ಲೇಖನ

ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ನಂತರ ಈಗ ಸ್ಮಾರ್ಟ್ ಗ್ಲಾಸ್ ಸರದಿ

ಮಾರ್ಕೆಟ್‌ಗೆ ದಾಂಗುಡಿ ಇಡ್ತಾ ಇವೆ ಮೆಟಾ-ರೆಬಾನ್ ಕನ್ನಡಕಗಳು ಇವತ್ತು ಯಾವುದಾದರೂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಆಗ್ತಾ ಇದೆ ಎಂದರೆ ಅದು ಐಟಿ ಕ್ಷೇತ್ರದಲ್ಲಿ. ಅದರಲ್ಲಿಯೂ ಯಾವಾಗ ಕೃತಕ ಬುದ್ಧಿಮತ್ತೆಯು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಜೊತೆಗೆ ಸೇರಿತೋ ಆಗ ಇನ್ನೂ ವೇಗವಾಗಿ ತಾಂತ್ರಿಕತೆ ಬೆಳೆಯುತ್ತ ಇದೆ. 2030ಕ್ಕೆ ತಲುಪುವಾಗ ಮನುಷ್ಯನ ಬುದ್ಧಿಮತ್ತೆಗೆ ಸಮನಾದ ಸಾಮರ್ಥ್ಯ ಇರುವ ಸಾಫ್ಟ್‌ವೇರ್ ಕಂಡುಹಿಡಿಯುತ್ತೇವೆ ಎಂದು ಐಟಿ ಕಂಪನಿಗಳು ಸವಾಲು ಸ್ವೀಕರಿಸಿವೆ ಮತ್ತು ಈಗಲೇ ಸಂಶೋಧನೆ ಆರಂಭವಾಗಿವೆ. ಇದು ಎಲ್ಲಿಯವರೆಗೆ ತಲುಪಬಹುದು ಎನ್ನುವುದು ನಮ್ಮ ಊಹೆಗೆ […]

ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ನಂತರ ಈಗ ಸ್ಮಾರ್ಟ್ ಗ್ಲಾಸ್ ಸರದಿ Read More »

ಮಹಾತ್ಮರೆಲ್ಲ ಬದುಕಿರುವಾಗಲೇ ಮತ್ತೊಮ್ಮೆ ಹುಟ್ಟಿ ಬಂದಿದ್ದರು!

ಬದುಕಿನಲ್ಲಿ ಬಂದ ಆ ಟರ್ನಿಂಗ್ ಪಾಯಿಂಟ್‌ ಅವರ ಯಶಸ್ಸಿನ ಲಾಂಚಿಂಗ್ ಪ್ಯಾಡ್ ರಾಷ್ಟ್ರಪಿತ ಮಹಾತ್ಮ ಗಾಂಧಿ ಅಕ್ಟೋಬರ್ 2, 1869ರಂದು ಹುಟ್ಟಿರಬಹುದು. ಅದು ಅವರ ಜೀವಶಾಸ್ತ್ರೀಯವಾದ ಹುಟ್ಟು. ಆದರೆ ನಿಜವಾಗಿ ಗಾಂಧೀಜಿ ಹುಟ್ಟಿದ್ದು 1893ರ ಜೂನ್ 7ರಂದು! ನಿಮಗೆ ಆಶ್ಚರ್ಯ ಆಯ್ತಾ? ಹೀಗೆ ಸ್ವಲ್ಪ ಯೋಚಿಸಿ. ನಿಜವಾದ ಗಾಂಧಿ ಹುಟ್ಟಿದ್ದು ಅದೇ ದಿನ. ಅಂದು ದಕ್ಷಿಣ ಆಫ್ರಿಕದ ಪ್ರಿಟೋರಿಯಾ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ಪಡೆದು ಪ್ರಥಮ ದರ್ಜೆ ಟ್ರೈನ್ ಬೋಗಿಯಲ್ಲಿ ಕುಳಿತಿದ್ದ ಗಾಂಧಿಯನ್ನು ಒಬ್ಬ ರೈಲ್ವೆ ಟಿಕೆಟ್

ಮಹಾತ್ಮರೆಲ್ಲ ಬದುಕಿರುವಾಗಲೇ ಮತ್ತೊಮ್ಮೆ ಹುಟ್ಟಿ ಬಂದಿದ್ದರು! Read More »

ಆ ಶ್ರಾದ್ಧದ ಪಿಂಡ ಒಡೆಯಲು ಒಂದು ಕಾಗೆಯೂ ಬರಲಿಲ್ಲ

ಮಕ್ಕಳು ತೀರಿಹೋದ ಅಪ್ಪನ ಫೋಟೊದ ಮುಂದೆ ಕಣ್ಣೀರು ಸುರಿಸಿದಾಗ ನಡೆಯಿತೊಂದು ಪವಾಡ ಇದು ನಿಜವಾಗಿಯೂ ನಡೆದ ಘಟನೆ. ಅದನ್ನು ನಡೆದ ಹಾಗೆ ಬರೆಯುತ್ತೇನೆ. ಒಂದೂರಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಇದ್ದರು. ಅವರು ತುಂಬಾ ಪ್ರಾಯ ಆದ ನಂತರ ಒಂದು ಹೋಟೆಲು ಉದ್ಯಮ ಆರಂಭಿಸಿದ್ದರು. ವ್ಯಾಪಾರ ಚೆನ್ನಾಗಿಯೇ ಇತ್ತು. ಮುಂದೆ ಆ ವೃದ್ಧರು ಶುಗರ್ ಕಾಯಿಲೆಯಿಂದ ಬಳಲಿದರು ಆದರೆ ಮುಂದೆ ಒಮ್ಮೆ ಅವರು ನಿಶ್ಯಕ್ತಿಯಾಗಿ ತಲೆ ತಿರುಗಿ ಬಿದ್ದರು. ಪರೀಕ್ಷೆ ಮಾಡಲು ಆಸ್ಪತ್ರೆಗೆ ಹೋದಾಗ ವೈದ್ಯರು ರಕ್ತ ಪರೀಕ್ಷೆ

ಆ ಶ್ರಾದ್ಧದ ಪಿಂಡ ಒಡೆಯಲು ಒಂದು ಕಾಗೆಯೂ ಬರಲಿಲ್ಲ Read More »

ಬಧಾಯಿ ಹೋ ಮಿಥುನ್ ದಾ

ಬಂಗಾಳಿ ಮತ್ತು ಹಿಂದಿ ಸಿನಿಮಾಗಳ ಸೂಪರ್ ಸ್ಟಾರ್‌ಗೆ ಒಲಿದ ಫಾಲ್ಕೆ ಪ್ರಶಸ್ತಿ ಈ ಸೋಮವಾರ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದ್ದು 74 ವರ್ಷದ ಶ್ರೇಷ್ಠ ನಟ ಮಿಥುನ್ ಚಕ್ರವರ್ತಿ ಅವರಿಗೆ (2022ರ) ಪ್ರಶಸ್ತಿ ಒಲಿದಿದೆ. ತನ್ನ ಪ್ರೊಫೈಲಿನಲ್ಲಿ ನೂರಾರು ಅತ್ಯುತ್ತಮ ಹಿಂದಿ ಮತ್ತು ಬೆಂಗಾಳಿ ಸಿನಿಮಾಗಳು, ಗಿನ್ನೆಸ್ ದಾಖಲೆ ಮಾಡಿದ ಟಿವಿ ರಿಯಾಲಿಟಿ ಶೋಗಳು, ಸಿನಿಮಾ ನಿರ್ಮಾಣ, ನಿರ್ದೇಶನ ಇವೆಲ್ಲವನ್ನೂ ಹೊಂದಿರುವ ಮಿಥುನ್ ಚಕ್ರವರ್ತಿ ತಾನೊಬ್ಬ ಶ್ರೇಷ್ಠ ಕಲಾವಿದ ಎನ್ನುವುದನ್ನು ಹೆಜ್ಜೆ ಹೆಜ್ಜೆಗೆ

ಬಧಾಯಿ ಹೋ ಮಿಥುನ್ ದಾ Read More »

ಕಿರಣ್ ಬೇಡಿ – ವರ್ಷ 75 ಆದರೂ ಇಂದಿಗೂ ಯೂತ್ ಐಕಾನ್

ಏಷ್ಯಾದ ಅತಿ ದೊಡ್ಡ ಸೆರೆಮನೆಯ ಚಹರೆಯನ್ನೇ ಬದಲಾಯಿಸಿದ ಐಪಿಎಸ್‌ ಅಧಿಕಾರಿ ಕಿರಣ್ ಬೇಡಿ ಐಪಿಎಸ್ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ ಆಗಿ ಅವರು ವಿವಿಧ ಪೊಲೀಸ್ ಅಧಿಕಾರಿಯ ಹುದ್ದೆಗಳನ್ನು 35 ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ ರೀತಿಗೆ ಇಡೀ ಭಾರತ ಎದ್ದು ನಿಂತು ಸೆಲ್ಯೂಟ್ ಹೊಡೆದಿತ್ತು. ಯಾವ ಹುದ್ದೆಯನ್ನು ಕೊಟ್ಟರೂ ಅದನ್ನು ಶೇ.200 ಬದ್ಧತೆಯ ಜೊತೆಗೆ ಅವರು ಕೆಲಸ ಮಾಡಿ ಎಲ್ಲ ಕಡೆಯಲ್ಲಿಯೂ ಗೆದ್ದಿರುವುದು ನಮಗೆ ಗೊತ್ತಿದೆ. ಭಾರತದ ವಿವಿಧ ಭಾಷೆಗಳಲ್ಲಿ

ಕಿರಣ್ ಬೇಡಿ – ವರ್ಷ 75 ಆದರೂ ಇಂದಿಗೂ ಯೂತ್ ಐಕಾನ್ Read More »

ಆಟೋಬಯೋಗ್ರಾಫಿಗಳ ಅದ್ಭುತ ಪ್ರಪಂಚ

ಸಾಹಿತ್ಯ ಲೋಕದಲ್ಲಿ ಆತ್ಮಚರಿತ್ರೆಗಳಿಗೆ ಇದೆ ವಿಶೇಷ ಸ್ಥಾನ (ನಿನ್ನೆಯ ಲೇಖನದ ಮುಂದುವರಿದ ಭಾಗ)ಸಾಹಿತ್ಯ ಪ್ರಪಂಚದಲ್ಲಿ ಆತ್ಮಚರಿತ್ರೆಗಳಿಗೆ ವಿಶೇಷ ಸ್ಥಾನ ಇದೆ. ಇಂದು ಸಾವಿರಾರು ಇಂತಹ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳ ನಿರಂತರ ಅಧ್ಯಯನದಿಂದ ನಮ್ಮ ಬದುಕಿನಲ್ಲಿ ಒಂದಿಷ್ಟು ಪರಿವರ್ತನೆ ತರಲು ಸಾಧ್ಯವಿದೆ ಅನ್ನುವುದು ನನ್ನ ಖಚಿತ ಅಭಿಪ್ರಾಯ. ಆದರೆ ಪುಸ್ತಕಗಳ ಆಯ್ಕೆಯಲ್ಲಿ ನಾವು ಒಂದಿಷ್ಟು ಎಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವುದು ಮಾತ್ರ ನನ್ನ ಕಾಳಜಿ. ಇಂದು ಎಷ್ಟೋ ದುಡ್ಡಿದ್ದವರು ತಮ್ಮನ್ನು ಇಂದ್ರ ಚಂದ್ರ ಎಂದು ಹೊಗಳಿಸಿಕೊಂಡು ಯಾರ್ಯಾರ

ಆಟೋಬಯೋಗ್ರಾಫಿಗಳ ಅದ್ಭುತ ಪ್ರಪಂಚ Read More »

ಆತ್ಮಚರಿತ್ರೆಯ ಪುಸ್ತಕಗಳು – ಬದುಕಿಗೆ ದಾರಿದೀಪಗಳು

ವಿಕಸನದ ಕುತೂಹಲಿಗಳಿಗೆ ಇವು ಪ್ರೇರಣೆಯ ಹಣತೆಗಳು ಬಾಲ್ಯದಿಂದಲೂ ಪುಸ್ತಕಗಳನ್ನು ಓದುತ್ತಾ ಬಂದ ನನಗೆ ಅತಿ ಆಪ್ತವಾಗುವ ಪುಸ್ತಕಗಳು ಅಂದರೆ ಆತ್ಮಚರಿತ್ರೆಯ ಪುಸ್ತಕಗಳು (Autobiographies).ಪ್ರತಿಯೊಬ್ಬನ ಬದುಕಿನಿಂದ ನಾವು ಸಾಕಷ್ಟು ಪಾಠಗಳನ್ನು ಕಲಿಯಬಹುದು ಎಂಬ ನಂಬಿಕೆ ಒಂದೆಡೆ ಆದರೆ, ಅವರು ಬದುಕಿ ತೋರಿದ ಮೌಲ್ಯಗಳು ನಮಗೂ ಅನುಕರಣೀಯ ಎಂಬ ಭರವಸೆ ಇನ್ನೊಂದೆಡೆ. ಬೇರೆಯವರ ತಪ್ಪುಗಳಿಂದ ಅಥವಾ ಸೋಲುಗಳಿಂದ ಕೂಡ ನಾವು ಬೇಕಾದಷ್ಟು ಕಲಿಯಬಹುದು.ಎಲ್ಲ ಭಾಷೆಯ ಸಾಹಿತ್ಯಗಳಲ್ಲಿ ಆತ್ಮಚರಿತ್ರೆಯ ಪುಸ್ತಕಗಳ ಸಿಂಹಪಾಲು ಇದೆ. ಆಟೋಬಯೋಗ್ರಾಫಿಗಳನ್ನು ಏಕೆ ಓದಬೇಕು? ಸಾಮಾನ್ಯವಾಗಿ ಯಾವುದೇ ಲೆಜೆಂಡ್

ಆತ್ಮಚರಿತ್ರೆಯ ಪುಸ್ತಕಗಳು – ಬದುಕಿಗೆ ದಾರಿದೀಪಗಳು Read More »

ಮ್ಯಾಂಡೊಲಿನ್ ಮೂಲಕ ಪೂರ್ವ-ಪಶ್ಚಿಮವನ್ನು ಬೆಸೆದ ಯು. ಶ್ರೀನಿವಾಸ್

45 ವರ್ಷ ಮಾತ್ರ ಬದುಕಿದ್ದ ಅವರು ಜಗತ್ತಿನಾದ್ಯಂತ ಸಾವಿರಾರು ಮ್ಯಾಂಡೊಲಿನ್ ಕಛೇರಿ ಕೊಟ್ಟಿದ್ದರು ಪೂರ್ವಜನ್ಮದ ಸಂಸ್ಕಾರಗಳು ಇಲ್ಲದೆ ಈ ರೀತಿಯ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದು ಸಂಗೀತ ಜಗತ್ತು ಅಭಿಪ್ರಾಯಪಟ್ಟದ್ದು ಈತನ ಪ್ರತಿಭೆಯ ಕುರಿತು. ಮ್ಯಾಂಡೊಲಿನ್ ಎಂಬ ಸಂಗೀತ ವಾದ್ಯವನ್ನು ಕೈಗೆ ಎತ್ತಿಕೊಂಡು ಅದನ್ನು ಕರ್ನಾಟಕ ಸಂಗೀತಕ್ಕೆ ಒಗ್ಗಿಸಿಕೊಂಡು ಆತ ಮಾಡಿದ್ದೆಲ್ಲ ಮಿರಾಕಲ್ ಸಾಧನೆಗಳೇ. ಹನ್ನೊಂದನೇ ವರ್ಷಕ್ಕೆ ಆತ ತ್ಯಾಗರಾಜರ ಆರಾಧನೆಯಲ್ಲಿ ಎರಡು ಗಂಟೆಗಳ ಮ್ಯಾಂಡೊಲಿನ್ ಕಛೇರಿಯನ್ನು ಕೊಟ್ಟಾಗ ಸೇರಿದ್ದ ದೊಡ್ಡ ದೊಡ್ಡ ಸಂಗೀತ ವಿದ್ವಾಂಸರು

ಮ್ಯಾಂಡೊಲಿನ್ ಮೂಲಕ ಪೂರ್ವ-ಪಶ್ಚಿಮವನ್ನು ಬೆಸೆದ ಯು. ಶ್ರೀನಿವಾಸ್ Read More »

ವ್ಯಕ್ತಿತ್ವ ವಿಕಸನದ ಹಾದಿಯ ಮೈಲಿಗಲ್ಲು ಜೋಹ್ಯಾರಿ ಕಿಟಕಿ

ಸ್ವಅವಲೋಕನದ ಶಕ್ತಿಶಾಲಿಯಾದ ಮಾಪನ ಇದು ಪ್ರಸಿದ್ಧ ವಿಜ್ಞಾನಿಯಾದ ಬೆಂಜಮಿನ್ ಫ್ರಾಂಕ್ಲಿನ್ 1750ರಲ್ಲಿ ಹೇಳಿದ ಒಂದು ಮಾತು ತುಂಬಾನೇ ಅರ್ಥಪೂರ್ಣ. Three Things are extremely HARD to break. Steel, Diamond and Self. ಅಂದರೆ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ವಿಕಸನದ ಹಾದಿಯಲ್ಲಿ ಅದು ತುಂಬಾ ಸವಾಲಿನ ಕೆಲಸವೇ ಹೌದು. ನಮ್ಮನ್ನು ನಾವೇ ರೀಡ್ ಮಾಡಲು ಹಲವು ಮಾದರಿಗಳು ಇಂದು ಲಭ್ಯ ಇದ್ದರೂ ಅದರಲ್ಲಿ ಅತ್ಯುತ್ತಮ ಮತ್ತು ನಂಬಿಕೆಗೆ ಅರ್ಹವಾದ ಮಾದರಿ ಎಂದರೆ

ವ್ಯಕ್ತಿತ್ವ ವಿಕಸನದ ಹಾದಿಯ ಮೈಲಿಗಲ್ಲು ಜೋಹ್ಯಾರಿ ಕಿಟಕಿ Read More »

ಕಿನ್ನರ ಕಂಠದ ಕನ್ನಡ ಕೋಗಿಲೆ ಪಿ. ಕಾಳಿಂಗ ರಾವ್

ಕನ್ನಡದ ಸುಗಮ ಸಂಗೀತ ಲೋಕದ ಉದಯಸೂರ್ಯ ಆಕಾಶವಾಣಿಯಲ್ಲಿ ದಿನವೂ ಬೆಳಗ್ಗೆ ಬರುತ್ತಿದ್ದ ಭಾವಗೀತೆಗಳ ಕಾರ್ಯಕ್ರಮದಲ್ಲಿ ಹುಯಿಲಗೋಳ ನಾರಾಯಣ ರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು…ಬಂತು ಎಂದರೆ ನಮ್ಮ ಕಿವಿಗಳು ನೆಟ್ಟಗಾಗುತ್ತಿದ್ದವು. ಅದ್ಭುತವಾದ ಸಾಹಿತ್ಯ, ಬಡಿದೆಬ್ಬಿಸುವ ಕನ್ನಡದ ಪ್ರೀತಿ, ಸುಂದರವಾದ ರಾಗ ಸಂಯೋಜನೆ, ಅಷ್ಟೇ ಮಾಧುರ್ಯದ ಜೇನ್ದನಿ ಎಲ್ಲವೂ ಸೇರಿ ಆ ಹಾಡಿನ ಶ್ರೇಷ್ಠತೆಗೆ ಕಾರಣ ಆಗಿದ್ದವು. ರಾಗ ಸಂಯೋಜನೆ ಮತ್ತು ಹಾಡಿದವರು ನಮ್ಮ ಉಡುಪಿ ಜಿಲ್ಲೆಯವರು ಎಂಬುದು ನಮ್ಮ ಅಭಿಮಾನವನ್ನು ಇಮ್ಮಡಿ ಮಾಡುತ್ತಿದ್ದವು. ಅಂತಹ ನೂರಾರು

ಕಿನ್ನರ ಕಂಠದ ಕನ್ನಡ ಕೋಗಿಲೆ ಪಿ. ಕಾಳಿಂಗ ರಾವ್ Read More »

error: Content is protected !!
Scroll to Top