ಕ್ಯಾಂಪಸ್‌

ಇಂದು (ನ.23) : ಕನಕ ಸಂಭ್ರಮ

ಪುತ್ತೂರು : ಇನ್ನೆರ್‍  ವ್ಹೀಲ್‍ ಕ್ಲಬ್‍ 50 ವರ್ಷ ಪೂರೈಸಿದ ಸಲುವಾಗಿ ಕನಕ ಸಂಭ್ರಮ ನ.23 ರಂದು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಜೆ 4:30 ಗಂಟೆಗೆ ಉಧ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ  ಇನ್ನೆರ್ ವ್ಹೀಲ್‍ ಕ್ಲಬ್ ಜಿಲ್ಲಾಧ್ಯಕ್ಷ ವೈಶಾಲಿ ಕುಡುವ,   ಪರಿಸರವಾದಿ, ಬೆಂಗಳೂರು ಪಿಲಾಂತ್ರೊಪಿಸ್ಟ್,  ರೇವತಿ ಕಾಮತ್‍, ಪಾಲ್ಗೊಳ್ಳರಿದ್ದಾರೆ ಎಂದು ಇನ್ನೆರ್‍ ವ್ಹೀಲ್‍ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ವಚನ ಜಯರಾಮ್‍ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು (ನ.23) : ಕನಕ ಸಂಭ್ರಮ Read More »

ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ “INFOTSAV 2K24” ಸಮಾರೋಪ ಸಮಾರಂಭ

ಸವಣೂರು:  ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ “INFOTSAV 2K24”  ಸಮಾರೋಪ ಸಮಾರಂಭ ಗುರುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ವಹಿಸಿ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶುಭ ಹಾರೈಸಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಗಳಾಗಲು ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಸ್ಪರ್ಧೆ ತರಬೇತಿಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡುಯ್ಯುತ್ತದೆ ಎಂದರು. ಮುಖ್ಯಅತಿಥಿಯಾಗಿ ಬೆಳ್ಳಾರೆ ಆರಕ್ಷಕ ಠಾಣೆಯ ಸಬ್‌ ಇನ್‌ ಸ್ಪೆಕ್ಟರ್

ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ “INFOTSAV 2K24” ಸಮಾರೋಪ ಸಮಾರಂಭ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಮಸಾಸನ ಕೈಪಿಡಿ ಹಸ್ತಾಂತರ

ಬೆಳ್ತಂಗಡಿ: ಬಂಟ್ವಾಳ ತಾಲೂಕು  ಕೆದಿಲ ಗ್ರಾಮದ  ಬೀಟಿಗೆ  ದಿವಂಗತ ಮೋನು ಅವರ ಧರ್ಮ ಪತ್ನಿ  ಸೇಲ್ಮ  ಒಂಟಿ  ವಾಸವಾಗಿದ್ದರಿಂದ  ಶ್ರೀ ಕ್ಷೇತ್ರದ ವತಿಯಿಂದ  ನಿರ್ಗತಿಕ  ಮಸಾಸನ  ಕೈಪಿಡಿಯನ್ನು ವಿತರಿಸಲಾಗಿದೆ.  ವಿಟ್ಲ ತಾಲೂಕು  ಕೃಷಿ ಅಧಿಕಾರಿ  ಚಿದಾನಂದ  ನಿರ್ಗತಿಕ  ಮಸಾಸನ  ಕೈಪಿಡಿಯನ್ನು ಸೇಲ್ಮರಿಗೆ  ನೀಡಿದ್ದಾರೆ. ಈ ಸಂದರ್ಭದಲ್ಲಿ  ಪೆರ್ನೆ ಮೇಲ್ವಿಚಾರಕಿ ಶಾರದಾ, ಜ್ಞಾನವಿಕಾಸ  ದೀಪಾ,  ಸೇವಾ ಪ್ರತಿನಿಧಿ  ಶಾರದಾ, ಕೆದಿಲ ಶೌರ್ಯ ವಿಪತ್ತು  ನಿರ್ವಹಣಾ ಸದಸ್ಯ  ಜಗದೀಶ, ಗಿರೀಶ, ವೆಂಕಪ್ಪ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಮಸಾಸನ ಕೈಪಿಡಿ ಹಸ್ತಾಂತರ Read More »

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ | 50 ವರ್ಷ ದಾಂಪತ್ಯ ಜೀವನ ಪೂರೈಸಿದ ಸವಣೂರು ಗ್ರಾಮದ ನಾಲ್ಕು ಮಂದಿ ದಂಪತಿಗಳಿಗೆ ಸನ್ಮಾನ

ಸವಣೂರು :ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮದ ಅಂಗವಾಗಿ ತಾಲೂಕಿನ ಪ್ರತೀ ಗ್ರಾಮ ಪಂಚಾಯತ್‍ ವ್ಯಾಪ್ತಿಯಲ್ಲಿರುವ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಸಮುದಾಯದವರಿಗೆ ಸನ್ಮಾನ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಇಂದು  ಸವಣೂರು ಗ್ರಾಮ ಒಕ್ಕೂಟದ ನಾಲ್ಕು ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಸವಣೂರು ಯುವ ಸಭಾಭವನದಲ್ಲಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್‍ ಗೋಪಾಲಕೃಷ್ಣ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ ಗೌಡ, ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಸವಣೂರು ಪ್ರಾಥಮಿಕ ಕೃಷಿಪತ್ತಿನ

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ | 50 ವರ್ಷ ದಾಂಪತ್ಯ ಜೀವನ ಪೂರೈಸಿದ ಸವಣೂರು ಗ್ರಾಮದ ನಾಲ್ಕು ಮಂದಿ ದಂಪತಿಗಳಿಗೆ ಸನ್ಮಾನ Read More »

ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಗೆ ಮಂಜೂರಾದ ಜಮೀನು ರದ್ದುಪಡಿಸಿ ಪ್ರಿಯದರ್ಶಿನಿ ಚಾರಿಟೇಬಲ್‍ ಟ್ರಸ್ಟ್ ಗೆ ಮಂಜೂರು ಹುನ್ನಾರ | ಸರಕಾರಿ ಜಾಗ ಕಬಳಿಕೆಗೆ ಯತ್ನ : ಶಾಸಕ ಸಂಜೀವ ಮಠಂದೂರು

ಪುತ್ತೂರು :  ಪುತ್ತೂರು ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಗೆ ಮಂಜೂರಾದ ಜಮೀನನ್ನು ರದ್ದು ಪಡಿಸಿ ಪುತ್ತೂರು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಗೆ ಮಂಜೂರು ಮಾಡುವ ಹುನ್ನಾರ ನಡೆಯುತ್ತಿದ್ದು, ಇದರ ವಿರುದ್ಧ ಬಿಜೆಪಿಯಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,  ವಕ್ಫ್ ನಂತೆ ಸರಕಾರಿ ಜಮೀನನ್ನು ನುಂಗುವ ಕೆಲಸ ನಡೆಯುತ್ತಿದೆ. ಇದೇ ರೀತಿ ಮುಂದುವರಿದರೆ ವಿಧಾನಸೌಧದ ಜಾಗವನ್ನು ಕಬಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪುತ್ತೂರು ಸರಕಾರಿ

ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಗೆ ಮಂಜೂರಾದ ಜಮೀನು ರದ್ದುಪಡಿಸಿ ಪ್ರಿಯದರ್ಶಿನಿ ಚಾರಿಟೇಬಲ್‍ ಟ್ರಸ್ಟ್ ಗೆ ಮಂಜೂರು ಹುನ್ನಾರ | ಸರಕಾರಿ ಜಾಗ ಕಬಳಿಕೆಗೆ ಯತ್ನ : ಶಾಸಕ ಸಂಜೀವ ಮಠಂದೂರು Read More »

ನ.24 : ಭಜಕರ ಬೃಹತ್ ಸಮಾವೇಶ | ಭಜನೆ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ನಡೆಯಲಿದೆ ಸಮಾವೇಶ

ಪುತ್ತೂರು: ಭಜನಾ ಸೇವೆ ಹಾಗೂ ಭಜನಾ ಸೇವೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೃಹತ್ ಭಜಕರ ಸಮಾವೇಶವನ್ನು  ನ.24 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಲೋಕೇಶ್‍ ಬೆತ್ತೋಡಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭಜನಾ ಪರಿಷತ್ ಪುತ್ತೂರು ತಾಲೂಕು, ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಭಜಕರ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು,

ನ.24 : ಭಜಕರ ಬೃಹತ್ ಸಮಾವೇಶ | ಭಜನೆ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ನಡೆಯಲಿದೆ ಸಮಾವೇಶ Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸಭೆ ದಿನಾಂಕ ನಡೆಯಿತು. ಸಭೆಯಲ್ಲಿ 2024-25 ಸಾಲಿಗೆ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರಶಾಂತ್ ಆಚಾರ್, ಉಪಾಧ್ಯಕ್ಷರುಗಳಾಗಿ ಕೃಷ್ಣ ಕುಮಾರ್, ಅಶ್ವಿನಿ, ಸುರೇಶ್ ಕುಮಾರ್ ಆಯ್ಕೆಯಾದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್.ಎಂ., ಸಂಚಾಲಕ ರವಿನಾರಾಯಣ, ಶಾಲಾ ಮುಖ್ಯ ಶಿಕ್ಷರು, ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗೆ ಆಯ್ಕೆಯಾದ ತರಗತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ Read More »

ನ.22 : ನವಿಕೃತ ಕಛೇರಿ ಉದ್ಘಾಟನೆ,  ಸದಸ್ಯ ಬೆಳೆಗಾರರ ಸಭೆ

ಪುತ್ತೂರು  : ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿಯ  ಪುತ್ತೂರು ಶಾಖೆಯ ನವಿಕೃತ ಕಛೇರಿ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ ನ.22 ರಂದು  ಮಹಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಮದ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕಾರಿಣಿ ಸದಸ್ಯ  ಕಜಂಪಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಲಿದ್ದಾರೆ.    ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ  ಎ.ಕಿಶೋರ್‍ ಕುಮಾರ್‍ ಕೊಡ್ಗಿಅಧ್ಯಕ್ಷತೆ ವಹಿಸಲಿದ್ದಾರೆ.  ಕ್ಯಾಂಪ್ಕೋ ಉಪಾಧ್ಯಕ್ಷ  ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ  ಡಾ.ಬಿ.ವಿ.

ನ.22 : ನವಿಕೃತ ಕಛೇರಿ ಉದ್ಘಾಟನೆ,  ಸದಸ್ಯ ಬೆಳೆಗಾರರ ಸಭೆ Read More »

ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ವಾರ್ಷಿಕ  ಧ್ಯಾನ ಕೂಟ

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ದಿವ್ಯ ಚೇತನಾ ಅಸೋಸಿಯೇಶನ್ ವತಿಯಿಂದ ದಿವ್ಯ ಚೇತನ ಚಾಪೆಲ್‌ ಕಾಲೇಜಿನ ಕ್ಯಾಥೋಲಿಕ್ ವಿದ್ಯಾರ್ಥಿಗಳಿಗೆ ಒಂದು ದಿನದ ‘ದೇವರನ್ನು ಹುಡುಕು”.ಎಂಬ ವಿಷಯದ ಮೇಲೆ ವಾರ್ಷಿಕ ಧ್ಯಾನ ಕೂಟ ನಡೆಯಿತು. ಪಾಪ ನಿವೇದನೆ, ಭಗವಂತನೊಂದಿಗಿನ ಸಂಬಂಧ, ದೇವರೊಂದಿಗಿನ ಜೀವನ, ಯುವಕರ ಪ್ರಲೋಭನೆಗಳನ್ನು ನಿಭಾಯಿಸುವುದು ಮತ್ತು ಪವಿತ್ರಾತ್ಮದ ಶಕ್ತಿಯ ಕುರಿತು ಸೆಷನ್‌ಗಳನ್ನು ಖ್ಯಾತ ಬೋಧಕ ರೆ.ಫಾ.ರಾನ್ಸನ್ ಪಿಂಟೋ ನಡೆಸಿಕೊಟ್ಟರು. ಆಧ್ಯಾತ್ಮಿಕ ತಳಹದಿಗಳನ್ನು ಮತ್ತು ಸಾಮುದಾಯಿಕ ಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಸೆಷನ್‌ಗಳು ಸ್ವಯಂ-ಪ್ರತಿಬಿಂಬದ ಮೇಲೆ

ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ವಾರ್ಷಿಕ  ಧ್ಯಾನ ಕೂಟ Read More »

ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು ಪಿಯು ಫೆಸ್ಟ್ “ಅಟೆರ್ನಸ್-2024” ಯಶಸ್ವಿ ಸಮಾಪನ | ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್, ಸುಳ್ಯ ಎನ್‌ಎಂಸಿ ರನ್ನರ್ಸ್

ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು  ಪದವಿ ಪೂರ್ವ(ಪಿಯು) ಕಾಲೇಜುಗಳ ಫೆಸ್ಟ್-ಅಟೆರ್ನಸ್-2024 ಅಕ್ಷಯ ಕಾಲೇಜಿನಲ್ಲಿ ಉದ್ಘಾಟನೆಗೊಂಡು ಯಶಸ್ವಿಯಾಗಿ ಸಮಾಪನಗೊಂಡಿತು. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್ ಎನಿಸಿಕೊಂಡಿದ್ದು, ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸ್ಪರ್ಧೆಗಳಾದ ಗ್ರೂಪ್ ಸಿಂಗಿಂಗ್, ಸೋಲೊ ಸಿಂಗಿಂಗ್, ಸೋಲೊ ಡ್ಯಾನ್ಸ್, ಗ್ರೂಪ್ ಡ್ಯಾನ್ಸ್, ಮೊಡೆಲ್ ಪ್ರೆಸೆಂಟೇಶನ್, ಜಾಹಿರಾತು, ಪಾಟ್ ಡೆಕೋರೇಶನ್, ಬೆಂಕಿಯಿಲ್ಲದ ಅಡುಗೆ,

ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು ಪಿಯು ಫೆಸ್ಟ್ “ಅಟೆರ್ನಸ್-2024” ಯಶಸ್ವಿ ಸಮಾಪನ | ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್, ಸುಳ್ಯ ಎನ್‌ಎಂಸಿ ರನ್ನರ್ಸ್ Read More »

error: Content is protected !!
Scroll to Top