ಲೇಖನ

ವಿಶ್ವ ವಿಜಯೀ, ವಿಶ್ವ ವಂದ್ಯ ಶ್ರೀ ರಾಮಚಂದ್ರ

ಇಂದು ರಾಮನವಮಿ ಜಗತ್ತಿನ ಮೊಟ್ಟಮೊದಲ ಮಹಾಕಾವ್ಯ ರಾಮಾಯಣ. ಅದರ ಕಥಾ ನಾಯಕ ಶ್ರೀ ರಾಮಚಂದ್ರ ದೇವರ ಹುಟ್ಟುಹಬ್ಬ ಇಂದು. ಇದು ರಾಮನವಮಿ. ಆತ ತ್ರೇತಾಯುಗದಲ್ಲಿ ಬದುಕಿ, ಬಾಳಿದ ಆದರ್ಶಗಳು ಇಂದು ಕೂಡ ನಮಗೆ ಮಾರ್ಗದರ್ಶಕ ಹಣತೆಗಳು. ಮಹಾವಿಷ್ಣುವಿನ ಏಳನೇ ಅವತಾರ ಶ್ರೀ ರಾಮ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಈ ಭೂಮಿಗೆ ಶ್ರೀ ರಾಮದೇವರ ಆಗಮನ ಆಯಿತು. ಅದು ಜನವರಿ ತಿಂಗಳ ಹತ್ತನೇ ತಾರೀಕು, ಕ್ರಿಸ್ತಪೂರ್ವ 5114ನೇ ಇಸವಿ. ಸಮಯ ಮಧ್ಯಾಹ್ನ 12-30. ಹುಟ್ಟಿದ್ದು […]

ವಿಶ್ವ ವಿಜಯೀ, ವಿಶ್ವ ವಂದ್ಯ ಶ್ರೀ ರಾಮಚಂದ್ರ Read More »

ಎಸ್ಸೆಸ್ಸೆಲ್ಸಿಯ ಯಶೋಗಾಥೆಗಳು…

ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು (ಭಾಗ 5) ನಾವು ಸಣ್ಣವರಿದ್ದಾಗ ಎಸ್ಸೆಸ್ಸೆಲ್ಸಿ, ಪಿಯುಸಿಗಳ ರ್ಯಾಂಕ್ ಘೋಷಣೆ ಆದಾಗ ಅವರನ್ನು ಬೆರಗು ಕಣ್ಣುಗಳಿಂದ ನೋಡುವುದೇ ಒಂದು ಸಂಭ್ರಮ. ಆಗೆಲ್ಲ ದೂರದರ್ಶನದಲ್ಲಿ ಅಂತಹ ಒಂದೆರಡು ಮಕ್ಕಳ ಸಂದರ್ಶನಗಳು ಪ್ರಸಾರ ಆಗುತ್ತಿದ್ದವು. ಮರುದಿನದ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಫೋಟೊ, ಅವರ ಹೆತ್ತವರು ಸಿಹಿ ತಿನಿಸುವ ಫೋಟೊ ನಮಗಂತೂ ಭಾರಿ ಕ್ರೇಜ್ ಹುಟ್ಟಿಸುತ್ತಿದ್ದವು. ಆಗ ಎಸ್ಸೆಸ್ಸೆಲ್ಸಿ, ಪಿಯುಸಿ ಬೋರ್ಡ್‌ಗಳು ಕೇವಲ ಹತ್ತು ರ್ಯಾಂಕ್ ಕೊಡುತ್ತಿದ್ದವು ಮತ್ತು ಅವುಗಳಲ್ಲಿ

ಎಸ್ಸೆಸ್ಸೆಲ್ಸಿಯ ಯಶೋಗಾಥೆಗಳು… Read More »

ಎಸೆಸೆಲ್ಸಿ ಫಿನಿಷಿಂಗ್ ಟಚಸ್

ಗಣಿತದ ಅಪ್ಲಿಕೇಶನ್ ಪ್ರಶ್ನೆಗಳು ನಿನ್ನೆಯ ಸಂಚಿಕೆಯಲ್ಲಿ ವಿಜ್ಞಾನ ಪ್ರಶ್ನೆಪತ್ರಿಕೆಯ ಅಪ್ಲಿಕೇಶನ್ ಪ್ರಶ್ನೆಗಳ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆವು. ಇಂದು ಅಷ್ಟೇ ಆಕರ್ಷಕವಾದ ಗಣಿತದ ಅಪ್ಲಿಕೇಶನ್ ಪ್ರಶ್ನೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.ಗಣಿತದಲ್ಲಿಯೂ ವಿಜ್ಞಾನದ ಹಾಗೆ ನಾಲ್ಕು ರೀತಿಯ ಪ್ರಶ್ನೆಗಳು ಇದ್ದು 12-14 ಅಂಕದ ಪ್ರಶ್ನೆಗಳು ಮಾತ್ರ ಅನ್ವಯಿಕ ಪ್ರಶ್ನೆಗಳು ಆಗಿರುತ್ತವೆ. ಅಂದರೆ ಪಠ್ಯಪುಸ್ತಕದ ಜ್ಞಾನವನ್ನು ನಿಮ್ಮ ಜೀವನಕ್ಕೆ ಅನ್ವಯ ಮಾಡಿ ಕೇಳಿದ ಪ್ರಶ್ನೆಗಳು ಇವು ಆಗಿರುತ್ತವೆ.ವಿಜ್ಞಾನದಲ್ಲಿ ಯಾವ ಪಾಠದಿಂದ ಅನ್ವಯಿಕ ಪ್ರಶ್ನೆಗಳು ಬರಬಹುದು ಎಂದು ಸ್ಪಷ್ಟವಾಗಿ ಹೇಳಲಾಗದು. ಆದರೆ ಗಣಿತದಲ್ಲಿ

ಎಸೆಸೆಲ್ಸಿ ಫಿನಿಷಿಂಗ್ ಟಚಸ್ Read More »

ಕಗ್ಗದ ಸಂದೇಶ- ಇಂದಿಗಿಂದಿನ ಬದುಕು ಉಚಿತ…

ಮರಣದಿಂಮುಂದೇನು? ಪ್ರೇತವೋ? ಭೂತವೋ?|ಪರಲೋಕವೋ? ಪುನರ್ಜನ್ಮವೋ? ಅದೇನೋ?||ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ|ಧರೆಯ ಬಾಳ್ಗ್ಗದರಿನೇಂ–ಮಂಕುತಿಮ್ಮ||ಮರಣದ ನಂತರ ಆತ್ಮ ಈ ದೇಹವನ್ನು ಬಿಟ್ಟು ಎಲ್ಲಿಗೆ ಹೋಗುತ್ತದೆ ಎನ್ನುವುದು ಇದುವರೆಗೆ ಯಾರಿಗೂ ಖಚಿತವಾಗಿ ತಿಳಿದಿಲ್ಲ. ಜಗತ್ತಿನ ವಾಸನೆಗೆ ಅಂಟಿಕೊಂಡು ಭೂತವಾಗುತ್ತದೋ ಅಥವಾ ಪ್ರೇತವಾಗಿ ಇಲ್ಲಿಯೇ ಸುತ್ತುತ್ತಿರುತ್ತದೋ? ಪರಲೋಕವನ್ನು ಸೇರುತ್ತದೋ ಇಲ್ಲಾ ಮತ್ತೆ ಇದೇ ಭೂಮಿಯಲ್ಲಿ ಇನ್ನೊಂದು ಜನ್ಮವನ್ನು ಹೊಂದುತ್ತದೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಮರಣದ ನಂತರ‌ ಹಿಂತಿರುಗಿ ಬಂದವರು ಇಲ್ಲ. ಬಂದು ಆ ಬಗ್ಗೆ ಮಾಹಿತಿಯ ವರದಿಯನ್ನು ನೀಡಿದವರು ಇಲ್ಲ. ಈ ಎಲ್ಲ

ಕಗ್ಗದ ಸಂದೇಶ- ಇಂದಿಗಿಂದಿನ ಬದುಕು ಉಚಿತ… Read More »

ಎಸೆಸೆಲ್ಸಿ ಪರೀಕ್ಷೆ – ಫಿನಿಷಿಂಗ್ ಟಚಸ್

ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು ವಿಜ್ಞಾನದ ಪ್ರಶ್ನೆ ಪತ್ರಿಕೆಯಲ್ಲಿ ನಾಲ್ಕು ವಿಧವಾದ ಪ್ರಶ್ನೆಗಳು ಇರುತ್ತವೆ. Knowledge based, Understanding based, Skill based and Application based.ಅದರಲ್ಲಿ 12-14 ಅಂಕದ ಪ್ರಶ್ನೆಗಳು ಅಪ್ಲಿಕೇಶನ್ ಅಂದರೆ ಅನ್ವಯ ಆಧಾರಿತ ಪ್ರಶ್ನೆಗಳು ಆಗಿರುತ್ತವೆ. ಈ ಪ್ರಶ್ನೆಗಳು ನೀವೆಲ್ಲ ತಿಳಿದುಕೊಂಡ ಹಾಗೆಪಠ್ಯಪುಸ್ತಕದ ಹೊರಗಿನ ಪ್ರಶ್ನೆಗಳು ಅಲ್ಲ. ಪಠ್ಯಪುಸ್ತಕದ ಜ್ಞಾನವನ್ನು ನಿಮ್ಮ ಜೀವನಕ್ಕೆ ಅನ್ವಯ ಮಾಡಿಕೊಂಡ ಪ್ರಶ್ನೆಗಳು ಇವು. ಖಂಡಿತವಾಗಿ ಇವು ಕಠಿಣ ಪ್ರಶ್ನೆಗಳು ಅಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿದರೆ

ಎಸೆಸೆಲ್ಸಿ ಪರೀಕ್ಷೆ – ಫಿನಿಷಿಂಗ್ ಟಚಸ್ Read More »

ಪರೀಕ್ಷೆಗೆ ಕೊನೆಯ ಕ್ಷಣದ ಸಿದ್ಧತೆ ಮಾಡಲು ಇಲ್ಲಿದೆ ಟಿಪ್ಸ್

ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಓದಿದರೂ ಪಾಸ್ ಆಗಬಹುದು (ಭಾಗ 2) 1) ಸುಂದರವಾದ ಕೈಬರಹ ನಿಮಗೆ ಹೆಚ್ಚು ಅಂಕಗಳನ್ನು ತಂದುಕೊಡುತ್ತದೆ. ಇನ್ನು ಕಾಪಿ ಬರೆದು ಅಕ್ಷರ ಚಂದ ಮಾಡಲು ನಿಮಗೆ ಸಮಯ ಇಲ್ಲ. ಆದರೆ ದಿನಕ್ಕೊಂದು ಅರ್ಧ ಗಂಟೆ ಸಮಯ ತೆಗೆದುಕೊಂಡು ಖಾಲಿ ಪೇಪರಿನಲ್ಲಿ ಐದಾರು ಪುಟ ಸುಂದರವಾಗಿ ಬರೆಯುವುದರಿಂದ ನಿಮ್ಮ ಪ್ರೆಸೆಂಟೇಷನ್ ಹೆಚ್ಚು ಮೌಲ್ಯ ಪಡೆಯುತ್ತದೆ. ಅದಕ್ಕೂ ಹೆಚ್ಚು ಏಕಾಗ್ರತೆ ಬೇಕು. 2) ಮೂರೂ ಭಾಷೆಗಳಲ್ಲಿ ಪತ್ರ ಲೇಖನಕ್ಕೆ ತಲಾ ಐದು ಅಂಕಗಳು ಇವೆ. ಆಫಿಶಿಯಲ್

ಪರೀಕ್ಷೆಗೆ ಕೊನೆಯ ಕ್ಷಣದ ಸಿದ್ಧತೆ ಮಾಡಲು ಇಲ್ಲಿದೆ ಟಿಪ್ಸ್ Read More »

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇನ್ನು ಓದಿದರೂ ಪಾಸ್ ಆಗಬಹುದು…

ಕೊನೆಯ ಹಂತದ ಪ್ಲಾನಿಂಗ್ ಹೀಗಿರಲಿ ಪ್ರೀತಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ ನಿಮಗೆಲ್ಲಾ ಮೊದಲಾಗಿ ನಮ್ಮ ಶುಭಾಶಯಗಳು.ನಿಮ್ಮ ಜೀವನದ ಮೊದಲ ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಿದ್ದೀರಿ. ಇದು ನೀವು ಎದುರಿಸುವ ಮೊದಲ ರಾಜ್ಯಮಟ್ಟದ ಪರೀಕ್ಷೆ. ಮುಂದೆ ನೀವು ಎದುರಿಸುವ ಹಲವು ಬೋರ್ಡ್ ಪರೀಕ್ಷೆಗಳಿಗೆ ಇದು ಖಂಡಿತವಾಗಿಯೂ ಪಂಚಾಂಗ ಆಗುತ್ತದೆ.2023ರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈಗಾಗಲೇ ಕ್ಷಣಗಣನೆಯು ಆರಂಭ ಆಗಿದೆ. ಮಾ.31ರಂದು ನಿಮ್ಮ ಪರೀಕ್ಷೆಗಳು ಆರಂಭ ಆಗಲಿವೆ. ನಿಮಗೆ ಕಳೆದ ವರ್ಷ ಮೇ 16ರಿಂದ ಇಂದಿನ ದಿನದವರೆಗೂ ನಿಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮವಾದ ತರಬೇತಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇನ್ನು ಓದಿದರೂ ಪಾಸ್ ಆಗಬಹುದು… Read More »

ದಕ್ಷಿಣ ಭಾರತದ ಕೋಗಿಲೆಗೆ ಎಸ್. ಜಾನಕಿ ಪ್ರಶಸ್ತಿಯ ಗರಿ

ಕರಾವಳಿ ಕರ್ನಾಟಕದಲ್ಲಿ ಇಂದು ಕೆ.ಎಸ್. ಚಿತ್ರಾ ಹಾಡ್ತಾರೆ ಕುಂದಾಪುರದಲ್ಲಿ ಸಂಗೀತದ ಸಾವಿರಾರು ಅಭಿಮಾನಿಗಳ ನಡುವೆ ಇಂದು ದಕ್ಷಿಣ ಭಾರತದ ಕೋಗಿಲೆ ಕೆ. ಎಸ್. ಚಿತ್ರಾ ಹಾಡುತ್ತಾರೆ ಅನ್ನುವಾಗ ಇಡೀ ಕರಾವಳಿ ಕರ್ನಾಟಕ ರೋಮಾಂಚನ ಪಡುತ್ತಾ ಇದೆ. ಕುಂದಾಪುರದ ವೈಭವೋಪೇತವಾದ ಒಪೆರಾ ಯುವಾ ಮೆರಿಡಿಯನ್ ಸಭಾಂಗಣದಲ್ಲಿ ಇಂದು ಸಂಜೆ ಅವರಿಗೆ ಎಸ್. ಜಾನಕಿ ಅಮ್ಮನ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಆಗಲಿದೆ. ಸಂಗೀತದ ಅಭಿಮಾನಿ ಹೃದಯಗಳಿಗೆ ಎರಡೂ ವಿಶೇಷವೇ. ಕೆಲವೇ ವರ್ಷಗಳ ಹಿಂದೆ ಎಸ್. ಜಾನಕಿ ಅಮ್ಮ ಹೃದಯ

ದಕ್ಷಿಣ ಭಾರತದ ಕೋಗಿಲೆಗೆ ಎಸ್. ಜಾನಕಿ ಪ್ರಶಸ್ತಿಯ ಗರಿ Read More »

ಕಪ್ಪು ಹದ್ದುಗಳ ಉಳಿವಿನ ರೋಚಕ ಸಿನೆಮಾ – ALL THAT BREATHS

ಇಬ್ಬರು ಸಹೋದರರ ಯಶೋಗಾಥೆಯ ಚಿತ್ರಣ – ಈ ವರ್ಷದ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದ ಸಿನೆಮಾ ಎಂದಿನಂತೆಯೇ ನಾನು ಸುಮ್ಮನೆ ಜಾಲತಾಣಗಳನ್ನು ಜಾಲಾಡುತ್ತ ಹೋದಾಗ ಈ ಡಾಕ್ಯುಮೆಂಟರಿ ಫಿಲ್ಮ್ ಥಟ್ಟನೆ ಗಮನ ಸೆಳೆಯಿತು. ಈ ವರ್ಷದ ಆಸ್ಕರ್ ಪ್ರಶಸ್ತಿಯ ರೇಸಲ್ಲಿ ಈ ಸಿನೆಮಾ ಇತ್ತು ಮತ್ತು ಫೈನಲ್ಸ್ ವರೆಗೆ ತಲುಪಿತ್ತು ಎಂದು ತಿಳಿದುಬಂತು. ಕಳೆದ ವರ್ಷ ಬಿಡುಗಡೆ ಆದ ಈ ಸಿನೆಮಾ ಈಗಾಗಲೇ ಹತ್ತಾರು ದೇಶಗಳ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸ್ಕ್ರೀನ್ ಆಗಿ ಪ್ರಶಸ್ತಿಗಳ ಸರಮಾಲೆಯನ್ನು ಗೆದ್ದಿದೆ ಅಂದಾಗ

ಕಪ್ಪು ಹದ್ದುಗಳ ಉಳಿವಿನ ರೋಚಕ ಸಿನೆಮಾ – ALL THAT BREATHS Read More »

ನಿಮ್ಮ ಸಂತಸ ಹೆಚ್ಚಿಸಲು ಕೆಲವು ಟಿಪ್ಸ್‌…

ಇವುಗಳಲ್ಲಿ ಕೆಲವನ್ನಾದರೂ ಮಾಡಿ ನಿಮ್ಮ ಹ್ಯಾಪಿನೆಸ್ ಹೆಚ್ಚು ಮಾಡಿಕೊಳ್ಳಿ 1) ನಾವು ಕಲಿತ ಪ್ರೈಮರಿ ಶಾಲೆಯ ಜಗಲಿಯ ಮೇಲೆ ವಾರಕ್ಕೊಮ್ಮೆ ಹೋಗಿ ಒಂದಷ್ಟು ಹೊತ್ತು ಮೌನವಾಗಿ ಕುಳಿತು ಬರುವುದು. 2) ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಯಾರಾದರೂ ಐದು ಜನರಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಕ್ಯಾಶುವಲ್ ಆಗಿ ಸ್ವಲ್ಪ ಹೊತ್ತು ಪ್ರೀತಿಯಿಂದ ಮಾತನಾಡುವುದು. 3) ದಿನಕ್ಕೊಂದು ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು ಮಾಧುರ್ಯದ ಹಾಡುಗಳನ್ನು ಕೇಳುವುದು. 4) ಹಸಿರು ಪರಿಸರದ ನಡುವೆ

ನಿಮ್ಮ ಸಂತಸ ಹೆಚ್ಚಿಸಲು ಕೆಲವು ಟಿಪ್ಸ್‌… Read More »

error: Content is protected !!
Scroll to Top