ಲೇಖನ

ತಂದೆ-ತಾಯಿ ಮಾಡುವ ಪ್ರಮಾದಗಳು

ಮಕ್ಕಳ ಸುಪ್ತ ಮನಸ್ಸಿನ ಒಳಗೆ ನಿಧಾನ ವಿಷವನ್ನು ತುಂಬುವ ಮೊದಲು ನೂರು ಬಾರಿ ಯೋಚನೆ ಮಾಡಿ ಪ್ರತಿ ಮಗು ಕೂಡ ಮುಗ್ಧವಾಗಿ ಈ ಜಗತ್ತಿಗೆ ಬರುತ್ತದೆ. ಅದರಲ್ಲಿ ಇರುವುದು ಪಾಸಿಟಿವ್ ಎನರ್ಜಿ ಮಾತ್ರ. ಆದರೆ ಹೆಚ್ಚಿನ ತಂದೆ-ತಾಯಿ (ಹಲವು ಅಧ್ಯಾಪಕರು) ತಮ್ಮ ಅರಿವಿಗೆ ಬಾರದಂತೆ ಅದರ ಸುಪ್ತ ಮನಸ್ಸಿನ (Subconcious Mind) ಒಳಗೆ ಹಂತ ಹಂತವಾಗಿ ನೆಗೆಟಿವ್ ಎನರ್ಜಿಯನ್ನು ತುಂಬಿಸಿ ಆ ಮಗುವಿನ ಮುಗ್ಧತೆಯನ್ನು ಕಸಿಯುವ ಕೆಲಸವನ್ನು ಮಾಡುತ್ತಾ ಇರುತ್ತಾರೆ. ಕೆಲವೊಮ್ಮೆ ತಿಳಿದು ಮಾಡುತ್ತಾರೆ, ಕೆಲವೊಮ್ಮೆ ತಿಳಿಯದೆ […]

ತಂದೆ-ತಾಯಿ ಮಾಡುವ ಪ್ರಮಾದಗಳು Read More »

ಮರೆಯಲು ಸಾಧ್ಯ ಇಲ್ಲ 2001ರ ಆ ಕೊಲ್ಕತ್ತಾ ಟೆಸ್ಟ್ ಪಂದ್ಯ

ಅಂದು ದ್ರಾವಿಡ್ ಮತ್ತು ಲಕ್ಷ್ಮಣ್ ಮೈಯಲ್ಲಿ ಆವೇಶ ಬಂದಿತ್ತು | ಆಸೀಸ್ ವಿರುದ್ಧ ಫಾಲೋ ಆನ್ ಪಡೆದೂ ಭಾರತ ಆ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು ಮಂಗಳವಾರ ಮುಗಿದು ಹೋದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ ನಡುವಿನ ಟೆಸ್ಟ್ ಪಂದ್ಯ ಎರಡು ಪ್ರಮುಖವಾದ ಕಾರಣಗಳಿಗೆ ದಾಖಲೆಯನ್ನು ಬರೆಯಿತು. ಮೊದಲನೇ ದಾಖಲೆ ಎಂದರೆ ನ್ಯೂಜಿಲೆಂಡ್ ಒಂದು ರನ್ ಅಂತರದಲ್ಲಿ ಆ ಟೆಸ್ಟ್ ಪಂದ್ಯವನ್ನು ಗೆದ್ದದ್ದು. ಇತಿಹಾಸದಲ್ಲಿ ಇದು ಅಂತಹ ಕೇವಲ ಎರಡನೇ ದೃಷ್ಟಾಂತ ಆಗಿತ್ತು!ಅದೇ ರೀತಿ ಫಾಲೋ ಆನ್ ಪಡೆದ ನಂತರವೂ

ಮರೆಯಲು ಸಾಧ್ಯ ಇಲ್ಲ 2001ರ ಆ ಕೊಲ್ಕತ್ತಾ ಟೆಸ್ಟ್ ಪಂದ್ಯ Read More »

ಮೇಲ್ದರ್ಜೆಗೇರಿದ ಡಯಾಲಿಸೀಸ್ ಘಟಕ | ಖಾಸಗಿ ಆಸ್ಪತ್ರೆಗಳಿಗೇನೂ ಕಮ್ಮಿ ಇಲ್ಲ ಪುತ್ತೂರು ಸರಕಾರಿ ಆಸ್ಪತ್ರೆ | 300 ಬೆಡ್ ಆಸ್ಪತ್ರೆಗೆ ಪೂರ್ವಭಾವಿ ತಯಾರಿ

ಪುತ್ತೂರು: ಸರಕಾರಿ ಆಸ್ಪತ್ರೆಗೆ ಹೋದರೆ ಹೊಸ ರೋಗಗಳೇ ಬರಬಹುದು ಎನ್ನುವುದು ಸಾಮಾನ್ಯವಾಗಿ ಜನರು ಹೇಳುತ್ತಿದ್ದ ಮಾತಾಗಿತ್ತು. ಆದರೆ ಪುತ್ತೂರು ಸರಕಾರಿ ಆಸ್ಪತ್ರೆ ಈ ಮಾತಿಗೆ ಅಪವಾದವಾಗಿ ನಿಂತಿದೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿಯ ಶಿಫಾರಸ್ಸಿನ ಮೇಲೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯ 60 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು, ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗಿದೆ. ಈ ಅನುದಾನದಲ್ಲಿ ಡಯಾಲಿಸೀಸ್ ಘಟಕವನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದ್ದು, ಇಂದು ಸುವ್ಯವಸ್ಥಿತವಾಗಿ ಎದ್ದು ನಿಂತಿದೆ. ಇದೀಗ ಯಾವುದೇ

ಮೇಲ್ದರ್ಜೆಗೇರಿದ ಡಯಾಲಿಸೀಸ್ ಘಟಕ | ಖಾಸಗಿ ಆಸ್ಪತ್ರೆಗಳಿಗೇನೂ ಕಮ್ಮಿ ಇಲ್ಲ ಪುತ್ತೂರು ಸರಕಾರಿ ಆಸ್ಪತ್ರೆ | 300 ಬೆಡ್ ಆಸ್ಪತ್ರೆಗೆ ಪೂರ್ವಭಾವಿ ತಯಾರಿ Read More »

ಸಮುದ್ರದ ನೀರೇಕೆ ನೀಲಿ ಎಂದು ಯೋಚಿಸಿದರು ಆ ವಿಜ್ಞಾನಿ

1921ರ ಬೇಸಿಗೆಯ ವಿಜ್ಞಾನ ಸಮ್ಮೇಳನ ಇಂಗ್ಲೆಂಡಿನಲ್ಲಿ ಜರಗುತ್ತಿದ್ದ, ಭಾರತದ ಆ ಮಹಾ ವಿಜ್ಞಾನಿ ಆಹ್ವಾನ ಪಡೆದಿದ್ದರು. ಅವರು ಆಗಿನ ಏಕಮಾತ್ರ ಸಂಪರ್ಕ ಸಾಧನವಾಗಿದ್ದ ಹಡಗಿನಲ್ಲಿ ಇಂಗ್ಲೆಂಡಿಗೆ ಹೊರಟರು. ಅದು ಮೂರು ತಿಂಗಳ ಸುದೀರ್ಘ ಅವಧಿಯ ಪ್ರಯಾಣ. ಓಹ್… ಎಂತಹ ಸುಂದರ ನೀಲಿ ಕಡಲು ಇನ್ನೇನು ಇಂಗ್ಲೆಂಡ್ ಸಮೀಪಿಸಿತು ಅನ್ನುವಾಗ ಹಡಗಿನ ಡೆಕ್ ಮೇಲೆ ನಿಂತು ಮೆಡಿಟರೇನಿಯನ್ ಸಮುದ್ರವನ್ನು ವೀಕ್ಷಣೆ ಮಾಡುತ್ತಿದ್ದ ಆ ವಿಜ್ಞಾನಿಯ ಮೆದುಳಿನಲ್ಲಿ ಝಗ್ ಎಂಬ ಬೆಳಕು ಒಂದು ಪ್ರಶ್ನೆಯನ್ನು ಉಂಟುಮಾಡಿತು. ‘ ಓಹ್! ಎಂತಹ

ಸಮುದ್ರದ ನೀರೇಕೆ ನೀಲಿ ಎಂದು ಯೋಚಿಸಿದರು ಆ ವಿಜ್ಞಾನಿ Read More »

ಕಗ್ಗದ ಸಂದೇಶ- ಮನ್ನಣೆಗೆ ತುಡಿವ ಮನ ಪಂಜರದ ಗಿಳಿಯಂತೆ…

ಮನೆಯೊಳೊ ಮಠದೊಳೋ ಸಭೆಯೊಳೋ ಸಂತೆಯೊಳೊ|ಕೊನೆಗೆಕಾಡೊಳೊ ಮಸಣದೊಳೊ ಮತ್ತೆಲ್ಲೋ||ಗಣನೆಗೇರಲಿಕೆಂದು ಜನ ತಪಿಸಿ ಕೊರಗುವುದು|ನೆನೆಯದಾತ್ಮದ ಸುಖವ–ಮಂಕುತಿಮ್ಮ||” ಜನರು ತಮ್ಮ ಮನೆಯಲ್ಲಿಯೋ, ತಾವಿರುವ ಮಠದಲ್ಲಿಯೋ, ಭಾಗವಹಿಸುವ ಸಭೆಯಲ್ಲೋ ಅಥವಾ ಜನ ಸೇರಿದ ಸಂತೆಯಲ್ಲೋ! ಕೊನೆಗೆ ಕಾಡಿನಲ್ಲಿಯೋ ಅಥವಾ ಸತ್ತು ಮಲಗುವ ಸ್ಮಶಾನದಲ್ಲಿಯೋ ಜನ ತಮ್ಮನ್ನು ಗಮನಿಸಬೇಕು ಮತ್ತು ಗುರುತಿಸಬೇಕು ಎಂದು ಬಯಸುವರು‌. ತಮ್ಮ ಆತ್ಮದ ಸುಖವನ್ನು ನೆನೆಯದೆಯೆ ಬರೀ ಹೆಸರಿಗಾಗಿ ಹಪಾಹಪಿಸುವರು ಎಂದು ಮಾನ್ಯ ಡಿವಿಜಿಯವರು ಮನುಷ್ಯನ ಮನ್ನಣೆಯ ದಾಹವನ್ನು ಈ ಮುಕ್ತಕದಲ್ಲಿ ಬಣ್ಣಿಸಿದ್ದಾರೆ.‌ ಜನ ತಾವು ಎಲ್ಲೆ ಇರಲಿ ತಮ್ಮನ್ನು

ಕಗ್ಗದ ಸಂದೇಶ- ಮನ್ನಣೆಗೆ ತುಡಿವ ಮನ ಪಂಜರದ ಗಿಳಿಯಂತೆ… Read More »

ಪಂಚತಂತ್ರದ ಕಥೆಗಳನ್ನು ಕೇಳೋಣ ಬನ್ನಿ

ಕೊಂಚ ಕೊಂಚವೇ ನಮ್ಮನ್ನು ತಿದ್ದುವ ರಮ್ಯ ಕಥೆಗಳು ಯಾರೆಲ್ಲ ಬಾಲ್ಯದಲ್ಲಿ ಅಜ್ಜಿ, ಅಜ್ಜ, ಅಮ್ಮ, ಮಾವ ಅಥವಾ ಗುರುಗಳ ಬಾಯಿಂದ ಸುಂದರವಾದ ಪ್ರಾಣಿ, ಪಕ್ಷಿಗಳ ಕಥೆಗಳನ್ನು ಕೇಳಿದ್ದೀರಾ? ಗೋಧೂಳಿ ಮುಹೂರ್ತದಲ್ಲಿ ಅಜ್ಜಿಯ ಕಾಲ ಮೇಲೆ ಬೆಚ್ಚಗೆ ಕುಳಿತು ನೀರವ ಮಹಾಮೌನದಲ್ಲಿ ರೋಚಕ ಕತೆಗಳನ್ನು ಕೇಳುತ್ತಾ, ಅದ್ಭುತ ರಮ್ಯಲೋಕವನ್ನು ಕಟ್ಟಿಕೊಡುವ ಮತ್ತು ಅನುಭವಿಸುವ ಆನಂದ ಇದೆಯಲ್ಲ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅವುಗಳು ನಾವು ಮುಂದೆ ಬೆಳೆಯುತ್ತ ಹೋದಂತೆ ನಮ್ಮ ಭಾವಕೋಶದ ಭಾಗವಾಗಿ ಉಳಿದು ಬಿಡುತ್ತವೆ.ಜಗತ್ತಿಗೆ ಭಾರತದ

ಪಂಚತಂತ್ರದ ಕಥೆಗಳನ್ನು ಕೇಳೋಣ ಬನ್ನಿ Read More »

ವಾಹನ ದಟ್ಟಣೆ ಏರಿಕೆ | ಗ್ರಾಮೀಣ ರಸ್ತೆ ಸಹಿತ ಜಿಲ್ಲಾ ಮುಖ್ಯರಸ್ತೆಗಳು ಮೇಲ್ದರ್ಜೆಗೆ | ಶಾಸಕ ಸಂಜೀವ ಮಠಂದೂರು ಶಿಫಾರಸಿನ ಮೇರೆಗೆ ಪುತ್ತೂರಿನ 112.5 ಕಿ.ಮೀ. ಗ್ರಾಮೀಣ ರಸ್ತೆ, 41 ಕಿ.ಮೀ. ಜಿಲ್ಲಾ ರಸ್ತೆ ಮೇಲ್ದರ್ಜೆಗೆ

ಪುತ್ತೂರು: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ರಸ್ತೆಗಳನ್ನು ಕಾಲಕಾಲಕ್ಕೆ ಮೇಲ್ದರ್ಜೆಗೇರಿಸುವುದು ಪ್ರಮುಖ ಮೂಲಭೂತ ಸೌಕರ್ಯಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆದಿದೆ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಏರಿಕೆಯಾಗುವುದರಿಂದ ಗ್ರಾಮೀಣ ಪ್ರದೇಶ ಸಹಿತ ನಗರ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಇದರಿಂದ ವಾಹನ ಸವಾರರು ಸಹಿತ ಪಾದಚಾರಿಗಳಿಗೂ ಸಮಸ್ಯೆ ಉಂಟಾಗುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮೀಣ ರಸ್ತೆ ಹಾಗೂ ಜಿಲ್ಲಾ ಮುಖ್ಯರಸ್ತೆಗಳನ್ನು

ವಾಹನ ದಟ್ಟಣೆ ಏರಿಕೆ | ಗ್ರಾಮೀಣ ರಸ್ತೆ ಸಹಿತ ಜಿಲ್ಲಾ ಮುಖ್ಯರಸ್ತೆಗಳು ಮೇಲ್ದರ್ಜೆಗೆ | ಶಾಸಕ ಸಂಜೀವ ಮಠಂದೂರು ಶಿಫಾರಸಿನ ಮೇರೆಗೆ ಪುತ್ತೂರಿನ 112.5 ಕಿ.ಮೀ. ಗ್ರಾಮೀಣ ರಸ್ತೆ, 41 ಕಿ.ಮೀ. ಜಿಲ್ಲಾ ರಸ್ತೆ ಮೇಲ್ದರ್ಜೆಗೆ Read More »

ಜಡೇಜಾ ಎಂಬ ಫೈಟಿಂಗ್ ಸ್ಪಿರಿಟ್

ಕಮ್‌ಬ್ಯಾಕ್‌ನಲ್ಲಿ ದೈತ್ಯ ಸಂಹಾರಿ ಆದ ರವೀಂದ್ರ ಜಡೇಜಾ ಮತ್ತೆ ಮತ್ತೆ ಬೂದಿಯಿಂದ ಎದ್ದು ಬಂದ ಯಾರನ್ನಾದರೂ ಹೋಲಿಕೆ ಮಾಡಲು ಹೊರಟರೆ ಭಾರತೀಯ ಕ್ರಿಕೆಟ್ ರಂಗದಲ್ಲಿ ಈಗ ಸಿಗುವ ಮೊದಲ ಹೆಸರು ಸರ್ ರವೀಂದ್ರ ಜಡೇಜಾ. ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತವು ಗೆಲ್ಲುವಲ್ಲಿ ಈ ಸವ್ಯಸಾಚಿ ಆಟಗಾರನ ಆಟವು ನಿರ್ಣಾಯಕ ಆದದ್ದು. ಬಲಿಷ್ಟ ಆಸ್ಟ್ರೇಲಿಯ ವಿರುದ್ಧದ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಬಾಲ್ ಮತ್ತು ಬ್ಯಾಟ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿದ ಒಂದೇ ಹೆಸರು ಅದು ಸರ್ ರವೀಂದ್ರ ಜಡೇಜಾ.ಅವರ

ಜಡೇಜಾ ಎಂಬ ಫೈಟಿಂಗ್ ಸ್ಪಿರಿಟ್ Read More »

ಕಗ್ಗದ ಸಂದೇಶ – ಕೆಡುಕಿನ ಗಿಡದ ಫಲವೂ ಕೆಡುಕೇ ಆಗಿರುತ್ತದೆ…

ನರಕ ತಪ್ಪಿತು ನಿಜ ಧರ್ಮಜಂಗೆ ಆದೊಡೇಂ|ನರಕ ದರ್ಶನದ ದುಃಖ ತಪ್ಪದಾಯಿತಲ||ದುರಿತತರುವಾರು ನೆಟ್ಟುದೊ ನಿಮಗುಂಟು ಫಲ|ಚಿರ ಋಣದ ಲೆಕ್ಕವದು- ಮಂಕುತಿಮ್ಮ||ಧರ್ಮರಾಯನಿಗೆ ನರಕ ತಪ್ಪಿದ್ದು ನಿಜ. ಆದರೆ ನರಕದ ದರ್ಶನದ ದುಃಖ ತಪ್ಪಲೇ ಇಲ್ಲ. ಕೆಡುಕಿನ ಗಿಡವನ್ನು ಯಾರು ನೆಡುತ್ತಾರೊ ಅವರು ಅದರ ಫಲವನ್ನು ಅನುಭವಿಸಲೇ ಬೇಕಾಗುತ್ತದೆ. ಇದು ಶಾಶ್ವತವಾದ ಋಣದ ಲೆಕ್ಕ ಸಂದಾಯ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ. ಧರ್ಮರಾಯ ಮಹಾಭಾರತದಲ್ಲಿ ಬರುವ ಆದರ್ಶ ಪುರುಷ. ಸತ್ಯ, ನ್ಯಾಯ, ನೀತಿ

ಕಗ್ಗದ ಸಂದೇಶ – ಕೆಡುಕಿನ ಗಿಡದ ಫಲವೂ ಕೆಡುಕೇ ಆಗಿರುತ್ತದೆ… Read More »

ಪುಣ್ಯಕೋಟಿ ಗೋವು, ಹುಲಿ ಮತ್ತು ಮುಗ್ಧತೆ

ನಾವು ಪ್ರಾಕ್ಟಿಕಲ್ ಆಗಿ ಬದುಕಲು ಕಲಿಯಬೇಕು ಬಾಲ್ಯದಲ್ಲಿ ನಮ್ಮೆಲ್ಲರ ಭಾವಕೋಶದಲ್ಲಿ ಭದ್ರವಾಗಿ ಕುಳಿತಿರುವ ಕಥೆ ಎಂದರೆ ಅದು ಪುಣ್ಯಕೋಟಿಯ ಕಥೆ. ಅದನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂದು ಹೇಳಿದ, ನುಡಿದಂತೆ ನಡೆದ ಪುಣ್ಯಕೋಟಿಯ ಗೋವಿನ ಮುಗ್ಧತೆಯು ನನಗೆ ಇಂದಿಗೂ ವಿಸ್ಮಯವೇ ಆಗಿದೆ.ನಾನು ಅದರ ಕಥೆಯನ್ನು ಮತ್ತೆ ನಿಮಗೆ ಹೇಳಲು ಹೋಗುವುದಿಲ್ಲ. ಯಾಕೆಂದರೆ ಆ ಕಥೆಯು ಪ್ರತಿಯೊಬ್ಬರಿಗೂ ನೆನಪಿದೆ.

ಪುಣ್ಯಕೋಟಿ ಗೋವು, ಹುಲಿ ಮತ್ತು ಮುಗ್ಧತೆ Read More »

error: Content is protected !!
Scroll to Top