ಲೇಖನ

ಕಗ್ಗದ ಸಂದೇಶ – ಕಾವ್ಯಗಳ ಸಾರದಲ್ಲಿದೆ ಬದುಕಿನ ದಾರಿ…

ಪ್ರೀತಿ ಮಹಿಮೆಯ ಚಿತ್ರ ರೀತಿಯಂ ವಾಲ್ಮೀಕಿ|ನೀತಿ ಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್||ಗೀತೆಯಲಿ ವಿಶ್ವಜೀವನರಹಸ್ಯವನವರ್|ಖ್ಯಾತಿಸಿದರದು ಕಾವ್ಯ–ಮಂಕುತಿಮ್ಮ|| ಭಾವನೆಗಳಿಲ್ಲದೆ ಬದುಕಿಲ್ಲ. ಪ್ರೀತಿ ಒಂದು ಸವಿಯಾದ ಭಾವನೆ. ಈ ಪ್ರೀತಿ ಜೀವನವನ್ನು ಮಧುರವಾಗಿಸುತ್ತದೆ. ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಪ್ರೀತಿಯಲ್ಲಿ ಕೌಟುಂಬಿಕ ಪ್ರೀತಿ, ಸ್ನೇಹಪರ ಪ್ರೀತಿ, ಸಹೋದರ ಪ್ರೀತಿ, ಪ್ರಣಯ ಪ್ರೀತಿ, ದೈವಿಕ ಪ್ರೀತಿ ಹಾಗು ಅತಿಥಿ ಪ್ರೀತಿ ಎಂಬ ಆರು ಪ್ರಕಾರಗಳನ್ನು ಗುರುತಿಸಿದ್ದಾರೆ. ಈ ಎಲ್ಲ ಪ್ರಕಾರದ ಪ್ರೀತಿಗೂ ವಾಲ್ಮೀಕಿ ತನ್ನ ರಾಮಾಯಣ ಕೃತಿಯಲ್ಲಿ ಒಂದೊಂದು ಮಾದರಿಯನ್ನು ನೀಡಿದ್ದಾರೆ. ಒಲವಿರದ ಗೇಹದಲಿ ಏನಿದ್ದರೇನಂತೆ?|ನೂರೊಡನೆ […]

ಕಗ್ಗದ ಸಂದೇಶ – ಕಾವ್ಯಗಳ ಸಾರದಲ್ಲಿದೆ ಬದುಕಿನ ದಾರಿ… Read More »

ಕೆಲಸದ ಒತ್ತಡ ಮತ್ತು ಮಾನಸಿಕ ಆರೋಗ್ಯ

ಯುವ ಜನತೆಯಲ್ಲಿ ಹೆಚ್ಚುತ್ತಿದೆ ಖಿನ್ನತೆ ಇತ್ತೀಚಿನ ದಿನಗಳಲ್ಲಿ ಬದುಕು ಹೆಚ್ಚು ಸ್ಪರ್ಧಾತ್ಮಕ ಆಗುತ್ತಾ ಇದೆ. ಯುವಜನತೆ ಹೆಚ್ಚು ಹೆಚ್ಚು ದುಡ್ಡು, ಅಧಿಕಾರ, ಕೀರ್ತಿ, ಯಶಸ್ಸುಗಳ ಹಿಂದೆ ಓಡುತ್ತಾ ಇದ್ದಾರೆ.ಪರಿಣಾಮವಾಗಿ ಸಣ್ಣ ಪ್ರಾಯದಲ್ಲಿಯೇ ಹತಾಶೆ, ನಿರಾಸೆ, ಒತ್ತಡಗಳ ಮೂಟೆಯನ್ನು ತಮ್ಮ ಭಾವಕೋಶಕ್ಕೆ ತಮಗೆ ಅರಿವು ಇಲ್ಲದಂತೆ ಸೇರಿಸಿಕೊಳ್ಳುತ್ತಿದ್ದಾರೆ. ಇಂದಿನ ಯುವಜನತೆ ತಮ್ಮ ವೃತ್ತಿ, ಕುಟುಂಬ ಮತ್ತು ಇತರ ಹೊಣೆಗಳನ್ನು ನಿಭಾಯಿಸಲು ವಿಪರೀತವಾಗಿ ಹೆಣಗುತ್ತಿದ್ಧಾರೆ. ಪರಿಣಾಮವಾಗಿ ಎಲ್ಲರೂ ಇಂದು ಒಂದು ಸಾಮಾನ್ಯ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಅದರ ಹೆಸರು ಖಿನ್ನತೆ.

ಕೆಲಸದ ಒತ್ತಡ ಮತ್ತು ಮಾನಸಿಕ ಆರೋಗ್ಯ Read More »

ಕ್ಷಮಿಸಿಬಿಡಿ ದೇವರಾಗಿ

ಆದರೆ ಕ್ಷಮಿಸುವುದು ಅಷ್ಟು ಸುಲಭ ಅಲ್ಲ ಕನ್ನಡದ ವರನಟ ಡಾ| ರಾಜಕುಮಾರ್ ಅಭಿನಯಿಸಿದ 200ನೇ ಚಿತ್ರ ದೇವತಾ ಮನುಷ್ಯ 1988ರಲ್ಲಿ ಬಿಡುಗಡೆ ಆಗಿತ್ತು. ಅದು ಜಾರ್ಜ್ ಇಲಿಯಟ್ ಅವರ ಕಾದಂಬರಿ ಆಧಾರಿತ ಸಿನೆಮಾ. ಅದರ ಕತೆಯನ್ನು ಒಂದೆರಡು ವಾಕ್ಯದಲ್ಲಿ ಹೇಳಿ ಮುಗಿಸುತ್ತೇನೆ.ಒಬ್ಬ ಸಾಮಾನ್ಯ ಡ್ರೈವರ್ ಆಗಿದ್ದ ರಾಜಕುಮಾರ್ ವಿಲನ್‌ಗಳ ಕುತಂತ್ರಕ್ಕೆ ಬಲಿಯಾಗಿ ತನ್ನ ಪ್ರಿಯತಮೆಯನ್ನು ಕಳೆದುಕೊಳ್ಳುತ್ತಾನೆ. ತಾನು ಮಾಡದ ತಪ್ಪಿನ ಆಪಾದನೆ ಹೊತ್ತು ಜೈಲಿಗೆ ಹೋಗುತ್ತಾನೆ. ಜೈಲಿನಿಂದ ಬಿಡುಗಡೆ ಆಗಿ ಹೊರಬಂದ ತಕ್ಷಣ ಆ ವಿಲನ್‌ಗಳನ್ನು ಕೊಲೆ

ಕ್ಷಮಿಸಿಬಿಡಿ ದೇವರಾಗಿ Read More »

ಪುತ್ತೂರು ತಾಲೂಕಿಗೆ 4 ಅಂಬೇಡ್ಕರ್ ಭವನ ಮಂಜೂರು | ಶಾಸಕ ಸಂಜೀವ ಮಠಂದೂರು ಪ್ರಯತ್ನಕ್ಕೆ ಸಿಕ್ಕ ಫಲ

ಪುತ್ತೂರು: ಹಿಂದುಳಿದ ವರ್ಗಗಳ ಧ್ವನಿ ಡಾ.ಬಿ.ಆರ್.ಅಂಬೇಡ್ಕರ್. ತನ್ನ ಅಪ್ರತಿಮ ಜ್ಞಾನದಿಂದ ದೂರದೃಷ್ಠಿಯುಳ್ಳವರಾಗಿದ್ದ ಇವರು, ಜನರ ಬೆನ್ನೆಲುಬಾಗಿ ನಿಂತವರು. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತದೆ. ಇದೀಗ ಪುತ್ತೂರು ತಾಲೂಕಿನ ನಾಲ್ಕು ಗ್ರಾಮಗಳಿಗೆ ಅಂಬೇಡ್ಕರ್ ಭವನ ಮಂಜೂರುಗೊಳಿಸುವಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಯಶಸ್ವಿಯಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಡಿ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯತಿನ ಇರ್ದೆಯಲ್ಲಿ, ನಿಡ್ಪಳ್ಳಿ ಗ್ರಾಪಂನ ನಿಡ್ಪಳ್ಳಿಯಲ್ಲಿ, ಶಾಂತಿಗೋಡು ಗ್ರಾಪಂನ ಶಾಂತಿಗೋಡಿನಲ್ಲಿ ಹಾಗೂ ಅರಿಯಡ್ಕ ಗ್ರಾಪಂನ ಮಾಡ್ನೂರಿನಲ್ಲಿ ಅಂಬೇಡ್ಕರ್

ಪುತ್ತೂರು ತಾಲೂಕಿಗೆ 4 ಅಂಬೇಡ್ಕರ್ ಭವನ ಮಂಜೂರು | ಶಾಸಕ ಸಂಜೀವ ಮಠಂದೂರು ಪ್ರಯತ್ನಕ್ಕೆ ಸಿಕ್ಕ ಫಲ Read More »

ಅಸ್ತಂಗತರಾದ ಕಲಾತಪಸ್ವಿ ಕೆ. ವಿಶ್ವನಾಥ

ಶಂಕರಾಭರಣಂ, ಸಾಗರ್ ಸಂಗಮಂ, ಸ್ವಾತಿ ಮುತ್ಯಂ ಮೊದಲಾದ ಸ್ಮರಣೀಯ ಸಿನಿಮಾಗಳ ನಿರ್ದೇಶಕ ಸೌಂಡ್ ಇಂಜಿನಿಯರ್ ಆಗಿ ವೃತ್ತಿ ಜೀವನದ ಆರಂಭ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿದ (1930) ಕೆ. ವಿಶ್ವನಾಥ ಅವರು ಕೃಷ್ಣಾ ನದಿಯ ದಡದಲ್ಲಿ ತಮ್ಮ ಬಾಲ್ಯವನ್ನು ಕಳೆದವರು. ವಿಜ್ಞಾನದಲ್ಲಿ ಪದವಿ ಪಡೆದ ನಂತರ ಅವರು ಸೌಂಡ್ ಇಂಜಿನಿಯರ್ ಆಗಿ ತೆಲುಗಲ್ಲಿ ತನ್ನ ವೃತ್ತಿ ಜೀವನ ಆರಂಭ ಮಾಡಿದರು. ಮುಂದೆ ಇನ್ನೊಬ್ಬ ಲೆಜೆಂಡ್ ಸಿನೆಮಾ ನಿರ್ದೇಶಕರಾದ ಕೆ. ಬಾಲಚಂದರ್ ಅವರ

ಅಸ್ತಂಗತರಾದ ಕಲಾತಪಸ್ವಿ ಕೆ. ವಿಶ್ವನಾಥ Read More »

ಯಕ್ಷಗಾನ ಸಮ್ಮೇಳನ – ನೂರು ಭರವಸೆ, ನೂರಾರು ನಿರೀಕ್ಷೆ

ಉಡುಪಿಯಲ್ಲಿ ಮೊಟ್ಟಮೊದಲ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಈ ತಿಂಗಳ 11 ಮತ್ತು 12 ರಂದು ಉಡುಪಿಯಲ್ಲಿ ಮೊತ್ತಮೊದಲ ಯಕ್ಷಗಾನ ಸಮ್ಮೇಳನ ನಡೆಸಲು ಸರಕಾರ ಮುಂದಾಗಿದೆ. ಅದಕ್ಕಾಗಿ ರಾಜ್ಯ ಸರಕಾರವನ್ನು ಯಕ್ಷಗಾನದ ಎಲ್ಲ ಅಭಿಮಾನಿಗಳು ಅಭಿನಂದಿಸಬೇಕು.ಆದರೆ ಈ ಸಮ್ಮೇಳನವು ಸುಮ್ಮನೆ ಒಂದಿಷ್ಟು ಹರಟೆ, ಒಂದಿಷ್ಟು ಉಪನ್ಯಾಸ, ಊಟ, ತಿಂಡಿ, ಮನರಂಜನಾ ಕಾರ್ಯಕ್ರಮಗಳು ಇಷ್ಟರಲ್ಲಿಯೇ ಮುಗಿದು ಹೋಗಬಾರದು ಎಂಬ ಕಾಳಜಿ ಪ್ರತಿಯೊಬ್ಬ ಯಕ್ಷಗಾನ ಪ್ರೇಮಿಯಲ್ಲಿ ಇದೆ. ಆ ಎಚ್ಚರದಿಂದ ಈ ಲೇಖನ ಇದೀಗ ನಿಮ್ಮ ಮುಂದೆ… ನೂರಾರು ಭರವಸೆ ಮತ್ತು

ಯಕ್ಷಗಾನ ಸಮ್ಮೇಳನ – ನೂರು ಭರವಸೆ, ನೂರಾರು ನಿರೀಕ್ಷೆ Read More »

ಮಗನಿಗಾಗಿ ಭತ್ತದ ಗದ್ದೆಯನ್ನೇ ಕ್ರಿಕೆಟ್ ಪಿಚ್ ಮಾಡಿಕೊಟ್ಟಿದ್ದರು ತಂದೆ!

ಸಾಮಾನ್ಯ ರೈತನ ಮಗನ ಅಸಾಮಾನ್ಯ ಸಾಧನೆ ನಿನ್ನೆಯ ಕ್ರಿಕೆಟ್ ಪಂದ್ಯವನ್ನು ನೋಡಿದ ಭಾರತೀಯರಿಗೆ ಈ ಆಟಗಾರನು ಕೊಟ್ಟ ರೋಮಾಂಚನ ಬಹುಕಾಲ ನೆನಪಿನಲ್ಲಿ ಉಳಿಯುವುದು ಖಂಡಿತ. ಶುಭಮನ್ ಗಿಲ್ ಮುಂದಿನ ಹತ್ತಾರು ವರ್ಷ ಭಾರತೀಯ ಕ್ರಿಕೆಟನ್ನು ಆಳುವ ಸಾಧ್ಯತೆ ಕ್ರಿಕೆಟ್ ಪ್ರಿಯರಿಗೆ ನಿನ್ನೆ ಕಂಡಿದೆ. ಈಗಾಗಲೇ ಆತನನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೋಹ್ಲಿ ಜತೆಗೆ ಹೋಲಿಕೆ ಮಾಡಲು ಆರಂಭ ಆಗಿದೆ. ಗಿಲ್ ಆ ಹೋಲಿಕೆಗೆ ಖಂಡಿತವಾಗಿ ವರ್ಥ್ ಆಗಿದ್ದಾರೆ. ಮೂರೂ ಫಾರ್ಮ್ಯಾಟ್‌ಗಳಲ್ಲಿ ಗಿಲ್ ಚಾಂಪಿಯನ್ ಆಟಗಾರ ಈಗ

ಮಗನಿಗಾಗಿ ಭತ್ತದ ಗದ್ದೆಯನ್ನೇ ಕ್ರಿಕೆಟ್ ಪಿಚ್ ಮಾಡಿಕೊಟ್ಟಿದ್ದರು ತಂದೆ! Read More »

ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ

ಪಿ. ಬಿ. ಶ್ರೀನಿವಾಸ್ ಬದುಕಿದ್ದೇ ಹಾಗೆ! ಪ್ರತಿವಾದಿ ಭಯಂಕರ ಶ್ರೀನಿವಾಸ್ ಎಂದರೆ ಯಾರಿಗಾದರೂ ಅವರ್ಯಾರು ಎಂದು ಗೊತ್ತಾಗದೆ ಹೋಗಬಹುದು. ಆದರೆ ಪಿ.ಬಿ. ಶ್ರೀನಿವಾಸ್ ಅಂದರೆ ಥಟ್ಟನೆ ಮಾಧುರ್ಯದ ಅಲೆಯೊಂದು ನಮ್ಮನ್ನು ಆವರಿಸಿಬಿಡುತ್ತದೆ. ಅವರು ಹಾಡಿದ ಹಾಡುಗಳು ಎಷ್ಟು ಶ್ರೀಮಂತವೋ ಅವರು ಬದುಕಿದ ರೀತಿಯು ಇನ್ನೂ ಹೆಚ್ಚು ಶ್ರೀಮಂತ ಆಗಿತ್ತು. ಇಂದವರ ಬದುಕಿನ ಕೆಲವು ನಿದರ್ಶನಗಳನ್ನು ತಮ್ಮ ಮುಂದೆ ಇಡಲು ಹೆಮ್ಮೆಪಡುತ್ತೇನೆ. ಹುಟ್ಟಿದ್ದು ಆಂಧ್ರದಲ್ಲಿ, ಅಧಿಕ ಹಾಡು ಹಾಡಿದ್ದು ಕನ್ನಡದಲ್ಲಿ ಪಿಬಿ ಹುಟ್ಟಿದ್ದು ಆಂಧ್ರದಲ್ಲಿ. ಮಾತೃಭಾಷೆ ತೆಲುಗು. ಆದರೆ

ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ Read More »

ಕಗ್ಗದ ಸಂದೇಶ – ಹುಟ್ಟು-ಸಾವಿನಿಂದ ವ್ಯವಸ್ಥೆಗೆ ನವತೆ…

ಜವನ ನಿಂದಿಪುದೇಕೆ ಸರ್ವಘಾತಕನೆಂದು?|ಭುವಿಗೆ ವೃದ್ಧ ಸಮೃದ್ಧಿಯವನು ಸುಮ್ಮನಿರಲ್ ||ನಿಲೆ|ನವನವತೆಯವನಿಂ ಜಗಕೆ-ಮಂಕುತಿಮ್ಮ||‌‌ಸರ್ವರನ್ನು ನಾಶ ಮಾಡುವವನು ಎಂದು ಯಮನನ್ನು ನಿಂದಿಸುವುದೇಕೆ? ಅವನು ಸುಮ್ಮನೇ ಇರುತ್ತಿದ್ದರೆ ಈ ಭೂಮಿ ಮುದುಕರಿಂದಲೇ ತುಂಬಿಕೊಂಡಿರುತ್ತಿತ್ತು. ಇಲ್ಲಿ ಇದ್ದವರೆಲ್ಲ ತಮ್ಮ ಸ್ಥಳವನ್ನು ಬಿಟ್ಟುಕೊಡದೆ ಗಟ್ಟಿಯಾಗಿ ನಿಂತರೆ ಹೊಸದಾಗಿ ಬರುವವರಿಗೆ ಸ್ಥಳವಾದರೂ ಎಲ್ಲಿದೆ? ಈ ಭೂಮಿಯಲ್ಲಿ ಹೊಸತನ ಬರಲು ಕಾರಣ ಅವನು ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹುಟ್ಟುಸಾವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಯಮನು ತನ್ನ ಕರ್ತವ್ಯವನ್ನು ನಿರ್ವಹಿಸಿದರೂ ಎಲ್ಲರೂ ಅವನನ್ನು ನಿಂದಿಸುತ್ತಾರೆ. ಯಾಕೆಂದರೆ ಅವನು ಕೊಲ್ಲುವವನು

ಕಗ್ಗದ ಸಂದೇಶ – ಹುಟ್ಟು-ಸಾವಿನಿಂದ ವ್ಯವಸ್ಥೆಗೆ ನವತೆ… Read More »

ನೇಪಥ್ಯಕ್ಕೆ ಸರಿದ ಟೆನ್ನಿಸ್ ಲೋಕದ ಕೋಲ್ಮಿಂಚು ಸಾನಿಯಾ ಮಿರ್ಜಾ

ACE against ODDS ಅವರ ಆತ್ಮಚರಿತ್ರೆಯ ಪುಸ್ತಕ ಕ್ರಿಕೆಟ್ ಆಟ ನಮ್ಮ ಜೀವನ ಧರ್ಮ ಎಂದೇ ಬಿಂಬಿತವಾದ, ಕ್ರಿಕೆಟ್ ಆಟಗಾರರೇ ನಮ್ಮ ದೇವರು ಎಂದೇ ಕರೆಯಲ್ಪಡುವ ಭಾರತದಲ್ಲಿ ಟೆನ್ನಿಸಿಗೆ, ಅದರಲ್ಲಿಯೂ ಮಹಿಳಾ ಟೆನ್ನಿಸಿಗೆ ಒಂದು ಸ್ಥಾನ ಇದೆ ಎಂದು ತೋರಿಸಿಕೊಟ್ಟವರು ಸಾನಿಯಾ ಮಿರ್ಜಾ. ಇದೀಗ 36 ವರ್ಷ ಪೂರ್ತಿಯಾದ ಸಾನಿಯಾ ಈ ಸಂದರ್ಭದಲ್ಲಿ ಟೆನ್ನಿಸ್ ಜಗತ್ತಿಗೆ ಕಳೆದ ವರ್ಷ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಈ ಸಹಜ ಮುಗ್ಧ ಸೌಂದರ್ಯದ ‘ಮೂಗುತಿ ಸುಂದರಿ’ ಈಗ ಟೆನ್ನಿಸ್ ಕೋರ್ಟಿನಲ್ಲಿ ಆಡುತ್ತಿಲ್ಲ.

ನೇಪಥ್ಯಕ್ಕೆ ಸರಿದ ಟೆನ್ನಿಸ್ ಲೋಕದ ಕೋಲ್ಮಿಂಚು ಸಾನಿಯಾ ಮಿರ್ಜಾ Read More »

error: Content is protected !!
Scroll to Top