ಲೇಖನ

ಕಗ್ಗದ ಸಂದೇಶ – ಮೌನವಾಗಿ ಕರ್ತವ್ಯವನ್ನು ಮಾಡು ಮಾನವ…

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ|ಫಲ ಮಾಗುವಂದು ತುತ್ತೂರಿ ದನಿಯಿಲ್ಲ||ಸೂರ್ಯಚಂದ್ರರದೊಂದು ಸದ್ದಿಲ್ಲ|ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ||ಭೂಮಿಯಲ್ಲಿ ಹಾಕಿದ ಬೀಜ ಮೊಳಕೆಯೊಡೆದು ಹೊರಬರುವಾಗ ತಮಟೆಯನ್ನು ಬಾರಿಸಿ ಶಬ್ದ ಮಾಡುವುದಿಲ್ಲ. ಗಿಡದಲ್ಲಿರುವ ಕಾಯಿ ಹಣ್ಣಾಗುವಾಗ ವಾದ್ಯ ಘೋಷ ಮಾಡುವುದಿಲ್ಲ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯಚಂದ್ರರು ಯಾವುದೇ ರೀತಿಯಲ್ಲಿ ಹೇಳಿಕೊಳ್ಳುವುದಿಲ್ಲ. ಸದ್ದುಗದ್ದಲವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವುದನ್ನು ನೋಡಿ ಮಾನವನು ಕೂಡ ತುಟಿ ತೆರೆಯದೆ ಮೌನವಾಗಿ ಕಾರ್ಯನಿರ್ವಹಿಸುವುದನ್ನು ಕಲಿಯಬೇಕೆಂದು ಮಾನ್ಯ ಡಿವಿಜಿಯವರು ಈಮುಕ್ತಕದಲ್ಲಿ ಹೇಳಿದ್ದಾರೆ.ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆಯದೆ ಇದ್ದರೆ ಜೀವಿಗಳಿಗೆ ಜೀವನವಿಲ್ಲ. ಆದರೆ […]

ಕಗ್ಗದ ಸಂದೇಶ – ಮೌನವಾಗಿ ಕರ್ತವ್ಯವನ್ನು ಮಾಡು ಮಾನವ… Read More »

ಆಕೆ ನಿಜವಾಗಿಯೂ ಬೆಂಕಿಯಲ್ಲಿ ಅರಳಿದ ಹೂವು

ಉಪ್ಪಿನಕಾಯಿ ಮಾರಿ ಬದುಕು ಕಟ್ಟಿಕೊಂಡ ಕೃಷ್ಣಾ ಯಾದವ್ 30 ವರ್ಷಗಳ ಹಿಂದೆ ಮದುವೆಯಾಗಿ ಉತ್ತರ ಪ್ರದೇಶದ ಒಂದು ಹಳ್ಳಿಯಿಂದ ಬುಲಂದ್‌ಶಹರ್ ಎಂಬ ನಗರಕ್ಕೆ ಬಂದಾಗ ಆಕೆಯ ಕೈಯ್ಯಲ್ಲಿ ಒಂದು ರೂಪಾಯಿ ಇರಲಿಲ್ಲ. ಎರಡು ವರ್ಷ ಆಗುವಾಗ ಎರಡು ಪುಟ್ಟ ಮಕ್ಕಳ ಆಕೆಯ ಮಡಿಲನ್ನು ಸೇರಿದ್ದವು. ಆದರೆ 1995ರಲ್ಲಿ ಗಂಡನಿಗೆ ತೀವ್ರವಾದ ಮಾನಸಿಕ ಕಾಯಿಲೆಯು ಕಾಡಿದಾಗ ಆಕೆಯು ನಿಜವಾಗಿಯೂ ಕಂಗೆಟ್ಟರು.ಸಂಬಂಧಿಕರು, ಗಂಡನ ಮನೆಯವರು ಯಾರೂ ಆಕೆಯ ನೆರವಿಗೆ ನಿಲ್ಲಲಿಲ್ಲ. ಮಕ್ಕಳು ಹಸಿವೆಯಿಂದ ಅಳುತ್ತಿದ್ದರೆ ಅಮ್ಮನ ಕರುಳು ಕಿತ್ತು ಬರುತ್ತಿತ್ತು.

ಆಕೆ ನಿಜವಾಗಿಯೂ ಬೆಂಕಿಯಲ್ಲಿ ಅರಳಿದ ಹೂವು Read More »

ಕಾಲುಗಳು ಉದ್ದವಿದ್ದಷ್ಟು ಹಾಸಿಗೆಯನ್ನು ಮಾಡಬಹುದಲ್ಲ?

ಇವರೆಲ್ಲ ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ದರೆ ಸಾಧಕರಾಗುತ್ತಿರಲಿಲ್ಲ ‘ಗಾದೆಗಳು ವೇದಕ್ಕೆ ಸಮ’ ಎಂದರು ನಮ್ಮ ಹಿರಿಯರು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದರು ಅವರು.ಬಾಲ್ಯದಲ್ಲಿ ನಾವೆಲ್ಲರೂ ಕಲಿತ ಈ ಮೇಲಿನ ಗಾದೆಯು ನಮಗೆ ಸಂತೃಪ್ತ ಬದುಕಿನ ಅಗತ್ಯವನ್ನು ಸೂಚಿಸುತ್ತದೆ.ನಮ್ಮ ಮಿತಿಗಳನ್ನು ಮೀರಿ ದೊಡ್ಡ ಆಸೆ ಇಟ್ಟುಕೊಳ್ಳುವುದು ಬೇಡ ಅಂತ ಅದರ ಅರ್ಥ. ಅವರು ಹಾಗೆ ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ…ಬದುಕಿನಲ್ಲಿ ಭರವಸೆಯನ್ನು ಇಡಬಾರದು ಎಂದು ಯಾರೂ ಹೇಳಿಲ್ಲ. ಈ ಭರವಸೆಗಳೇ ಮುಂದೆ ನಮ್ಮ ಆಕಾಂಕ್ಷೆಗಳಾಗಿ, ನಮ್ಮ

ಕಾಲುಗಳು ಉದ್ದವಿದ್ದಷ್ಟು ಹಾಸಿಗೆಯನ್ನು ಮಾಡಬಹುದಲ್ಲ? Read More »

ಆರೋಗ್ಯ ಧಾರಾ- ಬೇಸಿಗೆಯಲ್ಲಿ ದೇಹ ತಂಪಾಗಿಡುವುದು…

ಬಿಸಿಲಿನ ತಾಪ ಏರಿದಂತೆ ನಮ್ಮ ದೇಹ ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ. ಸೆಕೆಗಾಲದಲ್ಲಿ ವಾತ ದೋಷವು ಉಲ್ಬಣಗೊಳ್ಳುತ್ತದೆ. ಅಲ್ಪ ಶರೀರ ಬಲ ಹಾಗೂ ದುರ್ಬಲ ಜೀರ್ಣ ಶಕ್ತಿಯಿಂದ ದೇಹವು ಜರ್ಜರಿತವಾಗುತ್ತದೆ. ಇದನ್ನೆಲ್ಲಾ ತಡೆಯಲು ಇಲ್ಲಿದೆ ಕೆಲವು ಟಿಪ್ಸ್• ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪ್ರಖರ ಸೂರ್ಯ ಕಿರಣವಿರುವುದರಿಂದ ಆದಷ್ಟು ಬಿಸಿಲಿನಲ್ಲಿ ಸಮಯ ಕಳೆಯಬೇಡಿ. ಅನಿವಾರ್ಯವಿದ್ದರೆ ತಲೆಗೆ ಕ್ಯಾಪ್ ಅಥವಾ ಛತ್ರಿಯನ್ನು ಉಪಯೋಗಿಸಿ. ಕಣ್ಣಿಗೆ ಗಾಗಲ್ ಹಾಕಿ. ತಿಳಿ ಬಣ್ಣದ ಬಟ್ಟೆಯನ್ನು ಧರಿಸಿ. ಹತ್ತಿ ಬಟ್ಟೆಯನ್ನು ಧರಿಸಿದರೆ

ಆರೋಗ್ಯ ಧಾರಾ- ಬೇಸಿಗೆಯಲ್ಲಿ ದೇಹ ತಂಪಾಗಿಡುವುದು… Read More »

ರಾಷ್ಟ್ರವೇ ಮೊದಲು, ಉಳಿದೆಲ್ಲವೂ ನಂತರ – ಕ್ಯಾಪ್ಟನ್ ಪವನ್ ಕುಮಾರ್

ಉಗ್ರರ ಜತೆ ಹೋರಾಡಿ ಪ್ರಾಣ ಕಳೆದುಕೊಂಡಾಗ ಆ ಸೈನಿಕನ ವಯಸ್ಸು ಕೇವಲ 23 ಕಿಸಿಕೊ ರಿಸರ್ವೇಶನ್ ಚಾಹಿಯೆ, ಕಿಸಿಕೋ ಆಜಾದಿ.ಭಾಯಿ ಹಮೇ ಕುಚ್ ನಹೀಂ ಚಾಹಿಯೆ ಬಸ್ ಅಪ್ನಿ ರಜಾಯಿ.(ಕೆಲವರಿಗೆ ಮೀಸಲಾತಿ ಬೇಕು, ಇನ್ನೂ ಕೆಲವರಿಗೆ ಸ್ವಾತಂತ್ರ್ಯ. ಸೋದರ ನನಗೆ ಬೇರೇನೂ ಬೇಡ, ಬೆಚ್ಚನೆ ಹೊದಿಕೆ ಬಿಟ್ಟು)ಆ ಸೈನಿಕ ಹುತಾತ್ಮನಾಗುವ ಕೆಲವು ನಿಮಿಷ ಮೊದಲು ತನ್ನ ಫೇಸ್‌ಬುಕ್ಕಲ್ಲಿ ಬರೆದುಕೊಂಡ ಕವಿತೆಯ ಸಾಲುಗಳು ಇವು. ದೇಶದಲ್ಲಿ ನಡೆದ ಕೆಲವು ಘಟನೆಗಳು ಅವರ ಮನಸನ್ನು ತಲ್ಲಣ ಮಾಡಿದ್ದವು. ಉಗ್ರನ ಪರವಾಗಿ

ರಾಷ್ಟ್ರವೇ ಮೊದಲು, ಉಳಿದೆಲ್ಲವೂ ನಂತರ – ಕ್ಯಾಪ್ಟನ್ ಪವನ್ ಕುಮಾರ್ Read More »

ಇಂದು ಹನುಮಾನ್‌ ಜಯಂತಿ

ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ ಹನುಮಂತ ಯತ್ರ ಯತ್ರ ರಘುನಾಥ ಕೀರ್ತನಂತತ್ರ ತತ್ರ ಕೃತಮಸ್ತಕಾಂಜಲಿಮ್|ಭಾಷ್ಪವಾರಿ ಪರಿಪೂರ್ಣ ಲೋಚನಂಮಾರುತಿಂ ನಮತ ರಾಕ್ಷಸಾಂತಕಮ್||ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ. ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು

ಇಂದು ಹನುಮಾನ್‌ ಜಯಂತಿ Read More »

ಹಣ್ಣಿನ ಮರದಷ್ಟೆ ಎತ್ತರದ ವ್ಯಕ್ತಿತ್ವ ಡಾಕ್ಟರ್ ಎಲ್.ಸಿ.ಸೋನ್ಸ್

ಏನುಂಟು ಏನಿಲ್ಲ ಮೂಡಬಿದ್ರೆಯ ಸೋನ್ಸ್ ಫಾರ್ಮನಲ್ಲಿ! ಮೂಡಬಿದಿರೆಯಿಂದ ಕಾರ್ಕಳಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ತೆಕ್ಕೆಯಲ್ಲಿ ಬೆಳುವಾಯಿ ಎಂಬಲ್ಲಿ ಮೈಚಾಚಿ ಮಲಗಿರುವ ನೂರು ಎಕರೆ ವಿಸ್ತಾರದ ಸೋನ್ಸ್ ಫಾರ್ಮ್ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಕಾರಣವಾದ ವ್ಯಕ್ತಿ ಅವರು. ತಾನು ನೆಟ್ಟಿರುವ ಸಾವಿರಾರು ಹಣ್ಣಿನ ಮರಗಳಷ್ಟೇ ಎತ್ತರದ ವ್ಯಕ್ತಿತ್ವ ಹೊಂದಿರುವ ಡಾಕ್ಟರ್ ಎಲ್. ಸಿ. ಸೋನ್ಸ್ ಈ ಬುಧವಾರ ನಮ್ಮನ್ನು ಆಗಲಿದ್ದಾರೆ. ಅವರು ನಮ್ಮ ನಡುವಿನ ಅತಿ ದೊಡ್ಡ ಕೃಷಿ ವಿಜ್ಞಾನಿ ಅಂದರೆ ಅದರಲ್ಲಿ ಉತ್ಪ್ರೇಕ್ಷೆ ಇಲ್ಲ.

ಹಣ್ಣಿನ ಮರದಷ್ಟೆ ಎತ್ತರದ ವ್ಯಕ್ತಿತ್ವ ಡಾಕ್ಟರ್ ಎಲ್.ಸಿ.ಸೋನ್ಸ್ Read More »

ಓರ್ವ ಗುರು ಹೇಗಿರಬೇಕು ಎಂದರೆ…

ದೇಶದ ಭವಿಷ್ಯ ತರಗತಿ ಕೋಣೆಯಲ್ಲಿ ರೂಪುಗೊಳ್ಳುತ್ತದೆ. ಇಂಥ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಹೊಣೆ ಹೊತ್ತ ಶಿಕ್ಷಕನ ಜವಾಬ್ದಾರಿ ಬಹಳ ದೊಡ್ಡದು. ಆದರ್ಶ ಶಿಕ್ಷಕನಿಂದ ಮಾತ್ರ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪಾಠ ಮಾಡಲು ತರಗತಿ ಕೋಣೆಯೊಳಗೆ ಕಾಲಿಡುವ ಮೊದಲು ಪ್ರತಿಯೊಬ್ಬ ಶಿಕ್ಷಕ ಮಾಡಿಕೊಳ್ಳಬೇಕಾದ ಸಂಕಲ್ಪ ಇದು… 1) ನನ್ನ ಶಾಲೆ ನನಗೆ ದೇವಸ್ಥಾನ. ನಾನು ಅದನ್ನು ಅಷ್ಟೇ ಪಾವಿತ್ರ್ಯದ ಭಾವನೆಯಿಂದ ನೋಡುತ್ತೇನೆ. 2) ಶಿಕ್ಷಕ ವೃತ್ತಿ ಬೇರೆ ವೃತ್ತಿಗಳ ಹಾಗೆ ಅಲ್ಲ. ನನ್ನ ವೃತ್ತಿ

ಓರ್ವ ಗುರು ಹೇಗಿರಬೇಕು ಎಂದರೆ… Read More »

ಬೈಕ್‌-ಕಾರು ಡಿಕ್ಕಿ : ತಂದೆ-ಮಗಳ ಸಾವು

ರಾಮನಗರ : ಮಗಳನ್ನು ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ತಂದೆ-ಮಗಳು ಸಾವನ್ನಪ್ಪಿರುವ ದುರಂತ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಕಾರೊಂದು ಬೈಕ್‌ನ ಹಿಂಬದಿಯಿಂದ ಡಿಕ್ಕಿ ಹೊಡೆದು ತಂದೆ ಮತ್ತು ಮಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಸಾಬರಪಾಳ್ಯ ಬಳಿ ನಡೆದಿದೆ. ಯೋಗೇಶ್(47), ಹರ್ಷಿತಾ(14) ಅಪಘಾತದಲ್ಲಿ ಮೃತಪಟ್ಟವರು. ಮೃತರು ಮಾಗಡಿಯ ಕಲ್ಯಾ ಗ್ರಾಮದ ನಿವಾಸಿಗಳಾಗಿದ್ದು, ಪ್ರತಿನಿತ್ಯ ಶಾಲೆಗೆ ಬಿಡುತ್ತಿದ್ದಂತೆ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಂದೆ ಶಾಲೆಯತ್ತ ಸಾಬರಪಾಳ್ಯದ ಮಾರ್ಗವಾಗಿ ಹೋಗುತ್ತಿದ್ದಾಗ ಜವರಾಯನಾಗಿ

ಬೈಕ್‌-ಕಾರು ಡಿಕ್ಕಿ : ತಂದೆ-ಮಗಳ ಸಾವು Read More »

ಕಗ್ಗದ ಸಂದೇಶ- ಬದುಕಿನಾಟದಲ್ಲಿ ಧನಾತ್ಮಕ ಮನೋಭಾವದೊಂದಿಗೆ ಆಡಬೇಕು…

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ|ದುಡಿ ಕೈಯಿನಾದನಿತ ಪಡುಬಂದ ಪಾಡು||ಬಿಡು ಮಿಕ್ಕುದನು ವಿಧಿಗೆ, ಪಡುಬಂದ ಪಾಡು|ಬಿಡುಗಡೆಗೆ ದಾರಿಯದು?– ಮಂಕುತಿಮ್ಮ||ಬದುಕಿನ ದಾರಿಯಲ್ಲಿ ಎದುರಾಗುವ ಅಡ್ಡಿ ಆತಂಕಗಳ ಬಗ್ಗೆ ಚಿಂತೆ ಮಾಡಬಾರದು. ನಮ್ಮ ತಿಳುವಳಿಕೆಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟನ್ನು ನಿವಾರಿಸಿಕೊಳ್ಳಬೇಕು. ನಮ್ಮ ಕೈಯಲ್ಲಿ ಎಷ್ಡು ಸಾಧ್ಯವಾಗುತ್ತದೋ ಅಷ್ಟೂ ಕೆಲಸಗಳನ್ನು ನಿಷ್ಠೆಯಿಂದ ಮಾಡಬೇಕು. ಉಳಿದಿರುವುದನ್ನು ವಿಧಿಗೆ ಬಿಟ್ಟು ನೆಮ್ಮದಿಯಿಂದ ಇರುವುದೇ ಜೀವನದ ಮುಕ್ತಿಯ ಮಾರ್ಗ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ. ಬದುಕು ಎನ್ನುವುದು ಸುಖದುಃಖಗಳ ಆಗರ. ಇದು ಪ್ರತಿಯೊಬ್ಬರ ಜೀವನಕ್ಕೂ

ಕಗ್ಗದ ಸಂದೇಶ- ಬದುಕಿನಾಟದಲ್ಲಿ ಧನಾತ್ಮಕ ಮನೋಭಾವದೊಂದಿಗೆ ಆಡಬೇಕು… Read More »

error: Content is protected !!
Scroll to Top