ಕ್ಯಾಂಪಸ್‌

ವಿವಿ ಸೆಮಿಸ್ಟರ್ ಪರೀಕ್ಷೆ ಮುಂದೂಡದ ಜಿಲ್ಲಾಡಳಿತ | ಅಪಾಯಕಾರಿ ಸ್ಥಿತಿಯಲ್ಲಿ ತೆರಳಬೇಕಾದ ವಿದ್ಯಾರ್ಥಿಗಳು

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿಯ ಹೆದ್ದಾರಿ ಜಲಾವೃತಗೊಂಡಿದ್ದು, ಪರೀಕ್ಷೆಗೆ ಹಾಜರಾದ ಪದವಿ ವಿದ್ಯಾರ್ಥಿಗಳು ಅಪಾಯಕಾರಿ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಹಾಜರಾಗಬೇಕಾಗಿ ಬಂತು. ಮಂಗಳೂರು ಯುನಿವರ್ಸಿಟಿ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು, ಭಾರೀ ಮಳೆ ಇದ್ದರೂ ಮುಂದೂಡಿಕೆ ಆಗಿರಲಿಲ್ಲ. ಪರಿಣಾಮ ಪಂಜ ಭಾಗದಿಂದ ಸುಬ್ರಹ್ಮಣ್ಯ ಕೆಎಸ್‍ ಎಸ್‍ ಕಾಲೇಜಿಗೆ ಪರೀಕ್ಷೆ ಕೇಂದ್ರಗಳತ್ತ ಬಂದಿದ್ದಾರೆ. ವಿವಿ ಸೆಮಿಸ್ಟರ್ ಪರೀಕ್ಷೆ ಮುಂದೂಡಲಿ ಎಂಬ ಆಗ್ರಹ ವ್ಯಕ್ತವಾಗಿತ್ತು.

ವಿವಿ ಸೆಮಿಸ್ಟರ್ ಪರೀಕ್ಷೆ ಮುಂದೂಡದ ಜಿಲ್ಲಾಡಳಿತ | ಅಪಾಯಕಾರಿ ಸ್ಥಿತಿಯಲ್ಲಿ ತೆರಳಬೇಕಾದ ವಿದ್ಯಾರ್ಥಿಗಳು Read More »

ಕಡಬ ಐಐಸಿಟಿ ವಿದ್ಯಾಸಂಸ್ಥೆಯಿಂದ ನರ್ಸರಿ ಶಿಕ್ಷಕಿ ತರಬೇತಿ ಕೋರ್ಸ್‍ಗೆ ಚಾಲನೆ

ಕಡಬ: ಕಳೆದ 9 ವರ್ಷಗಳಿಂದ ಕಡಬದಲ್ಲಿ ಕಡಬದಲ್ಲಿ ವೃತ್ತಿಪರ ಕೋರ್ಸ್ ಗಳನ್ನು ಅಭ್ಯರ್ಥಿಗಳಿಗೆ ನೀಡಿ ಉದ್ಯೋಗದ ದಾರಿಯನ್ನು ಕಲ್ಪಿಸುತ್ತಿರುವ ಐಐಸಿಟಿ (IICT) ವಿದ್ಯಾ ಸಂಸ್ಥೆ ಇದೀಗ ಮತ್ತೊಂದು ತರಬೇತಿ ಕೋರ್ಸ್ ಆರಂಭಿಸಿದೆ. ಕಂಪ್ಯೂಟರ್ ತರಗತಿ, ಟುಟೋರಿಯಲ್, ಟ್ಯೂಷನ್ ಕ್ಲಾಸ್, ನವೋದಯ ತರಬೇತಿ, ಅಬಾಕಸ್  ಶಿಕ್ಷಣ ನೀಡುತ್ತಿದ್ದ ಸಂಸ್ಥೆ ಈಗ ಬಹಳಷ್ಟು ಬೇಡಿಕೆಯನ್ನು ಹೊಂದಿರುವ ನರ್ಸರಿ( ಮೊಂಟೆಸ್ಸರಿ) ಶಿಕ್ಷಕಿ ಕೋರ್ಸ್‌ಅನ್ನು ಆರಂಭಿಸುತ್ತಿದೆ. ಈ ಮೂಲಕ ಕಡಬ ಸೇರಿದಂತೆ ವಿವಿಧ ತಾಲೂಕಿನ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೊಸ ಕೋರ್ಸ್

ಕಡಬ ಐಐಸಿಟಿ ವಿದ್ಯಾಸಂಸ್ಥೆಯಿಂದ ನರ್ಸರಿ ಶಿಕ್ಷಕಿ ತರಬೇತಿ ಕೋರ್ಸ್‍ಗೆ ಚಾಲನೆ Read More »

ಆಯಾ ತಾಲೂಕಿನ ಪರಿಸ್ಥಿತಿ ಅವಲೋಕಿಸಿ ರಜೆ ನೀಡಿ’ – ತಹಸೀಲ್ದಾರ್‌ಗಳಿಗೆ ಡಿಸಿ ಆದೇಶ

ಪುತ್ತೂರು :  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ , ಪುತ್ತೂರು, ಬಂಟ್ವಾಳ ಸುಳ್ಯ ತಾಲೂಕುಗಳಲ್ಲಿ ತಹಸೀಲ್ದಾ‌ ಹಂತದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿರುವುದಿಲ್ಲ ಎಂದು ಡಿಸಿ ತಿಳಿಸಿದ್ದಾರೆ. ಕಡಬ ತಾಲೂಕಿನಾದ್ಯಂತ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ನೀಡಲಾಗಿದೆ

ಆಯಾ ತಾಲೂಕಿನ ಪರಿಸ್ಥಿತಿ ಅವಲೋಕಿಸಿ ರಜೆ ನೀಡಿ’ – ತಹಸೀಲ್ದಾರ್‌ಗಳಿಗೆ ಡಿಸಿ ಆದೇಶ Read More »

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭಾರತಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಉದ್ಘಾಟನೆ | ಭಗವದ್ಗೀತೆ ಭಾರತ ದೇಶದ ಮಣ್ಣಿನ ಸತ್ವ ಮತ್ತು ತತ್ವ : ಡಾ. ಪ್ರಭಾಕರ್ ಭಟ್

ಪುತ್ತೂರು: ಶಾಲೆಯೆಂದರೆ ಅದು ಕಟ್ಟಡವಲ್ಲ, ಆ ಕಟ್ಟಡಕ್ಕೆ ಜೀವಧಾರೆ ತರುವವರು ಶಿಕ್ಷಕರು. ಶಿಕ್ಷಕರೆಂದರೆ ಶಾಲೆಯ ಆತ್ಮ, ಆ ಆತ್ಮದಿಂದ ಮಾತ್ರ ಶಾಲೆಯನ್ನು ಉನ್ನತಿಗೆ ತೆಗೆದುಕೊಂಡು ಹೋಗಲು ಸಾಧ್ಯ. ಶಿಕ್ಷಕರು ಪಾಠದ ಜೊತೆಗೆ ಪಠ್ಯೇತರ ವಿಷಯಗಳನ್ನು ಮಂಡಿಸುವುದರಿಂದ ವಿದ್ಯಾರ್ಥಿಗಳ ವಿಕಾಸದ ಬೆಳವಣಿಗೆಗೆ ಕಾರಣವಾಗುವುದು  ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮುಳಿಯ ಜುವೆಲ್ಲರ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭಾರತಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಉದ್ಘಾಟನೆ | ಭಗವದ್ಗೀತೆ ಭಾರತ ದೇಶದ ಮಣ್ಣಿನ ಸತ್ವ ಮತ್ತು ತತ್ವ : ಡಾ. ಪ್ರಭಾಕರ್ ಭಟ್ Read More »

ವಿದ್ಯಾರಶ್ಮಿಯಲ್ಲಿ ಸಿಇಟಿ/ಜೆಇಇ/ನೀಟ್ ಕೋಚಿಂಗ್ ತರಗತಿಗೆ ಚಾಲನೆ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಇಂಟೆಗ್ರೇಟೆಡ್ ಸಿಇಟಿ/ಜೆಇಇ/ನೀಟ್ ಕೋಚಿಂಗ್ ತರಗತಿಗೆ ಶನಿವಾರ ಚಾಲನೆ ನೀಡಲಾಯಿತು. ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ತರಗತಿ ಉದ್ಘಾಟಿಸಿ ಮಾತನಾಡಿ,  ಬದಲಾಗುತ್ತಿರುವ ಜಗತ್ತಿನೊಡನೆ ನಾವೂ ಬದಲಾಗಬೇಕಿದೆ. ಹೆಚ್ಚು ಹೆಚ್ಚು ಸ್ಪರ್ಧಾತ್ಮಕವಾಗಿರುವ ಇಂದಿನ ದಿನಮಾನದಲ್ಲಿ ನಾವು ಉತ್ತಮ ಸ್ಥಾನ ಗಿಟ್ಟಿಸಬೇಕಾದರೆ ಇಂತಹ ತರಬೇತಿಗಳನ್ನು ಅಗತ್ಯವಾಗಿ ಪಡೆಯಲೇ ಬೇಕು ಎಂದರು. ಇಷ್ಟು ದಿನ ಹಳ್ಳಿಯ ಕಾಲೇಜಾದ ನಮ್ಮಲ್ಲಿ ಇಂತಹ ತರಬೇತಿಯ ಸೌಲಭ್ಯ ಇಲ್ಲ ಎಂಬ ಕೊರಗು ಇತ್ತು. ಇಂದಿನ ದಿನ ಅಂತಹ ಕೊರಗು ಮುಕ್ತಾಯವಾಗಿದೆ. ನಮ್ಮ

ವಿದ್ಯಾರಶ್ಮಿಯಲ್ಲಿ ಸಿಇಟಿ/ಜೆಇಇ/ನೀಟ್ ಕೋಚಿಂಗ್ ತರಗತಿಗೆ ಚಾಲನೆ Read More »

ಅಖಿಲ ಭಾರತ ಕರಕುಶಲ ಸ್ಪರ್ಧೆ : ಶ್ರೇಯ ಕೆ ಹೆಚ್‌ ಗೆ ಪ್ರಥಮ ಸ್ಥಾನ

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಥಮ ಎಂ ಎಸ್ಸಿ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರುವ ಶ್ರೇಯ ಕೆ ಹೆಚ್‌ ಗೆ ನವದೆಹಲಿಯ ನವ ಶ್ರೀ ಕಲೆ ಮತ್ತು ಸಂಸ್ಕೃತಿ ಸಂಸ್ಥೆ, ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ ‘ಶಿಲ್ಪ್ ಆಕಾರ್‌ʼ ನಲ್ಲಿ ಪ್ರಥಮ ಸ್ಥಾನ ದೊರೆತಿದೆ. “ಶಿಲ್ಪ್ ಆಕಾರ್” ಕಲೆ ಮತ್ತು ಕರಕುಶಲತೆಗೆ ಸಂಬಂಧಿಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಾಗಿದೆ. ಇದರಲ್ಲಿ ಭಾಗವಹಿಸುವವರು ತಮ್ಮ ಸೃಜನಶೀಲತೆ  ಮತ್ತು ಕಲಾತ್ಮಕ ಕೌಶಲ್ಯಗಳನ್ನು ವಿವಿಧ ಸಾಂಪ್ರದಾಯಿಕ ಅಥವಾ

ಅಖಿಲ ಭಾರತ ಕರಕುಶಲ ಸ್ಪರ್ಧೆ : ಶ್ರೇಯ ಕೆ ಹೆಚ್‌ ಗೆ ಪ್ರಥಮ ಸ್ಥಾನ Read More »

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್‍ಯಕ್ರಮ

ಪುತ್ತೂರು: ಸಮಾಜವನ್ನು ಪರಿವರ್ತನೆ ಮಾಡಲು ಯುವ ಜನತೆ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಿದೆ, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ, ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೇ ಇರಬಹುದು, ಆದರೂ ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜಾಗೃತಿ ಪಡೆಯಬೇಕು ಎಂದು ಪುತ್ತೂರು ಆರಕ್ಷಕ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀಕಾಂತ ರಾಥೋಡ್ ಹೇಳಿದರು.

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್‍ಯಕ್ರಮ Read More »

ಔಷಧೀಯ ಸಸ್ಯಗಳ ಪರಿಚಯ, ಸಂರಕ್ಷಣೆ | ವಿವೇಕ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಗ್ರಾಮ ವಿಕಾಸ ಕಾರ್ಯಕ್ರಮ ಒಂದು ಉತ್ತಮ ಯೋಜನೆಯಾಗಿದ್ದು ಗ್ರಾಮೀಣ ಭಾಗಗಳ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ತುಂಬಾ ಸಹಕಾರಿಯಾಗಿದೆ ಎಂದು ಕುಳ ಗ್ರಾಮದ ಓಜಾಲ ಸರ್ಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ .ಪಿ ಹೇಳಿದರು ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ಮತ್ತು ಎಂಸಿಎ ವಿಭಾಗದ ಆಶ್ರಯದಲ್ಲಿ ಓಜಾಲ ಪ್ರಾಥಮಿಕ ಶಾಲೆಯಲ್ಲಿ ನಡೆದ ಔಷಧೀಯ ಸಸ್ಯಗಳ ಪರಿಚಯ ಮತ್ತು ಸಂರಕ್ಷಣೆಯ ವಿಶೇಷ ಕಾರ್ಯಕ್ರಮ ವಿವೇಕ ಸಂಜೀವಿನಿಗೆ ಚಾಲನೆ ನೀಡಿ

ಔಷಧೀಯ ಸಸ್ಯಗಳ ಪರಿಚಯ, ಸಂರಕ್ಷಣೆ | ವಿವೇಕ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ Read More »

ಭಕ್ತಕೋಡಿ ಅಂಗನವಾಡಿಗೆ ಕೊಳೆತ ಮೊಟ್ಟೆ ಪೂರೈಕೆ

ಪುತ್ತೂರು: ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಮೊಟ್ಟೆಗಳ ಪೈಕಿ ಇದೀಗ ಪುತ್ತೂರು ತಾಲೂಕಿನ ಭಕ್ತಕೋಡಿ ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ ಎಂದು ತಿಳಿದು ಬಂದಿದೆ. ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಮೊಟ್ಟೆಗಳು ಪೂರೈಕೆಯಾಗುತ್ತಿರುವ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧೀ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈಗಾಗಲೇ ತನಿಕೆಗೆ ಆದೇಶಿಸಿದ್ದಾರೆ. ತನಿಖಾ ವರದಿ ಸಲ್ಲಿಕೆಯಾದ ಬಳಿಕ ಕ್ರಮ ಜರಗಿಸಲಾಗುವುದು ಎಂದು ಅವರು ಈಗಾಗಲೇ ತಿಳಿಸಿದ್ದಾರೆ. ಭಕ್ತಕೋಡಿ ಅಂಗನವಾಡಿಗ ಕೊಳೆತ ಮೊಟ್ಟೆ ಪೂರೈಕೆಯಾಗಿರುವ ಕುರಿತು ಸಿಡಿಪಿಒ ಪ್ರತಿಕ್ರಿಯೆ ನೀಡಿದ್ದು,

ಭಕ್ತಕೋಡಿ ಅಂಗನವಾಡಿಗೆ ಕೊಳೆತ ಮೊಟ್ಟೆ ಪೂರೈಕೆ Read More »

ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈಗೆ ಮುಖ್ಯಮಂತ್ರಿ ಪ್ರಶಂಸನಾ ಪತ್ರ

ಪುತ್ತೂರು: ಇಲ್ಲಿಯ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ರಾಷ್ಟೀಯ ಸೇನಾ ಯೋಜನೆಯ (ಎನ್‌ಸಿಸಿ) ಅಧಿಕಾರಿ ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈ ಅವರಿಗೆ ಎನ್‌ಸಿಸಿಯಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಯಿಂದ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಮಡಿಕೇರಿ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಕರ್ನಲ್  ಝೆಡ್.ಜಿ.ಅರ್ಹನ ಹಾಗೂ ಆಡಳಿತಾಧಿಕಾರಿ ಕರ್ನಲ್ ವಿ ಡಿ ಚಾಕೋ ಅವರು ಈ ಗೌರವ ಪತ್ರವನ್ನು ಮಡಿಕೇರಿ ಬೆಟಾಲಿಯನ್ ನಲ್ಲಿ ನೀಡಿ ಗೌರವಿಸಿದರು. ಭಾಮಿ ಅತುಲ್ ಶೆಣೈ

ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈಗೆ ಮುಖ್ಯಮಂತ್ರಿ ಪ್ರಶಂಸನಾ ಪತ್ರ Read More »

error: Content is protected !!
Scroll to Top