಿಕ್ಷಕರ ಸಹಿತ 4 ಮಂದಿ ಬಲಿ Read More »

ಉದ್ಘಾಟನೆಯಾದ ದಿನವೇ ಲೂಟಿಯಾಗಿ ಹೋಯಿತು ಮಾಲ್‌

ಮಾಲ್‌ಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಹೋದ ಪಾಕಿಸ್ಥಾನದ ಜನ ಕರಾಚಿ : ಪಾಕಿಸ್ಥಾನದ ಆರ್ಥಿಕ ಸ್ಥಿತಿ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಶುಕ್ರವಾರ ಅಲ್ಲಿನ ಮಾಲ್‌ನಲ್ಲಿ ನಡೆದ ಘಟನೆಯೇ ಸಾಕ್ಷಿ. ಮೂಲತಃ ಪಾಕಿಸ್ಥಾನೀಯರೇ ಆದ ವಿದೇಶಿ ಉದ್ಯಮಿಯೊಬ್ಬರು ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿ ಡ್ರೀಮ್‌ ಬಜಾರ್‌ ಎಂಬ ಅದ್ದೂರಿ ಮಾಲ್‌ ತೆರೆದಿದ್ದರು. ಶುಕ್ರವಾರ ಈ ಮಾಲ್‌ ಉದ್ಘಾಟನೆಗೊಂಡಿದ್ದು, ಮಾಲ್‌ಗೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕೆಲವೊಂದು ವಸ್ತುಗಳ ಮೇಲೆ ರಿಯಾಯಿತಿಯನ್ನು ಘೋಷಿಸಲಾಗಿತ್ತು. ಆದರೆ ನಂತರ ಆದ ಕಥೆಯೇ ಬೇರೆ. ಮಾಲ್‌ಗೆ ಸಾಗರೋಪಾದಿಯಲ್ಲಿ

ಉದ್ಘಾಟನೆಯಾದ ದಿನವೇ ಲೂಟಿಯಾಗಿ ಹೋಯಿತು ಮಾಲ್‌ Read More »

ಜನರಿಗೆ ಮಾಂಸ ಹಂಚಲು 83 ಆನೆಗಳ ಹತ್ಯೆ!

ಬರಗಾಲದಿಂದ ಕಂಗೆಟ್ಟಿರುವ ದೇಶದಲ್ಲಿ ಆಹಾರಕ್ಕಾಗಿ ಸರಕಾರದಿಂದಲೇ ಕಾಡುಪ್ರಾಣಿಗಳ ವಧೆ ವಿಂಡ್ಹೋಕ್: ಜಗತ್ತಿನಾದ್ಯಂತ ಕಾಡುಪ್ರಾಣಿಗಳನ್ನು ರಕ್ಷಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಯುತ್ತಿವೆ. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಕಾಡುಪ್ರಾಣಿಗಳ ಹತ್ಯೆಗೆ ಕಠಿಣ ಶಿಕ್ಷೆಯಿದೆ. ಅದರೆ ನಮೀಬಿಯಾ ಎಂಬ ಆಫ್ರಿಕಾದ ದೇಶದಲ್ಲಿ ಸರ್ಕಾರವೇ ಕಾಡುಪ್ರಾಣಿಗಳನ್ನು ಕೊಲ್ಲಲು ಆದೇಶಿಸಿದೆ. ಬರದಿಂದ ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸಲು 83 ಆನೆಗಳು ಸಹಿತ 723 ಕಾಡುಪ್ರಾಣಿಗಳನ್ನು ಕೊಲ್ಲುವ ಯೋಜನೆ ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸ ವಿತರಿಸುವುದಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಜನರಿಗೆ ಮಾಂಸ ಹಂಚಲು 83 ಆನೆಗಳ ಹತ್ಯೆ! Read More »

5.35 ತಾಸು ನಡೆದ ಪಂದ್ಯ : ಟೆನಿಸ್‌ನಲ್ಲಿ ನೂತನ ದಾಖಲೆ ಸೃಷ್ಟಿ

ನ್ಯೂಯಾರ್ಕ್‌ : ಅವರಿಬ್ಬರು ಆಡಿದ್ದು ಬರೋಬ್ಬರಿ 5 ತಾಸು 35 ನಿಮಿಷ. ಪಂದ್ಯ ನೋಡುತ್ತಿದ್ದ ಪ್ರೇಕ್ಷಕರಿಗೆ ಟೆನಿಸ್‌ನ ಅಷ್ಟೂ ರೋಮಾಂಚನಗಳು ಈ ಐದೂವರೆ ತಾಸಿನಲ್ಲಿ ದೊರಕಿದೆ. ಒಂದು ಟಿ20 ಕ್ರಿಕೆಟ್‌ ಪಂದ್ಯಕ್ಕೂ ಹೆಚ್ಚು ಹೊತ್ತು ಇವರಿಬ್ಬರೇ ಆಡಿದ್ದಾರೆ.ಇದು ಟೆನಿಸ್‌ ಆಟದ ಇತಿಹಾಸದಲ್ಲೇ ಒಂದು ವಿನೂತನ ದಾಖಲೆ. ನಿನ್ನೆ ನಡೆದ ಯುಎಸ್‌ ಓಪನ್‌ ಟೂರ್ನಿಯಲ್ಲಿ ಈ ದಾಖಲೆ ಸೃಷ್ಟಿಯಾಗಿದೆ. ಬ್ರಿಟನ್‌ನ ಡ್ಯಾನ್‌ ಎವನ್ಸ್‌ ಮತ್ತು ರಷ್ಯಾದ ಕರೆನ್‌ ಕಶನೋವ್‌ ನಡುವೆ ನಡೆದ ಈ ಆಟ ಯುಎಸ್‌ ಓಪನ್‌ ಟೆನಿಸ್‌ನ

5.35 ತಾಸು ನಡೆದ ಪಂದ್ಯ : ಟೆನಿಸ್‌ನಲ್ಲಿ ನೂತನ ದಾಖಲೆ ಸೃಷ್ಟಿ Read More »

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ : ನೂರಾರು ಮಂದಿಗೆ ಗಾಯ

ಢಾಕಾ: ಆಂತರಿಕ ದಂಗೆಯಿಂದ ತತ್ತರಿಸಿರುವ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಯಾಯಿತು ಎನ್ನುವಷ್ಟರಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದೆ. ರಾಜಧಾನಿ ಢಾಕಾದಲ್ಲಿ ನಿನ್ನೆ ರಾತ್ರಿಯಿಂದೀಚೆಗೆ ಹಿಂಸಾಚಾರ ನಡೆಯುತ್ತಿದ್ದು, ಸುಮಾರು 100 ಮಂದಿ ಗಾಯಗೊಂಡಿದ್ದಾರೆ. ಢಾಕಾದಲ್ಲಿರುವ ಆಡಳಿತ ಸೌಧ ಸೆಕ್ರೆಟರಿಯೇಟ್ ಬಳಿ ಭಾನುವಾರ ರಾತ್ರಿ ವಿದ್ಯಾರ್ಥಿಗಳು ಮತ್ತು ಅನ್ಸಾರ್ ಸದಸ್ಯರ ನಡುವೆ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿವೆ. ರಾತ್ರಿ ಘರ್ಷಣೆ ಆರಂಭವಾಗಿದ್ದು, ಎರಡೂ ಕಡೆಯಲ್ಲಿ ಪ್ರತಿಭಟನೆಕಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅನ್ಸಾರ್‌ ಸದಸ್ಯರು ನಿರಂಕುಶ ಪ್ರಭುತ್ವದ ಏಜೆಂಟ್‌ಗಳು ಎಂದು ವಿದ್ಯಾರ್ಥಿಗಳು ಕರೆದಿದ್ದಾರೆ. ಬಾಂಗ್ಲಾದೇಶದಲ್ಲಿ ಆಂತರಿಕ

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ : ನೂರಾರು ಮಂದಿಗೆ ಗಾಯ Read More »

error: Content is protected !!
Scroll to Top