ಲೇಖನ

ಆರೋಗ್ಯಧಾರಾ – ಅಡುಗೆಗೆ ಬಳಸುವ ವಿವಿಧ ಎಲೆಗಳ ಆರೋಗ್ಯದ ಗುಟ್ಟು

ಕರಾವಳಿ ಪ್ರದೇಶದ ಸಂಸ್ಕೃತಿ, ಕಲೆಗಳನ್ನು ನೋಡುವುದೇ ಒಂದು ಚಂದ. ಕರಾವಳಿ ಪ್ರದೇಶ ವಿಶಿಷ್ಟ ಖಾದ್ಯಗಳಿಗೂ ಪ್ರಸಿದ್ಧವಾಗಿದೆ. ಅಡುಗೆಗೆ ತರಕಾರಿ ಹಣ್ಣುಗಳನ್ನು ಮಾತ್ರ ಬಳಸದೆ ವಿವಿಧ ರೀತಿಯ ಎಲೆಗಳನ್ನು ಹೂಗಳನ್ನು ಬಳಸಿ ಅಡುಗೆ ಮಾಡುವುದು ಇಲ್ಲಿನ ವಿಶೇಷ. ಇದು ಬೇರೆ ಯಾವ ಪ್ರದೇಶದಲ್ಲೂ ನೋಡಲು ಸವಿಯಲು ಸಿಗುವುದು ಅಪರೂಪ.ಎಲೆಯಲ್ಲಿ ಬೇಯಿಸಿದ ಆಹಾರದ ರುಚಿಯೇ ಅದ್ಭುತ. ಎಲೆಯಲ್ಲಿ ಮಾಡುವ ಊಟ ಆಹಾ ಎಂಥ ಪರಿಮಳ ಎಂಥ ರುಚಿ. ಕೆಲವು ಎಲೆಗಳನ್ನು ತಿನ್ನಲು ಸಾಧ್ಯವಾಗದ ಕಾರಣ ಆ ಎಲೆಯನ್ನು ಬಳಸಿ ಆಹಾರ […]

ಆರೋಗ್ಯಧಾರಾ – ಅಡುಗೆಗೆ ಬಳಸುವ ವಿವಿಧ ಎಲೆಗಳ ಆರೋಗ್ಯದ ಗುಟ್ಟು Read More »

ಬಾಬಾ ಅಂಬೇಡ್ಕರ್ ಅವರ ವಿಶ್ವವಿಖ್ಯಾತ ಉದ್ಧರಣೆಗಳು

ಸಂವಿಧಾನ ಶಿಲ್ಪಿಯ ಜಯಂತಿ ಇಂದು ಸಂವಿಧಾನ ಶಿಲ್ಪಿ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ, ಹೋರಾಟಗಳ ಬಗ್ಗೆ ಎಷ್ಟು ಬರೆದರೂ ಅದು ಮುಗಿಯುವುದೇ ಇಲ್ಲ. ಜಗತ್ತಿನ ಎಲ್ಲ ಸಂವಿಧಾನಗಳನ್ನೂ ಆಳವಾಗಿ ಅಧ್ಯಯನ ಮಾಡಿ ಅವರು ಭಾರತಕ್ಕೆ ನೀಡಿದ ಶಕ್ತಿಶಾಲಿ ಸಂವಿಧಾನ ಅತ್ಯಂತ ದೊಡ್ಡದು, ಅತ್ಯಂತ ವಿಸ್ತಾರವಾದದು, ಅತ್ಯಂತ ಶ್ರೀಮಂತವಾದದ್ದು, ಅತ್ಯಂತ ಘನವಾದದ್ದು ಮತ್ತು ಅತ್ಯಂತ ತೂಕದ್ದು. ಅದಕ್ಕಾಗಿ ಭಾರತ ಬಾಬಾ ಸಾಹೇಬರನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.ಅಂತಹ ಅಂಬೇಡ್ಕರರ ಬದುಕು ಮತ್ತು ಬರವಣಿಗೆಗಳ ನಡುವೆ ಯಾವುದೇ

ಬಾಬಾ ಅಂಬೇಡ್ಕರ್ ಅವರ ವಿಶ್ವವಿಖ್ಯಾತ ಉದ್ಧರಣೆಗಳು Read More »

ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ, ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದ ಕಲ್ಪನಾ ಚಾವ್ಲಾ

1962ರ ಮಾರ್ಚ್ 17ರಂದು ಹರ್ಯಾಣಾದ ಕರ್ನಾಲದಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೊತಿಯವರ ಹಿರಿಯ ಮಗಳಾಗಿ ಜನಿಸಿದ ಆಕೆಗೆ ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆ ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜತೆ ಹೇಳುತ್ತಾ ಬೆಳೆದವರು ಆಕೆ. ಬಾಲ್ಯದಿಂದಲೂ ಆಕೆಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ. ಮೂರನೇ ವಯಸ್ಸಿಗೇ ಅಪ್ಪನಿಗೆ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ. ಅಪ್ಪನೂ ಆಕೆಯ ಪ್ರತಿಯೊಂದು ಕನಸಿನ ಈಡೇರಿಕೆಗೆ

ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ, ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದ ಕಲ್ಪನಾ ಚಾವ್ಲಾ Read More »

ಡಾಕ್ಟರ್ ಕೊಟ್ನೀಸ್ ಕೀ ಅಮರ್ ಕಹಾನಿ

ಈ ಭಾರತದ ವೈದ್ಯರು ಚೀನದ ಹೃದಯವನ್ನು ಗೆದ್ದದ್ದು ಹೇಗೆ? ಭಾರತ ಮತ್ತು ಚೀನ ಸಂಬಂಧ ಇವತ್ತಿಗೂ ಮಧುರವಾಗಿ ಇಲ್ಲ. ಆ ಕಮ್ಯುನಿಸ್ಟ್ ಸರಕಾರ ಭಾರತದ ವಿರುದ್ಧ ಸಂಚು ಹೂಡಿದ್ದೆ ಹೆಚ್ಚು. ಅಂತಹ ರಾಷ್ಟ್ರ ಭಾರತದ ಒಬ್ಬ ವೈದ್ಯರಿಗೆ ಸ್ಮಾರಕ ನಿರ್ಮಾಣ ಮಾಡಿ ರಾಷ್ಟ್ರೀಯ ಗೌರವ ಕೊಟ್ಟಿತು ಎಂದರೆ ನಮಗೆ ನಿಮಗೆ ನಂಬುವುದು ಭಾರಿ ಕಷ್ಟ ಆಗಬಹುದು!ಚೀನಾದಲ್ಲಿ ಪ್ರತಿಯೊಬ್ಬ ವೈದ್ಯ ತನ್ನ ಪದವಿಯನ್ನು ಪಡೆಯುವ ಮೊದಲು ಆ ಸ್ಮಾರಕಕ್ಕೆ ವಂದಿಸಿ ಬರುತ್ತಾರೆ ಅಂದರೆ ನಮಗೆ ಇನ್ನೂ ಆಶ್ಚರ್ಯ ಆಗಬಹುದು.

ಡಾಕ್ಟರ್ ಕೊಟ್ನೀಸ್ ಕೀ ಅಮರ್ ಕಹಾನಿ Read More »

ರಾಮ ಮಾತ್ರವಲ್ಲ ರಾವಣನಂತಾಗುವುದು ಕೂಡ ಕಷ್ಟ

ರಾಮನ ಪಾತ್ರ ವಿಶ್ವದ ಅದ್ಭುತ ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರ ಕೂಡ. ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ.ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ. ಅದರಲ್ಲಿಯೂ ಮೊದಲನೆಯದ್ದು ಭಾರಿ ಕಷ್ಟ. ವಾಲ್ಮೀಕಿ ಕೆತ್ತಿದ್ದು ಅದ್ಭುತ ವ್ಯಕ್ತಿತ್ವ ರಾಮ ಶ್ರೀ ರಾಮನ

ರಾಮ ಮಾತ್ರವಲ್ಲ ರಾವಣನಂತಾಗುವುದು ಕೂಡ ಕಷ್ಟ Read More »

ಕಗ್ಗದ ಸಂದೇಶ – ಮೌನವಾಗಿ ಕರ್ತವ್ಯವನ್ನು ಮಾಡು ಮಾನವ…

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ|ಫಲ ಮಾಗುವಂದು ತುತ್ತೂರಿ ದನಿಯಿಲ್ಲ||ಸೂರ್ಯಚಂದ್ರರದೊಂದು ಸದ್ದಿಲ್ಲ|ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ||ಭೂಮಿಯಲ್ಲಿ ಹಾಕಿದ ಬೀಜ ಮೊಳಕೆಯೊಡೆದು ಹೊರಬರುವಾಗ ತಮಟೆಯನ್ನು ಬಾರಿಸಿ ಶಬ್ದ ಮಾಡುವುದಿಲ್ಲ. ಗಿಡದಲ್ಲಿರುವ ಕಾಯಿ ಹಣ್ಣಾಗುವಾಗ ವಾದ್ಯ ಘೋಷ ಮಾಡುವುದಿಲ್ಲ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯಚಂದ್ರರು ಯಾವುದೇ ರೀತಿಯಲ್ಲಿ ಹೇಳಿಕೊಳ್ಳುವುದಿಲ್ಲ. ಸದ್ದುಗದ್ದಲವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವುದನ್ನು ನೋಡಿ ಮಾನವನು ಕೂಡ ತುಟಿ ತೆರೆಯದೆ ಮೌನವಾಗಿ ಕಾರ್ಯನಿರ್ವಹಿಸುವುದನ್ನು ಕಲಿಯಬೇಕೆಂದು ಮಾನ್ಯ ಡಿವಿಜಿಯವರು ಈಮುಕ್ತಕದಲ್ಲಿ ಹೇಳಿದ್ದಾರೆ.ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆಯದೆ ಇದ್ದರೆ ಜೀವಿಗಳಿಗೆ ಜೀವನವಿಲ್ಲ. ಆದರೆ

ಕಗ್ಗದ ಸಂದೇಶ – ಮೌನವಾಗಿ ಕರ್ತವ್ಯವನ್ನು ಮಾಡು ಮಾನವ… Read More »

ಆಕೆ ನಿಜವಾಗಿಯೂ ಬೆಂಕಿಯಲ್ಲಿ ಅರಳಿದ ಹೂವು

ಉಪ್ಪಿನಕಾಯಿ ಮಾರಿ ಬದುಕು ಕಟ್ಟಿಕೊಂಡ ಕೃಷ್ಣಾ ಯಾದವ್ 30 ವರ್ಷಗಳ ಹಿಂದೆ ಮದುವೆಯಾಗಿ ಉತ್ತರ ಪ್ರದೇಶದ ಒಂದು ಹಳ್ಳಿಯಿಂದ ಬುಲಂದ್‌ಶಹರ್ ಎಂಬ ನಗರಕ್ಕೆ ಬಂದಾಗ ಆಕೆಯ ಕೈಯ್ಯಲ್ಲಿ ಒಂದು ರೂಪಾಯಿ ಇರಲಿಲ್ಲ. ಎರಡು ವರ್ಷ ಆಗುವಾಗ ಎರಡು ಪುಟ್ಟ ಮಕ್ಕಳ ಆಕೆಯ ಮಡಿಲನ್ನು ಸೇರಿದ್ದವು. ಆದರೆ 1995ರಲ್ಲಿ ಗಂಡನಿಗೆ ತೀವ್ರವಾದ ಮಾನಸಿಕ ಕಾಯಿಲೆಯು ಕಾಡಿದಾಗ ಆಕೆಯು ನಿಜವಾಗಿಯೂ ಕಂಗೆಟ್ಟರು.ಸಂಬಂಧಿಕರು, ಗಂಡನ ಮನೆಯವರು ಯಾರೂ ಆಕೆಯ ನೆರವಿಗೆ ನಿಲ್ಲಲಿಲ್ಲ. ಮಕ್ಕಳು ಹಸಿವೆಯಿಂದ ಅಳುತ್ತಿದ್ದರೆ ಅಮ್ಮನ ಕರುಳು ಕಿತ್ತು ಬರುತ್ತಿತ್ತು.

ಆಕೆ ನಿಜವಾಗಿಯೂ ಬೆಂಕಿಯಲ್ಲಿ ಅರಳಿದ ಹೂವು Read More »

ಕಾಲುಗಳು ಉದ್ದವಿದ್ದಷ್ಟು ಹಾಸಿಗೆಯನ್ನು ಮಾಡಬಹುದಲ್ಲ?

ಇವರೆಲ್ಲ ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ದರೆ ಸಾಧಕರಾಗುತ್ತಿರಲಿಲ್ಲ ‘ಗಾದೆಗಳು ವೇದಕ್ಕೆ ಸಮ’ ಎಂದರು ನಮ್ಮ ಹಿರಿಯರು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದರು ಅವರು.ಬಾಲ್ಯದಲ್ಲಿ ನಾವೆಲ್ಲರೂ ಕಲಿತ ಈ ಮೇಲಿನ ಗಾದೆಯು ನಮಗೆ ಸಂತೃಪ್ತ ಬದುಕಿನ ಅಗತ್ಯವನ್ನು ಸೂಚಿಸುತ್ತದೆ.ನಮ್ಮ ಮಿತಿಗಳನ್ನು ಮೀರಿ ದೊಡ್ಡ ಆಸೆ ಇಟ್ಟುಕೊಳ್ಳುವುದು ಬೇಡ ಅಂತ ಅದರ ಅರ್ಥ. ಅವರು ಹಾಗೆ ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ…ಬದುಕಿನಲ್ಲಿ ಭರವಸೆಯನ್ನು ಇಡಬಾರದು ಎಂದು ಯಾರೂ ಹೇಳಿಲ್ಲ. ಈ ಭರವಸೆಗಳೇ ಮುಂದೆ ನಮ್ಮ ಆಕಾಂಕ್ಷೆಗಳಾಗಿ, ನಮ್ಮ

ಕಾಲುಗಳು ಉದ್ದವಿದ್ದಷ್ಟು ಹಾಸಿಗೆಯನ್ನು ಮಾಡಬಹುದಲ್ಲ? Read More »

ಆರೋಗ್ಯ ಧಾರಾ- ಬೇಸಿಗೆಯಲ್ಲಿ ದೇಹ ತಂಪಾಗಿಡುವುದು…

ಬಿಸಿಲಿನ ತಾಪ ಏರಿದಂತೆ ನಮ್ಮ ದೇಹ ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ. ಸೆಕೆಗಾಲದಲ್ಲಿ ವಾತ ದೋಷವು ಉಲ್ಬಣಗೊಳ್ಳುತ್ತದೆ. ಅಲ್ಪ ಶರೀರ ಬಲ ಹಾಗೂ ದುರ್ಬಲ ಜೀರ್ಣ ಶಕ್ತಿಯಿಂದ ದೇಹವು ಜರ್ಜರಿತವಾಗುತ್ತದೆ. ಇದನ್ನೆಲ್ಲಾ ತಡೆಯಲು ಇಲ್ಲಿದೆ ಕೆಲವು ಟಿಪ್ಸ್• ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪ್ರಖರ ಸೂರ್ಯ ಕಿರಣವಿರುವುದರಿಂದ ಆದಷ್ಟು ಬಿಸಿಲಿನಲ್ಲಿ ಸಮಯ ಕಳೆಯಬೇಡಿ. ಅನಿವಾರ್ಯವಿದ್ದರೆ ತಲೆಗೆ ಕ್ಯಾಪ್ ಅಥವಾ ಛತ್ರಿಯನ್ನು ಉಪಯೋಗಿಸಿ. ಕಣ್ಣಿಗೆ ಗಾಗಲ್ ಹಾಕಿ. ತಿಳಿ ಬಣ್ಣದ ಬಟ್ಟೆಯನ್ನು ಧರಿಸಿ. ಹತ್ತಿ ಬಟ್ಟೆಯನ್ನು ಧರಿಸಿದರೆ

ಆರೋಗ್ಯ ಧಾರಾ- ಬೇಸಿಗೆಯಲ್ಲಿ ದೇಹ ತಂಪಾಗಿಡುವುದು… Read More »

ರಾಷ್ಟ್ರವೇ ಮೊದಲು, ಉಳಿದೆಲ್ಲವೂ ನಂತರ – ಕ್ಯಾಪ್ಟನ್ ಪವನ್ ಕುಮಾರ್

ಉಗ್ರರ ಜತೆ ಹೋರಾಡಿ ಪ್ರಾಣ ಕಳೆದುಕೊಂಡಾಗ ಆ ಸೈನಿಕನ ವಯಸ್ಸು ಕೇವಲ 23 ಕಿಸಿಕೊ ರಿಸರ್ವೇಶನ್ ಚಾಹಿಯೆ, ಕಿಸಿಕೋ ಆಜಾದಿ.ಭಾಯಿ ಹಮೇ ಕುಚ್ ನಹೀಂ ಚಾಹಿಯೆ ಬಸ್ ಅಪ್ನಿ ರಜಾಯಿ.(ಕೆಲವರಿಗೆ ಮೀಸಲಾತಿ ಬೇಕು, ಇನ್ನೂ ಕೆಲವರಿಗೆ ಸ್ವಾತಂತ್ರ್ಯ. ಸೋದರ ನನಗೆ ಬೇರೇನೂ ಬೇಡ, ಬೆಚ್ಚನೆ ಹೊದಿಕೆ ಬಿಟ್ಟು)ಆ ಸೈನಿಕ ಹುತಾತ್ಮನಾಗುವ ಕೆಲವು ನಿಮಿಷ ಮೊದಲು ತನ್ನ ಫೇಸ್‌ಬುಕ್ಕಲ್ಲಿ ಬರೆದುಕೊಂಡ ಕವಿತೆಯ ಸಾಲುಗಳು ಇವು. ದೇಶದಲ್ಲಿ ನಡೆದ ಕೆಲವು ಘಟನೆಗಳು ಅವರ ಮನಸನ್ನು ತಲ್ಲಣ ಮಾಡಿದ್ದವು. ಉಗ್ರನ ಪರವಾಗಿ

ರಾಷ್ಟ್ರವೇ ಮೊದಲು, ಉಳಿದೆಲ್ಲವೂ ನಂತರ – ಕ್ಯಾಪ್ಟನ್ ಪವನ್ ಕುಮಾರ್ Read More »

error: Content is protected !!
Scroll to Top