ಲೇಖನ

22 ವರ್ಷಗಳಿಂದ ಝೇಂಕರಿಸುತ್ತಿರುವ ಒಂದು ಹಾಡು- ಶ್ರೇಯಾ ಘೋಷಾಲ್

ಮೊದಲ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದ ಗಾಯಕಿ ಝೀ ಟಿವಿ 23 ವರ್ಷದ ಹಿಂದೆ ನಡೆಸಿದ ರಾಷ್ಟ್ರಮಟ್ಟದ ರಿಯಾಲಿಟಿ ಶೋ ‘ಸಾರೆಗಮ’ ಗೆದ್ದಾಗ ಆಕೆಗೆ ಇನ್ನೂ 16 ವರ್ಷ ವಯಸ್ಸು. ಆಕೆಯ ಧ್ವನಿಯಲ್ಲಿ ಇದ್ದ ಮುಗ್ಧತೆ ಮತ್ತು ವೈವಿಧ್ಯತೆ ಇಡೀ ರಾಷ್ಟ್ರದ ಗಮನವನ್ನು ಸೆಳೆದಾಗಿತ್ತು. ಆ ಶೋ ನೋಡುತ್ತಿದ್ದ ನಿರ್ಮಾಪಕ ಸಂಜಯ ಲೀಲಾ ಬನ್ಸಾಲಿ ಅವರ ತಾಯಿ ಮುಂದಿನ ಸಿನೆಮಾದಲ್ಲಿ ಆಕೆಯಿಂದ ಹಾಡಿಸಲೇಬೇಕು ಎಂದು ತಮ್ಮ ಮಗನಿಗೆ ಹೇಳಿದ್ದರು. ತಾಯಿಯ ಮಾತಿಗೆ ಗೌರವ ಕೊಟ್ಟ ಬನ್ಸಾಲಿ ತನ್ನ ಮುಂದಿನ […]

22 ವರ್ಷಗಳಿಂದ ಝೇಂಕರಿಸುತ್ತಿರುವ ಒಂದು ಹಾಡು- ಶ್ರೇಯಾ ಘೋಷಾಲ್ Read More »

ಸಭಾಕಂಪನವನ್ನು ಗೆಲ್ಲಲು ಸಾಧ್ಯ

ಒಳಗಿನ ಒತ್ತಡ ನಿರ್ವಹಣೆಗೆ ಇಲ್ಲಿವೆ ಒಳ್ಳೆಯ ಟಿಪ್ಸ್ ಈ ಸಭಾಕಂಪನ (ಸ್ಟೇಜ್ ಫಿಯರ್‌) ಎನ್ನುವುದು ನೂರಾರು ಒಳ್ಳೆಯ ಭಾಷಣದ ಪ್ರತಿಭೆಗಳನ್ನು ಕೊಂದುಹಾಕಿದೆ. ಈ ಕಂಪನವನ್ನು ಗೆಲ್ಲಲು ಸಾಧ್ಯ ಇದೆಯೇ?ಭಾಷಣ ಎನ್ನುವುದು ಒಂದು ಶ್ರೇಷ್ಟವಾದ ಕಲೆ. ಶ್ರೇಷ್ಠವಾದ ಭಾಷಣಕಾರ ಒಂದು ಇಡೀ ಸಮೂಹವನ್ನು ಪ್ರಭಾವಿಸಬಲ್ಲ. ಸಾವಿರಾರು ಮಂದಿಗೆ ಏಕಕಾಲದಲ್ಲಿ ಪ್ರೇರಣೆ ಕೊಡಬಲ್ಲ. ಮಾಹಿತಿಗಳ ರವಾನೆಗೆ ಭಾಷಣ ಅತ್ಯುತ್ತಮ ಮಾಧ್ಯಮ ಆಗಿದೆ. ಭಾಷಣದ ಮೂಲಕ ಮನರಂಜನೆ ಕೊಡುವ ಒಳ್ಳೆಯ ಭಾಷಣಕಾರರ ಸಂಖ್ಯೆ ಕೂಡ ತುಂಬಾ ದೊಡ್ಡದಿದೆ. ಒಬ್ಬ ಪ್ರಬುದ್ಧ ಭಾಷಣಕಾರ

ಸಭಾಕಂಪನವನ್ನು ಗೆಲ್ಲಲು ಸಾಧ್ಯ Read More »

ತಬಲಾಕೊಬ್ಬರೆ ಉಸ್ತಾದ್‌ – ಜಾಕೀರ್‌ ಹುಸೇನ್‌

ಇಂದು ತಬಲಾ ಸಾಮ್ರಾಟನ ಹುಟ್ಟಿದ ಹಬ್ಬ ತಬಲಾ ಸಾಮ್ರಾಟ್ ಉಸ್ತಾದ್ ಜಾಕೀರ್ ಹುಸೇನರಿಗೆ ಇಂದು 72 ತುಂಬಿತು. ತನ್ನ 12ನೇ ವಯಸ್ಸಿಗೇ ತಬಲಾ ಸೋಲೋ ಕಛೇರಿ ನಡೆಸಿದ ಕೀರ್ತಿ ಅವರದ್ದು. ಅಂದಿನಿಂದಲೂ ತಬಲಾ ಅವರನ್ನು ಬಿಟ್ಟು ಹೋದದ್ದೇ ಇಲ್ಲ. ಈ ಪ್ರೀತಿಗೂ ಇಂದು ಆರುವತ್ತು ತುಂಬಿತು. ಉಸ್ತಾದ್ ಅಲ್ಲಾರಖಾ ಅವರ ಮಗ ಅಂದರೆ ಸಾಮಾನ್ಯ ಸಂಗತಿ ಅಲ್ಲ ಭಾರತದಲ್ಲಿ ತಬಲಾಗೆ ಅನ್ವರ್ಥ ನಾಮ ಆಗಿ ಇದ್ದವರು ಉಸ್ತಾದ ಅಲ್ಲಾರಖಾ. ಸಾವಿರಾರು ಶಿಷ್ಯರನ್ನು ತಯಾರು ಮಾಡಿದವರು ಅವರು. ಭಾರತದಲ್ಲಿ

ತಬಲಾಕೊಬ್ಬರೆ ಉಸ್ತಾದ್‌ – ಜಾಕೀರ್‌ ಹುಸೇನ್‌ Read More »

ಇಡೀ ದೇಶ ಮಾತನಾಡುವ ಒಂದು ರಾಷ್ಟ್ರಭಾಷೆ ನಮಗೆ ಬೇಕು – ಆ ಅರ್ಹತೆ ಇರುವುದು ಕೇವಲ ಮೂರು ಭಾಷೆಗಳಿಗೆ

ರಷ್ಯಾದಲ್ಲಿ ಪ್ರತಿಯೊಬ್ಬರೂ ರಷ್ಯನ್ ಭಾಷೆ ಮಾತಾಡುತ್ತಾರೆ. ಜಪಾನ್‌ನಲ್ಲಿ ಪ್ರತಿಯೊಬ್ಬರಿಗೂ ಜಪಾನಿ ಭಾಷೆ ಗೊತ್ತಿದೆ. ಚೀನಾದಲ್ಲಿ ಪ್ರತಿಯೊಬ್ಬರಿಗೂ ಚೀನಿ ಭಾಷೆಯ ಪರಿಚಯ ಇದೆ. ಸ್ಪೇನ್‌ನಲ್ಲಿ ಪ್ರತಿಯೊಬ್ಬರೂ ಸ್ಪಾನಿಷ್ ಭಾಷೆಯನ್ನು ಪ್ರೀತಿಯಿಂದ ಕಲಿತು ಮಾತಾಡುತ್ತಾರೆ.ಭಾರತದಲ್ಲಿ ರಾಷ್ಟ್ರಭಾಷೆ ಯಾವುದು ಎಂದು ಕೇಳಿದರೆ ಹೆಚ್ಚಿನವರು ಹಿಂದಿ ಎಂದು ಹೇಳುತ್ತಾರೆ. ಆದರೆ ಅದು ಖಂಡಿತ ಸತ್ಯ ಅಲ್ಲ. ನಮ್ಮ ಸಂವಿಧಾನದಲ್ಲಿ ಅದರ ಉಲ್ಲೇಖ ಇಲ್ಲ. ರಾಷ್ಟ್ರ ಭಾಷೆಯಾಗಿ ಒಂದು ಭಾಷೆಯನ್ನು ಬೆಳೆಸಬೇಕು ಎಂಬ ಆಸೆ ಅಂಬೇಡ್ಕರ್ ಅವರಿಗೆ ಇದ್ದಿದ್ದರೂ ಅದನ್ನು ಅವರು ನಮ್ಮ ಸಂವಿಧಾನದಲ್ಲಿ

ಇಡೀ ದೇಶ ಮಾತನಾಡುವ ಒಂದು ರಾಷ್ಟ್ರಭಾಷೆ ನಮಗೆ ಬೇಕು – ಆ ಅರ್ಹತೆ ಇರುವುದು ಕೇವಲ ಮೂರು ಭಾಷೆಗಳಿಗೆ Read More »

ಬಹುಮುಖಿ ಸ್ತ್ರೀ – ನೂರು ಮುಖಗಳು, ನೂರಾರು ಆಯಾಮಗಳು

ವಿಶ್ವ ಮಹಿಳಾ ದಿನದಂದು ಆಕೆಯನ್ನು ನೆನೆಯೋಣ ಮಾರ್ಚ್ 8ರಂದು ವಿಶ್ವ ಮಹಿಳಾ ದಿನ. ಇದು ಆಕೆಯ ದಿನ. ಆಕೆಗೋಸ್ಕರ ಮುಡಿಪಾದ ದಿನ. ಆಕೆಯ ಅಜ್ಞಾತವಾದ ತ್ಯಾಗವನ್ನು ನೆನೆಯುವ ದಿನ. ಅಜ್ಜಿಯಾಗಿ, ತಾಯಿಯಾಗಿ, ಮಗಳಾಗಿ, ಮೊಮ್ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಸೊಸೆಯಾಗಿ, ಅತ್ತೆಯಾಗಿ, ಅತ್ತಿಗೆಯಾಗಿ,ನಾದಿನಿಯಾಗಿ, ಓರಗಿತ್ತಿಯಾಗಿ, ಗೆಳತಿಯಾಗಿ, ಹೆಂಡತಿಯಾಗಿ, ಪ್ರಿಯತಮೆಯಾಗಿ, ಶಿಕ್ಷಕಿಯಾಗಿ…ಹೀಗೆ ನೂರು ರೂಪಗಳಲ್ಲಿ ನಮ್ಮ ಬದುಕನ್ನು ಪ್ರಭಾವಿಸಿದ, ನೂರಾರು ಆಯಾಮಗಳಲ್ಲಿ ನಮ್ಮ ಬದುಕಿನಲ್ಲಿ ತಂಗಾಳಿ ಬೀಸಲು ಕಾರಣಳಾದ, ಬದುಕಿನ ಇಂಚಿಂಚು ಹ್ಯಾಪಿನೆಸನ್ನು ಸಂಭ್ರಮಿಸಿದ ಪ್ರತಿಯೊಬ್ಬ ಸಹೃದಯಿ ಮಹಿಳೆಗೂ ಇಂದು

ಬಹುಮುಖಿ ಸ್ತ್ರೀ – ನೂರು ಮುಖಗಳು, ನೂರಾರು ಆಯಾಮಗಳು Read More »

ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ

ಪುತ್ತೂರು: ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಪುತ್ತೂರಿಗೆ ಸುಸಜ್ಜಿತ ಕ್ರೀಡಾಂಗಣ ಅಗತ್ಯ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕಾಗಿ ಜಾಗ ಕಾದಿರಿಸಿದ್ದು, ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಶಾಸಕ ಸಂಜೀವ ಮಠಂದೂರು ಅವರು ಮುತುವರ್ಜಿಯ ವಹಿಸಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒಂದೊಂದಾಗಿ ಹೊಂದಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದರಲ್ಲಿ ಕ್ರೀಡಾಂಗಣವೂ ಒಂದು. ಪುತ್ತೂರು ನಗರದ ಹೊರವಲಯದ ತೆಂಕಿಲದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಜಿಲ್ಲಾ ಕ್ರೀಡಾಂಗಣಕ್ಕಾಗಿ ಈಗಾಗಲೇ ಸ್ಥಳ ಕಾಯ್ದಿರಿಸುವಿಕೆ ಪ್ರಕ್ರಿಯೆ ನಡೆದಿದೆ. ಶಾಸಕ ಸಂಜೀವ ಮಠಂದೂರು ಅವರ ಸರ್ವ ಪ್ರಯತ್ನದಿಂದ ಕ್ರೀಡಾಂಗಣದ ಕನಸು ನನಸಾಗುವುದರಲ್ಲಿದೆ.

ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ Read More »

ಧಿಂಗ್ ಎಕ್ಸ್‌ಪ್ರೆಸ್ ಖ್ಯಾತಿಯ ಹುಡುಗಿ ಓಡುತ್ತಲೇ ಇದ್ದಾಳೆ

ಹಿಮಾದಾಸ್- ಭಾರತದ ಹೆಮ್ಮೆಯ ಕ್ರೀಡಾಪಟು ನಾನು ನಿಮಗೆಲ್ಲ ಇಂದು ಒಬ್ಬ ಅದ್ಭುತವಾದ ಮಹಿಳಾ ಕ್ರೀಡಾಪಟುವನ್ನು ಪರಿಚಯ ಮಾಡಬೇಕು ಮತ್ತು ಜಗತ್ತಿನ ಎಲ್ಲ ಮಹಿಳೆಯರಿಗೆ ಅವರದ್ದೇ ದಿನದ ಶುಭಾಶಯ ಹೇಳಬೇಕು.ಮೀಟ್ ದಿಸ್ ಗ್ರೇಟ್ ಅಥ್ಲೆಟ್!ಮೊದಲ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಓಡುವಾಗ ಅವಳ ಬಳಿ ಟ್ರಾಕ್ ಶೂ ಇರಲಿಲ್ಲ. ಅವಳ ಅಪ್ಪ ಪೇಟೆಗೆ ಹೋಗಿ 1,200 ರೂ. ಬೆಲೆಯ ಸ್ಪೈಕ್ ಇರುವ ಸಾಮಾನ್ಯ ಶೂ ತಂದುಕೊಟ್ಟಿದ್ದರು ಮತ್ತು ನನ್ನ ಹತ್ತಿರ ಇರೋದು ಇಷ್ಟೇ ದುಡ್ಡು ಎಂದು ಮಗಳಿಗೆ ಹೇಳಿದ್ದರು.ಆಗ ಅವಳು

ಧಿಂಗ್ ಎಕ್ಸ್‌ಪ್ರೆಸ್ ಖ್ಯಾತಿಯ ಹುಡುಗಿ ಓಡುತ್ತಲೇ ಇದ್ದಾಳೆ Read More »

ಅನನ್ಯತೆ ನಿಮ್ಮದೇ ಬ್ರಾಂಡ್ ಆಗಲಿ : ನಿಮ್ಮ ಹಾಗೆ ಜಗತ್ತಿನಲ್ಲಿ ಬೇರೆ ಯಾರೂ ಇರಲು ಸಾಧ್ಯವಿಲ್ಲ

ಏಷಿಯಾನೆಟ್ ಸುವರ್ಣಾ ವಾಹಿನಿಯ ಸ್ಟಾರ್ ಆಂಕರ್ ಭಾವನಾ ನಾಗಯ್ಯ ನಡೆಸಿಕೊಡುವ ಒಂದು ಮಿನಿ ಟಿವಿ ಶೋ ಅದ್ಭುತವಾಗಿ ಇರುತ್ತದೆ. ಅದರಲ್ಲಿ ಒಬ್ಬ ಸೆಲೆಬ್ರಿಟಿ ಸಾಧಕರನ್ನು ಕರೆದು ಕ್ಯಾಮೆರಾ ಮುಂದೆ ಕೂರಿಸಿ ಆಕೆ 60 ಸೆಕೆಂಡ್ ಅವಧಿಯಲ್ಲಿ 12-15 ಮೊನಚು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸೆಲೆಬ್ರಿಟಿ ಸಾಧಕರು ಒಂದೊಂದು ವಾಕ್ಯದಲ್ಲಿ ಚುಟುಕಾಗಿ ಉತ್ತರಿಸಬೇಕು. ಆ ಪ್ರಶ್ನೆಗಳನ್ನು ಮೊದಲಾಗಿ ಕೊಡದೇ ಸ್ಥಳದಲ್ಲಿಯೇ ಕೇಳುವ ಕಾರಣ ಕಾರ್ಯಕ್ರಮ ತುಂಬಾ ರೋಚಕ ಆಗಿರುತ್ತದೆ.ಈ ಬಾರಿ ಆ ಶೋಗೆ ಮುಖಾಮುಖಿ ಆದವರು ರಿಯಲ್ ಸ್ಟಾರ್

ಅನನ್ಯತೆ ನಿಮ್ಮದೇ ಬ್ರಾಂಡ್ ಆಗಲಿ : ನಿಮ್ಮ ಹಾಗೆ ಜಗತ್ತಿನಲ್ಲಿ ಬೇರೆ ಯಾರೂ ಇರಲು ಸಾಧ್ಯವಿಲ್ಲ Read More »

ಕಗ್ಗದ ಸಂದೇಶ -ನಮ್ಮ ಪ್ರಯತ್ನವಿದ್ದರೆ ಮಾತ್ರ ದೇವರೊಲುಮೆ ಸಿಗುವುದು…

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ|ಸನ್ನಾಹ ಸಾಗೀತೆ? ದೈವ ಒಪ್ಪಿತೆ?||ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ|ನಿನ್ನ ಬಲವನು ಮೆರೆಸೊ-ಮಂಕುತಿಮ್ಮ||ನಾವು ಹೊತ್ತು ತಂದ ವಿಧಿಯ ಭಾರವನು ದೈವದ ಭುಜಕ್ಕೆ ಏರಿಸುವ ಪ್ರಯತ್ನ ಮಾಡಬಾರದು. ನಮ್ಮ ಈ ಬೇಡಿಕೆಯನ್ನು ದೈವ ಒಪ್ಪಲಿ ಅಥವಾ ತಿರಸ್ಕರಿಸಲಿ ಈ ಬಗ್ಗೆ ಯೋಚಿಸದೆ ದೇವರು ನಮಗೆ ಕೊಟ್ಟ ಬಲವನ್ನು ಬಳಸಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಮಾನ್ಯ ಡಿವಿಜಿಯವರು ಈ ಕಗ್ಗದಲ್ಲಿ ಹೇಳಿದ್ದಾರೆ.ಜೀವನದಲ್ಲಿ ಎಲ್ಲವೂ ವಿಧಿ ಲಿಖಿತದಂತೆ ನಡೆಯುವುದು ಎಂದು ಭಾವಿಸಿಕೊಂಡು ಕೈಕಟ್ಟಿಕೊಂಡು ಕುಳಿತುಕೊಳ್ಳಬಾರದು. ದೇವರು

ಕಗ್ಗದ ಸಂದೇಶ -ನಮ್ಮ ಪ್ರಯತ್ನವಿದ್ದರೆ ಮಾತ್ರ ದೇವರೊಲುಮೆ ಸಿಗುವುದು… Read More »

ಸ್ವಾತಂತ್ರ್ಯದ ಕ್ರಾಂತಿ ಸಿಂಹ ಬಿರುದಾಂಕಿತ ಅವರ ಶವ ರಸ್ತೆ ಬದಿಯಲಿ ಬಿದ್ದು ಕೊಳೆತ್ತಿತ್ತು

ಅನಾಮಧೇಯಳಾಗಿ ಸಾಯುವಾಗಲೂ ಪರ್ಸ್‌ನಲ್ಲಿದ್ದದ್ದು ಸುಭಾಶ್‌ ಬಾಬು ಫೋಟೊ 1930ರ ಸ್ವಾತಂತ್ರ್ಯ ಹೋರಾಟದ ತೀವ್ರತೆಯ ದಿನಗಳು. ಪಶ್ಚಿಮ ಬಂಗಾಳದ ಒಂದು ಸಾಧಾರಣವಾದ ಮನೆಯ ಒಳಗೆ ಸುಭಾಶ್‌ಚಂದ್ರ ಬೋಸರು ಮಾತಾಡುತ್ತ ಊಟ ಮಾಡುತ್ತಿದ್ದರು. ಇಪ್ಪತ್ತರ ಹರೆಯದ ಆ ಮನೆಯ ಮಗಳು ಸುಭಾಶರ ಎದುರು ಕುಳಿತು ಅವರ ಮಾತುಗಳನ್ನೇ ಕೇಳುತ್ತಿದ್ದಳು. ಆಕೆಯ ಅಮ್ಮ ಸುಭಾಶರಿಗೆ ಹೇಳಿದರು – ನಮ್ಮ ಮಗಳು ನಿಮ್ಮ ಬಹಳ ದೊಡ್ಡ ಆರಾಧಕಿ. ಆಕೆಯ ಪ್ರಪಂಚದಲ್ಲಿ ನೀವು ಮತ್ತು ನೀವು ಮಾತ್ರ ಇರುತ್ತೀರಿ ಬಿಟ್ಟರೆ ಬೇರೆ ಯಾರೂ ಇಲ್ಲ.

ಸ್ವಾತಂತ್ರ್ಯದ ಕ್ರಾಂತಿ ಸಿಂಹ ಬಿರುದಾಂಕಿತ ಅವರ ಶವ ರಸ್ತೆ ಬದಿಯಲಿ ಬಿದ್ದು ಕೊಳೆತ್ತಿತ್ತು Read More »

error: Content is protected !!
Scroll to Top