ಲೇಖನ

ಕಗ್ಗದ ಸಂದೇಶ-

ಮಾನವ ಶಾಶ್ವತವಲ್ಲ ಮಾನವೀಯತೆ ಶಾಶ್ವತ… ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ|ಜಾವ ದಿನ ಬಂದು ಪೋಗುವುವು; ಕಾಲ ಚಿರ||ಜೀವದ ವ್ಯಕ್ತಿ ಸಾಯ್ವುದು; ಜೀವಸತ್ತ್ವ ಚಿರ|ಭಾವಿಸಾ ಕೇವಲವ – ಮಂಕುತಿಮ್ಮ||ಒಂದೊಂದು ಕಾಲದಲ್ಲಿ ನಾವು ಒಂದೊಂದು ದೇವರಿಗೆ ಪೂಜೆ ಸಲ್ಲಿಸುತ್ತಿರುವುದು ಚರಿತ್ರೆಯಿಂದ ನಮಗೆ ತಿಳಿಯುತ್ತದೆ. ಒಂದು ಕಾಲದಲ್ಲಿದ್ದ ದೇವರು ಇನ್ನೊಂದು ಕಾಲದಲ್ಲಿ ಮರೆಯಾಗಿ ಹೋಗಿರುವುದನ್ನು ನಾವು ಕಾಣಬಹುದು. ದೇವರುಗಳು ಕಾಲಕಾಲಕ್ಕೆ ಬದಲಾಗಬಹುದು ಆದರೆ ಮನುಷ್ಯ ಶಕ್ತಿಗಿಂತ ಮಿಗಿಲಾದ ನಾವು ಹಿಂದಿನಿಂದ ನಂಬಿಕೊಂಡು ಬಂದ ಒಂದು ದೈವಿಕ ಶಕ್ತಿ ಅಥವಾ ದೇವತ್ವ‌ ಎನ್ನುವುದು […]

ಕಗ್ಗದ ಸಂದೇಶ- Read More »

ನ್ಯಾಯಾಂಗದ ಹೆಮ್ಮೆ ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆ

ಲೋಕಸಭೆಯ ಸ್ಪೀಕರ್ ಆಗಿ ಅನನ್ಯ ಮಾದರಿ 1973ರ ಇಸವಿಯ ಹೊತ್ತಿಗೆ ಸುಪ್ರೀಂ ಕೋರ್ಟಿನ ಒಬ್ಬ ನ್ಯಾಯಾಧೀಶರು ತಮ್ಮ ನ್ಯಾಯಾಂಗ ಬದ್ಧತೆಗೆ ಭಾರಿ ಹೆಸರು ಮಾಡಿದ್ದರು. ಯಾವ ಮುಲಾಜು ಇಲ್ಲದೆ ಅವರು ನೇರ ಮತ್ತು ದಿಟ್ಟ ತೀರ್ಪನ್ನು ಕೊಡುತ್ತಿದ್ದರು. ಒಮ್ಮೆ ದೇಶದ ಪವರಫುಲ್ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿಯವರ ಒಂದು ಕೇಸ್ ವಿಚಾರಣೆಗೆ ಕೋರ್ಟಿಗೆ ಬಂದಾಗಲೂ ಯಾವ ಮುಲಾಜಿಗೆ ಬಗ್ಗದೆ ತೀರ್ಪು ನೀಡಿ ಭಾರಿ ಹೆಸರು ಮಾಡಿದ್ದರು. ಅವರೇ ಜಸ್ಟೀಸ್ ಕೆ. ಎಸ್. ಹೆಗ್ಡೆ.ಅದೇ ಹೊತ್ತಿಗೆ ಕೇಶವಾನಂದ ಭಾರತಿ

ನ್ಯಾಯಾಂಗದ ಹೆಮ್ಮೆ ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆ Read More »

ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್

ಸಿಡುಬು ರೋಗದ ಲಸಿಕೆಯ ಮೂಲಕ ಲಕ್ಷಾಂತರ ಜನರ ಪ್ರಾಣ ಉಳಿಸಿದ ಮಹಾವೈದ್ಯ ಇಂದು ವೈದ್ಯಕೀಯ ವಿಜ್ಞಾನವನ್ನು ಓದುತ್ತಿರುವ ಹಲವರನ್ನು ನಾನು ಮಾತಾಡುತ್ತೇನೆ. MBBS ಮಾಡಿ ಮುಂದೇನು ಮಾಡುತ್ತೀರಿ ಎನ್ನುವುದು ನನ್ನ ಸಾಮಾನ್ಯ ಪ್ರಶ್ನೆ. ಅದಕ್ಕೆ ಹೆಚ್ಚಿನವರು ಕೊಡುವ ಉತ್ತರ ನಾನು ಸರಕಾರಿ ಆಸ್ಪತ್ರೆಯ ಡಾಕ್ಟರ್ ಆಗಿ ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತೇನೆ ಎಂದು. ಇನ್ನೂ ಕೆಲವರು ನರ್ಸಿಂಗ್ ಹೋಮ್ ನಡೆಸುತ್ತೇನೆ ಅನ್ನುತ್ತಾರೆ. ಇನ್ನೂ ಕೆಲವರು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕ ಆಗುತ್ತೇನೆ ಎಂದೆಲ್ಲ ಹೇಳುತ್ತಾರೆ. ನಾನು

ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್ Read More »

ಭಾವನೆಗಳೇ ಇಲ್ಲದವರ ಜತೆಗೆ ಬದುಕುವ ಕಷ್ಟ…

ರೋಬೋಟಿಗೂ ಇವರಿಗೂ ವ್ಯತ್ಯಾಸ ಇದೆಯಾ? ಕಳೆದ ಮೂವತ್ತು ವರ್ಷಗಳಿಂದ ಸಾವಿರಾರು ಮಾನವೀಯ ಸಂಬಂಧಗಳ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ನಡೆಸುತ್ತಾ ಬಂದ ನನಗೆ ತುಂಬ ಆಶ್ಚರ್ಯ ಮತ್ತು ಆಘಾತ ತಂದು ಕೊಟ್ಟ ಒಂದು ಸಂಬಂಧದ ಬಗ್ಗೆ ಇವತ್ತು ಬರೆಯಬೇಕು. ಇಂತಹವರು ನಮ್ಮ ಸುತ್ತ ಇದ್ದರೂ ಇರಬಹುದು.ಒಂದು ನಿಜವಾದ ಉದಾಹರಣೆಯಿಂದ ಇಂದು ನನ್ನ ಲೇಖನ ಆರಂಭಿಸುವೆ. ಆ ಕುಟುಂಬ ತುಂಬಾನೇ ವಿಚಿತ್ರ ಆಗಿತ್ತು ನಮ್ಮ ಊರಿನಲ್ಲಿ ಮಧ್ಯಮ ವರ್ಗದ ಒಂದು ವಿಚಿತ್ರವಾದ ಕುಟುಂಬ ಇತ್ತು. ಆ ಕುಟುಂಬದಲ್ಲಿ ಮಾತುಕತೆ ನಿಂತು

ಭಾವನೆಗಳೇ ಇಲ್ಲದವರ ಜತೆಗೆ ಬದುಕುವ ಕಷ್ಟ… Read More »

ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೊಂದು ಪತ್ರ

ಇಂದು ನಿಮ್ಮ 49ನೆಯ ಹುಟ್ಟಿದ ಹಬ್ಬ ಅಪ್ಪು ಸರ್, ಹೇಗಿದ್ದೀರಿ?ಇಂದು ನಿಮಗೆ 48 ತುಂಬಿತು. ಆದರೆ ನಿಮ್ಮ ಹೃದಯಕ್ಕೆ ಇನ್ನೂ ಹದಿನಾರರ ಹರೆಯ!ನಿಮ್ಮ ಜೀವನ ಪ್ರೀತಿ ಮತ್ತು ಮುಗ್ಧತೆ ನಿಮ್ಮನ್ನು ನಮ್ಮ ಹೃದಯದಲ್ಲಿ ಶಾಶ್ವತ ಮಾಡಿ ಬಿಟ್ಟಿದೆ. ದೊಡ್ಡಮನೆ ಹುಡುಗ ಹೇಗಿರಬೇಕು ಎನ್ನುವುದನ್ನು ನಿಮ್ಮಷ್ಟು ಚೆನ್ನಾಗಿ ಯಾರೂ ಸಾಬೀತು ಮಾಡಲು ಸಾಧ್ಯವೇ ಆಗಿಲ್ಲ ಅಪ್ಪು ಸರ್. ನಿಮ್ಮ ವ್ಯಕ್ತಿತ್ವಕ್ಕೆ ನೂರಾರು ಆಯಾಮಗಳು ಅಪ್ಪು ಸರ್ ನಿಮ್ಮನ್ನು ಕೇವಲ ಸಿನೆಮಾ ನಟ, ವರನಟನ ಮಗ ಇಷ್ಟೇ ಆಗಿ ನಾವು

ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೊಂದು ಪತ್ರ Read More »

ಆರೋಗ್ಯ ಧಾರಾ- ಭೂಮ್ಯಾಮಲಕಿ ಗಿಡದ ಔಷಧೀಯ ಗುಣಗಳು

ಯಕೃತ್ತಿನ ಆರೋಗ್ಯಕ್ಕೆ ಶ್ರೇಷ್ಠ ಎನಿಸಿರುವ ಭೂಮ್ಯಾಮಲಕಿಯ ಬಗ್ಗೆ ತಿಳಿದುಕೊಳ್ಳೋಣ. ಸಂಸ್ಕೃತದಲ್ಲಿ ಇದಕ್ಕೆ ಭೂಮ್ಯಾಮಲಕಿ, ಭೂಧಾತ್ರಿ, ಬಹುಪತ್ರ, ಬಹುಫಲ ಎಂದು ಹೆಸರು. ಭಾರತದಲ್ಲಿ ಎಲ್ಲೆಡೆ ಸಿಗುವ ವಿಶೇಷವಾಗಿ ಉಷ್ಣಪ್ರದೇಶದಲ್ಲಿ ವರ್ಷ ಋತುವಿನಲ್ಲಿ ಬೆಳೆಯುವ ಪೊದೆ ಇದು. ಭೂಮ್ಯಾಮಲಕಿಯ ಗುಣಗಳು ರುಚಿಯಲ್ಲಿ ಸಿಹಿ, ಕಹಿ ಹಾಗೂ ಕಷಾಯ ರಸವಿರುವುದು. ಲಘು ಗುಣ(ಬೇಗ ಜೀರ್ಣವಾಗುವಂತದ್ದು) ರೂಕ್ಷ (ಶುಷ್ಕತೆಯನ್ನು ತರುವಂತದ್ದು)ಶೀತ ವೀರ್ಯ ಹೊಂದಿದೆ. ಕಫ ಹಾಗೂ ಪಿತ್ತವನ್ನು ಶಮನಗೊಳಿಸುತ್ತದೆ. ಉಪಯೋಗಗಳು ಬಾಹ್ಯ ಪ್ರಯೋಗಗಳು• ತ್ವಚೆಯ ರೋಗಗಳಲ್ಲಿ, ಇನ್ಫೆಕ್ಷನ್‌ಗಳಲ್ಲಿ ಎಲೆಯ ಕಲ್ಕವನ್ನು ತಯಾರಿಸಿ ಹಚ್ಚಲಾಗುವುದು.

ಆರೋಗ್ಯ ಧಾರಾ- ಭೂಮ್ಯಾಮಲಕಿ ಗಿಡದ ಔಷಧೀಯ ಗುಣಗಳು Read More »

ಮಹಾ ವಿಜ್ಞಾನಿಯಾದರೂ ಆತ ಬದುಕಿದ್ದು ಅಲೆಮಾರಿಯ ಹಾಗೆ

ಭಾರತದ ಗೆಳೆಯ ಈ ಮಹಾನ್ ಜ್ಞಾನಿ ಮಹಾ ವಿಜ್ಞಾನಿಯಾದ ಆಲ್ಬರ್ಟ್ ಐನಸ್ಟೀನ್ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ.ಆತನ ಮಹಾನ್ ಸಂಶೋಧನೆಗಳು, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ, ಜಗತ್ತನ್ನು ಪ್ರೀತಿಸಿದ ರೀತಿ… ಇವುಗಳನ್ನು ಗಮನಿಸುತ್ತ ಹೋದಾಗ ನಮಗೆ ಆತನು ದೊಡ್ಡ ಅಚ್ಚರಿಯ ಮೂಟೆಯಾಗಿ ಗೋಚರಿಸುತ್ತಾರೆ. ಆತನ ಒಂದೊಂದು ಸಂಶೋಧನೆ ಕೂಡ ವಿಶ್ವಮಾನ್ಯತೆಯನ್ನು ಪಡೆದವು. ಒಂದೇ ವರ್ಷದಲ್ಲಿ ನಾಲ್ಕು ಮಹಾ ಸಂಶೋಧನೆಗಳು ಜರ್ಮನ್ ಮೂಲದ ಈ ಯುವ ವಿಜ್ಞಾನಿ ಒಂದೇ ವರ್ಷದಲ್ಲಿ (1905) ವಿಜ್ಞಾನದ ಜಗತ್ತನ್ನು ನಡುಗಿಸುವ ನಾಲ್ಕು ಮಹತ್ವದ

ಮಹಾ ವಿಜ್ಞಾನಿಯಾದರೂ ಆತ ಬದುಕಿದ್ದು ಅಲೆಮಾರಿಯ ಹಾಗೆ Read More »

ಮಧುರವಾಣಿಯ ಸೃಷ್ಟಿಕರ್ತ ಕೀರವಾಣಿ – ಈಗ ಸ್ವರ್ಗಕ್ಕೆ ಒಂದೇ ಗೇಣು

ಭಾರತಕ್ಕೆ ಒಲಿದ ಜಾಗತಿಕ ಮಟ್ಟದ ಅಕಾಡೆಮಿ ಪ್ರಶಸ್ತಿ ನೀವು ಈ ವಿಕ್ಟರಿಯನ್ನು ಹೇಗೆ ಬೇಕಾದರೂ ಕರೆಯಬಹುದು. ಇದನ್ನು ಭಾರತೀಯ ಸಿನೆಮಾದ ವಿಜಯ ಅನ್ನುವವರೂ ಇದ್ದಾರೆ. ದಕ್ಷಿಣ ಭಾರತದ ವಿಜಯ, ತೆಲುಗು ಸಿನೆಮಾರಂಗದ ವಿಜಯ, ಕೀರವಾಣಿ ಗೆಲುವು, ರಾಜಮೌಳಿ ಗೆಲುವು…ನೀವು ಹೇಗೆ ಬೇಕಾದರೂ ಕರೆಯಬಹುದು. ಆದರೆ ಅಮೆರಿಕದ ಲಾಸ್ ಏಂಜಲೀಸ್ ನಗರದ ವೈಭವೋಪೇತವಾದ ಸಭಾಂಗಣದಲ್ಲಿ ನಾಟು ನಾಟು…ಹಾಡು ಸಮುದ್ರದ ಅಲೆಗಳನ್ನು ಸೃಷ್ಟಿ ಮಾಡಿದ್ದು ಸುಳ್ಳಲ್ಲ. ಇದು ಅಂತಿಮವಾಗಿ ಭಾರತೀಯ ಸಿನಿಮಾ ರಂಗದ ಗೆಲುವು ಎಂಬ ಷರಾ ಬರೆದು ಭಾರತೀಯರು

ಮಧುರವಾಣಿಯ ಸೃಷ್ಟಿಕರ್ತ ಕೀರವಾಣಿ – ಈಗ ಸ್ವರ್ಗಕ್ಕೆ ಒಂದೇ ಗೇಣು Read More »

ಕಗ್ಗದ ಸಂದೇಶ-ಬಹುವಿದ್ಯೆ, ಬಹುತರ್ಕ, ಬಹುನೇಮ ಬೇಕಿಲ್ಲ ಹಗುರ ಬದುಕಿಗೆ…

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ|ವಹಿಸೆ ಜೀವನಭರವನದು ಹಗುರೆನಿಪವೊಲ್||ಸಹನೆ ಸಮರಸಭಾವವಂತಃ‌ ಪರೀಕ್ಷೆಗಳು|ವಿಹಿತವಾತ್ಮದ ಹಿತಕೆ– ಮಂಕುತಿಮ್ಮ|| ಅಂತರಂಗದ ವೀಕ್ಷಣೆ ಎನ್ನುವುದು ಮಹತ್ವದ ಗುಣ. ಕಾಡಿನ ರಾಜನಾದ ಸಿಂಹ ಸ್ವಲ್ಪ ದೂರ ಸಾಗಿದ ನಂತರ ಒಮ್ಮೆ ನಿಂತು ಸಾಗಿ ಬಂದ ದಾರಿಯನ್ನು ಅವಲೋಕನ ಮಾಡುತ್ತದೆ. ಮಾನವನು ಕೂಡ ತಾನು ಸಾಗಿ ಬಂದ ಬದುಕಿನ ದಾರಿಯನ್ನು ಅವಲೋಕನ ಮಾಡಬೇಕು. ಈ ರೀತಿಯ ಅತ್ಮಾವಲೋಕನ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ನೆರೆವಾಗುತ್ತದೆ. ಜೀವನದ ಸೊಗಸು ಬರಿ ಶಾಸ್ತ್ರಿತನದಿಂದಲ್ಲ|ಈ ಜೀವ ಬೇಡುವುದು ಮೋದ, ಆಮೋದ||ಕೊಂಚ ಬಿಗಿ, ತುಸು

ಕಗ್ಗದ ಸಂದೇಶ-ಬಹುವಿದ್ಯೆ, ಬಹುತರ್ಕ, ಬಹುನೇಮ ಬೇಕಿಲ್ಲ ಹಗುರ ಬದುಕಿಗೆ… Read More »

ಮುಗ್ಧ ಮಗುವಿನಲ್ಲಿ ಭಯ ತುಂಬಿಸುವವರು ಯಾರು?

ಸುಪ್ತ ಮನಸಿನ ಒಳಗೆ ನೆಟ್ಟು ಹೋದ ಭಯ ತೆಗೆಯುವುದು ಸುಲಭ ಅಲ್ಲ 1999ರ ಹೊತ್ತಿಗೆ ಆಸ್ಟ್ರೇಲಿಯ ಕ್ರಿಕೆಟ್ ಟೀಮ್‌ನಲ್ಲಿ ಬ್ರೆಟ್‌ಲೀ ಎಂಬ ಅತ್ಯಂತ ವೇಗದ ಬೌಲರ್ ಇದ್ದರು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದರೆ ಬ್ಯಾಟ್ಸ್‌ಮ್ಯಾನ್‌ಗಳ ಎದೆ ಕೂಡ ನಡುಗುತ್ತಿತ್ತು. ಅದೇ ಹೊತ್ತಿಗೆ ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಜೀವನದ ಶಿಖರದಲ್ಲಿ ಇದ್ದರು. ಬ್ರೆಟ್‌ಲೀ ವಿರುದ್ಧ ಅವರು ನಿರ್ಭೀತಿಯಿಂದ ಆಡುತ್ತಿದ್ದರು. ಸಚಿನ್ ಕೊಟ್ಟ ಉತ್ತರವು ಅತ್ಯಂತ ಮಾರ್ಮಿಕ ಆಗಿತ್ತು ಆಗ ಯಾರೋ ಸಚಿನ್ ಅವರನ್ನು

ಮುಗ್ಧ ಮಗುವಿನಲ್ಲಿ ಭಯ ತುಂಬಿಸುವವರು ಯಾರು? Read More »

error: Content is protected !!
Scroll to Top