ಲೇಖನ

ದೊಡ್ಡವರ ಸಣ್ಣತನಗಳು

ಸೆಲೆಬ್ರಿಟಿ ಸ್ಥಾನ ಪಡೆದ ನಂತರ ನಮ್ಮ ವರ್ತನೆ ಹೇಗಿರಬೇಕು? ಈ ವ್ಯಕ್ತಿಯ ಹೆಸರು ಶಂಕರ ಮಿಶ್ರಾ. ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ ವೇಲ್ಸ್ ಫಾರ್ಗೋ ಇದರ ಉಪಾಧ್ಯಕ್ಷ ಈತ. ತುಂಬಾ ಓದಿದವನು. ಬಹಳ ದೊಡ್ಡ ಸಂಬಳ ಇತ್ತು. ಸಾಮಾಜಿಕ ಸ್ಥಾನಮಾನ, ಗೌರವ, ಆಸ್ತಿ, ಅಂತಸ್ತು ಎಲ್ಲವೂ ಇತ್ತು.ಅಂತಹವನು ಮೊನ್ನೆ ಮೊನ್ನೆ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದ ಏರರ ಇಂಡಿಯಾ ವಿಮಾನದಲ್ಲಿ 70 ವರ್ಷದ ಮುದುಕಿಯ ಮೈ ಮೇಲೆ ಮೂತ್ರ ಮಾಡಿದ್ದಾನೆ. ಪರಿಣಾಮವಾಗಿ ಅರೆಸ್ಟ್ ಆಗಿ ಸೆರೆಮನೆ ಸೇರಿದ್ದಾನೆ. ಉದ್ಯೋಗ […]

ದೊಡ್ಡವರ ಸಣ್ಣತನಗಳು Read More »

ನಿಮ್ಮ ಮಗುವನ್ನು ಸೂಪರ್ ಹೀರೊ ಮಾಡಲು ಹೊರಡಬೇಡಿ!

ಮಾರುಕಟ್ಟೆಯ ಸರಕು ಆಗುತ್ತಿರುವ ಮಕ್ಕಳ ಪ್ರತಿಭೆ ಇತ್ತೀಚೆಗೆ ಹಲವು ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂದರ್ಭ ನಾನು ಗಮನಿಸಿದ ಸಂಗತಿಗಳು ಇವು…ಸಣ್ಣ ಮಕ್ಕಳಿಗೆ ಭಾಷಣಗಳು ಬೇಡ, ಅವರಿಗೆ ಬಹುಮಾನಗಳು ಕೂಡ ಬೇಡ. ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟರೂ ಒಂದೇ. ಅವರಿಗೆ ಬೇಕಾದದ್ದು ಗಮ್ಮತ್ತು, ಗೆಳೆತನ, ಖುಷಿ ಮತ್ತು ಸ್ವಾತಂತ್ರ್ಯ ಮಾತ್ರ. ಅವರನ್ನು ಹಿಡಿದು ಕೂರಿಸಿ ಬಲವಂತದ ಮಾಘಸ್ನಾನ ಎಂಬಂತೆ ಈ ಬಹುಮಾನ ಹೀಗೆ ತೆಗೆದುಕೊ, ಹೀಗೆ ನಮಸ್ಕಾರ ಮಾಡು, ಹೀಗೆ ಫೋಟೊಗೆ ಫೋಸ್ ಕೊಟ್ಟು ಹಲ್ಲು

ನಿಮ್ಮ ಮಗುವನ್ನು ಸೂಪರ್ ಹೀರೊ ಮಾಡಲು ಹೊರಡಬೇಡಿ! Read More »

ವೇಗವಾಗಿ ಬದಲಾಗುತ್ತಿದೆ ಕಾರ್ಪೊರೇಟ್ ಜಗತ್ತು

ಓಡಲು ಸಾಧ್ಯವಾದರೆ ಮಾತ್ರ ನೀವು ಸ್ಪರ್ಧೆಯಲ್ಲಿ ಉಳಿಯುತ್ತೀರಿ 1990ರವರೆಗೂ ನಾವು ಈ ಕಾರ್ಪೊರೇಟ್ ಎಂಬ ಶಬ್ದವನ್ನು ಕೇಳಿರಲಿಲ್ಲ. ಆದರೆ ಯಾವಾಗ ಭಾರತ ಗ್ಯಾಟ್ ಒಪ್ಪಂದಕ್ಕೆ ಸಹಿ ಮಾಡಿತೋ, ಭಾರತಕ್ಕೆ ಯಾವಾಗ ಅಂತಾರಾಷ್ಟ್ರೀಯ ಕಂಪೆನಿಗಳು ದಾಂಗುಡಿ ಇಟ್ಟು ಬಂದವೋ ಅಲ್ಲಿಗೆ ಭಾರತೀಯ ಉದ್ಯಮ ರಂಗದ ಚಿತ್ರಣವೇ ಬದಲಾಯಿತು!ಅದರ ಜತೆಗೆ ಇಂಟರ್‌ನೆಟ್ ಜಗತ್ತನ್ನು ಆಳಲು ಆರಂಭ ಮಾಡಿತೋ ಅಲ್ಲಿಗೆ ಎಲ್ಲವೂ ವೇಗವನ್ನು ಪಡೆದವು. ಸ್ಪರ್ಧೆ ಹೆಚ್ಚಾಯಿತು. ವಿದೇಶಿ ಕಂಪನಿಗಳ ಜತೆಗೆ ದೇಶೀಯ ಕಂಪೆನಿಗಳು ಸ್ಪರ್ಧೆಗೆ ಇಳಿಯಲೇ ಬೇಕಾಯಿತು. ಅಲ್ಲಿಗೆ ಮಾರುಕಟ್ಟೆ

ವೇಗವಾಗಿ ಬದಲಾಗುತ್ತಿದೆ ಕಾರ್ಪೊರೇಟ್ ಜಗತ್ತು Read More »

ಊರುಗಳನ್ನು ಬೆಸೆದ, ಅಭಿವೃದ್ಧಿಗೆ ಹಾದಿಯಾಗುವ ಪಂಜಿಗ ಕಿಂಡಿಅಣೆಕಟ್ಟಿನ ಸೇತುವೆ | ಶಾಸಕರ ಕನಸಿನ ಯೋಜನೆಗೆ ಜೀವ, ಊರಿಗೇ ಮರುಜೀವ

– ವಿನೋದ್ ಕೆ. ಕರ್ಪುತ್ತಮೂಲೆ ಪುತ್ತೂರು: ಹಲವು ಕನಸುಗಳನ್ನು ಹೊದ್ದು ಮಲಗಿದ್ದ ಪುಟ್ಟ ಊರು ಪಂಜಿಗ. ನರಿಮೊಗರು ಗ್ರಾ.ಪಂ.ನ ತೆಕ್ಕೆಯಲ್ಲಿರುವ ಪಂಜಿಗದಲ್ಲಿ ಕಿಂಡಿಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪಂಜಿಗ ಜನರ ಕನಸು ಮತ್ತೆ ಗರಿಗೆದರತೊಡಗಿವೆ. ಆನಡ್ಕ – ಶಾಂತಿಗೋಡು ನಡುವಿನ ಪಂಜಿಗ ಮೊದಲು ಹೀಗಿತ್ತು – ರಸ್ತೆ ಸಂಪರ್ಕವೇ ಇಲ್ಲ. ಪಕ್ಕದಲ್ಲಿ ಹರಿಯುವ ಹೊಳೆಗೆ ಹರುಕಲು – ಮುರುಕಲು ಪುಟ್ಟ ಕಾಲು ಸಂಕ. ಪಟ್ಟಣ ತಲುಪಬೇಕಾದರೆ ಹತ್ತಾರು ಕಿ.ಮೀ. ದೂರ ಸಾಗಬೇಕು. ರಿಕ್ಷಾ ಹಿಡಿಯಬೇಕಾದರೆ

ಊರುಗಳನ್ನು ಬೆಸೆದ, ಅಭಿವೃದ್ಧಿಗೆ ಹಾದಿಯಾಗುವ ಪಂಜಿಗ ಕಿಂಡಿಅಣೆಕಟ್ಟಿನ ಸೇತುವೆ | ಶಾಸಕರ ಕನಸಿನ ಯೋಜನೆಗೆ ಜೀವ, ಊರಿಗೇ ಮರುಜೀವ Read More »

ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ!

ನಿಮ್ಮ ದೊಡ್ಡ ಪ್ರತಿಭೆಗಳು ಅರಳುವುದು ಸಂಕಷ್ಟದ ದಿನಗಳಲ್ಲಿಯೇ 19ನೆಯ ಶತಮಾನದಲ್ಲಿ ಅಮೆರಿಕದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಇದ್ದನು. ಯಾವುದೋ ಒಂದು ಮೋಸದ ಪ್ರಕರಣದಲ್ಲಿ ಆತನು ಸೆರೆಮನೆಯನ್ನು ಸೇರುತ್ತಾನೆ. ವಿಚಾರಣೆ ನಿಧಾನವಾಗಿ ಸಾಗುತ್ತದೆ. ಆತನಿಗೆ ಸೆರೆಮನೆಯಲ್ಲಿ ಸಮಯ ಕಳೆಯುವುದು ತುಂಬಾ ಕಷ್ಟ ಆಗುತ್ತದೆ. ತುಂಬಾ ಕ್ರಿಯಾಶೀಲವಾಗಿ ಯೋಚಿಸುವವರಿಗೆ ಉಸಿರು ಕಟ್ಟುವ ಕಾಲ ಅದು. ಆತನು ಸಮಯವನ್ನು ಕಳೆಯಲು ಏನಾದರೂ ಮಾಡಲೇಬೇಕಿತ್ತು. ಅವನು ಸೆರೆಮನೆಯಲ್ಲಿ ಕತೆ ಬರೆಯಲು ಆರಂಭ ಮಾಡಿದ ಆತ ಜೈಲರನ ವಿಶೇಷ ಅನುಮತಿ ಪಡೆದುಕೊಂಡು ಒಂದಿಷ್ಟು ಪೆನ್

ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ! Read More »

ನಿಮ್ಮ ಮೇಲೆ ಯಾರಾದ್ರೂ ಸವಾರಿ ಮಾಡ್ತಾರೆ ಅಂದರೆ ಅದಕ್ಕೆ ನೀವೇ ಕಾರಣ!

ದಬ್ಬಾಳಿಕೆಗೆ ಒಗ್ಗಿದ ಮನಸ್ಸು ಸ್ವಾತಂತ್ರ್ಯ ಬಯಸುವುದಿಲ್ಲ ಕೋಳಿಗಳು ಸಾಲಿನಲ್ಲಿ ಹೋಗುತ್ತಾ ಇರುವಾಗ ಒಂದು ದೊಡ್ಡ ಕೋಳಿಯು ಇತರ ಸಣ್ಣ ಕೋಳಿಗಳ ತಲೆಯ ಮೇಲೆ ಮೊಟಕುತ್ತ ಹೋಗುತ್ತದೆ. ಈ ವರ್ತನೆಗೆ ಮನಶ್ಶಾಸ್ತ್ರಜ್ಞರು ಇಟ್ಟ ಹೆಸರು ಅಧಿಪತ್ಯ ಸ್ಥಾಪನೆ (Dominance) ಎಂದು! ತಾನು ದೊಡ್ಡವನು, ಗಟ್ಟಿಗ ಎನ್ನುವುದನ್ನು ಇತರರ ಮೇಲೆ ಸ್ಥಾಪನೆ ಮಾಡುವುದು ಪ್ರಾಣಿಗಳ ಸಹಜವಾದ ಪ್ರವೃತ್ತಿ. ಮನುಷ್ಯನ ಸಹಜ ಪ್ರವೃತ್ತಿ ಕೂಡ! ಮನುಷ್ಯ ಹೆಚ್ಚು ಆಸೆ ಪಡುವುದು ಅಧಿಕಾರಕ್ಕೆ ಮನುಷ್ಯನ ಸಹಜ ಆಕಾಂಕ್ಷೆಗಳಲ್ಲಿ ದುಡ್ಡು, ಪ್ರಸಿದ್ಧಿ, ಕೀರ್ತಿ, ಪ್ರಚಾರ

ನಿಮ್ಮ ಮೇಲೆ ಯಾರಾದ್ರೂ ಸವಾರಿ ಮಾಡ್ತಾರೆ ಅಂದರೆ ಅದಕ್ಕೆ ನೀವೇ ಕಾರಣ! Read More »

ಕಗ್ಗದ ಸಂದೇಶ- ಶವ ವಾಹಕನ ನಿರ್ಭಾವುಕ ಚಿತ್ತದಂತೆ…

ಮೃತನ ಸಂಸಾರಕತೆ ಶವವಾಹಕರಿಗೇಕೆ?|ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ||ಜಿತಮನದಿ ಚಿತೆಗಟ್ಟಿಕೊಂಡೊಯ್ಯುತಲಿಹರವರುಧೃತಿಯ ತಳೆ ನೀನಂತು- ಮಂಕುತಿಮ್ಮ||ಸತ್ತವನ ಮನೆಯ ದುಃಖದ ವಿಚಾರದ ಕಡೆಗೆ ಶವವನ್ನು ಕೊಂಡು ಹೋಗುವವನು ಗಮನ ಕೊಡುವುದಿಲ್ಲ. ಸತ್ತವನ ಹೆಂಡತಿ ಗೋಳಾಡುತ್ತಿದ್ದರೂ; ಸಾಲ ಕೊಟ್ಟವನು ಬಂದು ಗಲಾಟೆ ಮಾಡುತ್ತಿದ್ದರೂ ಅದಾವುದನ್ನು ಲೆಕ್ಕಿಸದೆ ದೃಢ ಮನಸ್ಸಿನಿಂದ ಶವವನ್ನು ಸುಡಲು ಚಿತೆಗೆ ಕೊಂಡುಹೋಗುವನು. ನಾವು ಕೂಡ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಎದುರಾದರೂ ಧೃತಿಗೆಡದೆ ದೃಢವಾದ ಮನಸ್ಸಿನಿಂದ ಮುನ್ನಡೆಯಬೇಕು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.ಮರಣದ ಮನೆಯಲ್ಲಿ ಸತ್ತವರನ್ನು ನೆನೆನೆನೆದು

ಕಗ್ಗದ ಸಂದೇಶ- ಶವ ವಾಹಕನ ನಿರ್ಭಾವುಕ ಚಿತ್ತದಂತೆ… Read More »

ಹೊಸ ವರ್ಷ ಮತ್ತು ಭಾರತ

2022 ಅಂತ್ಯವಾಗುತ್ತಿದೆ. 2023 ಕಾಲಿಡಲು ಕ್ಷಣಗಣನೆ ಶುರುವಾಗಿದೆ. ಕೊರೋನಾದ ಭಯವನ್ನು ಒಳಗೊಳಗೇ ಅದುಮಿಕೊಂಡು, ಕ್ಯಾಲೆಂಡರ್ ಬದಲಿಸಲು ಸಿದ್ಧರಾಗಿದ್ದೇವೆ. ಇದು ಸಂಭ್ರಮಿಸುವ ಸಮಯ ಅಲ್ಲದೇ ಇದ್ದರೂ, ವಿಶ್ವಾದ್ಯಂತ ಹೊಸ ವರ್ಷವನ್ನು ಅದ್ಧೂರಿಯಾಗಿಯೇ ಸ್ವಾಗತಿಸಲು ಸಜ್ಜಾಗಿದ್ದೇವೆ. ವಿಶ್ವಾದ್ಯಂತ ಏನೇ ನಡೆಯಲಿ, ಭಾರತದ ಸ್ಥಿತಿಗತಿ ಮಾತ್ರ ಭಿನ್ನ. ಇಲ್ಲಿನ ಮಣ್ಣಿನ ಗುಣವೋ ಏನೋ, ಭಾರತದಲ್ಲಿ ಹೊಸ ವರ್ಷಾಚರಣೆಗೆ ತನ್ನದೇ ಆದ ಅರ್ಥವಿದೆ. ಹೊಸ ವರ್ಷ ಎಂದರೆ ಹೊಸತನ. ಮನುಷ್ಯರಿಗೆ ಪ್ರತಿದಿನವೂ ಹೊಸತನವೇ. ಆದರೆ ಪ್ರಕೃತಿಗೆ… ಮನುಷ್ಯನ ದಿನವೊಂದರಲ್ಲಿ ಆಗುವ ಬದಲಾವಣೆಗಳು, ಪ್ರಕೃತಿಯಲ್ಲಿ

ಹೊಸ ವರ್ಷ ಮತ್ತು ಭಾರತ Read More »

ಎನನ್ ಬದ್ಕಾಯ ಮಗ… | ಶಾಸಕ ಮಠಂದೂರಿಗೆ ಕೃತಜ್ಞತೆ ಸಲ್ಲಿಸಿದ್ದ ಮಹಿಳೆ | ವೈರಲ್ ಆಗಿದ್ದ ಫೊಟೋದ ಅಸಲಿ ಕಥೆ ಇಲ್ಲಿದೆ ನೋಡಿ

ಪುತ್ತೂರು: “ಎನನ್ ಬದ್ಕಾಯ ಮಗ…” ತನ್ನ ಅನಾರೋಗ್ಯದ ಸಮಯದಲ್ಲಿ ನೆರವಾದ ಶಾಸಕ ಸಂಜೀವ ಮಠಂದೂರು ಅವರಿಗೆ ಮಹಿಳೆಯೊಬ್ಬರು ಕೃತಜ್ಞತೆ ಸಲ್ಲಿಸಿದ್ದ ಭಾವುಕ ಕ್ಷಣವಿದು. ಕೆಲ ದಿನಗಳ ಹಿಂದೆ ಪುರಭವನದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಮಠಂದೂರು ಅವರು ಹೊರಬರುತ್ತಿದ್ದಂತೆ, ಮಹಿಳೆಯೊಬ್ಬರು ಶಾಸಕರ ಕೈಹಿಡಿದು ತನ್ನ ಒಡಲಿನ ಮಾತುಗಳನ್ನು ಹೊರಗೆಡವಿದ ಬಗೆ ಇದು. ಕಳೆದ ಕೆಲ ದಿನಗಳಿಂದ ಬೇರೆ ಬೇರೆ ಸಾಲುಗಳನ್ನು ಹೊದ್ದುಕೊಂಡು, ಶಾಸಕರ ಫೊಟೋವೊಂದು ವೈರಲ್ ಆಗಿತ್ತು. ಹೆಚ್ಚಿನ ಮಂದಿ ತಮ್ಮ ಸಂದೇಹವನ್ನು ತೋಡಿಕೊಂಡಿದ್ದರೂ ಕೂಡ. ಮಹಿಳೆಯ ಕಣ್ಣಲ್ಲಿ ಕೃತಜ್ಞತಾ

ಎನನ್ ಬದ್ಕಾಯ ಮಗ… | ಶಾಸಕ ಮಠಂದೂರಿಗೆ ಕೃತಜ್ಞತೆ ಸಲ್ಲಿಸಿದ್ದ ಮಹಿಳೆ | ವೈರಲ್ ಆಗಿದ್ದ ಫೊಟೋದ ಅಸಲಿ ಕಥೆ ಇಲ್ಲಿದೆ ನೋಡಿ Read More »

ವೃತ್ತಿಪರತೆ ಎಂಬ ಶಕ್ತಿಶಾಲಿ ಇಂಧನ

ನೀವೆಷ್ಟು ಪ್ರತಿಭಾವಂತರಾದರೂ ವೃತ್ತಿಪರತೆ ಇಲ್ಲದಿದ್ದರೆ ಗೆಲುವು ಅಸಾಧ್ಯ ಎಷ್ಟೋ ಜನ ಅದ್ಭುತವಾದ ಪ್ರತಿಭಾವಂತರು. ಆದರೆ ಜೀವನದಲ್ಲಿ ಅವರು ಸೋಲಲು ಮುಖ್ಯ ಕಾರಣ ಎಂದರೆ ವೃತ್ತಿಪರತೆಯ ಕೊರತೆ ಎಂದು ನನ್ನ ಭಾವನೆ. ನಿಮ್ಮ ವೃತ್ತಿಪರತೆ (Profesionalism) ಅನ್ನುವುದು ನಿಮ್ಮ ಸಾಧನೆಯ ದಾರಿಯಲ್ಲಿ ಒಂದು ಶಕ್ತಿಶಾಲಿಯಾದ ಇಂಧನ ಅನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಒಂದಿಷ್ಟು ನಿದರ್ಶನಗಳ ಮೂಲಕ ನಿಮಗೆ ವಿವರಿಸುತ್ತಾ ಹೋಗುತ್ತೇನೆ. 1) ಟೈಟಾನಿಕ್ ಹಡಗು ಮತ್ತು ಅದರಲ್ಲಿ ಅರಳಿದ ಪ್ರೀತಿ ಜೇಮ್ಸ್ ಕ್ಯಾಮರೂನ್ ನಿರ್ದೇಶನ ಮಾಡಿದ 1997ರ

ವೃತ್ತಿಪರತೆ ಎಂಬ ಶಕ್ತಿಶಾಲಿ ಇಂಧನ Read More »

error: Content is protected !!
Scroll to Top