ಲೇಖನ

ಇಂದು ಹನುಮಾನ್‌ ಜಯಂತಿ

ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ ಹನುಮಂತ ಯತ್ರ ಯತ್ರ ರಘುನಾಥ ಕೀರ್ತನಂತತ್ರ ತತ್ರ ಕೃತಮಸ್ತಕಾಂಜಲಿಮ್|ಭಾಷ್ಪವಾರಿ ಪರಿಪೂರ್ಣ ಲೋಚನಂಮಾರುತಿಂ ನಮತ ರಾಕ್ಷಸಾಂತಕಮ್||ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ. ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು […]

ಇಂದು ಹನುಮಾನ್‌ ಜಯಂತಿ Read More »

ಹಣ್ಣಿನ ಮರದಷ್ಟೆ ಎತ್ತರದ ವ್ಯಕ್ತಿತ್ವ ಡಾಕ್ಟರ್ ಎಲ್.ಸಿ.ಸೋನ್ಸ್

ಏನುಂಟು ಏನಿಲ್ಲ ಮೂಡಬಿದ್ರೆಯ ಸೋನ್ಸ್ ಫಾರ್ಮನಲ್ಲಿ! ಮೂಡಬಿದಿರೆಯಿಂದ ಕಾರ್ಕಳಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ತೆಕ್ಕೆಯಲ್ಲಿ ಬೆಳುವಾಯಿ ಎಂಬಲ್ಲಿ ಮೈಚಾಚಿ ಮಲಗಿರುವ ನೂರು ಎಕರೆ ವಿಸ್ತಾರದ ಸೋನ್ಸ್ ಫಾರ್ಮ್ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಕಾರಣವಾದ ವ್ಯಕ್ತಿ ಅವರು. ತಾನು ನೆಟ್ಟಿರುವ ಸಾವಿರಾರು ಹಣ್ಣಿನ ಮರಗಳಷ್ಟೇ ಎತ್ತರದ ವ್ಯಕ್ತಿತ್ವ ಹೊಂದಿರುವ ಡಾಕ್ಟರ್ ಎಲ್. ಸಿ. ಸೋನ್ಸ್ ಈ ಬುಧವಾರ ನಮ್ಮನ್ನು ಆಗಲಿದ್ದಾರೆ. ಅವರು ನಮ್ಮ ನಡುವಿನ ಅತಿ ದೊಡ್ಡ ಕೃಷಿ ವಿಜ್ಞಾನಿ ಅಂದರೆ ಅದರಲ್ಲಿ ಉತ್ಪ್ರೇಕ್ಷೆ ಇಲ್ಲ.

ಹಣ್ಣಿನ ಮರದಷ್ಟೆ ಎತ್ತರದ ವ್ಯಕ್ತಿತ್ವ ಡಾಕ್ಟರ್ ಎಲ್.ಸಿ.ಸೋನ್ಸ್ Read More »

ಓರ್ವ ಗುರು ಹೇಗಿರಬೇಕು ಎಂದರೆ…

ದೇಶದ ಭವಿಷ್ಯ ತರಗತಿ ಕೋಣೆಯಲ್ಲಿ ರೂಪುಗೊಳ್ಳುತ್ತದೆ. ಇಂಥ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಹೊಣೆ ಹೊತ್ತ ಶಿಕ್ಷಕನ ಜವಾಬ್ದಾರಿ ಬಹಳ ದೊಡ್ಡದು. ಆದರ್ಶ ಶಿಕ್ಷಕನಿಂದ ಮಾತ್ರ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪಾಠ ಮಾಡಲು ತರಗತಿ ಕೋಣೆಯೊಳಗೆ ಕಾಲಿಡುವ ಮೊದಲು ಪ್ರತಿಯೊಬ್ಬ ಶಿಕ್ಷಕ ಮಾಡಿಕೊಳ್ಳಬೇಕಾದ ಸಂಕಲ್ಪ ಇದು… 1) ನನ್ನ ಶಾಲೆ ನನಗೆ ದೇವಸ್ಥಾನ. ನಾನು ಅದನ್ನು ಅಷ್ಟೇ ಪಾವಿತ್ರ್ಯದ ಭಾವನೆಯಿಂದ ನೋಡುತ್ತೇನೆ. 2) ಶಿಕ್ಷಕ ವೃತ್ತಿ ಬೇರೆ ವೃತ್ತಿಗಳ ಹಾಗೆ ಅಲ್ಲ. ನನ್ನ ವೃತ್ತಿ

ಓರ್ವ ಗುರು ಹೇಗಿರಬೇಕು ಎಂದರೆ… Read More »

ಬೈಕ್‌-ಕಾರು ಡಿಕ್ಕಿ : ತಂದೆ-ಮಗಳ ಸಾವು

ರಾಮನಗರ : ಮಗಳನ್ನು ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ತಂದೆ-ಮಗಳು ಸಾವನ್ನಪ್ಪಿರುವ ದುರಂತ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಕಾರೊಂದು ಬೈಕ್‌ನ ಹಿಂಬದಿಯಿಂದ ಡಿಕ್ಕಿ ಹೊಡೆದು ತಂದೆ ಮತ್ತು ಮಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಸಾಬರಪಾಳ್ಯ ಬಳಿ ನಡೆದಿದೆ. ಯೋಗೇಶ್(47), ಹರ್ಷಿತಾ(14) ಅಪಘಾತದಲ್ಲಿ ಮೃತಪಟ್ಟವರು. ಮೃತರು ಮಾಗಡಿಯ ಕಲ್ಯಾ ಗ್ರಾಮದ ನಿವಾಸಿಗಳಾಗಿದ್ದು, ಪ್ರತಿನಿತ್ಯ ಶಾಲೆಗೆ ಬಿಡುತ್ತಿದ್ದಂತೆ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಂದೆ ಶಾಲೆಯತ್ತ ಸಾಬರಪಾಳ್ಯದ ಮಾರ್ಗವಾಗಿ ಹೋಗುತ್ತಿದ್ದಾಗ ಜವರಾಯನಾಗಿ

ಬೈಕ್‌-ಕಾರು ಡಿಕ್ಕಿ : ತಂದೆ-ಮಗಳ ಸಾವು Read More »

ಕಗ್ಗದ ಸಂದೇಶ- ಬದುಕಿನಾಟದಲ್ಲಿ ಧನಾತ್ಮಕ ಮನೋಭಾವದೊಂದಿಗೆ ಆಡಬೇಕು…

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ|ದುಡಿ ಕೈಯಿನಾದನಿತ ಪಡುಬಂದ ಪಾಡು||ಬಿಡು ಮಿಕ್ಕುದನು ವಿಧಿಗೆ, ಪಡುಬಂದ ಪಾಡು|ಬಿಡುಗಡೆಗೆ ದಾರಿಯದು?– ಮಂಕುತಿಮ್ಮ||ಬದುಕಿನ ದಾರಿಯಲ್ಲಿ ಎದುರಾಗುವ ಅಡ್ಡಿ ಆತಂಕಗಳ ಬಗ್ಗೆ ಚಿಂತೆ ಮಾಡಬಾರದು. ನಮ್ಮ ತಿಳುವಳಿಕೆಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟನ್ನು ನಿವಾರಿಸಿಕೊಳ್ಳಬೇಕು. ನಮ್ಮ ಕೈಯಲ್ಲಿ ಎಷ್ಡು ಸಾಧ್ಯವಾಗುತ್ತದೋ ಅಷ್ಟೂ ಕೆಲಸಗಳನ್ನು ನಿಷ್ಠೆಯಿಂದ ಮಾಡಬೇಕು. ಉಳಿದಿರುವುದನ್ನು ವಿಧಿಗೆ ಬಿಟ್ಟು ನೆಮ್ಮದಿಯಿಂದ ಇರುವುದೇ ಜೀವನದ ಮುಕ್ತಿಯ ಮಾರ್ಗ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ. ಬದುಕು ಎನ್ನುವುದು ಸುಖದುಃಖಗಳ ಆಗರ. ಇದು ಪ್ರತಿಯೊಬ್ಬರ ಜೀವನಕ್ಕೂ

ಕಗ್ಗದ ಸಂದೇಶ- ಬದುಕಿನಾಟದಲ್ಲಿ ಧನಾತ್ಮಕ ಮನೋಭಾವದೊಂದಿಗೆ ಆಡಬೇಕು… Read More »

ಭಾರತದ ಉದ್ಯಮ ರಂಗದ ಶಕಪುರುಷ ರತನ್ ಟಾಟಾ

ಚಾರಿಟಿಯಲ್ಲಿಯೂ ಅವರು ಎಲ್ಲರಿಗಿಂತ ಮುಂದೆ ಭಾರತದ ಮಹೋನ್ನತ ಬಿಸಿನೆಸ್ ಮ್ಯಾಗ್ನೆಟ್ ರತನ್ ಟಾಟಾ ಪ್ರಧಾನಮಂತ್ರಿಗಳ ಕೊರೊನ ತುರ್ತು ಪರಿಹಾರ ನಿಧಿಗೆ 1500 ಕೋಟಿ ರೂ. ಕೊಡುಗೆ ನೀಡಿದಾಗ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟಿದ್ದರು. ಎಷ್ಟೋ ಸಿರಿವಂತರು ಹೃದಯವಂತರು ಆಗಿರುವುದಿಲ್ಲ. ಆದರೆ ರತನ್ ಟಾಟಾ ಅದಕ್ಕೊಂದು ಅಪವಾದ. ಅವರು ತಮ್ಮ ಸಂಪತ್ತಿನ ಶೇ.60-65 ಭಾಗವನ್ನು ಈಗಾಗಲೇ ದಾನ ಮಾಡಿಯಾಗಿದೆ. ಬೇರೆ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸಿಎಸ್ಆರ್ ಯೋಜನೆಗಳನ್ನು ರೂಪಿಸಲು ಕೂಡ ರತನ್ ಟಾಟಾ ಮಾದರಿಯಾಗಿ ನಿಂತಿದ್ದಾರೆ. ಟಾಟಾ

ಭಾರತದ ಉದ್ಯಮ ರಂಗದ ಶಕಪುರುಷ ರತನ್ ಟಾಟಾ Read More »

ಸಾಯಲು ಹೊರಟಿದ್ದ ಅವರ ಬದುಕನ್ನು ಆ ಸಿನೆಮಾ ಬದಲಾಯಿಸಿತ್ತು

ಸಾಧು ಕೋಕಿಲಾ ಎಂಬ ಮಲ್ಟಿ ಟ್ಯಾಲೆಂಟೆಡ್ ಸ್ಟಾರ್ ಕಲಾವಿದ ಕನ್ನಡದ ಹೆಮ್ಮೆ ಈ ವ್ಯಕ್ತಿಯ ಬಹು ಆಯಾಮದ ಪ್ರತಿಭೆಗಳ ಬಗ್ಗೆ ನನಗೆ ಭಾರಿ ಅಚ್ಚರಿ ಮತ್ತು ಅಭಿಮಾನ. ಭಾರತದ ಅತ್ಯಂತ ವೇಗದ ಕೀಬೋರ್ಡ್ ಪ್ಲೇಯರಗಳಲ್ಲಿ ಅವರು ಕೂಡ ಒಬ್ಬರು. ಕರ್ನಾಟಕದ ಅತ್ಯಂತ ಹೆಚ್ಚು ಬೇಡಿಕೆಯ ಹಾಸ್ಯನಟ, ಅತಿ ಶ್ರೇಷ್ಠ ಸಂಗೀತ ನಿರ್ದೇಶಕ, ಒಳ್ಳೆಯ ಗಾಯಕ, ಯಶಸ್ವಿ ಸಿನೆಮಾ ನಿರ್ದೇಶಕ, ಹಲವು ರಿಯಾಲಿಟಿ ಶೋಗಳ ಸೆಲೆಬ್ರಿಟಿ ಜಡ್ಜ್‌, ಸಮಾಜ ಸೇವಕ, ರಾಜಕಾರಣಿ… ಹೀಗೆ ಅವರ ಪ್ರೊಫೈಲ್ ವಿಸ್ತಾರ ಆಗುತ್ತ

ಸಾಯಲು ಹೊರಟಿದ್ದ ಅವರ ಬದುಕನ್ನು ಆ ಸಿನೆಮಾ ಬದಲಾಯಿಸಿತ್ತು Read More »

ಆರೋಗ್ಯಕರ ತಂಪು ಪಾನೀಯಗಳು

ಎಂಥಾ ಸೆಕೆ, ಬೆವರು, ದುರ್ಬಲವೆನಿಸುತ್ತಿರುವ ದೇಹ, ಕೆಲಸ ಮಾಡಲು ನಿರುತ್ಸಾಹ. ಈ ಸುಡು ಬಿಸಿಲಿಗೆ ಇಡೀ ದಿನ ಐಸ್ ಕ್ರೀಮ್ ಕೂಲ್ ಡ್ರಿಂಕ್ಸ್ ಕುಡಿಯುವ ಬಯಕೆ. ಆದರೆ ಇದೆಲ್ಲ ನಮ್ಮ ದೇಹಕ್ಕೆ ಹಿತವಲ್ಲ. ಅಪರುಪಕ್ಕೊಮ್ಮೆ ಕುಡಿದರೆ ತೊಂದರೆ ಆಗದು. ಆದರೆ ದಿನನಿತ್ಯ ಕುಡಿದರೆ ಆರೋಗ್ಯ ಹದಗೆಡುವುದು ಖಂಡಿತ. ಹಾಗಾದರೆ ಬೇರೆ ಉಪಾಯವೇನು. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡುವ ಪಾನೀಯ ಮನೆಯಲ್ಲಿ ಮಾಡುವುದು ಹಿತಕರ. ಇದನ್ನು ಕುಡಿದರೆ ದೇಹವನ್ನು ತಂಪು ಮಾಡುವ ಜೊತೆಗೆ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಇಂತಹ

ಆರೋಗ್ಯಕರ ತಂಪು ಪಾನೀಯಗಳು Read More »

ಸ್ಫೂರ್ತಿ ನೀಡುವ ಮೂರು ಘಟನೆಗಳು

ಅವರ ಸಾಧನೆ ಎಲ್ಲರಿಗೂ ಪ್ರೇರಣೆ (ಭಾಗ 7)ಮೊದಲಾಗಿ ಎಸೆಸೆಲ್ಸಿ ಪರೀಕ್ಷೆಗೆ ಆಲ್ ದ ಬೆಸ್ಟ್. ಇಡೀ ವರ್ಷ ಒಂದು ಪರೀಕ್ಷೆಗಾಗಿ ಕಷ್ಟಪಟ್ಟು ಓದಿರುವ ನಿಮಗೆ ಅಭಿನಂದನೆಗಳು. ಹಾಗೆಯೇ ನಿಮ್ಮನ್ನು ಪರೀಕ್ಷೆಗಾಗಿ ಪ್ರಿಪೇರ್ ಮಾಡಿದ ನಿಮ್ಮ ಅಧ್ಯಾಪಕರಿಗೂ ಅಭಿನಂದನೆಗಳು.ಇವತ್ತು ನಾನು ನಿಮಗೆ ಪರೀಕ್ಷೆಗಳ ಬಗ್ಗೆ ಏನೂ ಹೇಳುವುದಿಲ್ಲ. ಇಡೀ ವರ್ಷ ನಿಮಗೆ ಅದನ್ನು ಹಲವು ಬಾರಿ ಹೇಳಿ ಆಗಿದೆ. ಇವತ್ತು ನಾನು ನಿಮಗೆ ತುಂಬಾ ಸ್ಫೂರ್ತಿ ತುಂಬುವ ಮೂರು ವ್ಯಕ್ತಿತ್ವಗಳು ಮತ್ತು ಅದಕ್ಕೆ ಪೂರಕವಾದ ಮೂರು ಘಟನೆಗಳನ್ನು ವಿವರಿಸಬೇಕು.

ಸ್ಫೂರ್ತಿ ನೀಡುವ ಮೂರು ಘಟನೆಗಳು Read More »

ಕೆಲವು ಮಿರಾಕಲ್‌ಗಳ ಬಗ್ಗೆ…

ಇವರೆಲ್ಲ ಪ್ರತಿಕೂಲ ಪರಿಸ್ಥಿತಿಗೆ ಸವಾಲೊಡ್ಡಿ ಸಾಧನೆ ಮಾಡಿದವರು(ಭಾಗ 6) ರ್ಯಾಂಕ್ ಪಡೆದವರಿಗೆ ಹತ್ತು ತಲೆ, ಹತ್ತು ಮೆದುಳು ಖಂಡಿತ ಇರುವುದಿಲ್ಲ. ದಿನಕ್ಕೆ 26 ಗಂಟೆಗಳೂ ಇರುವುದಿಲ್ಲ. ಅವರು ನಿಮ್ಮ, ನಮ್ಮ ಹಾಗೆ ಸಾಮಾನ್ಯ ವಿದ್ಯಾರ್ಥಿಗಳು. ಆದರೆ ಅವರು ಬೇಗನೇ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾರೆ. ಪ್ರಶ್ನೆಗಳನ್ನು ಚೆನ್ನಾಗಿ ಓದುವ ಸಾಮರ್ಥ್ಯ ಹೊಂದಿರುತ್ತಾರೆ. ಪರೀಕ್ಷಾ ಕೊಠಡಿಯ ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳಿಗೆ ಟು ದ ಪಾಯಿಂಟ್ ಉತ್ತರ ಬರೆಯುತ್ತಾರೆ. ಬರೆದಾದ ನಂತರ ಜಾಗರೂಕತೆಯಿಂದ ಉತ್ತರವನ್ನು ಚೆಕ್ ಮಾಡುತ್ತಾರೆ. ಪರೀಕ್ಷಾ

ಕೆಲವು ಮಿರಾಕಲ್‌ಗಳ ಬಗ್ಗೆ… Read More »

error: Content is protected !!
Scroll to Top