ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭಾರತಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಉದ್ಘಾಟನೆ | ಭಗವದ್ಗೀತೆ ಭಾರತ ದೇಶದ ಮಣ್ಣಿನ ಸತ್ವ ಮತ್ತು ತತ್ವ : ಡಾ. ಪ್ರಭಾಕರ್ ಭಟ್
ಪುತ್ತೂರು: ಶಾಲೆಯೆಂದರೆ ಅದು ಕಟ್ಟಡವಲ್ಲ, ಆ ಕಟ್ಟಡಕ್ಕೆ ಜೀವಧಾರೆ ತರುವವರು ಶಿಕ್ಷಕರು. ಶಿಕ್ಷಕರೆಂದರೆ ಶಾಲೆಯ ಆತ್ಮ, ಆ ಆತ್ಮದಿಂದ ಮಾತ್ರ ಶಾಲೆಯನ್ನು ಉನ್ನತಿಗೆ ತೆಗೆದುಕೊಂಡು ಹೋಗಲು ಸಾಧ್ಯ. ಶಿಕ್ಷಕರು ಪಾಠದ ಜೊತೆಗೆ ಪಠ್ಯೇತರ ವಿಷಯಗಳನ್ನು ಮಂಡಿಸುವುದರಿಂದ ವಿದ್ಯಾರ್ಥಿಗಳ ವಿಕಾಸದ ಬೆಳವಣಿಗೆಗೆ ಕಾರಣವಾಗುವುದು ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮುಳಿಯ ಜುವೆಲ್ಲರ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ […]










