ಅಪರಾಧ

ಅನಿರೀಕ್ಷಿತವಾಗಿ ಪತ್ತೆಯಾಯ್ತು ಕಳವಾಗಿದ್ದ ಬೈಕ್…!!

ಮಂಗಳೂರು: ಸುಮಾರು ಒಂದು ವರ್ಷ ಒಂಬತ್ತು ತಿಂಗಳ ಹಿಂದೆ ಕಳವಾಗಿದ್ದ ಬೈಕೊಂದು ಮತ್ತೆ ಅದರ ಮಾಲಕನಿಗೇ ಕಾಣಸಿಗುವ ಮೂಲಕ ಅವರ ಮುಖದಲ್ಲಿ ಹರ್ಷಕ್ಕೆ ಕಾರಣವಾಗಿದೆ. ಮಂಗಳೂರಿನ ಹಸುರು ದಳ ಎನ್‌ಜಿಒ ಸಂಸ್ಥೆಯ ಸದಸ್ಯರಾಗಿರುವ ನಾಗರಾಜ್‌ ಬಜಾಲ್‌ ಅವರೇ ಪತ್ತೆಯಾದ ಬೈಕ್‌ನ ಮಾಲಕ. 2022ರ ಮಾರ್ಚ್‌ನಲ್ಲಿ ಹಂಪನಕಟ್ಟೆಯ ರೂಪಾ ಹೊಟೇಲ್‌ ಬಳಿ ಪಾರ್ಕ್‌ ಮಾಡಿದ್ದ ಅವರ ಬಜಾಜ್‌ ಅವೆಂಜರ್‌ ಬೈಕ್‌ ಕಳುವಾಗಿತ್ತು. ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಸಿ ಕೆಮರಾ ಪರಿಶೀಲಿಸಿದಾಗ ಯುವಕನೊಬ್ಬ ಬೈಕ್‌ ಕಳವು […]

ಅನಿರೀಕ್ಷಿತವಾಗಿ ಪತ್ತೆಯಾಯ್ತು ಕಳವಾಗಿದ್ದ ಬೈಕ್…!! Read More »

ದೈವಸ್ಥಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಪಣಂಬೂರು: ವ್ಯಕ್ತಿಯೊಬ್ಬರು ಪಣಂಬೂರು ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ಪ್ರಾಂಗಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗೋಪಾಲ (64) ಈ ಕೃತ್ಯ ಎಸಗಿದವರು. ಗೋಪಾಲ ಅವರು ಮಡಿಕೇರಿಯಿಂದ ತಣ್ಣೀರು ಬಾವಿ ಬೀಚ್ ಗೆ ಬಂದಿದ್ದು, ಬಳಿಕ ದೈವಸ್ಥಾನ ಪ್ರಾಂಗಣದಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೈವಸ್ಥಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ Read More »

ಕಾಲೇಜು ವಿದ್ಯಾರ್ಥಿ ವೀಕ್ಷಿತ್ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಇಲ್ಲಿಯ ಕಾಲೇಜೊಂದರ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಗರದ ಖಾಸಗಿ ಕಾಲೋಜೊಂದರ ವಿದ್ಯಾರ್ಥಿ, ಕುರಿಯ ಪಡ್ಪು ನಿವಾಸಿ ವೀಕ್ಷಿತ್ (17) ಮೃತಪಟ್ಟ ವಿದ್ಯಾರ್ಥಿ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಬಿಜೆಪಿ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ವೀಕ್ಷಿತ್ ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕಾಲೇಜು ವಿದ್ಯಾರ್ಥಿ ವೀಕ್ಷಿತ್ ನೇಣು ಬಿಗಿದು ಆತ್ಮಹತ್ಯೆ Read More »

ಎರಡು ಕಬಡ್ಡಿ ತಂಡಗಳ ನಡುವೆ ಮಾರಾಮಾರಿ | ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್

ಲಕ್ಕೋ: ಎರಡು ಕಬಡ್ಡಿ ತಂಡಗಳ ಆಟಗಾರರ ನಡುವೆ ಮಾರಾಮಾರಿ ನಡೆದಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿದೆ. ಕಬಡ್ಡಿ ಪಂದ್ಯ ನಡೆಯುತ್ತಿದ್ದ ಗ್ರೌಂಡ್’ನಲ್ಲಿ ಎರಡು ತಂಡಗಳು ಹೊಡೆದಾಡಿಕೊಂಡಿದೆ. ಆಟಗಾರರು ಪರಸ್ಪರ ಹಲ್ಲೆ ನಡೆಸಿದ್ದು, ಮೈದಾನದಲ್ಲಿದ್ದ ಕುರ್ಚಿಗಳನ್ನು ಪುಡಿಗೈದಿದ್ದಾರೆ. ತಂಡಗಳ ಆಟಗಾರರು ಒಬ್ಬರನ್ನೊಬ್ಬರು ಒದೆಯುವುದು, ಕೆಲವರು ಪರಸ್ಪರ ಕುರ್ಚಿಗಳನ್ನು ಎಸೆಯುವುದನ್ನು ವೀಡಿಯೊದಲ್ಲಿ ಕಾಣಬಹುದು. ವರದಿಯ ಪ್ರಕಾರ, ಎರಡೂ

ಎರಡು ಕಬಡ್ಡಿ ತಂಡಗಳ ನಡುವೆ ಮಾರಾಮಾರಿ | ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ Read More »

ಬಡಗನ್ನೂರಿನಲ್ಲಿ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೆ ಕಳ್ಳತನ

ಪುತ್ತೂರು: ಅಂತಾರಾಜ್ಯ ದರೋಡೆ ಪ್ರಕರಣದಿಂದ ಸುದ್ದಿಯಾಗಿದ್ದ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಕಳ್ಳತನ ಪ್ರಕರಣ ನಡೆದಿದೆ. ಬಡಗನ್ನೂರು ಗ್ರಾ. ಪಂ. ವ್ಯಾಪ್ತಿಯ ಪಟ್ಟೆ ಶಾಲೆಯ ಬಳಿಯ ದಿನಸಿ ಅಂಗಡಿಗೆ ಶನಿವಾರ ರಾತ್ರಿ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿ ತುಂಬಾ ಜಾಲಾಡಿದ್ದಾರೆ. ಅಂಗಡಿ ಮಾಲಕ ಶೇಖರ್ ನಾಯಕ್ ಯಾವುದೇ ನಗದು ಅಂಗಡಿಯಲ್ಲಿ ಇರಿಸದ ಕಾರಣ ಬಚಾವಾಗಿದ್ದಾರೆ. ಅಂಗಡಿಯ ಡ್ರಾಯರ್ ನಿಂದ ಚಿಲ್ಲರೆ ಹಣ ಕಳವಾಗಿದೆ. ಬೆಳಿಗ್ಗೆ ಅಂಗಡಿ ಮಾಲಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಬಡಗನ್ನೂರಿನಲ್ಲಿ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೆ ಕಳ್ಳತನ Read More »

ಬನ್ನೂರು ಕಳವು ಪ್ರಕರಣದ ಎರಡನೇ ಆರೋಪಿ ಬಂಧನ

ಪುತ್ತೂರು: ಐದು ತಿಂಗಳ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 5 ತಿಂಗಳ ಹಿಂದೆ ಬನ್ನೂರು ಆನೆಮಜಲು ನಿವಾಸಿ ಮೌನೇಶ್ ಎಂಬವರ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಇನ್ನೋರ್ವ ಆರೋಪಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ  ಮಾಹಿತಿಯಂತೆ ಇನ್ನೋರ್ವ ಆರೋಪಿಯನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.

ಬನ್ನೂರು ಕಳವು ಪ್ರಕರಣದ ಎರಡನೇ ಆರೋಪಿ ಬಂಧನ Read More »

ಕೃಷಿ ಜಮೀನು ಅತಿಕ್ರಮಣ | ಆದಿವಾಸಿ ಬುಡಕಟ್ಟು ಮಲೆಕುಡಿಯರಿಂದ ಆರೋಪ

ಸುಬ್ರಹ್ಮಣ್ಯ: ಗ್ರಾಮದ ದೇವರಗದ್ದೆ ನಿವಾಸಿ ಮಲೆಕುಡಿಯ ಜನಾಂಗದ ವ್ಯಕ್ತಿಯೊಬ್ಬರಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನೀಡಿದ ಜಮೀನನ್ನು ತನ್ನ ಹೆಸರಿಗೆ ಆರ್ ಟಿಸಿ ಮಾಡಿಕೊಂಡಿದ್ದು, ಈ ಕುರಿತು ಭೂಮಾಪನ ಇಲಾಖೆಯಿಂದ ಸರ್ವೇ ಮಾಡಿ ಸೂಕ್ತ ನ್ಯಾಯ ನೀಡದಿರುವುದು ಖಂಡನೀಯ ಎಂದು ಬಿರ್ಸಾಮುಂಡ ಟ್ರೈಬಲ್ ಕಮ್ಯುನಿಟಿ ಡೆವಲಪ್ಮೆಂಟ್ ಟ್ರಸ್ಟ್ ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಭಾಸ್ಕರ್ ಬೆಂಡೋಡಿ ಆರೋಪಿಸಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ಸರ್ವೇ ನಂಬರ್ 101/1 ರಲ್ಲಿ ಸುಮಾರು 60 ವರ್ಷಕ್ಕೂ ಮೇಲ್ಪಟ್ಟು

ಕೃಷಿ ಜಮೀನು ಅತಿಕ್ರಮಣ | ಆದಿವಾಸಿ ಬುಡಕಟ್ಟು ಮಲೆಕುಡಿಯರಿಂದ ಆರೋಪ Read More »

ಪ್ರಶಾಂತ್ ಭಟ್ ಮಾಣಿಲ ಪೊಲೀಸ್ ಕಸ್ಟಡಿಗೆ | ಲಾಡ್ಜ್’ಗೆ ಕರೆದೊಯ್ದು ಮಹಜರು ನಡೆಸಿದ ಪೊಲೀಸರು!

ಶಿರಸಿ: ಗೃಹಿಣಿಗೆ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಸ್ಥಾನದ ಹಿತರಕ್ಷಣಾ ವೇದಿಕೆ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅವರನ್ನು ಗುರುವಾರ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ನ್ಯಾಯಾಲಯದ ಆದೇಶ ಪಡೆದುಕೊಂಡ ಪೊಲೀಸರು, ಶಿರಸಿ ಅಲೇಖಾ ಗೇಟ್ ವೇ ಲಾಡ್ಜ್’ಗೆ ಕರೆದೊಯ್ದು ಪರಿಶೀಲನೆ ನಡೆಸಲಾಯಿತು. ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ವಿವಾಹಿತ ಮಹಿಳೆಯನ್ನು ಲಾಡ್ಜ್’ಗೆ ಕರೆಸಿಕೊಂಡು ಬಲಾತ್ಕಾರ ಮಾಡಿದ್ದ ಎಂದು

ಪ್ರಶಾಂತ್ ಭಟ್ ಮಾಣಿಲ ಪೊಲೀಸ್ ಕಸ್ಟಡಿಗೆ | ಲಾಡ್ಜ್’ಗೆ ಕರೆದೊಯ್ದು ಮಹಜರು ನಡೆಸಿದ ಪೊಲೀಸರು! Read More »

ಧರ್ಮಸ್ಥಳ ಅಕ್ಕಿ ಮಿಲ್’ನ ಸಿಬ್ಬಂದಿ ಸಾವು: ಆತ್ಮಹತ್ಯೆಯೆಂದು ವರದಿ | ಕೊಪ್ಪರಿಗೆಗೆ ಹಾರಿ ಆತ್ಮಹತ್ಯೆ ಸಾಧ್ಯವೇ? ಸ್ಥಳೀಯರ ಸಂಶಯ

ಧರ್ಮಸ್ಥಳ: ಧರ್ಮಸ್ಥಳ ನಿವಾಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಅಕ್ಕಿ ಮಿಲ್ ಉದ್ಯೋಗಿ ಕೃಷ್ಣ ಗಾಣಿಗ (ಕಿಟ್ಟ) ಸೆಪ್ಟೆಂಬರ್ 3ರಂದು ಅಸಹಜವಾಗಿ ಮೃತಪಟ್ಟಿದ್ದು, ಒಂದು ತಿಂಗಳ ಬಳಿಕ ವರದಿ ಬಹಿರಂಗವಾಗಿದೆ. ಪಾತ್ರೆ ಮಾದರಿಯ ಕೊಪ್ಪರಿಗೆಗೆ ಮುಳುಗಿ ಕೃಷ್ಣ ಗಾಣಿಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೊಂಟದ ಮಟ್ಟಕ್ಕೆ ಇರುವ ಕೊಪ್ಪರಿಗೆಗೆ ಬಿದ್ದು ಸಾಯುವುದಾದರೂ ಹೇಗೆ ಎಂಬ ಪ್ರಶ್ನೆ ಇದೀಗ ಕೇಳಿಬರತೊಡಗಿದೆ. ಒಟ್ಟಿನಲ್ಲಿ ಕೃಷ್ಣ ಗಾಣಿಗ ಅವರ ಸಾವಿನ ಸುತ್ತ ಹಲವು ಸಂಶಯಗಳು ವ್ಯಕ್ತವಾಗತೊಡಗಿದೆ. ಘಟನೆ ನಡೆದ

ಧರ್ಮಸ್ಥಳ ಅಕ್ಕಿ ಮಿಲ್’ನ ಸಿಬ್ಬಂದಿ ಸಾವು: ಆತ್ಮಹತ್ಯೆಯೆಂದು ವರದಿ | ಕೊಪ್ಪರಿಗೆಗೆ ಹಾರಿ ಆತ್ಮಹತ್ಯೆ ಸಾಧ್ಯವೇ? ಸ್ಥಳೀಯರ ಸಂಶಯ Read More »

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು!

ಬೆಳಪು: ಏಳನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಂಗಡಿಗರೊಂದಿಗೆ ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ. ಬೆಳಪು ವಸತಿ ಬಡಾವಣೆ ಕಸ್ತೂರಿ ಎಂಬವರ ಪುತ್ರ ವಿಶ್ವಾಸ್ ನಾಯಕ್ (11) ಮೃತಪಟ್ಟ ಬಾಲಕ. ಈತ ಇನ್ನಂಜೆ ಎಸ್‍.ಎಸ್. ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ. ಗುರುವಾರ ಶಾಲೆಯಿಂದ ಬಂದು ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈಜಾಡುತ್ತಿದ್ದ ಬಾಲಕ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡ ಮಕ್ಕಳು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು! Read More »

error: Content is protected !!
Scroll to Top