ಕೃಷಿ

ಒಂದೇ ಅಡಿಕೆಯಲ್ಲಿ ನಾಲ್ಕು ಗಿಡ!! | ಉಳ್ಳಿಂಜದಲ್ಲಿ ಕಂಡುಬಂತು ಪೂಗಸಿರಿ!

ಬೆಳ್ತಂಗಡಿ: ಇಲ್ಲಿನ ಗರ್ಡಾಡಿ ಗ್ರಾಮದ ಉಳ್ಳಿಂಜ ಜಯರಾಮ್ ಭಟ್ ಅವರ ತೋಟದಲ್ಲಿ ವಿಶೇಷ ಅಡಿಕೆ ಗಿಡವೊಂದು ಗಮನ ಸೆಳೆದಿದೆ. ಒಂದೇ ಅಡಿಕೆಯಲ್ಲಿ ಒಂದೇ ಗಿಡ – ಇದು ಪ್ರಕೃತಿ ನಿಯಮ. ಆದರೆ ಕೆಲವೊಂದು ಸಲ ಈ ನಿಯಮಗಳನ್ನೇ ಪ್ರಕೃತಿ ಮೀರಿ ನಿಲ್ಲುವುದುಂಟು. ಸಸ್ಯ ಸಂಕುಲಗಳಲ್ಲಿಯೂ ಇದು ಹೊಸತಲ್ಲ. ಇಂತಹ ಗಿಡಗಳಿಗೆ ನಮ್ಮ ಹಿರಿಯರು ಒಂದೊಂದು ಹೆಸರನ್ನು ಇಟ್ಟಿದ್ದಾರೆ. ಇದೇ ರೀತಿಯ ಗಿಡವೊಂದು ಉಳ್ಳಿಂಜದಲ್ಲಿ ಕಂಡುಬಂದಿದೆ. ಒಂದೇ ಅಡಿಕೆಯಲ್ಲಿ ನಾಲ್ಕು ಗಿಡಗಳು ಬೆಳೆದಿವೆ. ಇದನ್ನು ಪೂಗಸಿರಿ ಎಂದು ಕರೆಯಲಾಗುತ್ತದೆ […]

ಒಂದೇ ಅಡಿಕೆಯಲ್ಲಿ ನಾಲ್ಕು ಗಿಡ!! | ಉಳ್ಳಿಂಜದಲ್ಲಿ ಕಂಡುಬಂತು ಪೂಗಸಿರಿ! Read More »

ಸಾವಯವ ಕೃಷಿ ತರಬೇತಿ, ಪ್ರಾತ್ಯಕ್ಷಿಕೆ

ಕೆದಿಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ವಿಟ್ಲ ಪೆರ್ನೆ ವಲಯದ ಕೆದಿಲ ಎ ಹಾಗೂ ಬಿ ಒಕ್ಕೂಟದ ವತಿಯಿಂದ “ಸಾವಯವ ಕೃಷಿ  ತರಬೇತಿ ಮತ್ತು ಪ್ರಾತ್ಯಕ್ಷಿಕೆ ಪ್ರಗತಿಪರ ಕೃಷಿಕ ಬಾಬು ಮೂಲ್ಯರ ಮನೆಯಲ್ಲಿ ಅ.1 ಭಾನುವಾರ ನಡೆಯಿತು. ಕಜೆ ಬಾಬು ಮೂಲ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಜಗದೀಶ್ ಪ್ರಾರ್ಥನೆ ಹಾಡಿದರು. ಸೇವಾಪ್ರತಿನಿಧಿ ಶಾರದ ಸ್ವಾಗತಿಸಿ,

ಸಾವಯವ ಕೃಷಿ ತರಬೇತಿ, ಪ್ರಾತ್ಯಕ್ಷಿಕೆ Read More »

ಸವಣೂರು: ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ

ಸವಣೂರು: 2023-24ನೇ ಸಾಲಿನ ಜಿಲ್ಲಾ ವಲಯ ಪ್ರಚಾರ ಸಾಹಿತ್ಯ ಯೋಜನೆಯ ಅಂಗವಾಗಿ ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು. ದ.ಕ.ಜಿ.ಪಂ., ತೋಟಗಾರಿಕೆ ಇಲಾಖೆ ಪುತ್ತೂರು, ಡೆ. ಎನ್.ಆರ್.ಎಲ್. ಎಂ ಯೋಜನೆ ತಾ.ಪಂ. ಕಡಬ, ಸವಣೂರು ಗ್ರಾ.ಪಂ., ಕಾಣಿಯೂರು -ಸವಣೂರು ರೈತ ಉತ್ಪಾದಕ ಕಂಪೆನಿ ಇದರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರಗಿತು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಅವರು, ತೋಟಗಾರಿಕೆ ಇಲಾಖೆಯ ವತಿಯಿಂದ ದೊರಕುವ

ಸವಣೂರು: ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ Read More »

ಜನನಿ ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ

ಪುತ್ತೂರು: ಕೇಂದ್ರ ಸರಕಾರದ ನಬಾರ್ಡ್ ಪ್ರಾಯೋಜಕತ್ವ ದಲ್ಲಿ ಕೆಮ್ಮಿಂಜೆ ಗ್ರಾಮದ ನೈತಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಜನನಿ ರೈತ ಉತ್ಪಾದಕರ ಕಂಪೆನಿ ನಿಯಮಿತದ ವಾರ್ಷಿಕ ಸಾಮಾನ್ಯ ಸಭೆ ಸೆ. 30ರಂದು ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆ ಕಚೇರಿಯಲ್ಲಿ ನಡೆಯಿತು. ಸಭೆ ಬೆಳಿಗ್ಗೆ 10.30ಕ್ಕೆ ಕಂಪನಿ ಕಚೇರಿಯ ವಠಾರದಲ್ಲಿ ನಡೆಯಲಿದ್ದು, ಸಭೆ ಯಶಸ್ವಿಗಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಕಂಪೆನಿಯ ಆಡಳಿತ ನಿರ್ದೇಶಕ ಅರುಣ್ ಕುಮಾರ್ ಪುತ್ತಿಲ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜನನಿ ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ Read More »

ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರಿಂದ ಕೃಷಿ ಅಧ್ಯಯನ ಪ್ರವಾಸ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಕೃಷಿ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಪ್ರವಾಸದಲ್ಲಿ ಸ್ವಸಹಾಯ ಸಂಘದ ಸದಸ್ಯರು ನಡೆಸುತ್ತಿರುವ ಸ್ವ-ಉದ್ಯೋಗ ಘಟಕಗಳಿಗೆ ಭೇಟಿ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಮಲ್ಲಿಗೆ ಕೃಷಿ, ಹಾಳೆ ತಟ್ಟೆ ಘಟಕ, ಹೈನುಗಾರಿಕೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಲಾಯಿತು. ಪ್ರವಾಸದಲ್ಲಿ ಕೃಷಿ ಯೋಜನಾಧಿಕಾರಿಗಳು, ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರಿಂದ ಕೃಷಿ ಅಧ್ಯಯನ ಪ್ರವಾಸ Read More »

ರಸ್ತೆ ಡಿವೈಡರ್‌ನಲ್ಲಿ ಕ್ರಾಟನ್ ಗಿಡ ನಾಟಿ: ಶಾಸಕರಿಂದ ಉದ್ಘಾಟನೆ

ಪುತ್ತೂರು: ಲೋಕೋಪಯೋಗಿ ಇಲಾಖೆ ವತಿಯಿಂದ ಪುತ್ತೂರು ಉಪ್ಪಿನಂಗಡಿ-ರಸ್ತೆ ಮಧ್ಯೆ ಡಿವೈಡರ್‌ಗಳಲ್ಲಿ ಕ್ರಾಟನ್ ಗಿಡಗಳನ್ನು ನೆಡುವ ಕಾರ್ಯಕ್ಕೆ ಶಾಸಕ ಅಶೋಕ್ ರೈ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಪುತ್ತೂರಿನಿಂದ ಉಪ್ಪಿನಂಗಡಿ ತನಕ ರಸ್ತೆ ಮಧ್ಯೆ ಡಿವೈಡರ್ ಇರುವಲ್ಲಿ ಉಜ್ಜೈನಿ ಕ್ರಾಟನ್ ಗಿಡಗಳನ್ನು ನೆಡಲಾಗುವುದು. ರಸ್ತೆ ಮಧ್ಯೆ ಈ ಗಿಡಗಳು ಸೊಂಪಾಗಿ ಬೆಳೆದಲ್ಲಿ ರಸ್ತೆ ಸೌಂದರ್ಯ ವೃದ್ದಿಯಗುತ್ತದೆ ಮತ್ತು ಸ್ವಚ್ಚತೆಗೆ ಕಾರಣವಾಗುತ್ತದೆ ಎಂದು ಹೇಳಿದರು. ರಸ್ತೆಗೆ ಹೊಸ ಮೆರುಗು : ರಸ್ತೆ ಬದಿಗಳಲ್ಲಿ ಕಾಟು ಮಾವಿನ ಗಿಡಗಳನ್ನು

ರಸ್ತೆ ಡಿವೈಡರ್‌ನಲ್ಲಿ ಕ್ರಾಟನ್ ಗಿಡ ನಾಟಿ: ಶಾಸಕರಿಂದ ಉದ್ಘಾಟನೆ Read More »

ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಜಧಾನಿಯ ಕಂಬಳದ ಕರೆ ವೀಕ್ಷಣೆ | ಶಾಸಕರ ನೇತೃತ್ವದಲ್ಲಿ ವಿವಿಧ ಸಂಘಟನೆ ಪ್ರಮುಖರ ಸಭೆ

ಪುತ್ತೂರು: ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪ್ರಮುಖರ ಜೊತೆ ಶಾಸಕ ಅಶೋಕ್ ರೈ ಅವರು ಬೆಂಗಳೂರಿನ ಸ್ವಾತಿ ಹೊಟೇಲ್ ಸಭಾಂಗಣದಲ್ಲಿ ಸಭೆ ನಡೆಸಿದರು. ಇದಕ್ಕೆ ಮೊದಲು ಅರಮನೆ ಮೈದಾನದಲ್ಲಿ ಕರೆ ನಿರ್ಮಾಣ ಮಾಡಬೇಕಾದ ಸ್ಥಳವನ್ನು ವೀಕ್ಷಣೆ ಮಾಡಲಾಯಿತು. ಸಭೆಯಲ್ಲಿ ಪ್ರಮುಖವಾಗಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರಾಜಧಾನಿಯಲ್ಲಿ ಕಂಬಳ ಏರ್ಪಡಿಸಲಾಗಿದೆ. ಕಂಬಳ ವೀಕ್ಷಣೆಗೆ ರಾಜ್ಯದ ನಾನಾ ಕಡೆಗಳಿಂದ ಕಂಬಳಾಭಿಮಾನಿಗಳು ಆಗಮಿಸುವ ನಿರೀಕ್ಷೆ

ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಜಧಾನಿಯ ಕಂಬಳದ ಕರೆ ವೀಕ್ಷಣೆ | ಶಾಸಕರ ನೇತೃತ್ವದಲ್ಲಿ ವಿವಿಧ ಸಂಘಟನೆ ಪ್ರಮುಖರ ಸಭೆ Read More »

ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ 53.28 ಲಕ್ಷ ರೂ. ನಿವ್ವಳ ಲಾಭ | ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದ ಅಧ್ಯಕ್ಷ ಕೆ.ಎಸ್.ವೆಂಕಟ್ರಮಣ

ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 22ರ ಶುಕ್ರವಾರ ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕೆ.ಎಸ್. ವೆಂಕಟ್ರಮಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ವರದಿ ವರ್ಷದಲ್ಲಿ 53.28 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಲಾಭಾಂಶವನ್ನು ಬೈಲಾ ರೀತಿಯಲ್ಲಿ ವಿಲೇವಾರಿ ಮಾಡಲು ಮಹಾಸಭೆಗೆ ಶಿಫಾರಸ್ಸು ಮಾಡಲಾಗಿದೆ. ಸಂಘದಲ್ಲಿ 3282 ಎ ತರಗತಿ ಸದಸ್ಯರಿದ್ದಾರೆ ಎಂದರು. ವರದಿ ವರ್ಷದ ಅಂತ್ಯಕ್ಕೆ 2.1 ಕೋಟಿ ರೂ. ಪಾಲು

ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ 53.28 ಲಕ್ಷ ರೂ. ನಿವ್ವಳ ಲಾಭ | ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದ ಅಧ್ಯಕ್ಷ ಕೆ.ಎಸ್.ವೆಂಕಟ್ರಮಣ Read More »

ಪುತ್ತೂರು ಮಾರುಕಟ್ಟೆ ಇಂದಿನ ಧಾರಣೆ

ಹೊಸ ಅಡಿಕೆ 390 – 447 ರೂ. ಹಳೆ ಅಡಿಕೆ 380-480 ರೂ. ಕಾಳು ಮೆಣಸು 315-595 ರೂ. ಒಣ ಕೊಕ್ಕೊ 215-235 ರೂ. ಹಸಿ ಕೊಕ್ಕೊ 53-58 ರೂ. ಕೊಬ್ಬರಿ 70-73 ರೂ. ರಬ್ಬರ್ ಆರ್.ಎಸ್.ಎಸ್ 5 134.50 ರೂ. ಆರ್.ಎಸ್.ಎಸ್ 4 143.00 ರೂ. ಲಾಟ್ 125.00 ರೂ. ಸ್ಕ್ರಾಪ್ 73.50 ರಿಂದ 83.50 ರೂ.

ಪುತ್ತೂರು ಮಾರುಕಟ್ಟೆ ಇಂದಿನ ಧಾರಣೆ Read More »

2023-24ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ | ಪುತ್ತೂರು, ಉಪ್ಪಿನಂಗಡಿ ಕಂಬಳದ ದಿನಾಂಕ ಹೀಗಿದೆ…

ಪುತ್ತೂರು : 2023-24ನೇ ಸಾಲಿನ ಕಂಬಳ ವೇಳಾಪಟ್ಟಿಯಂತೆ ಇದೇ ನ.11ರಂದು ಗುರುಪುರ ಕಂಬಳದೊಂದಿಗೆ ಜೋಡುಕರೆ ಕಂಬಳ ಋತು ಆರಂಭಗೊಳ್ಳಲಿದೆ. 22 ಕಂಬಳಗಳು ವೇಳಾಪಟ್ಟಿಯಂತೆ ನಡೆಯಲಿದೆ. ಕೋಟಿ ಚೆನ್ನಯ ಜೋಡುಕರೆ ಕಂಬಳ 2024ರ ಜ .27ರಂದು ನಡೆಯಲಿದೆ. ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಮಾ.23ರಂದು ನಡೆಯಲಿದೆ.

2023-24ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ | ಪುತ್ತೂರು, ಉಪ್ಪಿನಂಗಡಿ ಕಂಬಳದ ದಿನಾಂಕ ಹೀಗಿದೆ… Read More »

error: Content is protected !!
Scroll to Top