ಲೇಖನ

ಮಾನವನ ಮಿದುಳಿನ ಆಗಾಧ ಸಾಮರ್ಥ್ಯದ ಜೊತೆಗೆ ಸ್ಪರ್ಧಿಸುವ ಕೃತಕ ಬುದ್ಧಿಮತ್ತೆ

ಎಐಗೆ ಅಸಾಧ್ಯವಾದದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ 18ನೆಯ ಶತಮಾನದಲ್ಲಿ ಜಗತ್ತಿನಾದ್ಯಂತ ಕೈಗಾರಿಕಾ ಕ್ರಾಂತಿ ಆರಂಭ ಆಗಿತ್ತು. ಇದು ಜಗತ್ತನ್ನು ಬಹಳ ಮುಂದಕ್ಕೆ ತೆಗೆದುಕೊಂಡು ಹೋಯಿತು. ಆದರೆ ಅದರಿಂದ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾಯಿತು ಅನ್ನೋದು ನಮ್ಮ ಗಮನಕ್ಕೆ ತಡವಾಗಿ ಬಂತು. 20ನೇ ಶತಮಾನದಲ್ಲಿ ಆಯಿತು ಇಂಟರ್ನೆಟ್ ಕ್ರಾಂತಿ 20ನೆಯ ಶತಮಾನದಲ್ಲಿ ಕೊನೆಯ ಭಾಗದಲ್ಲಿ ಆರಂಭವಾದ ಇಂಟರ್ನೆಟ್ ಕ್ರಾಂತಿ ಇಡೀ ಜಗತ್ತನ್ನು ಕಿರಿದು ಮಾಡಿತು. ಮೊಬೈಲಿನಂತಹ ಸಂವಹನ ಮಾಧ್ಯಮ ಪ್ರಭಾವಶಾಲಿ ಆಗಿ ಸಮಾಜವನ್ನು ತಲುಪಿದವು. […]

ಮಾನವನ ಮಿದುಳಿನ ಆಗಾಧ ಸಾಮರ್ಥ್ಯದ ಜೊತೆಗೆ ಸ್ಪರ್ಧಿಸುವ ಕೃತಕ ಬುದ್ಧಿಮತ್ತೆ Read More »

ಜೀವನದಲ್ಲಿ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ!

ತಪ್ಪು ರಿಪೀಟ್ ಆದರೆ ನಾವು ಜನರ ವಿಶ್ವಾಸ ಕಳೆದುಕೊಳ್ಳುತ್ತೇವೆ ಮಹಾತ್ಮಾ ಗಾಂಧೀಜಿ ಸಪ್ತ ಮಹಾಪಾತಕಗಳ ಬಗ್ಗೆ ಹೇಳಿದ್ದರು. ಆ ಏಳು ಪಾತಕಗಳು ಇಂದಿಗೂ ಪ್ರಸ್ತುತವಾಗಿವೆ. ಮುಂದೆಯೂ ಪ್ರಸ್ತುತವೇ ಆಗಿರುತ್ತವೆ. ಅವುಗಳು ಸಾರ್ವಕಾಲಿಕ ಸತ್ಯಗಳು. ಪ್ರಮಾದಗಳು, ತಪ್ಪುಗಳು, ಪಾಪಗಳು ಮತ್ತು ಪಾತಕಗಳು ಗೊತ್ತಿಲ್ಲದೆ ಮಾಡುವ ತಪ್ಪುಗಳು ಪ್ರಮಾದಗಳು. ಅವುಗಳಿಗೆ ಕ್ಷಮೆ ಇದೆ. ಗೊತ್ತಿದ್ದೂ ಮಾಡುವುದು ತಪ್ಪುಗಳು. ಆ ತಪ್ಪುಗಳಿಗೆ ಕ್ಷಮೆ ಕೇಳಿ ಒಮ್ಮೆ ತಪ್ಪಿಸಿಕೊಳ್ಳಬಹುದು. ಆದರೆ ಕ್ಷಮಿಸುವ ಅಧಿಕಾರ ನಿಮ್ಮ ತಪ್ಪುಗಳಿಂದ ನೊಂದವರಿಗೆ ಮಾತ್ರ ಇರುತ್ತದೆ. ಅದೇ ತಪ್ಪು

ಜೀವನದಲ್ಲಿ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ! Read More »

ಶೋಕವು ಶ್ಲೋಕವಾದ ಕತೆ ರಾಮಾಯಣ

ಆದಿ ಕವಿ ವಾಲ್ಮೀಕಿ, ಆದಿ ಕಾವ್ಯ ರಾಮಾಯಣ ಕೂಜನ್ತಂ ರಾಮ ರಾಮೇತಿಮಧುರ ಮಧುರಾಕ್ಷರಮ್|ಆರುಹ್ಯ ಕವಿತಾ ಶಾಖಾಂವಂದೇ ವಾಲ್ಮೀಕಿ ಕೋಕಿಲಂ|| ಈ ಒಂದು ಶ್ಲೋಕ ಸಾಕು ಆದಿಕವಿ ವಾಲ್ಮೀಕಿಯ ಮಹತ್ವವನ್ನು ಅಳೆಯಲು. ರಾಮ,ರಾಮ ಎಂಬ ಸುಮಧುರ ಅಕ್ಷರವನ್ನು ಕೂಗುತ್ತ ಕವಿತೆಯೆಂಬ ರೆಂಬೆಯನ್ನು ಆರೋಹಣ ಮಾಡಿರುವ ವಾಲ್ಮೀಕಿ ಎಂಬ ಕವಿ ಕೋಗಿಲೆಗೆ ನನ್ನ ನಮಸ್ಕಾರಗಳು ಎಂಬುದು ಆ ಶ್ಲೋಕದ ಅರ್ಥ. ಜಗತ್ತಿನ ಮೊದಲ ಕವಿ ವಾಲ್ಮೀಕಿ ಮತ್ತು ಮೊದಲ ಕಾವ್ಯ ರಾಮಾಯಣ. ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ನಡೆದ ಐತಿಹಾಸಿಕ ಘಟನೆಯೇ

ಶೋಕವು ಶ್ಲೋಕವಾದ ಕತೆ ರಾಮಾಯಣ Read More »

ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ

ಒಂದೇ ಒಂದು ಕಳಂಕ, ಕಪ್ಪುಚುಕ್ಕೆ ಇಲ್ಲದೆ ಎಂಟು ದಶಕ ಬದುಕಿದ್ದು ಅದ್ಭುತ! ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು ನಮ್ಮನ್ನಗಲಿ ಹೋಗಿರುವುದರಿಂದ ದಸರಾ ಸಂಭ್ರಮದ ನಡುವೆ ದೇಶದಲ್ಲಿ ಸೂತಕದ ಛಾಯೆ ಹರಡಿದಂತಾಗಿದೆ. ರತನ್‌ ಟಾಟಾ ಭಾರತದ ಕೈಗಾರಿಕೋದ್ಯಮ ಕ್ಷೇತ್ರದ ಯುಗ ಪುರುಷ ಎಂದರೆ ಅತಿಶಯೋಕ್ತಿ ಆಗಲಾರದು. ಶತಮಾನಗಳ ಕಾಲ ವಿದೇಶಿಗರ ಆಳ್ವಿಕೆಗೆ ಒಳಗಾಗಿ ದೇಶ ತನ್ನ ಅಂತಃಸ್ಸತ್ವವನ್ನೇ ಕಳೆದುಕೊಂಡು ನಿಸ್ತೇಜವಾಗಿದ್ದ ಕಾಲದಲ್ಲಿ ಹುಟ್ಟಿಕೊಂಡದ್ದು ಟಾಟಾ ಕಂಪನಿ. ಆ ಟಾಟಾ ಪರಿವಾರದ ಕುಡಿಯಾಗಿರುವ ರತನ್‌

ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ Read More »

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ!

ಭಾರತದ ಉದ್ಯಮ ಕ್ಷೇತ್ರದ ಯುಗ ಪ್ರವರ್ತಕನ ಬದುಕಿನಲ್ಲಿದೆ ಸಾವಿರಾರು ಸ್ಫೂರ್ತಿದಾಯಕ ಕಥೆ ಹೊಸದಿಲ್ಲಿ : ನಿನ್ನೆ ರಾತ್ರಿ ನಮ್ಮನ್ನಗಲಿರುವ ರತನ್‌ ಟಾಟಾ ಅವರಿಗಾಗಿ ದೇಶ ಕಂಬನಿ ಮಿಡಿಯುತ್ತಿದೆ. ಜನರು ತಮ್ಮ ಕುಟುಂಬದ ಹಿರಿಯನನ್ನು ಕಳೆದುಕೊಂಡಂಥ ದುಃಖದ ಭಾವವನ್ನು ಅನುಭವಿಸುತ್ತಿದ್ದಾರೆ. ಟಾಟಾ ಕಂಪನಿ ಜನರ ಬದುಕಿನಲ್ಲಿ ಬೀರಿದ ಪರಿಣಾಮವಿದು. ಇಂದು ಇಡೀ ದೇಶದಲ್ಲಿ ಟಾಟಾ ಕಂಪನಿಯ ಯಾವುದಾದರೊಂದು ಉತ್ಪನ್ನವನ್ನು ಬಳಸದೆ ಇರುವ ಜನರನ್ನು ಹುಡುಕಿದರೂ ಸಿಗುವುದಿಲ್ಲ. ಉಪ್ಪಿನಿಂದ ಹಿಡಿದು ವಿಮಾನದ ತನಕ ಟಾಟಾ ಸಮೂಹ ಕೈಯಾಡಿಸದ ಕ್ಷೇತ್ರವಿಲ್ಲ. ಇದರ

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ! Read More »

ಮಾ ದುರ್ಗಾ ದುರ್ಗತಿ ಪರಿಹಾರಿಣಿ

ನವರಾತ್ರಿ – ಒಂದು ಹಬ್ಬ, ನೂರಾರು ಆಯಾಮ ಒಂದು ಹಬ್ಬದ ಹಿಂದೆ ನೂರಾರು ಪುರಾಣದ ಕಥೆಗಳು, ನೂರಾರು ಇತಿಹಾಸದ ಘಟನೆಗಳು ಬೆಸೆದುಕೊಂಡ ಒಂದು ಹಬ್ಬ ಇದ್ದರೆ ಅದು ನವರಾತ್ರಿ. ನವರಾತ್ರಿ ಕೇವಲ ಒಂದು ಹಬ್ಬ ಅಲ್ಲ, ಅದೊಂದು ಅದ್ಭುತವಾದ ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಸಮಾರಾಧನೆ, ಸ್ತ್ರೀ ಶಕ್ತಿಯ ಆರಾಧನೆ, ಒಂದು ಕೌಟುಂಬಿಕ ನಿವೇದನೆ ಮತ್ತು ನಮ್ಮೊಳಗಿನ ಶಕ್ತಿಯ ಆವಾಹನೆ. ಇಷ್ಟೆಲ್ಲವನ್ನೂ ಒಳಗೊಂಡ ಈ ಹಬ್ಬವು ಕರ್ನಾಟಕದ ನಾಡಹಬ್ಬ ಆದದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ದುರ್ಗಾಷ್ಟಮಿ – ದುರ್ಗತಿ

ಮಾ ದುರ್ಗಾ ದುರ್ಗತಿ ಪರಿಹಾರಿಣಿ Read More »

ನವರಾತ್ರಿ – ನವಧಾತ್ರಿ – ನವ ನವೊನ್ಮೇಷಶಾಲಿನಿ

ನವರಾತ್ರಿ ಎಂದರೆ ನಮ್ಮೊಳಗಿನ ಶಕ್ತಿಯ ಆವಾಹನೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿರುವ ಭಾರತದಲ್ಲಿ ಇಡೀ ವರ್ಷವೂ ಹಬ್ಬಗಳೇ ಹಬ್ಬಗಳು. ನಾವು ಆಚರಿಸುವಷ್ಟು ಹಬ್ಬಗಳನ್ನು ಜಗತ್ತಿನ ಬೇರೆ ಯಾವ ರಾಷ್ಟ್ರ ಕಲ್ಪನೆ ಮಾಡಲೂ ಸಾಧ್ಯ ಇಲ್ಲ. ಹಬ್ಬಗಳು ನಮ್ಮ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ನಂಬಿಕೆಗಳ ಒಟ್ಟು ಮೊತ್ತವೇ ಆಗಿವೆ. ನವರಾತ್ರಿ – ಜಗತ್ತಿನ ಅತಿ ದೀರ್ಘ ಅವಧಿಯ ಹಬ್ಬ ಈ ಹಬ್ಬಕ್ಕೆ ನವರಾತ್ರಿ ಎಂಬ ಹೆಸರಿದ್ದರೂ ಇದು ಹತ್ತು ದಿನಗಳ ಹಬ್ಬ. ಆದ್ದರಿಂದ ಇದನ್ನು ದಸರಾ (ದಶಹರಾ ಅಂದರೆ ಹತ್ತು

ನವರಾತ್ರಿ – ನವಧಾತ್ರಿ – ನವ ನವೊನ್ಮೇಷಶಾಲಿನಿ Read More »

ನೈಜೀರಿಯಾ ದೇಶದ ದಮನಿತ ಲೇಖಕ ಸೋಯಿಂಕ

ಜೈಲಿನ ಅನ್ನದಲ್ಲಿ ಹುದುಗಿದ್ದ ಮಾಂಸದಲ್ಲಿದ್ದ ಎಲುಬಿನ ತುಂಡುಗಳೆ ಅವರ ಲೇಖನಿಯಾಗಿತ್ತು ಅಕಿನ್ ವಾಂಡೆ ಒಲುವಿಲೇ ಸೊಯೀಂಕ ಯಾರು ಎಂದು ಗೂಗಲ್ ಸರ್ಚ್ ಮಾಡಿ. ನಿಮಗೆ ಥಟ್ಟನೆ ದೊರೆಯುವ ಉತ್ತರ ನೊಬೆಲ್ ಬಹುಮಾನ ಪಡೆದ ಮೊಟ್ಟಮೊದಲನೇ ಕಪ್ಪು ವರ್ಣದ ಸಾಹಿತಿ ಎಂದು. ಆತನ ಬದುಕು ಆತನ ಬರವಣಿಗೆಯಷ್ಟೇಪ್ರಖರವಾಗಿದೆ ಮತ್ತು ಹೋರಾಟಗಳಿಂದ ಕೂಡಿದೆ. ಆತ ನೈಜೀರಿಯ ಸೆರೆಮನೆಯಲ್ಲಿ ಉಸಿರುಗಟ್ಟುತ್ತಿದ್ದ ಕಪ್ಪು ಚರ್ಮದವರು ಹೋರಾಟ ಮಾಡುವುದು, ಹೋರಾಟಕ್ಕೆ ಪ್ರಚೋದನೆ ಕೊಡುವುದು ಇದನ್ನು ಯಾವುದೇ ಸರ್ವಾಧಿಕಾರಿ ಆಫ್ರಿಕನ್ ಸರಕಾರ ಸಹಿಸಿಕೊಂಡ ಉದಾಹರಣೆ ಇದೆಯಾ?

ನೈಜೀರಿಯಾ ದೇಶದ ದಮನಿತ ಲೇಖಕ ಸೋಯಿಂಕ Read More »

ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ್ದ ಗುಂಡಪ್ಪ ವಿಶ್ವನಾಥ್

ಅವರ ಆ ನಿರ್ಧಾರದಿಂದ ಕ್ರಿಕೆಟ್ ಗೆದ್ದಿತ್ತು, ಆದರೆ ಭಾರತ ಸೋತಿತ್ತು ಫೆಬ್ರುವರಿ 19, 1980. ಮುಂಬಯಿಯ ವಿಶಾಲವಾದ ವಾಂಖೇಡೆ ಸ್ಟೇಡಿಯಂ. ಹಲವಾರು ಐತಿಹಾಸಿಕ ಕ್ರಿಕೆಟ್ ದಾಖಲೆಗಳಿಗೆ ಸಾಕ್ಷಿಯಾದ ಹುಲ್ಲುಹಾಸಿನ ಸ್ಟೇಡಿಯಂ ಅದು. ಅದು ಬಿಸಿಸಿಐ ಸುವರ್ಣ ಮಹೋತ್ಸವದ ನೆನಪಿನ ಟೆಸ್ಟ್ ಆಗಿತ್ತು ಅಂದು ಅಲ್ಲಿ ಆತಿಥೇಯ ಭಾರತ ಮತ್ತು ಇಂಗ್ಲೆಂಡ್‌ಗಳ ನಡುವೆ ಒಂದು ಐತಿಹಾಸಿಕವಾದ ಕ್ರಿಕೆಟ್ ಟೆಸ್ಟ್ ಪಂದ್ಯ ಏರ್ಪಟ್ಟಿತ್ತು. ಅದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸುವರ್ಣ ಮಹೋತ್ಸವ ವರ್ಷದ ನೆಪದಲ್ಲಿ ಆಡಲಾದ ವಿಶೇಷವಾದ

ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ್ದ ಗುಂಡಪ್ಪ ವಿಶ್ವನಾಥ್ Read More »

ಕನ್ನಡ ಚಿತ್ರರಂಗ ಮರೆಯಬಾರದ ಹೆಸರು ವಿಜಯ ಭಾಸ್ಕರ್

2024 ಆ ಸಂಗೀತ ನಿರ್ದೇಶಕನ ಜನ್ಮ ಶತಮಾನದ ವರ್ಷ ಅವರು ಬದುಕಿದ್ದರೆ ಈ ವರ್ಷ ಅವರಿಗೆ ನೂರು ತುಂಬುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಮಾಧುರ್ಯಪೂರ್ಣ ಹಾಡುಗಳನ್ನು ಕೊಟ್ಟ ಕೀರ್ತಿ ಅವರದ್ದು. ಹಾಡುಗಳ ಮೂಲಕ ಅವರು ಇಂದಿಗೂ ನಮ್ಮ ನಡುವೆ ಜೀವಂತರಾಗಿದ್ದಾರೆ ಎನ್ನಬಹುದು. ಗಟ್ಟಿಯಾದ ಶಾಸ್ತ್ರೀಯ ಚೌಕಟ್ಟು 1924ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವರು. ಆದರೆ ಬಾಲ್ಯದಿಂದಲೂ ಅವರ ಆಸಕ್ತಿ ಸಂಗೀತದ ಕಡೆಗೆ ಇತ್ತು. ಗೋವಿಂದ್ ಭಾವೆ ಎಂಬ ಗುರುವಿನಿಂದ ಅವರು ಹಿಂದೂಸ್ತಾನಿ ಸಂಗೀತದ ಶಿಕ್ಷಣ

ಕನ್ನಡ ಚಿತ್ರರಂಗ ಮರೆಯಬಾರದ ಹೆಸರು ವಿಜಯ ಭಾಸ್ಕರ್ Read More »

error: Content is protected !!
Scroll to Top