ರಸ್ತೆ ಕಾಮಗಾರಿ ವೇಳೆ ಲಾರಿ ಮೇಲೆ ಬಿದ್ದ ಮರ !
ಉಪ್ಪಿನಂಗಡಿ: ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ಹಿಟಾಚಿಯಲ್ಲಿ ಮಣ್ಣು ತೆಗೆಯುತ್ತಿದ್ದ ವೇಳೆ ಸಂಚರಿಸುತ್ತಿದ್ದ ಲಾರಿಯೊಂದರ ಮೇಲೆ ಮರ ಬಿದ್ದ ಘಟನೆ ಬೇರಿಕೆಯಲ್ಲಿ ನಡೆದಿದೆ. ಘಟನೆಯಿಂದ ಯಾವುದೇ ಅವಘಡಗಳಾಗದಿದ್ದರೂ, ಲಾರಿಗೆ ಹಾನಿಯಾಗಿದೆ. ಈ ಪರಿಣಾಮ ಸುಮಾರು 5 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲಸಹೊತ್ತು ಸಂಚಾರಕ್ಕೆ ತಡೆ ಉಂಟಾಯಿತು. ಘಟನೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
ರಸ್ತೆ ಕಾಮಗಾರಿ ವೇಳೆ ಲಾರಿ ಮೇಲೆ ಬಿದ್ದ ಮರ ! Read More »