ವಿದೇಶ

ಅಮೆರಿಕ ದಾಳಿಯಿಂದ ವಿಕಿರಣ ಸೋರಿಕೆಯಾಗಿಲ್ಲ : ಇರಾನ್‌ ಸ್ಪಷ್ಟನೆ

ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಶಪಥ ಟೆಹ್ರಾನ್‌: ಅಮೆರಿಕ ಮೂರು ಪರಮಾಣು ಕೇಂದ್ರಗಳ ಮೇಲೆ ನಡೆಸಿದ ದಾಳಿಯಲ್ಲಿ ಪರಮಾಣು ವಿಕಿರಣ ಸೋರಿಕೆಯಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಮೂಲಕ ಪರಮಾಣು ಸ್ಥಾವರಗಳಿಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ. ದಾಳಿ ವೇಳೆ ಪರಮಾಣು ವಿಕಿರಣ ಸೋರಿಕೆಯಾಗಿಲ್ಲ, ಮೂರು ಪರಮಾಣು ಕೇಂದ್ರಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು ಹಾಗಾಗಿ ಯಾವುದೇ ಪರಮಾಣು ಸೋರಿಕೆ ಸಂಭವಿಸಿಲ್ಲ ಎಂದು ಇರಾನ್ ಹೇಳಿದೆ. ಇಂತಹ ದಾಳಿಗಳು ವಿಶ್ವದ ಶಾಂತಿಗೆ ಅಪಾಯಕಾರಿ. ಅಮೆರಿಕ ಅಂತಾರಾಷ್ಟ್ರೀಯ ಕಾನೂನು […]

ಅಮೆರಿಕ ದಾಳಿಯಿಂದ ವಿಕಿರಣ ಸೋರಿಕೆಯಾಗಿಲ್ಲ : ಇರಾನ್‌ ಸ್ಪಷ್ಟನೆ Read More »

ಇರಾನ್‌ನ ಮೂರು ನ್ಯೂಕಿಯರ್‌ ಸ್ಥಾವರಗಳನ್ನು ಧ್ವಂಸ ಮಾಡಿದ ಅಮೆರಿಕ

ಇರಾನ್‌-ಇಸ್ರೇಲ್‌ ಯುದ್ಧಕ್ಕೆ ದೊಡ್ಡಣ್ಣನ ದಿಢೀರ್‌ ಎಂಟ್ರಿ ; ಬದಲಾಯಿತು ಯುದ್ಧದ ಗತಿ ಟೆಹ್ರಾನ್‌: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ದಿಢೀರ್‌ ಎಂದು ಎಂಟ್ರಿ ಕೊಟ್ಟಿದ್ದು, ಭಾನುವಾರ ನಸುಕಿನ ಹೊತ್ತು ಇರಾನ್​ನ ಮೂರು ಪರಮಾಣು ಸ್ಥಾವರಗಳನ್ನು ಧ್ವಂಸ ಮಾಡಿದೆ. ಫೋರ್ಡೋ, ನತಾಂಝ್‌ ಮತ್ತು ಎಸ್ಪಹಾನ್ ಸ್ಥಾವರಗಳ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ಬಹಿರಂಗಪಡಿಸಿದ್ದಾರೆ. ಇತ್ತ ಕೆರಳಿ ಕೆಂಡವಾಗಿರುವ ಇರಾನ್​ ನೀವು ಪ್ರಾರಂಭಿಸಿದ್ದೀರಿ, ಅದನ್ನು ನಾವು ಕೊನೆಗೊಳಿಸುತ್ತೇವೆ

ಇರಾನ್‌ನ ಮೂರು ನ್ಯೂಕಿಯರ್‌ ಸ್ಥಾವರಗಳನ್ನು ಧ್ವಂಸ ಮಾಡಿದ ಅಮೆರಿಕ Read More »

ಭಾನುವಾರವೂ ನಡೆಯುವುದಿಲ್ಲ ಶುಭಾಂಶು ಶುಕ್ಲ ಗಗನ ಯಾತ್ರೆ

ಆ್ಯಕ್ಸಿಯಂ–4 ಮಿಷನ್‌ ಉಡಾವಣೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಕಳುಹಿಸುವ ಮಹತ್ವಾಕಾಂಕ್ಷೆಯ ಆ್ಯಕ್ಸಿಯಂ–4 ಮಿಷನ್ ಮತ್ತೆ ಮುಂದೂಡಿಕೆಯಾಗಿದೆ. ಜೂನ್ 22ರಂದು ನಡೆಯಬೇಕಿದ್ದ ಉಡಾವಣೆಯನ್ನು ಮುಂದೂಡಲು ನಾಸಾ ನಿರ್ಧರಿಸಿದ್ದು, ಹೊಸ ಉಡಾವಣಾ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ನಾಸಾ ಮೂಲಗಳು ತಿಳಿಸವೆ. ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲು ಬಾಹ್ಯಾಕಾಶ ಸಂಸ್ಥೆಗೆ ಹೆಚ್ಚುವರಿ ಸಮಯ ಬೇಕಾಗುತ್ತದೆ. ಬಾಹ್ಯಾಕಾಶ ನಿಲ್ದಾಣದ ಪರಸ್ಪರ ಸಂಪರ್ಕಿತ ಮತ್ತು ಪರಸ್ಪರ

ಭಾನುವಾರವೂ ನಡೆಯುವುದಿಲ್ಲ ಶುಭಾಂಶು ಶುಕ್ಲ ಗಗನ ಯಾತ್ರೆ Read More »

ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಮೇಲೆ ಇರಾನ್‌ ಖಂಡಾಂತರ ಕ್ಷಿಪಣಿ ದಾಳಿ

ಆಸ್ಪತ್ರೆ ಬಹುತೇಕ ಧ್ವಂಸ; ಅಪಾರ ಸಾವು-ನೋವು ಶಂಕೆ ಟೆಲ್‌ ಅವಿವ್‌ : ಇರಾನ್‌ ಗುರುವಾರ ನಸುಕಿನ ಹೊತ್ತು ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯೊಂದು ತೀವ್ರವಾಗಿ ಹಾನಿಗೊಂಡಿದೆ. 7ನೇ ದಿನವೂ ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ಮಿಸೈಲ್‌ ದಾಳಿ ಮುಂದುವರಿದಿದೆ. ಇರಾನಿನ ಅಣ್ವಸ್ತ್ರ ಘಟಕ ಪ್ರದೇಶದಲ್ಲಿರುವ ನೀರಿನ ಸೌಲಭ್ಯಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದ್ದು, ಇರಾನ್‌ ಇದಕ್ಕೆ ಪ್ರತಿಯಾಗಿ ಇಸ್ರೇಲಿನ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಈ ನಡುವೆ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗಿದ್ದು, ಸಾರ್ವಜನಿಕರನ್ನು

ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಮೇಲೆ ಇರಾನ್‌ ಖಂಡಾಂತರ ಕ್ಷಿಪಣಿ ದಾಳಿ Read More »

ಇರಾನ್‌ ಮೆಲೆ ದಾಳಿಗೆ ಅಮೆರಿಕ ಸಿದ್ಧತೆ : ಫೈಟರ್‌ ಜೆಟ್‌, ಸಮರ ನೌಕೆ ರವಾನೆ

90 ಮೀಟರ್‌ ಆಳದಲ್ಲಿದೆ ಯುರೇನಿಯಂ ಸಂಗ್ರಹ; ಇಸ್ರೇಲ್‌ನ ಶಸ್ತ್ರ ಭಂಡಾರ ಖಾಲಿ? ಟೆಲ್‌ ಅವೀವ್‌: ಇಸ್ರೇಲ್‌-ಇರಾನ್‌ ಸಮರ 7ನೇ ದಿನ ಪ್ರವೇಶಿಸುತ್ತಿದ್ದಂತೆಯೇ ಇರಾನ್‌ ಮೇಲೆ ದಾಳಿ ಮಾಡಲು ಅಮೆರಿಕ ಸಜ್ಜಾಗುತ್ತಿದೆ. ಅಮೆರಿಕದ ಫೈಟರ್‌ ಜೆಟ್‌ಗಳು, ಯುದ್ಧ ನೌಕೆಗಳು, ಇಂಧನ ಮರುಪೂರಣ ಟ್ಯಾಂಕ್‌ಗಳು ಈಗಾಗಲೇ ಮಧ್ಯಪೂರ್ವದತ್ತ ತೆರಳಿದ್ದು, ದೀರ್ಘಕಾಲದ ಯುದ್ಧಕ್ಕೆ ಅಮೆರಿಕ ಸಜ್ಜಾಗುತ್ತಿರುವುದರ ಮುನ್ಸೂಚನೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಶರಣಾಗತಿ ಎಚ್ಚರಿಕೆಗೆ ಇರಾನ್‌ನ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಡೋಂಟ್‌ಕೇರ್‌ ಎಂದಿದ್ದು, ಇಸ್ರೇಲ್‌

ಇರಾನ್‌ ಮೆಲೆ ದಾಳಿಗೆ ಅಮೆರಿಕ ಸಿದ್ಧತೆ : ಫೈಟರ್‌ ಜೆಟ್‌, ಸಮರ ನೌಕೆ ರವಾನೆ Read More »

ಇಸ್ರೇಲ್‌ ಮೇಲೆ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

ಅಮೆರಿಕ ಎಂಟ್ರಿಗೆ ಕ್ಷಣಗಣನೆ ; ಘನಘೋರ ಸಮರ ನಡೆಯುವ ಆತಂಕ ಟೆಹ್ರಾನ್‌ : ಇಸ್ರೇಲ್‌ ಮತ್ತು ಇರಾನ್‌ ನಡುವೆ ಕಳೆದ ಶುಕ್ರವಾರ ಶುರುವಾಗಿರುವ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದು, ಇಸ್ರೇಲ್‌ ಮೇಲೆ ಹೈಪರ್‌ಸಾನಿಕ್‌ ಫತಾಹ್‌-1 ಕ್ಷಿಪಣಿ ಪ್ರಯೋಗಿಸಿರುವುದಾಗಿ ಇರಾನ್‌ ಹೇಳಿಕೊಂಡಿದೆ. ಇಸ್ರೇಲ್‌ನಲ್ಲಿ ಬುಧವಾರ ಮುಂಜಾನೆ ಭೀಕರ ಸ್ಫೋಟ ಸಂಭವಿಸಿದ್ದು, ಇದು ಹೈಪರ್‌ಸಾನಿಕ್‌ ಕ್ಷಿಪಣಿಯದ್ದೇ ಆಗಿರಬೇಕು ಎನ್ನಲಾಗಿದೆ. ಈ ನಡುವೆ ಇಸ್ರೇಲ್‌ ಕೂಡ ಇರಾನ್‌ ಮೇಲೆ ನಿರಂತರ ಕ್ಷಿಪಣಿ ಮಳೆಗರೆಯುತ್ತಿದೆ. ಹೈಪರ್‌ಸಾನಿಕ್‌ ಕ್ಷಿಪಣಿ ಅತ್ಯಂತ ಆಧುನಿಕ ಯುದ್ಧಾಸ್ತ್ರವಾಗಿದ್ದು, ಇದು ರಾಡಾರ್‌

ಇಸ್ರೇಲ್‌ ಮೇಲೆ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌ Read More »

ಟೆಹ್ರಾನ್‌ ನಗರ ತೊರೆಯಲು ಭಾರತೀಯರಿಗೆ ತುರ್ತು ಸೂಚನೆ

ಹತ್ತು ಸಾವಿರಕ್ಕೂ ಅಧಿಕ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಸವಾಲು ನವದೆಹಲಿ: ಭಾರತೀಯರೆಲ್ಲರೂ ಕೂಡಲೇ ಟೆಹ್ರಾನ್‌ ನಗರದಿಂದ ಹೊರಬೇಕೆಂದು ಭಾರತ ಸರ್ಕಾರ ಟೆಹ್ರಾನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಂಗಳವಾರ ತುರ್ತು ಸೂಚನೆ ನೀಡಿದೆ. ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಮರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟೆಹ್ರಾನ್‌ ನಗರದಿಂದ ದೂರ ಹೋಗುವಂತೆ ಭಾರತೀಯರಿಗೆ ಸೂಚಿಸಿದೆ. ಇಸ್ರೇಲ್‌ ಸತತವಾಗಿ ಟೆಹ್ರಾನ್‌ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಅಲ್ಲಿ ಇರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಜೊತೆಗೆ ಅಮೆರಿಕ ಕೂಡ ಟೆಹ್ರಾನ್‌ ಬಿಟ್ಟು ಹೋಗುವಂತೆ

ಟೆಹ್ರಾನ್‌ ನಗರ ತೊರೆಯಲು ಭಾರತೀಯರಿಗೆ ತುರ್ತು ಸೂಚನೆ Read More »

ಇಸ್ರೇಲ್‌-ಇರಾನ್‌ ರಣರಂಗಕ್ಕೆ ಅಮೆರಿಕ ನೇರ ಎಂಟ್ರಿ?

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಇರಾನ್‌ನಲ್ಲಿ ಹೆಚ್ಚಾದ ಭೀತಿ ತೈಲ, ಗ್ಯಾಸ್‌ ಬೆಲೆ ಏರಿಕೆ ಆತಂಕ ಟೆಹ್ರಾನ್‌ : ಇರಾನ್​​ನ ರಾಜಧಾನಿ ಟೆಹ್ರಾನ್ ಬಿಟ್ಟುಹೋಗುವಂತೆ ಅಲ್ಲಿನ ಜನರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿರುವುದು ಇಸ್ರೇಲ್‌-ಇರಾನ್‌ ಸಮರದಲ್ಲಿ ಅಮೆರಿಕವೂ ಭಾಗಿಯಾಗುತ್ತಾ ಎಂಬ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಒಂದು ವೇಳೆ ಅಮೆರಿಕ ನೇರವಾಗಿ ರಣರಂಗಕ್ಕೆ ಇಳಿದರೆ ಘನಘೋರ ಸಮರ ನಡೆಯುವ ಭಿತಿ ಉಂಟಾಗಿದೆ. ಹೀಗಾದರೆ ಇದರ ಪರಿಣಾಮ ಬರೀ ಇರಾನ್‌ ಮಾತ್ರವಲ್ಲ ಇಡೀ ಜಗತ್ತಿಗೆ ತಟ್ಟಲಿದೆ. ಟ್ರಂಪ್‌ ಹೇಳಿಕೆಯಿಂದಾಗಿ

ಇಸ್ರೇಲ್‌-ಇರಾನ್‌ ರಣರಂಗಕ್ಕೆ ಅಮೆರಿಕ ನೇರ ಎಂಟ್ರಿ? Read More »

ಯುದ್ಧದ ಸುದ್ದಿ ಓದುತ್ತಿರುವಾಗಲೇ ಟಿವಿ ವಾಹಿನಿ ಕಚೇರಿ ಮೇಲೆ ಎರಗಿದ ಇಸ್ರೇಲ್‌ ಕ್ಷಿಪಣಿ

ಲೈವ್‌ನಿಂದ ಎದ್ದು ಓಡಿಹೋಗಿ ಬಚಾವಾದ ನಿರೂಪಕಿ ಟೆಹ್ರಾನ್‌: ತನ್ನ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌ ಟೆಹ್ರಾನ್‌ನಲ್ಲಿರುವ ಇರಾನಿನ ಸರ್ಕಾರಿ ಟಿವಿ ವಾಹಿನಿ ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ ಬ್ರಾಡ್‌ಕಾಸ್ಟಿಂಗ್‌ (ಐಆರ್‌ಐಬಿ) ಕಚೇರಿಯ ಮೇಲೆಯೇ ಬಾಂಬ್‌ ದಾಳಿ ನಡೆಸಿದೆ. ಐಆರ್‌ಐಬಿ ನಿರೂಪಕಿಯೊಬ್ಬರು ಇಸ್ರೇಲ್‌ ದಾಳಿ ಕುರಿತಂತೆ ಸುದ್ದಿ ಓದುತ್ತಿದ್ದರು. ಈ ಸಂದರ್ಭದಲ್ಲೇ ಇಸ್ರೇಲ್‌ ಐಆರ್‌ಐಬಿ ಕಟ್ಟಡದ ಮೇಲೆಯೇ ಇಸ್ರೇಲ್‌ ವಾಯುಸೇನೆ ಬಾಂಬ್‌ ದಾಳಿ ನಡೆಸಿದೆ. ನಿರೂಪಕಿ ಎದ್ದು ಓಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ನಿನ್ನೆಯಿಂದೀಚೆಗೆ ಭಾರಿ

ಯುದ್ಧದ ಸುದ್ದಿ ಓದುತ್ತಿರುವಾಗಲೇ ಟಿವಿ ವಾಹಿನಿ ಕಚೇರಿ ಮೇಲೆ ಎರಗಿದ ಇಸ್ರೇಲ್‌ ಕ್ಷಿಪಣಿ Read More »

ಇರಾನ್‌ನ ಪರಮೋಚ್ಚ ನಾಯಕ ಖಮೇನಿಯ ಹತ್ಯೆ ಯೋಜನೆಗೆ ಅಮೆರಿಕ ತಡೆ

ಇರಾನ್‌ನ 230, ಇಸ್ರೇಲ್‌ನಲ್ಲಿ 10 ಮಂದಿ ಯುದ್ಧಕ್ಕೆ ಬಲಿ; ಮಿಲಿಟರಿ ನೆಲೆಗಳು, ಉನ್ನತ ನಾಯಕರು ಗುರಿ ಟೆಲ್‌ ಅವೀವ್‌ : ಇಸ್ರೇಲ್‌ ಮತ್ತು ಇರಾನ್‌ ಯುದ್ಧ ನಾಲ್ಕನೇ ದಿನ ಪ್ರವೇಶಿಸಿದ್ದು, ನಾಲ್ಕು ದಿನಗಳಲ್ಲಿ ಇರಾನ್‌ನ 230 ಮಂದಿ ಹತರಾಗಿದ್ದಾರೆ. ಈ ಪೈಕಿ ಶೆ.90 ಮಂದಿ ಇರಾನ್‌ ನಾಗರಿಕರು ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಇಸ್ರೇಲ್‌ನಲ್ಲಿ 10 ನಾಗರಿಕರು ಇರಾನ್‌ ದಾಳಿಯಿಂದಾಗಿ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿಯೂ ಉಭಯ ದೇಶಗಳ ನಡುವೆ ತೀವ್ರ ಸಮರ ನಡೆದಿದೆ. ಇರಾನ್‌ನ ತೀರ

ಇರಾನ್‌ನ ಪರಮೋಚ್ಚ ನಾಯಕ ಖಮೇನಿಯ ಹತ್ಯೆ ಯೋಜನೆಗೆ ಅಮೆರಿಕ ತಡೆ Read More »

error: Content is protected !!
Scroll to Top