ಲೇಖನ

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…!

ರಾಮಾನುಜನ್ ಬದುಕಿನಲ್ಲಿ ತಿರುವು ಕೊಟ್ಟ ಆ ಘಟನೆ ಯಾವುದು? 1913ನೇ ಇಸವಿಯ ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯ ಒಂದು ದಿನ. ಆಕ್ಸಫರ್ಡ್ ವಿವಿಯ ತನ್ನ ಕೊಠಡಿಯಲ್ಲಿ ಕುಳಿತು ಗಣಿತದ ಪ್ರಸಿದ್ಧ ಪ್ರೊಫೆಸರ್ ಹಾರ್ಡಿ ಸರ್ ಅವರು ಸಿಗಾರ್ ಎಳೆಯುತ್ತಿದ್ದರು. ಅವರ ಟೇಬಲ್ ಮೇಲೆ ಅಂಚೆಚೀಟಿ ಹೊತ್ತ ಕಂದು ಬಣ್ಣದ ಒಂದು ಕವರ್ ಬಂದು ಕೂತಿತ್ತು. ಅದು ಭಾರತದಿಂದ ಹಡಗಿನಲ್ಲಿ ಕೂತು ಇಂಗ್ಲೆಂಡಿಗೆ ಬಂದಿತ್ತು. ಹಾರ್ಡಿ ಸರ್ ಅದನ್ನು ಮೇಲೆ ಮೇಲೆ ಒಮ್ಮೆ ನೋಡಿ ಬದಿಗೆ ಸರಿಸಿದರು. […]

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…! Read More »

ಕಿರಿಕ್ ಪಾರ್ಟಿಯ ಸಾನ್ವಿ ಇದೀಗ ಇಡೀ ಭಾರತದ ಕೃಶ್‌

ರಶ್ಮಿಕಾ ಮಂದಣ್ಣ ಬೆಳೆದು ಬಂದ ದಾರಿ ನಿಜಕ್ಕೂ ವಿಸ್ಮಯ ಇಂದು ಇಡೀ ಭಾರತದ ಸಿನೆಮಾ ಇಂಡಸ್ಟ್ರಿ ಆಕೆಯ ಸೌಂದರ್ಯ ಮತ್ತು ಪ್ರತಿಭೆಗೆ ಬೆರಗಾಗಿದೆ. ಆಕೆಯನ್ನು ಸಿನೆಮಾ ಪಂಡಿತರು ಭಾರತದ ಕೃಶ್‌ ಎಂದು ಕರೆಯಲು ಆರಂಭಿಸಿದ್ದಾರೆ. ಆಕೆ ಇಂದು ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟಿ ಎಂದು ಕರೆಯಲ್ಪಟ್ಟಿದ್ದಾರೆ. ಭಾರತದ ಹೆಚ್ಚಿನ ಸೂಪರ್‌ಸ್ಟಾರ್ ನಟರ ಜೊತೆ ಆಕೆ ನಟಿಸಿ ಆಗಿದೆ. ದಕ್ಷಿಣ ಭಾರತದ ಒಬ್ಬ ನಟಿ ಅಮಿತಾಬ್, ಸಲ್ಮಾನ್ ಖಾನ್ ಮೊದಲಾದ ಮಹಾನ್ ನಟರ ಸಿನೆಮಾದಲ್ಲಿ

ಕಿರಿಕ್ ಪಾರ್ಟಿಯ ಸಾನ್ವಿ ಇದೀಗ ಇಡೀ ಭಾರತದ ಕೃಶ್‌ Read More »

ಜಗತ್ತು ಹೆಚ್ಚು ನೆನಪಿಡುವುದು ಮೊದಲಿಗರನ್ನು ಮಾತ್ರ

ನೀವು ಕೂಡಾ ಪಯೋನೀರ್ ಆಗಬಹುದು ಜಗತ್ತಿನಲ್ಲಿ ಯಾವುದೇ ಸಾಧನೆಯನ್ನು ಮೊದಲು ಮಾಡಿದವರನ್ನು ಪಯೋನೀರ್ ಎಂದು ಕರೆಯುತ್ತಾರೆ. ಜಗತ್ತು ಅವರನ್ನು ಮಾತ್ರ ಹೆಚ್ಚು ನೆನಪಿಟ್ಟುಕೊಳ್ಳುತ್ತದೆ. 1) ಭಾರತದ ಮೊತ್ತಮೊದಲ ಮಹಿಳಾ ವೈದ್ಯೆ ಎಂದರೆ ಅದು ಡಾಕ್ಟರ್ ಆನಂದಿಬಾಯಿ ಜೋಶಿ. ಅದರ ನಂತರ ಸಾವಿರಾರು ಮಹಿಳೆಯರು ವೈದ್ಯರಾದರು. ಜಗತ್ತು ಅವರನ್ನೆಲ್ಲ ಗಮನಿಸಿದ್ದು ಕಡಿಮೆ. 2) ಜುಲೈ 20, 1969ರಂದು ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸಬೇಕಾದದ್ದು ಎಡ್ವಿನ್ ಆಲ್ಡ್ರಿನ್. ಆದರೆ ಆತ ಸ್ವಲ್ಪ ಅಳುಕಿದ ಕಾರಣ ನೀಲ್ ಆರ್ಮ್‌ಸ್ಟ್ರಾಂಗ್ ಮೊದಲು

ಜಗತ್ತು ಹೆಚ್ಚು ನೆನಪಿಡುವುದು ಮೊದಲಿಗರನ್ನು ಮಾತ್ರ Read More »

ಮಕ್ಕಳ ಬಾಲ್ಯ ಕಸಿದ ಮೊಬೈಲ್ ಎಂಬ ಮಾಯಾಂಗನೆ

ಮಕ್ಕಳನ್ನು ಅಡಿಕ್ಷನ್ ಮಟ್ಟದಿಂದ ಹೊರತರುವುದು ಹೇಗೆ? ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ ಕೈಗೆ ಮೊಬೈಲ್ ಎಂಬ ಮಾಯಾಂಗನೆ ಬಂದಾಗಿದೆ. ನಮ್ಮ ಮಕ್ಕಳನ್ನು ಈ ಮಾಯಾಜಾಲದಿಂದ ಸದ್ಯಕ್ಕೆ ಹೊರತರುವುದು ಕಷ್ಟ ಎಂಬ ಪರಿಸ್ಥಿತಿ ಎದುರಾಗಿದೆ. ನನ್ನ ಅನುಭವಕ್ಕೆ ಸಾವಿರಾರು ಇಂತಹ ಘಟನೆಗಳು ಬಂದಿವೆ. ಅವುಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತೇನೆ. ಘಟನೆ 1– ಒಂದು ಮಧ್ಯಾಹ್ನದ ಹೊತ್ತಿಗೆ ನನಗೆ ನನ್ನ ಶಾಲೆಯ ಪೋಷಕರಿಂದ ಒಂದು ಕಾಲ್ ಬಂತು. ಆ ಅಮ್ಮ ತುಂಬಾ ಆತಂಕದಿಂದ ಮಾತಾಡುತ್ತಿದ್ದರು.ಸರ್, ನನ್ನ ಮಗಳು

ಮಕ್ಕಳ ಬಾಲ್ಯ ಕಸಿದ ಮೊಬೈಲ್ ಎಂಬ ಮಾಯಾಂಗನೆ Read More »

ನೀವೆಷ್ಟು ಪಾಸಿಟಿವ್ ಥಿಂಕರ್ ಆಗಿದ್ದೀರಿ?

ಅದಕ್ಕೊಂದು ಸ್ವಯಂಮಾಪಕ ಇಲ್ಲಿದೆ ನೀವೆಷ್ಟು ಪಾಸಿಟಿವ್ ಥಿಂಕರ್ ಆಗಿರುತ್ತೀರಿ ಅಷ್ಟು ಯಶಸ್ಸು ನಿಮ್ಮದಾಗುತ್ತದೆ. ನೀವು ಪಾಸಿಟಿವ್ ಆಗಿದ್ದರೆ ನಿಮ್ಮ ಬದುಕು ಇನ್ನೊಬ್ಬರಿಗೆ ಮಾದರಿ ಆಗುತ್ತದೆ. ನೀವು ಎಲ್ಲರಿಗೂ ಸ್ಫೂರ್ತಿ ತುಂಬುವ ಐಕಾನ್ ಆಗುತ್ತೀರಿ. ನಿಮ್ಮ ಬದುಕು ಇತರರಿಗೆ ಯಶೋಗಾಥೆ ಆಗುತ್ತದೆ. ನಿಮ್ಮ ಸಿಗ್ನೇಚರ್ ಸಾವಿರಾರು ಮಂದಿಗೆ ಆಟೋಗ್ರಾಫ್ ಆಗುತ್ತದೆ. ನಿಮ್ಮ ಆತ್ಮವಿಶ್ವಾಸದ ಮಟ್ಟವು ಯಾವಾಗಲೂ ಒಂದೇ ರೀತಿ ಇರುತ್ತದೆ. ಸೋಲು ನಿಮ್ಮನ್ನು ಕಂಡು ಹೆದರುತ್ತದೆ. ನಿಮ್ಮ ಬದುಕಿನ ಪುಸ್ತಕ ಸಾವಿರಾರು ಮಂದಿಗೆ ಪ್ರೇರಣೆ ಕೊಡುವ ಆಟೊಬಯೋಗ್ರಾಫಿ ಆಗುತ್ತದೆ.

ನೀವೆಷ್ಟು ಪಾಸಿಟಿವ್ ಥಿಂಕರ್ ಆಗಿದ್ದೀರಿ? Read More »

ಎಲ್.ಎಸ್ ಶೇಷಗಿರಿರಾಯರು ಕನ್ನಡದ ನಿಜವಾದ ಅಸ್ಮಿತೆ

ಅವರು ಬದುಕಿದ್ದರೆ ಈಗ ನೂರು ತುಂಬುತ್ತಿತ್ತು 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರ ಮಾತುಗಳಿಗೆ, ಸಜ್ಜನಿಕೆಗೆ ಶರಣಾಗಿದ್ದೆ. ಅಷ್ಟು ದೊಡ್ಡ ಲೇಖಕರಾಗಿದ್ದರೂ ತಾನು ಏನೂ ಅಲ್ಲ ಎಂಬ ಅವರ ಆರಂಭದ ಮಾತುಗಳು ಹೃದಯದಲ್ಲಿ ಗಟ್ಟಿಯಾಗಿ ಕೂತಿದ್ದವು. ಪ್ರೊ.ಎಲ್.ಎಸ್ ಶೇಷಗಿರಿರಾಯರು ಕನ್ನಡ ಸಾರಸ್ವತ ಲೋಕದ ಧ್ರುವತಾರೆ ಎಂದು ನನಗೆ ಅಂದು ಅರ್ಥವಾಗಿ ಹೋಗಿತ್ತು. ಬಾಲ್ಯದಲ್ಲಿ ಓದಿದ್ದ 510 ಭಾರತ ಭಾರತಿ ಪುಸ್ತಕಗಳು ನಾನು ಬಾಲ್ಯದಲ್ಲಿ ಅತಿಹೆಚ್ಚು ಓದಿದ್ದು ‘ಭಾರತ

ಎಲ್.ಎಸ್ ಶೇಷಗಿರಿರಾಯರು ಕನ್ನಡದ ನಿಜವಾದ ಅಸ್ಮಿತೆ Read More »

ಮುಂಬಯಿ – ಕನ್ನಡ ಸಾಹಿತ್ಯದ ಶಕ್ತಿಕೇಂದ್ರ

ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಯಲ್ಲಿ ಮುಂಬಯಿ ಕನ್ನಡಿಗರ ಕೊಡುಗೆ ಭಾರಿ ದೊಡ್ಡದು ಕನ್ನಡ ರಾಜ್ಯೋತ್ಸವ ನಾಡಿನ ಕದವನ್ನು ತಟ್ಟುತ್ತಿರುವಾಗ ದೇಶದಾದ್ಯಂತ ಹರಡಿರುವ ಮತ್ತು ಕನ್ನಡವನ್ನು ಬೆಳೆಸಿರುವ ಮಹನೀಯರ ಕೊಡುಗೆಗಳನ್ನು ಉಲ್ಲೇಖ ಮಾಡದೆ ಮುಂದೆ ಹೋಗುವ ಹಾಗೆಯೇ ಇಲ್ಲ.ಅದರಲ್ಲಿಯೂ ಮಹಾರಾಷ್ಟ್ರದ ನಗರಗಳಾದ ಮುಂಬಯಿ, ಸೊಲ್ಲಾಪುರ, ಪುಣೆ, ನಾಂದೇಡ್, ಸಾಂಗ್ಲಿ, ಕೊಲ್ಲಾಪುರ ಮತ್ತು ಉಸ್ಮಾನಾಬಾದ್‌ಗಳಲ್ಲಿ ನೆಲೆಸಿರುವ ಅಂದಾಜು ಅರುವತ್ತು ಲಕ್ಷದಷ್ಟಿರುವ ಕನ್ನಡಿಗರು ತಮ್ಮ ಕನ್ನಡದ ಪ್ರೀತಿಯನ್ನು, ಅಸ್ಮಿತೆಯನ್ನು ಜತನದಿಂದ ಕಾಪಾಡಿಕೊಂಡು ಬರುತ್ತಿರುವುದನ್ನು ನೋಡಿದಾಗ ಅಭಿಮಾನದಿಂದ ನಮ್ಮ ಎದೆ ಉಬ್ಬುತ್ತದೆ.

ಮುಂಬಯಿ – ಕನ್ನಡ ಸಾಹಿತ್ಯದ ಶಕ್ತಿಕೇಂದ್ರ Read More »

ಆರದಿರಲಿ ನಮ್ಮೊಳಗಿನ ಅರಿವಿನ ದೀಪ…

ದೀಪಾವಳಿ ಹಬ್ಬದ ಸಂಭ್ರಮಕ್ಕೆ ವಿಶೇಷ ಲೇಖನ ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದರ ಮತ್ತು ಅಜ್ಞಾನದ ಮೇಲೆ ಜ್ಞಾನದ ಗೆಲುವನ್ನು ಸಂಕೇತಿಸುವ ಹಬ್ಬ ದೀಪಾವಳಿ. ಈ ದಿನದಲ್ಲಿ ಯಾರು ಸಂಪತ್ತನ್ನು ಬಯಸುತ್ತಾರೋ ಅವರ ಬಳಿ ಲಕ್ಷ್ಮಿ ಬರುತ್ತಾಳೆ, ಯಾರು ಆರೋಗ್ಯವನ್ನು ಬಯಸುತ್ತಾರೋ ಅವರ ಬಳಿ ಶಕ್ತಿ ಬರುತ್ತಾಳೆ ಮತ್ತು ಯಾರು ಜ್ಞಾನವನ್ನು ಬಯಸುತ್ತಾರೋ ಅವರ ಬಳಿ ಸರಸ್ವತಿ ಬರುತ್ತಾಳೆ ಎಂದು ಹೇಳಲಾಗುತ್ತದೆ. ದೀಪಾವಳಿ ದೇಶದ ಬಹುದೊಟ್ಟ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಪ್ರತಿ ರಾಜ್ಯದಲ್ಲಿ

ಆರದಿರಲಿ ನಮ್ಮೊಳಗಿನ ಅರಿವಿನ ದೀಪ… Read More »

ನಕ್ಷತ್ರಗಳೇ ಆಕೆಗೆ ಬಾಲ್ಯದಲ್ಲಿ ಗಡಿಯಾರ ಆಗಿತ್ತು

ಭಾರತದ ಅತ್ಯಂತ ಯಶಸ್ವಿ ಹಾಕಿ ಕ್ಯಾಪ್ಟನ್ ರಾಣಿ ರಾಂಪಾಲ್ ಕ್ರಿಕೆಟಿಗೆ ಸಚಿನ್ ತೆಂಡೂಲ್ಕರ್, ಚೆಸ್‌ಗೆ ವಿಶ್ವನಾಥನ್ ಆನಂದ್, ಫುಟ್ಬಾಲ್‌ಗೆ ಸುನೀಲ್ ಚೇತ್ರಿ ಹೇಗೋ ಮಹಿಳಾ ಹಾಕಿಗೆ ಒಂದೇ ಹೆಸರು, ಅದು ರಾಣಿ ರಾಂಪಾಲ್. ಅಂತಹ ರಾಣಿ ರಾಂಪಾಲ್ 15 ವರ್ಷಗಳ ಸುದೀರ್ಘವಾದ ಹಾಕಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆ ಶೂನ್ಯವನ್ನು ತುಂಬಿಸಬಲ್ಲ ಇನ್ನೊಬ್ಬ ಹಾಕಿ ಆಟಗಾರ್ತಿ ಭಾರತದಲ್ಲಿ ಈವರೆಗೆ ಬಂದಿಲ್ಲ ಅನ್ನೋದು ಆಕೆಯ ಖದರು. ಆಕೆ ಭಾರತ ಕಂಡ ಅತ್ಯಂತ ಯಶಸ್ವಿ ಮಿಡ್ ಫೀಲ್ಡರ್ ಮತ್ತು

ನಕ್ಷತ್ರಗಳೇ ಆಕೆಗೆ ಬಾಲ್ಯದಲ್ಲಿ ಗಡಿಯಾರ ಆಗಿತ್ತು Read More »

ಜಗದಗಲ ಇವೆ ಅಚ್ಚರಿಯ ಸಂಗತಿಗಳು!

ನಂಬಲು ಕಷ್ಟವಾದರೂ ನಂಬಲೇ ಬೇಕು ನಾವು ಕಣ್ಣು ತೆರೆದು ನೋಡಿದರೆ ಜಗತ್ತಿನಲ್ಲಿ ನಮ್ಮ ಊಹೆಗೂ ಮೀರಿದ ಸಂಗತಿಗಳು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡೋಣ. 1) ಜಗತ್ತಿನ ಅತಿ ಸಣ್ಣ ದೇಶ ಅಂದರೆ ವ್ಯಾಟಿಕನ್. ಅದರ ಜನಸಂಖ್ಯೆ ಕೇವಲ 453. ಅದರ ವಿಸ್ತೀರ್ಣ 0.44 ಚದರ ಕಿಲೋಮೀಟರ್. ಈ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿಬರಲು 30 ನಿಮಿಷ ಸಾಕು. 2) ವ್ಯಾಟಿಕನ್ ದೇಶದಲ್ಲಿ ಆದಾಯ ತೆರಿಗೆ ಇಲ್ಲ. ಅಲ್ಲಿ ಬಸ್ಸು, ರೈಲು, ಕ್ಯಾಬ್‌ಗಳಂತಹ ಸಾರ್ವಜನಿಕ ಸಾರಿಗೆ ಇಲ್ಲವೇ

ಜಗದಗಲ ಇವೆ ಅಚ್ಚರಿಯ ಸಂಗತಿಗಳು! Read More »

error: Content is protected !!
Scroll to Top