ದೀಪಾವಳಿ ಪಟಾಕಿಗೆ 8 ಬೋಟುಗಳು ಭಸ್ಮ! | ಮಂಕಾದ ಕಡಲ ಮಕ್ಕಳ ಹಬ್ಬದ ಸಡಗರ!
ಉಡುಪಿ: ದೀಪಾವಳಿ ಸಡಗರದಲ್ಲಿದ್ದ ಕಡಲ ಮಕ್ಕಳ ಪೂಜೆ ಸಂದರ್ಭ 8 ಬೋಟುಗಳಿಗೆ ಬೆಂಕಿ ತಗುಲಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ದೀಪಾವಳಿ ಸಂದರ್ಭ ಪೂಜೆ ನಡೆಯುತ್ತಿತ್ತು. ಈ ಸಂದರ್ಭ ಪಟಾಕಿ ಸಿಡಿಸಿದ್ದು, ಪಟಾಕಿಯಿಂದ ಸಿಡಿದ ಕಿಡಿ ಬೋಟುಗಳಿಗೆ ತಗುಲಿದೆ. ಬೋಟಿನಿಂದ ಬೋಟಿಗೆ ಬೆಂಕಿ ಪಸರಿಸಿ ಒಟ್ಟು 8 ಬೋಟುಗಳು ಸುಟ್ಟು ಹೋಗಿವೆ. ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು, ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.
ದೀಪಾವಳಿ ಪಟಾಕಿಗೆ 8 ಬೋಟುಗಳು ಭಸ್ಮ! | ಮಂಕಾದ ಕಡಲ ಮಕ್ಕಳ ಹಬ್ಬದ ಸಡಗರ! Read More »