ಅಪಘಾತ

ಭಾರೀ ಮಳೆಗೆ ಕೊಡಗಿನ ಕರ್ತೋಜೆಯಲ್ಲಿ ಭೂಕುಸಿತ | ಸಂಚಾರದಲ್ಲಿ ವ್ಯತ್ಯಯ

ಪುತ್ತೂರು: ಕೊಡಗಿನಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಭೂಕುಸಿತ ಉಂಟಾಗಿ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯಗೊಂಡಿದೆ. ಕೊಡಗಿನ ಮದೆನಾಡು ಸಮೀಪದ ಕರ್ತೋಜೆಯಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತತದಿಂದಾಗಿ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸುವ ಸೂಚನೆಯಿದ್ದು, ಆತಂಕ ಉಂಟಾಗಿದೆ. ಭಾರೀ ಮಳೆಯನ್ನು ಲೆಕ್ಕಿಸದೆ ಕೊಡಗು ಜಿಲ್ಲಾಡಳಿತ ಜೆಸಿಬಿ, ಹಿಟಾಚಿ ಯಂತ್ರಗಳನ್ನು ಬಳಸಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಭಾರೀ ಮಳೆಗೆ ಕೊಡಗಿನ ಕರ್ತೋಜೆಯಲ್ಲಿ ಭೂಕುಸಿತ | ಸಂಚಾರದಲ್ಲಿ ವ್ಯತ್ಯಯ Read More »

ಮಿತ್ತೂರು ಬಳಿ ರಸ್ತೆಗೆ ಉರುಳಿದ ಮರ | ಸಂಚಾರದಲ್ಲಿ ವ್ಯತ್ಯಯ

ಪುತ್ತೂರು: ಮಿತ್ತೂರು ಕುಕ್ಕರೆಬೆಟ್ಟು ಬಳಿ ಸೋಮವಾರ ಮಧ್ಯಾಹ್ನ ಭಾರೀ ಮಳೆಗೆ ಮರ ರಸ್ತೆಗೆ ಉರುಳಿ ಬಿದ್ದು ಪುತ್ತೂರು ಮಾಣಿ ನಡುವಣ ವಾಹನ ಸಂಚಾರ ಸ್ಥಗಿತಗೊಂಡಿತು. ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಮರ ಬಿದ್ದ ಪರಿಣಾಮ ಪುತ್ತೂರು ಮಾಣಿ ನಡುವಣ ಓಡಾಟ ನಡೆಸುವವರಿಗೆ ತೊಂದರೆ ಉಂಟಾಯಿತು. ವಾಹನಗಳು ಮುರ ಮತ್ತು ಇತರೆ ಮಾರ್ಗಗಳ ಮೂಲಕ ಸಂಚರಿಸಿತು.

ಮಿತ್ತೂರು ಬಳಿ ರಸ್ತೆಗೆ ಉರುಳಿದ ಮರ | ಸಂಚಾರದಲ್ಲಿ ವ್ಯತ್ಯಯ Read More »

ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ | ವಾಹನ ಸಂಚಾರಕ್ಕೆ ಸಮಸ್ಯೆ

ಚಾರ್ಮಾಡಿ : ಸುರಿಯುತ್ತಿರುವ ಭಾರೀ ಮಳೆಗೆ ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಬಿದಿರುತಳ ಆಲೇಖಾನ್ ನಡುವಿನ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡದ ಮಣ್ಣು ಕುಸಿತಗೊಂಡು ರಸ್ತೆಗೂ ಬಂದು ಬಿದ್ದು ವಾಹನಗಳು ಸಂಚರಿಸಲು ಅನಾನುಕೂಲವಾಯಿತು. ಇದರಿಂದ ಘಾಟಿ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಮುಂದುವರಿಯಿತು. ಗುಡ್ಡ ಕುಸಿದ್ದ ಉಂಟಾದ ಸ್ಥಳದ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯಾಗುತ್ತಿದ್ದು, ಈ ರಸ್ತೆ ಇಲ್ಲಿ ತೀವ್ರ

ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ | ವಾಹನ ಸಂಚಾರಕ್ಕೆ ಸಮಸ್ಯೆ Read More »

ಬೈಕ್ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು

ಪುತ್ತೂರು: ಬೈಕ್‍ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ‍ಘಟನೆ ಭಾನುವಾರ ನಡೆದಿದೆ. ಸೇಡಿಯಾಪು ನಿವಾಸಿ ಚೈತ್ರೇಶ್ ಯಾನೆ ಚರಣ್ (19) ಮೃತಪಟ್ಟವರು ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೈಕ್ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು Read More »

ಕೋಡಿಂಬಾಡಿಯಲ್ಲಿ ಭಾರೀ ಮಳೆಗೆ ಆವರಣ ಗೋಡೆ ಕುಸಿತ

ಪುತ್ತೂರು: ಕೋಡಿಂಬಾಡಿ-ಉಪ್ಪಿನಂಗಡಿ ಮೋರಿಯೊಂದು ಭಾರೀ ಮಳೆಗೆ ಬ್ಲಾಕ್ ಆಗಿ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನ ಆವರಣ ಗೋಡೆ ಕುಸಿದಿದೆ. ಮೋರಿ ಬ್ಲಾಕ್ ಆಗಿರುವ ಕುರಿತು ಲೋಕೋಪಯೋಗಿ ಇಲಾಖೆಗೆ ದೂರು ನೀಡಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮಳೆ ನೀರು ನಿಂತು ಜಮೀನು ಆವರಣಗೋಡೆ ಕುಸಿದಿದೆ ಎಂದು ರಮೇಶ್ ಎಂಬವರು ತಿಳಿಸಿದ್ದಾರೆ. ಮೋರಿ ಬ್ಲಾಕ್ ಆಗಿದ್ದರಿಂದ ಚರಂಡಿಯಲ್ಲಿ ನೀರು ತುಂಬಿ ದೊಡ್ಡ ಕೊಳವಾಗಿದೆ. ರಸ್ತೆಯಲ್ಲಿ ಸಾವಿರಾರು ವಾಹನಗಳು ಚಲಿಸುತ್ತಿದ್ದು ಇಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಕೋಡಿಂಬಾಡಿಯಲ್ಲಿ ಭಾರೀ ಮಳೆಗೆ ಆವರಣ ಗೋಡೆ ಕುಸಿತ Read More »

ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ | ಮೂವರು ಮೃತ್ಯು

ಪಿರಿಯಾಪಟ್ಟಣ : ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಡೆದಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು ಮಂಗಳವಾರ  ಮುಂಜಾನೆ 4.30ಕ್ಕೆ ಈ ಅಪಘಾತ ಸಂಭವಿಸಿದೆ. ಪರಿಣಾಮ ಮುದಾಸೀರ್, ಮುಜಾಯಿದ್, ಅಹ್ಮದ್ ಪಾಷಾ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಪುತ್ತೂರು ಮೂಲದ ಯುವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ

ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ | ಮೂವರು ಮೃತ್ಯು Read More »

ಮನೆ ಮೇಲೆ ಬಿದ್ದ ಪಿಕಪ್ ವಾಹನ | ಇಲಾಖೆ ಜತೆ ಪುತ್ತಿಲ ಪರಿವಾರ ಕೈಜೋಡಿಸುವಿಕೆ

ಬಂಟ್ವಾಳ : ಪುಣಚ ಸಮೀಪ ಮನೆಯ ಮೇಲೆ ಬೆಳಗ್ಗಿನ ಜಾವ ಪಿಕಪ್ ವಾಹನ ಬಿದ್ದ ಸ್ಥಳಕ್ಕೆ ಪುತ್ತಿಲ ಪರಿವಾರದವರು ತೆರಳಿ ಸಹಕರಿಸಿದರು. ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಪರಿವಾರದ ಪ್ರಮುಖರು ಕಾರ್ಯಾಚರಣೆ ಸಂದರ್ಭ ಇಲಾಖೆಯೊಂದಿಗೆ ಕೈಜೋಡಿಸಿದರು. ಮಳೆ ಬರುತಿದ್ದಾಗ ಘಟನೆ ನಡೆದಿದ್ದು, ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುವಂತೆ ಅರುಣ್ ಪುತ್ತಿಲ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಮನೆ ಮೇಲೆ ಬಿದ್ದ ಪಿಕಪ್ ವಾಹನ | ಇಲಾಖೆ ಜತೆ ಪುತ್ತಿಲ ಪರಿವಾರ ಕೈಜೋಡಿಸುವಿಕೆ Read More »

ಮನೆ ಮೇಲೆ ಉರುಳಿದ ಪಿಕಪ್ | ಮನೆಯೊಳಗೆ ಸಿಲುಕಿಕೊಂಡ ಮಹಿಳೆ

ಬಂಟ್ವಾಳ: ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಘಟನೆ ವಿಟ್ಲ ಸಮೀಪ ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ. ಪಿಕಪ್ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಒಳಗಿದ್ದ ಮಹಿಳೆ ಹೊರಬರಲಾಗದೆ ಸಿಲುಕಿಕೊಂಡಿದ್ದಾರೆ. ಕೂರೇಲು ಮಧ್ಯದ ಅಂಗಡಿಯ ಸಮೀಪ ರಸ್ತೆಯಿಂದ ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದಿದೆ. ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಮಹಿಳೆ ಗಂಭೀರ ಪರಿಸ್ಥಿಯಲ್ಲಿದ್ದಾರೆ. ವಾಹನವನ್ನು ತೆರವು ಮಾಡದೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ

ಮನೆ ಮೇಲೆ ಉರುಳಿದ ಪಿಕಪ್ | ಮನೆಯೊಳಗೆ ಸಿಲುಕಿಕೊಂಡ ಮಹಿಳೆ Read More »

ಆಟೋ ರಿಕ್ಷಾದ ಮೇಲೆ ಮರ ಬಿದ್ದು ಹಾನಿ

ಪುತ್ತೂರು: ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ಮರವೊಂದು ಬಿದ್ದ ಘಟನೆ ಮುರದಲ್ಲಿ ನಡೆದಿದೆ. ಮುರ ಒಕ್ಕಲಿಗ ಗೌಡ ಸಮುದಾಯದ ಭವನದ ಬಳಿ ಘಟನೆ ನಡೆದಿದೆ. ಮುರ ನಿವಾಸಿ ಕುಶಲ ಎಂಬವರ ಎಲೆಕ್ಟ್ರಿಕ್ ಆಟೋ ರಿಕ್ಷಾದ ಮೇಲೆ ಮರ ಬಿದ್ದು ರಿಕ್ಷಾಕ್ಕೆ ಹಾನಿಯಾಗಿದೆ.

ಆಟೋ ರಿಕ್ಷಾದ ಮೇಲೆ ಮರ ಬಿದ್ದು ಹಾನಿ Read More »

ಪಡ್ನೂರು ದೇವಿನಗರದಲ್ಲಿ ಧರೆ ಕುಸಿದು ಮನೆ ಅಪಾಯದಲ್ಲಿ | ಕಾಂಗ್ರೆಸ್ ಬೂತ್ ಸಮಿತಿಯಿಂದ ಬನ್ನೂರು ಪಿಡಿಒಗೆ ಮನವಿ

ಪುತ್ತೂರು: ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಡ್ನೂರು ದೇವಿನಗರ ಎಂಬಲ್ಲಿರುವ ರತ್ನಾವ ತಿ ಎಂಬವರ ಮನೆ ಬರೆ ಕುಸಿದ ಕಾರಣ ಜರಿದು ಬೀಳುವ ಹಂತದ್ದಲ್ಲಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬನ್ನೂರು ಗ್ರಾಮ ಕಾಂಗ್ರೆಸ್ ಬೂತ್ ಸಮಿತಿ ವತಿಯಿಂದ ಗ್ರಾಪಂ ಪಿಡಿಒರವರಿಗೆ ಮನವಿ ಸಲ್ಲಿಸಲಾಯಿತು. ದೇವಿನಗರ ಸರ್ವೆ ನಂ 1ರಲ್ಲಿ ಎರಡು ಸೆಂಟ್ಸ್ ಸ್ಥಳದಲ್ಲಿ ರತ್ನಾವತಿಯವರ ಮನೆ ಇದ್ದು ಅದರ ಪಕ್ಕದಲ್ಲಿರುವ ಧರೆ ಮಳೆಗೆ ಕುಸಿಯುವ ಹಂತದಲ್ಲಿದ್ದು ಧರೆ ಜರಿದರೆ ಮನೆ ಬೀಳುವ ಅಪಾಯದಲ್ಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸೇಡಿಯಾಪು-

ಪಡ್ನೂರು ದೇವಿನಗರದಲ್ಲಿ ಧರೆ ಕುಸಿದು ಮನೆ ಅಪಾಯದಲ್ಲಿ | ಕಾಂಗ್ರೆಸ್ ಬೂತ್ ಸಮಿತಿಯಿಂದ ಬನ್ನೂರು ಪಿಡಿಒಗೆ ಮನವಿ Read More »

error: Content is protected !!
Scroll to Top