ಲೇಖನ

ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ

ಪುತ್ತೂರು: ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಪುತ್ತೂರಿಗೆ ಸುಸಜ್ಜಿತ ಕ್ರೀಡಾಂಗಣ ಅಗತ್ಯ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕಾಗಿ ಜಾಗ ಕಾದಿರಿಸಿದ್ದು, ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಶಾಸಕ ಸಂಜೀವ ಮಠಂದೂರು ಅವರು ಮುತುವರ್ಜಿಯ ವಹಿಸಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒಂದೊಂದಾಗಿ ಹೊಂದಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದರಲ್ಲಿ ಕ್ರೀಡಾಂಗಣವೂ ಒಂದು. ಪುತ್ತೂರು ನಗರದ ಹೊರವಲಯದ ತೆಂಕಿಲದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಜಿಲ್ಲಾ ಕ್ರೀಡಾಂಗಣಕ್ಕಾಗಿ ಈಗಾಗಲೇ ಸ್ಥಳ ಕಾಯ್ದಿರಿಸುವಿಕೆ ಪ್ರಕ್ರಿಯೆ ನಡೆದಿದೆ. ಶಾಸಕ ಸಂಜೀವ ಮಠಂದೂರು ಅವರ ಸರ್ವ ಪ್ರಯತ್ನದಿಂದ ಕ್ರೀಡಾಂಗಣದ ಕನಸು ನನಸಾಗುವುದರಲ್ಲಿದೆ. […]

ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ Read More »

ಧಿಂಗ್ ಎಕ್ಸ್‌ಪ್ರೆಸ್ ಖ್ಯಾತಿಯ ಹುಡುಗಿ ಓಡುತ್ತಲೇ ಇದ್ದಾಳೆ

ಹಿಮಾದಾಸ್- ಭಾರತದ ಹೆಮ್ಮೆಯ ಕ್ರೀಡಾಪಟು ನಾನು ನಿಮಗೆಲ್ಲ ಇಂದು ಒಬ್ಬ ಅದ್ಭುತವಾದ ಮಹಿಳಾ ಕ್ರೀಡಾಪಟುವನ್ನು ಪರಿಚಯ ಮಾಡಬೇಕು ಮತ್ತು ಜಗತ್ತಿನ ಎಲ್ಲ ಮಹಿಳೆಯರಿಗೆ ಅವರದ್ದೇ ದಿನದ ಶುಭಾಶಯ ಹೇಳಬೇಕು.ಮೀಟ್ ದಿಸ್ ಗ್ರೇಟ್ ಅಥ್ಲೆಟ್!ಮೊದಲ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಓಡುವಾಗ ಅವಳ ಬಳಿ ಟ್ರಾಕ್ ಶೂ ಇರಲಿಲ್ಲ. ಅವಳ ಅಪ್ಪ ಪೇಟೆಗೆ ಹೋಗಿ 1,200 ರೂ. ಬೆಲೆಯ ಸ್ಪೈಕ್ ಇರುವ ಸಾಮಾನ್ಯ ಶೂ ತಂದುಕೊಟ್ಟಿದ್ದರು ಮತ್ತು ನನ್ನ ಹತ್ತಿರ ಇರೋದು ಇಷ್ಟೇ ದುಡ್ಡು ಎಂದು ಮಗಳಿಗೆ ಹೇಳಿದ್ದರು.ಆಗ ಅವಳು

ಧಿಂಗ್ ಎಕ್ಸ್‌ಪ್ರೆಸ್ ಖ್ಯಾತಿಯ ಹುಡುಗಿ ಓಡುತ್ತಲೇ ಇದ್ದಾಳೆ Read More »

ಅನನ್ಯತೆ ನಿಮ್ಮದೇ ಬ್ರಾಂಡ್ ಆಗಲಿ : ನಿಮ್ಮ ಹಾಗೆ ಜಗತ್ತಿನಲ್ಲಿ ಬೇರೆ ಯಾರೂ ಇರಲು ಸಾಧ್ಯವಿಲ್ಲ

ಏಷಿಯಾನೆಟ್ ಸುವರ್ಣಾ ವಾಹಿನಿಯ ಸ್ಟಾರ್ ಆಂಕರ್ ಭಾವನಾ ನಾಗಯ್ಯ ನಡೆಸಿಕೊಡುವ ಒಂದು ಮಿನಿ ಟಿವಿ ಶೋ ಅದ್ಭುತವಾಗಿ ಇರುತ್ತದೆ. ಅದರಲ್ಲಿ ಒಬ್ಬ ಸೆಲೆಬ್ರಿಟಿ ಸಾಧಕರನ್ನು ಕರೆದು ಕ್ಯಾಮೆರಾ ಮುಂದೆ ಕೂರಿಸಿ ಆಕೆ 60 ಸೆಕೆಂಡ್ ಅವಧಿಯಲ್ಲಿ 12-15 ಮೊನಚು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸೆಲೆಬ್ರಿಟಿ ಸಾಧಕರು ಒಂದೊಂದು ವಾಕ್ಯದಲ್ಲಿ ಚುಟುಕಾಗಿ ಉತ್ತರಿಸಬೇಕು. ಆ ಪ್ರಶ್ನೆಗಳನ್ನು ಮೊದಲಾಗಿ ಕೊಡದೇ ಸ್ಥಳದಲ್ಲಿಯೇ ಕೇಳುವ ಕಾರಣ ಕಾರ್ಯಕ್ರಮ ತುಂಬಾ ರೋಚಕ ಆಗಿರುತ್ತದೆ.ಈ ಬಾರಿ ಆ ಶೋಗೆ ಮುಖಾಮುಖಿ ಆದವರು ರಿಯಲ್ ಸ್ಟಾರ್

ಅನನ್ಯತೆ ನಿಮ್ಮದೇ ಬ್ರಾಂಡ್ ಆಗಲಿ : ನಿಮ್ಮ ಹಾಗೆ ಜಗತ್ತಿನಲ್ಲಿ ಬೇರೆ ಯಾರೂ ಇರಲು ಸಾಧ್ಯವಿಲ್ಲ Read More »

ಕಗ್ಗದ ಸಂದೇಶ -ನಮ್ಮ ಪ್ರಯತ್ನವಿದ್ದರೆ ಮಾತ್ರ ದೇವರೊಲುಮೆ ಸಿಗುವುದು…

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ|ಸನ್ನಾಹ ಸಾಗೀತೆ? ದೈವ ಒಪ್ಪಿತೆ?||ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ|ನಿನ್ನ ಬಲವನು ಮೆರೆಸೊ-ಮಂಕುತಿಮ್ಮ||ನಾವು ಹೊತ್ತು ತಂದ ವಿಧಿಯ ಭಾರವನು ದೈವದ ಭುಜಕ್ಕೆ ಏರಿಸುವ ಪ್ರಯತ್ನ ಮಾಡಬಾರದು. ನಮ್ಮ ಈ ಬೇಡಿಕೆಯನ್ನು ದೈವ ಒಪ್ಪಲಿ ಅಥವಾ ತಿರಸ್ಕರಿಸಲಿ ಈ ಬಗ್ಗೆ ಯೋಚಿಸದೆ ದೇವರು ನಮಗೆ ಕೊಟ್ಟ ಬಲವನ್ನು ಬಳಸಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಮಾನ್ಯ ಡಿವಿಜಿಯವರು ಈ ಕಗ್ಗದಲ್ಲಿ ಹೇಳಿದ್ದಾರೆ.ಜೀವನದಲ್ಲಿ ಎಲ್ಲವೂ ವಿಧಿ ಲಿಖಿತದಂತೆ ನಡೆಯುವುದು ಎಂದು ಭಾವಿಸಿಕೊಂಡು ಕೈಕಟ್ಟಿಕೊಂಡು ಕುಳಿತುಕೊಳ್ಳಬಾರದು. ದೇವರು

ಕಗ್ಗದ ಸಂದೇಶ -ನಮ್ಮ ಪ್ರಯತ್ನವಿದ್ದರೆ ಮಾತ್ರ ದೇವರೊಲುಮೆ ಸಿಗುವುದು… Read More »

ಸ್ವಾತಂತ್ರ್ಯದ ಕ್ರಾಂತಿ ಸಿಂಹ ಬಿರುದಾಂಕಿತ ಅವರ ಶವ ರಸ್ತೆ ಬದಿಯಲಿ ಬಿದ್ದು ಕೊಳೆತ್ತಿತ್ತು

ಅನಾಮಧೇಯಳಾಗಿ ಸಾಯುವಾಗಲೂ ಪರ್ಸ್‌ನಲ್ಲಿದ್ದದ್ದು ಸುಭಾಶ್‌ ಬಾಬು ಫೋಟೊ 1930ರ ಸ್ವಾತಂತ್ರ್ಯ ಹೋರಾಟದ ತೀವ್ರತೆಯ ದಿನಗಳು. ಪಶ್ಚಿಮ ಬಂಗಾಳದ ಒಂದು ಸಾಧಾರಣವಾದ ಮನೆಯ ಒಳಗೆ ಸುಭಾಶ್‌ಚಂದ್ರ ಬೋಸರು ಮಾತಾಡುತ್ತ ಊಟ ಮಾಡುತ್ತಿದ್ದರು. ಇಪ್ಪತ್ತರ ಹರೆಯದ ಆ ಮನೆಯ ಮಗಳು ಸುಭಾಶರ ಎದುರು ಕುಳಿತು ಅವರ ಮಾತುಗಳನ್ನೇ ಕೇಳುತ್ತಿದ್ದಳು. ಆಕೆಯ ಅಮ್ಮ ಸುಭಾಶರಿಗೆ ಹೇಳಿದರು – ನಮ್ಮ ಮಗಳು ನಿಮ್ಮ ಬಹಳ ದೊಡ್ಡ ಆರಾಧಕಿ. ಆಕೆಯ ಪ್ರಪಂಚದಲ್ಲಿ ನೀವು ಮತ್ತು ನೀವು ಮಾತ್ರ ಇರುತ್ತೀರಿ ಬಿಟ್ಟರೆ ಬೇರೆ ಯಾರೂ ಇಲ್ಲ.

ಸ್ವಾತಂತ್ರ್ಯದ ಕ್ರಾಂತಿ ಸಿಂಹ ಬಿರುದಾಂಕಿತ ಅವರ ಶವ ರಸ್ತೆ ಬದಿಯಲಿ ಬಿದ್ದು ಕೊಳೆತ್ತಿತ್ತು Read More »

ತಂದೆ-ತಾಯಿ ಮಾಡುವ ಪ್ರಮಾದಗಳು

ಮಕ್ಕಳ ಸುಪ್ತ ಮನಸ್ಸಿನ ಒಳಗೆ ನಿಧಾನ ವಿಷವನ್ನು ತುಂಬುವ ಮೊದಲು ನೂರು ಬಾರಿ ಯೋಚನೆ ಮಾಡಿ ಪ್ರತಿ ಮಗು ಕೂಡ ಮುಗ್ಧವಾಗಿ ಈ ಜಗತ್ತಿಗೆ ಬರುತ್ತದೆ. ಅದರಲ್ಲಿ ಇರುವುದು ಪಾಸಿಟಿವ್ ಎನರ್ಜಿ ಮಾತ್ರ. ಆದರೆ ಹೆಚ್ಚಿನ ತಂದೆ-ತಾಯಿ (ಹಲವು ಅಧ್ಯಾಪಕರು) ತಮ್ಮ ಅರಿವಿಗೆ ಬಾರದಂತೆ ಅದರ ಸುಪ್ತ ಮನಸ್ಸಿನ (Subconcious Mind) ಒಳಗೆ ಹಂತ ಹಂತವಾಗಿ ನೆಗೆಟಿವ್ ಎನರ್ಜಿಯನ್ನು ತುಂಬಿಸಿ ಆ ಮಗುವಿನ ಮುಗ್ಧತೆಯನ್ನು ಕಸಿಯುವ ಕೆಲಸವನ್ನು ಮಾಡುತ್ತಾ ಇರುತ್ತಾರೆ. ಕೆಲವೊಮ್ಮೆ ತಿಳಿದು ಮಾಡುತ್ತಾರೆ, ಕೆಲವೊಮ್ಮೆ ತಿಳಿಯದೆ

ತಂದೆ-ತಾಯಿ ಮಾಡುವ ಪ್ರಮಾದಗಳು Read More »

ಮರೆಯಲು ಸಾಧ್ಯ ಇಲ್ಲ 2001ರ ಆ ಕೊಲ್ಕತ್ತಾ ಟೆಸ್ಟ್ ಪಂದ್ಯ

ಅಂದು ದ್ರಾವಿಡ್ ಮತ್ತು ಲಕ್ಷ್ಮಣ್ ಮೈಯಲ್ಲಿ ಆವೇಶ ಬಂದಿತ್ತು | ಆಸೀಸ್ ವಿರುದ್ಧ ಫಾಲೋ ಆನ್ ಪಡೆದೂ ಭಾರತ ಆ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು ಮಂಗಳವಾರ ಮುಗಿದು ಹೋದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ ನಡುವಿನ ಟೆಸ್ಟ್ ಪಂದ್ಯ ಎರಡು ಪ್ರಮುಖವಾದ ಕಾರಣಗಳಿಗೆ ದಾಖಲೆಯನ್ನು ಬರೆಯಿತು. ಮೊದಲನೇ ದಾಖಲೆ ಎಂದರೆ ನ್ಯೂಜಿಲೆಂಡ್ ಒಂದು ರನ್ ಅಂತರದಲ್ಲಿ ಆ ಟೆಸ್ಟ್ ಪಂದ್ಯವನ್ನು ಗೆದ್ದದ್ದು. ಇತಿಹಾಸದಲ್ಲಿ ಇದು ಅಂತಹ ಕೇವಲ ಎರಡನೇ ದೃಷ್ಟಾಂತ ಆಗಿತ್ತು!ಅದೇ ರೀತಿ ಫಾಲೋ ಆನ್ ಪಡೆದ ನಂತರವೂ

ಮರೆಯಲು ಸಾಧ್ಯ ಇಲ್ಲ 2001ರ ಆ ಕೊಲ್ಕತ್ತಾ ಟೆಸ್ಟ್ ಪಂದ್ಯ Read More »

ಮೇಲ್ದರ್ಜೆಗೇರಿದ ಡಯಾಲಿಸೀಸ್ ಘಟಕ | ಖಾಸಗಿ ಆಸ್ಪತ್ರೆಗಳಿಗೇನೂ ಕಮ್ಮಿ ಇಲ್ಲ ಪುತ್ತೂರು ಸರಕಾರಿ ಆಸ್ಪತ್ರೆ | 300 ಬೆಡ್ ಆಸ್ಪತ್ರೆಗೆ ಪೂರ್ವಭಾವಿ ತಯಾರಿ

ಪುತ್ತೂರು: ಸರಕಾರಿ ಆಸ್ಪತ್ರೆಗೆ ಹೋದರೆ ಹೊಸ ರೋಗಗಳೇ ಬರಬಹುದು ಎನ್ನುವುದು ಸಾಮಾನ್ಯವಾಗಿ ಜನರು ಹೇಳುತ್ತಿದ್ದ ಮಾತಾಗಿತ್ತು. ಆದರೆ ಪುತ್ತೂರು ಸರಕಾರಿ ಆಸ್ಪತ್ರೆ ಈ ಮಾತಿಗೆ ಅಪವಾದವಾಗಿ ನಿಂತಿದೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿಯ ಶಿಫಾರಸ್ಸಿನ ಮೇಲೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯ 60 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು, ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗಿದೆ. ಈ ಅನುದಾನದಲ್ಲಿ ಡಯಾಲಿಸೀಸ್ ಘಟಕವನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದ್ದು, ಇಂದು ಸುವ್ಯವಸ್ಥಿತವಾಗಿ ಎದ್ದು ನಿಂತಿದೆ. ಇದೀಗ ಯಾವುದೇ

ಮೇಲ್ದರ್ಜೆಗೇರಿದ ಡಯಾಲಿಸೀಸ್ ಘಟಕ | ಖಾಸಗಿ ಆಸ್ಪತ್ರೆಗಳಿಗೇನೂ ಕಮ್ಮಿ ಇಲ್ಲ ಪುತ್ತೂರು ಸರಕಾರಿ ಆಸ್ಪತ್ರೆ | 300 ಬೆಡ್ ಆಸ್ಪತ್ರೆಗೆ ಪೂರ್ವಭಾವಿ ತಯಾರಿ Read More »

ಸಮುದ್ರದ ನೀರೇಕೆ ನೀಲಿ ಎಂದು ಯೋಚಿಸಿದರು ಆ ವಿಜ್ಞಾನಿ

1921ರ ಬೇಸಿಗೆಯ ವಿಜ್ಞಾನ ಸಮ್ಮೇಳನ ಇಂಗ್ಲೆಂಡಿನಲ್ಲಿ ಜರಗುತ್ತಿದ್ದ, ಭಾರತದ ಆ ಮಹಾ ವಿಜ್ಞಾನಿ ಆಹ್ವಾನ ಪಡೆದಿದ್ದರು. ಅವರು ಆಗಿನ ಏಕಮಾತ್ರ ಸಂಪರ್ಕ ಸಾಧನವಾಗಿದ್ದ ಹಡಗಿನಲ್ಲಿ ಇಂಗ್ಲೆಂಡಿಗೆ ಹೊರಟರು. ಅದು ಮೂರು ತಿಂಗಳ ಸುದೀರ್ಘ ಅವಧಿಯ ಪ್ರಯಾಣ. ಓಹ್… ಎಂತಹ ಸುಂದರ ನೀಲಿ ಕಡಲು ಇನ್ನೇನು ಇಂಗ್ಲೆಂಡ್ ಸಮೀಪಿಸಿತು ಅನ್ನುವಾಗ ಹಡಗಿನ ಡೆಕ್ ಮೇಲೆ ನಿಂತು ಮೆಡಿಟರೇನಿಯನ್ ಸಮುದ್ರವನ್ನು ವೀಕ್ಷಣೆ ಮಾಡುತ್ತಿದ್ದ ಆ ವಿಜ್ಞಾನಿಯ ಮೆದುಳಿನಲ್ಲಿ ಝಗ್ ಎಂಬ ಬೆಳಕು ಒಂದು ಪ್ರಶ್ನೆಯನ್ನು ಉಂಟುಮಾಡಿತು. ‘ ಓಹ್! ಎಂತಹ

ಸಮುದ್ರದ ನೀರೇಕೆ ನೀಲಿ ಎಂದು ಯೋಚಿಸಿದರು ಆ ವಿಜ್ಞಾನಿ Read More »

ಕಗ್ಗದ ಸಂದೇಶ- ಮನ್ನಣೆಗೆ ತುಡಿವ ಮನ ಪಂಜರದ ಗಿಳಿಯಂತೆ…

ಮನೆಯೊಳೊ ಮಠದೊಳೋ ಸಭೆಯೊಳೋ ಸಂತೆಯೊಳೊ|ಕೊನೆಗೆಕಾಡೊಳೊ ಮಸಣದೊಳೊ ಮತ್ತೆಲ್ಲೋ||ಗಣನೆಗೇರಲಿಕೆಂದು ಜನ ತಪಿಸಿ ಕೊರಗುವುದು|ನೆನೆಯದಾತ್ಮದ ಸುಖವ–ಮಂಕುತಿಮ್ಮ||” ಜನರು ತಮ್ಮ ಮನೆಯಲ್ಲಿಯೋ, ತಾವಿರುವ ಮಠದಲ್ಲಿಯೋ, ಭಾಗವಹಿಸುವ ಸಭೆಯಲ್ಲೋ ಅಥವಾ ಜನ ಸೇರಿದ ಸಂತೆಯಲ್ಲೋ! ಕೊನೆಗೆ ಕಾಡಿನಲ್ಲಿಯೋ ಅಥವಾ ಸತ್ತು ಮಲಗುವ ಸ್ಮಶಾನದಲ್ಲಿಯೋ ಜನ ತಮ್ಮನ್ನು ಗಮನಿಸಬೇಕು ಮತ್ತು ಗುರುತಿಸಬೇಕು ಎಂದು ಬಯಸುವರು‌. ತಮ್ಮ ಆತ್ಮದ ಸುಖವನ್ನು ನೆನೆಯದೆಯೆ ಬರೀ ಹೆಸರಿಗಾಗಿ ಹಪಾಹಪಿಸುವರು ಎಂದು ಮಾನ್ಯ ಡಿವಿಜಿಯವರು ಮನುಷ್ಯನ ಮನ್ನಣೆಯ ದಾಹವನ್ನು ಈ ಮುಕ್ತಕದಲ್ಲಿ ಬಣ್ಣಿಸಿದ್ದಾರೆ.‌ ಜನ ತಾವು ಎಲ್ಲೆ ಇರಲಿ ತಮ್ಮನ್ನು

ಕಗ್ಗದ ಸಂದೇಶ- ಮನ್ನಣೆಗೆ ತುಡಿವ ಮನ ಪಂಜರದ ಗಿಳಿಯಂತೆ… Read More »

error: Content is protected !!
Scroll to Top